Skip to main content

ವ್ಯಕ್ತಿಪೂಜೆ ಮಾಡುವ ಹಾಗಿದ್ದರೆ ಕೇವಲ ಬಾಬಾಸಾಹೇಬ್ ಅಂಬೇಡ್ಕರರನ್ನು ಮಾತ್ರ ಪೂಜಿಸೋಣ

 


-ರಘೋತ್ತಮ ಹೊ.ಬ

ವ್ಯಕ್ತಿಪೂಜೆ (Hero Worship) ಬಗ್ಗೆ ಬಾಬಾಸಾಹೇಬ್ ಅಂಬೇಡ್ಕರ್ ರು ತಮ್ಮ "ರಾನಡೆ, ಗಾಂಧಿ ಮತ್ತು ಜಿನ್ನಾ" ಕೃತಿಯಲ್ಲಿ ಹೇಳಿದ್ದಾರೆ. ವ್ಯಕ್ತಿಯೊಬ್ಬನಲ್ಲಿ ಬುದ್ಧಿವಂತಿಕೆ ಇದ್ದರಷ್ಟೆ ಸಾಲದು ಆತ ಪ್ರಾಮಾಣಿಕನಾಗಿಯೂ ಇರಬೇಕು ಎನ್ನುವ ಬಾಬಾಸಾಹೇಬರು ಈ ನಿಟ್ಟಿನಲ್ಲಿ ವ್ಯಕ್ತಿಪೂಜೆ ಭಾರತದಲ್ಲಿ ವ್ಯಾಪಕವಾಗಿ ಇರುವುದನ್ನು ಉಲ್ಲೇಖಿಸುತ್ತಾರೆ‌. ಅಂಬೇಡ್ಕರರು ಕಂಡುಕೊಂಡಂತೆ ವ್ಯಕ್ತಿಪೂಜೆ ಭಾರತದಲ್ಲಿ ವ್ಯಾಪಕವಾಗಿ ಇರಲು ಮುಖ್ಯ ಕಾರಣ ಇಲ್ಲಿರುವ ವಿಗ್ರಹ ಪೂಜೆಯಾಗಿದೆ. ಇದಕ್ಕೆ ಪೂರಕವಾಗಿ ಬಾಬಾಸಾಹೇಬ ಅಂಬೇಡ್ಕರರು ಹೇಳುವುದು "ವ್ಯಕ್ತಿಪೂಜೆಯು ಭಾರತದ ರಾಜಕೀಯದ ದುರದೃಷ್ಟಕರ ವಾಸ್ತವವಾಗಿದ್ದು, ಅಂತಹ ವ್ಯಕ್ತಿಪೂಜೆಯು ಭಕ್ತನೊಬ್ಬನ ನೈತಿಕ ಕುಸಿತಕ್ಕೆ ಕಾರಣವಾಗುತ್ತದಲ್ಲದೆ ದೇಶಕ್ಕೂ ಅಪಾಯಕಾರಿಯಾಗಿದೆ" ಎನ್ನುತ್ತಾರೆ.(ಡಾ.ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂಪುಟ-1 ಪುಟ 230).

ದುರಂತವೆಂದರೆ ಅಂಬೇಡ್ಕರರು ಅಂದು ಎಚ್ಚರಿಕೆ ಕೊಟ್ಟ ವ್ಯಕ್ತಿಪೂಜೆ(Hero Worship) ಶೋಷಿತ ಸಮುದಾಯಗಳ ಪ್ರಸ್ತುತ ದಿನಗಳ ನಮ್ಮ ಸುತ್ತಮುತ್ತಲಿನ ರಾಜಕಾರಣಕ್ಕೂ ಅಮರಿಕೊಂಡಿದೆ. ಯಾವಮಟ್ಟಿಗೆಂದರೆ ವ್ಯಕ್ತಿಯೋರ್ವನನ್ನು ಸತತ ಪೂಜಿಸಿದ ಸಮುದಾಯವೊಂದು ಇಂದು ದಿಕ್ಕೆಟ್ಟು ಕೂತಿದೆ‌. ವ್ಯಕ್ತಿಯ ತಪ್ಪು ನಿರ್ಧಾರಗಳಿಗಾಗಿ ಆ ಸಮುದಾಯ ಇಂದು ತನ್ನನ್ನು ತಾನು ಶಪಿಸಿಕೊಳ್ಳುತ್ತಿದೆ. ಎಷ್ಟೋ ನೌಕರರು ಡಿಪ್ರೆಶನ್ ಗೆ ಒಳಗಾಗಿದ್ದಾರೆ ಎಂದು ಸ್ನೇಹಿತರೊಬ್ಬರು ತಿಳಿಸಿದರು. ಆ ಮಟ್ಟಿಗೆ ವ್ಯಕ್ತಿಪೂಜೆ ಪ್ರಸ್ತುತ ನಮ್ಮ ಸುತ್ತಲಿನ ನಮ್ಮದೇ ಸಮುದಾಯವನ್ನು ಇಂದು ಅಸಹಾಯಕ ಸ್ಥಿತಿಗೆ ತಳ್ಳಿದೆ. ಇದೇ ಕಾರಣಕ್ಕೆ ಬಾಬಾಸಾಹೇಬ್ ಅಂಬೇಡ್ಕರರು ಅಂದು ವ್ಯಕ್ತಿಪೂಜೆ ಅಪಾಯಕಾರಿ (dangerous) ಎಂದದ್ದು ಮತ್ತು ಅದನ್ನು ಅರಿಯುವಲ್ಲಿ ನಾವು ಎಡವಿದ್ದು.

ಈ ನಿಟ್ಟಿನಲ್ಲಿ ಇನ್ನು ಮುಂದಾದರು ನಾವು ಶೋಷಿತ ಸಮುದಾಯಗಳು ಯಾವುದೇ ವ್ಯಕ್ತಿಪೂಜೆಗೆ, ಆ ರೋಗಕ್ಕೆ ಈಡಾಗುವುದು ಬೇಡ. ಯಾಕೆಂದರೆ ವ್ಯಕ್ತಿಯೋರ್ವ ಶ್ರೇಷ್ಠ ವ್ಯಕ್ತಿ ಎನಿಸಿಕೊಳ್ಳಬೇಕಾದರೆ ಬಾಬಾಸಾಹೇಬ್ ಅಂಬೇಡ್ಕರರು ಹೇಳುವಂತೆ ಆತನಲ್ಲಿ ಬುದ್ಧಿವಂತಿಕೆ ಜೊತೆಗೆ ಪ್ರಾಮಾಣಿಕತೆಯೂ ಇರಬೇಕು. ದುರಂತ ಇಂದಿನ ಜನರಲ್ಲಿ ಪ್ರಾಮಾಣಿಕತೆ ಇಲ್ಲ‌. ಹಾಗೆ ಅಂತಹ ವ್ಯಕ್ತಿಗಳು ಜವಾಬ್ದಾರಿಯುತತನವನ್ನು (accountable) ಕೂಡ ಹೊಂದಿರಬೇಕು ಎಂದು ಅಂಬೇಡ್ಕರರ ಹೇಳುತ್ತಾರೆ‌‌. ಆದರೆ ಇಂದಿನ ದಿನಗಳಲ್ಲಿ ಅಂತಹ ಸೋಕಾಲ್ಡ್ ವ್ಯಕ್ತಿಪೂಜೆ ಮಾಡಿಸಿಕೊಂಡ ವ್ಯಕ್ತಿಗಳಲ್ಲಿ ಜವಾಬ್ದಾರಿಯುತತನ ಶೂನ್ಯತೆಯ ಮಟ್ಟದ್ದಾಗಿದೆ.

ಆದ್ದರಿಂದ ಈ ದಿನಗಳಲ್ಲಿ ಶೋಷಿತ ಸಮುದಾಯಗಳ ವಿದ್ಯಾರ್ಥಿಗಳು, ನೌಕರರು ಇನ್ನು ಮುಂದೆ ತಮ್ಮ ಸಮುದಾಯಗಳ ಯಾರನ್ನೂ ವ್ಯಕ್ತಿ ಪೂಜೆ ಮಾಡುವ ಅಗತ್ಯವಿಲ್ಲ, ಮಾಡಿ ಅಂಥವರ ನಡವಳಿಕೆಗಳಿಂದ ನಿರಾಶರಾಗಿ ಖಿನ್ನತೆಗೊಳಗಾಗುವ ಅಗತ್ಯವಿಲ್ಲ‌. ಹಾಗೇನಾದರೂ ವ್ಯಕ್ತಿಪೂಜೆ ಮಾಡಲೇಬೇಕು ಎಂದರೆ ಕೇವಲ ಬಾಬಾಸಾಹೇಬ್ ಅಂಬೇಡ್ಕರರನ್ನು ಮಾತ್ರ ಪೂಜಿಸೋಣ. ಇತರರತ್ತ ಕಣ್ಣೆತ್ತಿಯೂ ನೋಡದಿರೋಣ ಮತ್ತು ಅಂತಹವರ ಬೇಜವಾಬ್ದಾರಿ ನಡವಳಿಕೆಗಳಿಗೆ ನಿರ್ಲಕ್ಷ್ಯದ ಚಾಟಿ ಬೀಸಿ ಮುಂದೆ ಸಾಗೋಣ.

ಜೈಭೀಮ್.


Comments

Post a Comment

Popular posts from this blog

ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆಗಳು

  ಹಿಂದೂ ಮತ್ತು ಅಸ್ಪೃಶ್ಯನೊಬ್ಬ ಪ್ರಯಾಣ ಮಾಡುವ ಸಂದರ್ಭದಲ್ಲಿ ಪರಸ್ಪರ ಭೇಟಿಯಾದಾಗ... "ಯಾವಾಗಲಾದರೊಮ್ಮೆ ಅಕ್ಕಪಕ್ಕ ಕುಳಿತು ಪ್ರಯಾಣ ಮಾಡುವ ಸಂದರ್ಭದಲ್ಲಿ ಪರಸ್ಪರ ಜಾತಿ ತಿಳಿಯದಿದ್ದಾಗ ಜಾತಿವಾದಿ ಹಿಂದೂಗಳು ಮತ್ತು ಅಸ್ಪೃಶ್ಯರು ತುಂಬಾ ಆಪ್ತ ಸ್ನೇಹಿತರಂತೆ ವರ್ತಿಸುತ್ತಾರೆ. ಪರಸ್ಪರ ಬೀಡಿ, ಸಿಗರೆಟ್, ಹಣ್ಣುಗಳು, ಎಲೆ- ಅಡಿಕೆ ಹೀಗೆ ಅವರು ಹಂಚಿಕೊಳ್ಳುತ್ತಾರೆ. ಆದರೆ ಇದ್ದಕ್ಕಿದ್ದಂತೆ ಆ ಹಿಂದೂ ವ್ಯಕ್ತಿಗೆ ತಾನು ಇಷ್ಟು ಹೊತ್ತು ಮಾತನಾಡುತ್ತಿದ್ದ ವ್ಯಕ್ತಿ ಅಸ್ಪೃಶ್ಯ ಎಂದು ತಿಳಿಯುತ್ತಿದ್ದಂತೆ ಆತನ ಮನಸ್ಸಿನಲ್ಲಿ ದ್ವೇಷದ ಮನೋಭಾವ ಮೊಳಕೆಯೊಡೆಯುತ್ತದೆ, ತಾನು ಮೋಸಗೊಳಗಾದೆನೆಲ್ಲ ಎಂದು ಆತ ಯೋಚಿಸಲು ಆರಂಭಿಸುತ್ತಾನೆ. ಆತ ಕೋಪಗೊಳ್ಳುತ್ತಾನೆ. ಅಂತಿಮವಾಗಿ ತಾತ್ಕಾಲಿಕ ಆ ಸ್ನೇಹ ಜಗಳ ಮತ್ತು ಬೈಗುಳದ ಮೂಲಕ ಅಂತ್ಯಗೊಳ್ಳುತ್ತದೆ". -ಡಾ.ಬಿ.ಆರ್.ಅಂಬೇಡ್ಕರ್ ( Ambedkar writings and speeches, Vol.17, Part 3, Pp.132) ಕನ್ನಡಕ್ಕೆ: ರಘೋತ್ತಮ ಹೊಬ)

ಮುಂದೊಂದು ದಿನ ಎಲ್ಲರೂ ಬೌದ್ಧರಾಗಲಿದ್ದಾರೆ -ಡಾ.ಅಂಬೇಡ್ಕರ್

  "ಪ್ರತಿಯೊಂದು ಧರ್ಮವು ಉತ್ತರಿಸಬೇಕಾದ ಒಂದು ಪ್ರಶ್ನೆ ಇದೆ. ಅದೆಂದರೆ ತಳ ಸಮುದಾಯ ಮತ್ತು ದೌರ್ಜನ್ಯ ಪೀಡಿತ ಸಮುದಾಯಗಳಿಗೆ ಧರ್ಮವೊಂದು ನೀಡಬಹುದಾದ ನೈತಿಕ ಮತ್ತು ಬೌದ್ಧಿಕ ಬೆಂಬಲವಾದರು ಏನು ಎಂಬುದು? ಧರ್ಮವೊಂದು ಅಂತಹದ್ದೊಂದು ಬೆಂಬಲ ನೀಡಲಿಲ್ಲ ಎಂದರೆ ಅದು ದುರದೃಷ್ಟಕರ ಪರಿಸ್ಥಿತಿಯಲ್ಲಿ ಇದೆ ಎಂದೆ ಅರ್ಥ. ಆದ್ದರಿಂದ  ಹಿಂದೂ ಧರ್ಮವು  ಕೋಟ್ಯಾಂತರ ಸಂಖ್ಯೆಯಲ್ಲಿ ಇರುವ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಜನರಿಗೆ ನೈತಿಕ ಮತ್ತು ಬೌದ್ಧಿಕ ಬೆಂಬಲ ನೀಡುತ್ತದೆಯೇ? ಖಂಡಿತ ಇಲ್ಲ. ಈ ನಿಟ್ಟಿನಲ್ಲಿ ತಮಗೆ ಬೌದ್ಧಿಕ ಮತ್ತು ನೈತಿಕ ಬೆಂಬಲ ನೀಡದ ಹಿಂದೂ ಧರ್ಮದ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಜನರು ಇರಲು ಬಯಸುತ್ತಾರೆ ಎಂದು ಹಿಂದೂಗಳು ಅಪೇಕ್ಷೆ ಪಡಲು ಸಾಧ್ಯವೇ? ಅಂದಹಾಗೆ ಅಂತಹದ್ದೊಂದು ಅಪೇಕ್ಷೆ ಅಕ್ಷರಶಃ ವ್ಯರ್ಥದ್ದು.  "ಯಾಕೆಂದರೆ ಹಿಂದೂ ಧರ್ಮ ಅದು ಜ್ವಾಲಾಮುಖಿಯ ಮೇಲೆ ತೇಲುತ್ತಿದೆ. ಆ ನಿಟ್ಟಿನಲ್ಲಿ ಇಂದು ಅದು(ಜ್ವಾಲಾಮುಖಿ) ನಂದಿದ ಹಾಗೆ ಕಾಣುತ್ತಿದೆ. ಆದರೆ ವಾಸ್ತವ ಅದಲ್ಲ‌‌. ಮೊಂದೊಂದು ದಿನ ಈ ಕೋಟ್ಯಂತರ (ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ) ಮಂದಿಗೆ ತಮ್ಮ ಈ ಹೀನ ಸ್ಥಿತಿಯ ಬಗ್ಗೆ ಅರಿವಾದಾಗ ಮತ್ತು ಅದಕ್ಕೆ ಹಿಂದೂ ಧರ್ಮದ ಸಾಮಾಜಿಕ ತತ್ವ ಕಾರಣ ಎಂದು ತಿಳಿದಾಗ ಆ ಜ್ವಾಲಾಮುಖಿ ಜೀವಂತಗೊಳ್ಳಲಿದೆ. ಇದಕ್ಕೆ ಸಾಕ್ಷಿಯಾಗಿ ರೋಮನ್ ಸಾಮ್ರಾಜ್ಯದಲ್ಲಿ ಕ್ರಿಶ್ಚಿಯ...

ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್: ಮರೆಯಬಾರದ ಮೈಸೂರು ದೊರೆ

  ನಾಲ್ವಡಿ ಕೃಷ್ಣರಾಜ ಒಡೆಯರ್ -ರಘೋತ್ತಮ ಹೊಬ "ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು" ಇದು ಬಾಬಾಸಾಹೇಬ್ ಡಾ.ಅಂಬೇಡ್ಕರ್ ರವರ ಸುಪ್ರಸಿದ್ದ ನಾಣ್ಣುಡಿ. ಅದರಲ್ಲೂ ಹಳೆ ಮೈಸೂರು ಭಾಗದವರು ತಮ್ಮ ಭವ್ಯ ಇತಿಹಾಸವನ್ನು ಮರೆಯಲೇಬಾರದು. ಏಕೆಂದರೆ ರಾಜ್ಯದ ಇತರೆ ಪ್ರದೇಶಗಳಿಗೆ ಹೋಲಿಸಿದರೆ ಹಳೆ ಮೈಸೂರು ಭಾಗ ಅಭಿವೃದ್ಧಿಯಲ್ಲಿ ಮಂಚೂಣಿಯಲ್ಲಿದೆ ಎಂದರೆ ಅದಕ್ಕೆ ಕಾರಣ ಅದರ ಭವ್ಯ ಇತಿಹಾಸ. ಇಂತಹ ಭವ್ಯ ಇತಿಹಾಸದ ನಿರ್ಮಾತೃವಾಗಿ ತನ್ಮೂಲಕ ಮಾದರಿ ಮೈಸೂರಿಗೆ ಮುನ್ನುಡಿ ಬರೆದ ಧೃವತಾರೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್. ಆಳರಸರಿಗೆ ಮಾದರಿಯಾದ ರಾಜಯೋಗಿ.  ನಾಲ್ವಡಿಯವರು ಜನಿಸಿದ್ದು 1884 ರ ಜೂನ್ 4ರಂದು. ತಂದೆ ಶ್ರೀ ಚಾಮರಾಜ ಒಡೆಯರ್, ತಾಯಿ ಕೆಂಪನಂಜಮ್ಮಣ್ಣಿ (ವಾಣಿ ವಿಲಾಸ ಸನ್ನಿಧಾನ). ಬಾಲಕ ಕೃಷ್ಣರಾಜರ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಮೈಸೂರಿನಲ್ಲೇ. ರಾಯಲ್ ಸ್ಕೂಲ್ ಎಂಬ ಪ್ರತ್ಯೇಕ ಶಾಲೆಯಲ್ಲಿ ಇವರ ಸಹಪಾಠಿಗಳಾಗಿದ್ದವರು ಮಿರ್ಜಾ  ಇಸ್ಮಾಯಿಲ್, ಲಕ್ಷ್ಮೀಕಾಂತರಾಜ್ ಅರಸ್, ಮುಂತಾದವರು. 1894 ರಲ್ಲಿ ತಂದೆ ಚಾಮರಾಜ ಒಡೆಯರ್ ರವರ ನಿಧನದಿಂದಾಗಿ ಬಾಲಕ ಕೃಷ್ಣರಾಜನಿಗೆ ರಾಜ್ಯದ ಹೊಣೆ ಬಿದ್ದಾಗ ಅವರಿಗೆ ಕೇವಲ 10 ವರ್ಷ. ಪೆಬ್ರವರಿ 1, 1895 ರಲ್ಲಿ ಯುವರಾಜ ಕೃಷ್ಣರಾಜರಿಗೆ ಪಟ್ಟಾಭಿಷೇಕ ಮಹೋತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ ಬ್ರಿಟಿಷ್ ರಿಜೆನ್ಸಿ ಆಳ್ವಿಕೆಯಲ್ಲಿ ಮೈಸೂರಿನ ಗೌರ್ನರ್ ಮತ್ತು ಮಹಾರಾಜರ ಟ್ಯೂಟರ...