Skip to main content

ಒಂದು ಸಮುದಾಯದ ಸಂಘಟಿತ ರೂಪ ಮತ್ತು ಅದರ ಆರ್ಥಿಕತೆ

 




-ರಘೋತ್ತಮ ಹೊ.ಬ

ಮೊನ್ನೆ ಒಂದು ಅಂಗಡಿಯಲ್ಲಿ 40 ಸಾವಿರ ರೂಗೆ ಒಂದು ಹೊಸ ಟಿವಿ ತೆಗೆದುಕೊಂಡೆ. ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಅಂಗಡಿಯ ಆ ಮಾಲೀಕರು "ಸರ್, ಇದಕ್ಕೆ ಸ್ಟೆಬಿಲೈಜರ್ ಬೇಕಾಗುತ್ತದೆ" ಎಂದು ಪಕ್ಕದಲ್ಲೇ ಇದ್ದ ಒಂದು ಅಂಗಡಿಯಿಂದ ಸ್ಟೆಬಲೈಜರ್ ತೆಗೆದುಕೊಳ್ಳಲು ಹೇಳಿದರು. 4 ಸಾವಿರ ರೂ ತೆತ್ತು ನಾನು ಆ ಅಂಗಡಿಯಿಂದ ಸ್ಟೆಬಿಲೈಜರ್ ಕೊಂಡುಕೊಂಡೆ. ಹಾಗೆ ಆಟೋದಲ್ಲಿ ಮನೆಗೆ ಟಿವಿ ಕಳಿಸುವುದಾಗಿ ಹೇಳಿದ ಆ ಅಂಗಡಿ ಮಾಲೀಕರು ತಮ್ಮದೇ ಸಮುದಾಯದ ಆಟೋ ಚಾಲಕನಿಗೆ ಆ ಕೆಲಸ ವಹಿಸಿದ್ದರು! ಹಾಗೆ ಟಿವಿ ಸ್ವೀಕರಿಸಿದ ನಾನು ಟಿವಿ ಇನ್ ಸ್ಟಾಲ್ ಮಾಡುವವರಿಗಾಗಿ ಕಾದು ಕುಳಿತಾಗ ಅದೇ ಸಮುದಾಯದ ಇಬ್ಬರು ಮೆಕ್ಯಾನಿಕ್ ಗಳು ಟಿವಿ ಇನ್ ಸ್ಟಾಲ್ ಮಾಡಲು ಬಂದರು. ಅವರಿಗೂ ಕೂಡ ನಾನು ಅಮೌಂಟ್ ಕೊಟ್ಟು ಕಳುಹಿಸಿದೆ. ಹೋಗುವಾಗ ಆ ಮೆಕ್ಯಾನಿಕ್ ಗಳು "ಸರ್, ಕೇಬಲ್‌ ಟಿವಿಗಿಂತ ಡಿಷ್ ಹಾಕಿಸಿಕೊಳ್ಳಿ ಎಂದು ಡಿಟಿಹೆಚ್ ಕಂಪನಿಯ ನಂಬರ್ ಒಂದನ್ನು ಕೊಟ್ಟರು. ಅಂದಹಾಗೆ ಡಿಟಿಹೆಚ್ ಕಂಪನಿಯ ಆ ಫ್ರ್ಯಾಂಚೈಸಿ ವ್ಯಕ್ತಿ ಕೂಡ ಅದೇ ಸಮುದಾಯದವರಾಗಿದ್ದರು. ಹಾಗೆ ಆನ್ ಲೈನ್ ಪೇಮೆಂಟ್ ನಂತರ ಆ ವ್ಯಕ್ತಿ ಡಿಷ್ ಹಾಕಲು ಇಬ್ಬರು ಹುಡುಗರನ್ನು ಕಳುಹಿಸಿದರು ಅವರು ಕೂಡ ಅದೇ ಸಮುದಾಯದವರಾಗಿದ್ದರು! ಅಂದರೆ ಒಬ್ಬ ಟಿವಿ ಅಂಗಡಿಯ ಮಾಲೀಕ ತನ್ನದೆ ಸಮುದಾಯದ ಒಬ್ಬ ಎಲೆಕ್ಟ್ರಿಕ್ ಅಂಗಡಿಯವ, ಓರ್ವ ಆಟೋ ಚಾಲಕ, ಓರ್ವ ಮೆಕ್ಯಾನಿಕ್, ಓರ್ವ ಡಿಟಿಹೆಚ್ ಫ್ರ್ಯಾಂಚೈಸಿ, ಇಬ್ಬರು ಕಾರ್ಮಿಕ... ಹೀಗೆ ಆರು ಜನರಿಗೆ ಬಿಸಿನೆಸ್ ಮಾಡಿಕೊಟ್ಟಿದ್ದ. 40 ಸಾವಿರ ರೂ ಟಿವಿಗೆ ಇನ್ನೂ ಹತ್ತು ಸಾವಿರ ತನ್ನದೇ ಸಮುದಾಯಕ್ಕೆ ತಲುಪುವಂತೆ ಆತ ನೋಡಿಕೊಂಡಿದ್ದ. ಇದನ್ನೆಲ್ಲ ನೋಡುತ್ತಿದ್ದ ನನಗೆ ಆಶ್ಚರ್ಯ ಜೊತೆಗೆ ಖುಷಿ ಕೂಡ ಆಯಿತು. ಹೇಗೆ ಒಂದು ಸಮುದಾಯ ಒಂದು ನೆಟ್ವರ್ಕ್ ಮೂಲಕ ತನ್ನ ಆರ್ಥಿಕತೆ ಕಟ್ಟಿಕೊಳ್ಳುತ್ತಿದೆ, ಎಲ್ಲಾ ಅಡೆ ತಡೆಗಳ ನಡುವೆಯೂ ಹೇಗೆ ಬದುಕುತ್ತಿದೆ ಎಂಬುದು ಅರಿವಿಗೆ ಬಂತು.

ಖಂಡಿತವಾಗಿ, ಇಂದು ಶೋಷಿತ ವರ್ಗದ ಜನರು ಕೂಡ ಮೇಲ್ಕಾಣಿಸಿದ ಅಂತಹ ಸಮುದಾಯ ಆರ್ಥಿಕ ಜಾಲ ಅಥವಾ ನೆಟ್ವರ್ಕ್ ಬೆಳೆಸಿಕೊಳ್ಳಬೇಕಿದೆ ರೂಢಿಸಿಕೊಳ್ಳಬೇಕಿದೆ. ಎಲ್ಲವನ್ನೂ ಸರ್ಕಾರದತ್ತ ನೋಡುವ ಬದಲು ಒಂದು ಸಂಘಟಿತ ಸಮುದಾಯವಾಗಿ ತಾನು ಹೀಗೆ ಆರ್ಥಿಕತೆ ಬೆಳೆಸಿಕೊಳ್ಳಲು ಸಾಧ್ಯವಾ ಎಂದು ಯೋಚಿಸಬೇಕಿದೆ. ಯಾಕೆಂದರೆ ಶೋಷಿತ ಸಮುದಾಯಗಳ ಶಕ್ತಿ ಅದು ಅದರ ಜನಸಂಖ್ಯೆಯಾಗಿದೆ. ಎಷ್ಟೋ ಜಿಲ್ಲೆಗಳಲ್ಲಿ ಉದಾಹರಣೆಗೆ ಚಾಮರಾಜನಗರ, ಮೈಸೂರು, ಚಿತ್ರದುರ್ಗ, ಗುಲ್ಬರ್ಗ, ಬೆಳಗಾವಿ, ಬೀದರ್, ವಿಜಯಪುರ..‌ ಹೀಗೆ ಜಿಲ್ಲೆಗಳಲ್ಲಿ ಶೋಷಿತ ವರ್ಗದ ಜನರ ಜನಸಂಖ್ಯೆ ಶೇ.30 ರ ಆಸುಪಾಸಿನಲ್ಲಿದೆ. ಈ ನಿಟ್ಟಿನಲ್ಲಿ ಈ ಬಗ್ಗೆ ಅರೆಕ್ಷಣ ಯೋಚಿಸಿ ಈಗಾಗಲೇ ತಾನು ಯಾರ ಬಳಿ ವ್ಯಾಪಾರ ವ್ಯವಹಾರ ಮಾಡುತ್ತಿದೆಯೋ ಅಂತಹವರ ಜೊತೆಗೆ ವ್ಯಾಪಾರ ವ್ಯವಹಾರ ನಿಲ್ಲಿಸಿ ಶೋಷಿತ ಸಮುದಾಯ ತನ್ನವರತ್ತ ಕಣ್ತೆರೆದರೆ ಅಥವಾ ತನ್ನವರ ಬಳಿ ಅಂತಹ ವ್ಯಾಪಾರ ವ್ಯವಹಾರಸ್ಥರು ಇಲ್ಲದಾಗ ತಾವುಗಳೇ ಯಾಕೆ ಆ ನಿಟ್ಟಿನಲ್ಲಿ ಯೋಚಿಸಬಾರದು ಎಂದು ವ್ಯಾಪಾರ ವ್ಯವಹಾರಕ್ಕೆ ಇಳಿದರೆ, ಒಂದು ನೆಟ್ವರ್ಕ್ ರೂಪಿಸಿದರೆ, ಆ ನಿಟ್ಟಿನಲ್ಲಿ ಪ್ರಯತ್ನಕ್ಕೆ ಇಳಿದರೆ ಖಂಡಿತ ಯಶಸ್ಸು ಸಿಕ್ಕೇ ಸಿಗುತ್ತದೆ.

ಇಂತಹ ಪ್ರಯತ್ನಗಳಿಗೆ ಕೆಲವರಿಂದ ನೆಗೆಟಿವ್ ವಿಚಾರಗಳು ಬರಬಹುದು. ಈ ದಿಸೆಯಲ್ಲಿ ಅಂತಹ ನೆಗೆಟಿವ್ ಸಲಹೆಗಳನ್ನು ಬದಿಗೊತ್ತಿ ಪಾಸಿಟಿವ್ ಆಗಿ ಮುಂದುವರಿದರೆ ಖಂಡಿತ ಶೋಷಿತ ಸಮುದಾಯಗಳು ಮೇಲ್ಕಾಣಿಸಿದ ಸಮುದಾಯದ ರೀತಿ ಆರ್ಥಿಕವಾಗಿ ಬಲಾಢ್ಯರಾಗಬಹುದು. ಅಂದಹಾಗೆ ಒಮ್ಮೆ ಹೀಗೆ ಆರ್ಥಿಕವಾಗಿ ಶೋಷಿತ ಸಮುದಾಯಗಳು ಬಲಾಢ್ಯರಾದರೆ ಅಸ್ಪೃಶ್ಯತೆ ತಕ್ಕಮಟ್ಟಿಗೆ ದೂರ ಸರಿಯಲಿದೆ. ಸಮುದಾಯದ ಸ್ವಾಭಿಮಾನ ಕೂಡ ಎತ್ತಿಹಿಡಿಯಲ್ಪಡಲಿದೆ.


***

#ದಲಿತ_ಉದ್ಯಮಶೀಲತೆ


Comments

Popular posts from this blog

ಪುಲಕೇಶಿ ಹೊಲೆಯರವನೆ? ಚಾಲುಕ್ಯರು ಛಲವಾದಿಗಳೇ? -ರಘೋತ್ತಮ ಹೊ.ಬ

"ಹೊಲಯರು - ಮಾದರು -ರಾಜರು" ಎಂಬ ತಮ್ಮ ಸಂಶೋಧನಾ ಕೃತಿಯಲ್ಲಿ ಸಂಶೋಧಕರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಆದ ಶ್ರೀ ಎಂ.ನಂಜುಂಡಸ್ವಾಮಿ ಐಪಿಎಸ್ ರವರು ಹೊಲೆಯರು ಮತ್ತು ಮಾದಿಗರು ಈ ಎರಡೂ ಜನಾಂಗಗಳು ಕರ್ನಾಟಕ ರಾಜ್ಯದಲ್ಲಿ ರಾಜರಾಗಿದ್ದವರು ರಾಜ್ಯ ಆಳಿದವರು ಎಂದು ಸಂಶೋಧನೆ ಮೂಲಕ ಸಾಧಿಸಿದ್ದಾರೆ. ಅದರಲ್ಲಿ ಬಹು ಮುಖ್ಯವಾದದ್ದು ಬಾದಾಮಿಯ ಚಾಲುಕ್ಯರು ಹೊಲೆಯ ವಂಶಸ್ಥರು ಮತ್ತು ಛಲವಾದಿ ಜನಾಂಗದವರು ಎಂದು ಲೇಖಕರು ತಮ್ಮ ಭಾಷಾಶಾಸ್ತ್ರದ ಸಂಶೋಧನೆಯ ಆಧಾರದಲ್ಲಿ ಹೇಳುತ್ತಾರೆ. "ಹೊಲಯರು - ಮಾದರು -ರಾಜರು" ಆ ಕೃತಿಯಲ್ಲಿ ಪುಟ ಸಂಖ್ಯೆ 96ರಲ್ಲಿ  ನಂಜುಂಡಸ್ವಾಮಿಯವರು ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯ ಮತ್ತು ಬೇಲೂರು ಚನ್ನಕೇಶವ ದೇವಾಲಯಗಳಲ್ಲಿ ಹೊಲೆಯನಿಗೆ ನೀಡುವ ಗೌರವ ಉಲ್ಲೇಖಿಸುತ್ತ "ಆ ಗೌರವ ರಾಜನಿಗೆ ನೀಡುವ ಗೌರವದಂತಿದೆ. ಹೊಲೆಯ ರಾಜನಿಂದಲೇ ಆ ದೇವಾಲಯ ನಿರ್ಮಾಣವಾಗಿರುವುದರ ಸಂಕೇತವಾಗಿ ಆತನಿಗೆ ಈಗಲೂ ಆ ಗೌರವ ಸಿಗುತ್ತಿದೆ" ಎಂದು ಹೇಳುತ್ತಾರೆ. ಇನ್ನೂ ಬಾಗಲಕೋಟೆಯ ದೇಸಾಯಿಗಳು ಈಗಲೂ ಹೊಲೆಯರ ಮನೆಯಿಂದ ಬೆಂಕಿ ತರುವ ಸಂಪ್ರದಾಯವನ್ನು ಸಹ ಲೇಖಕರು ಉಲ್ಲೇಖಿಸುತ್ತಾರೆ. ಆ  ಹಿನ್ನೆಲೆಯಲ್ಲಿ "ಹಿಂದೆ ನಾವು ಈ ನಾಡನ್ನು ಆಳಿದ ರಾಜರು. ಅದಕ್ಕಾಗಿ ನಮ್ಮ ಬಳಿ ಸಾಂಕೇತಿಕವಾಗಿ ಈಗಲೂ ಬಂದು ದೇಸಾಯಿಗಳು ಬೆಂಕಿ ಪಡೆದುಕೊಳ್ಳುತ್ತಿದ್ದಾರೆ. ಈಗ ನಮ್ಮನ್ನು ಛಲವಾದಿಗಳು ಎನ್ನುವರು. ಹಿಂದೆ ನ...

ಕೆ ಆರ್ ಎಸ್.ನಿರ್ಮಾಣ: ವಾಸ್ತವ ಇತಿಹಾಸ

        - ರಘೋತ್ತಮ ಹೊಬ  ಅದು 1902 ನೇ ಇಸವಿ. ಏಷ್ಯಾದಲ್ಲೆ ಪ್ರಪ್ರಥಮ ಜಲವಿದ್ಯುತ್ ಉತ್ಪಾದನಾ  ಕೇಂದ್ರ ಸ್ಥಾಪನೆಯಾದ ವರ್ಷ. ಅಂದಹಾಗೆ ಅದನ್ನು ಸ್ಥಾಪಿಸಿದವರು ಮೈಸೂರಿನ ಅಂದಿನ ಮಹಾರಾಜ #ನಾಲ್ವಡಿ_ಕೃಷ್ಣರಾಜಒಡೆಯರ್‍ರವರು. ಬ್ರಿಟಿಷರೊಂದಿಗೆ  ಕೋಲಾರ ಚಿನ್ನದ ಗಣಿಗೆ ವಿದ್ಯುತ್ ಸರಬರಾಜು ಮಾಡುವ ಒಪ್ಪಂದ ಮಾಡಿಕೊಂಡಿದ್ದ ಅವರು ಆ ನಿಟ್ಟಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಶಿವನಸಮುದ್ರ ಎಂಬಲ್ಲಿ ಪ್ರಪ್ರಥಮ ಜಲವಿದ್ಯುತ್ ಕೇಂದ್ರ ಸ್ಥಾಪಿಸಿದರು ಮತ್ತು ಆ ಕಾಲದಲ್ಲೆ 30,000 ವೋಲ್ಟ್  ವಿದ್ಯುತ್‍ಅನ್ನು ಕೋಲಾರದ ಚಿನ್ನದÀ ಗಣಿಗೆ ವರ್ಗಾಯಿಸಿದರು. ಈ ಸಂದರ್ಭದಲ್ಲಿ ಒಂದು ಮಾತು ಅದೇನೆಂದರೆ ಆಗಿನ್ನು ಸರ್.ಎಂ.ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನಕ್ಕೆ ಪ್ರವೇಶ ಪಡೆದೇ ಇರಲಿಲ್ಲ!    ಇರಲಿ, ಜಲವಿದ್ಯುತ್ ಕೇಂದ್ರವನ್ನೇನೋ ಒಡೆಯರ್‍ರವರು ಸ್ಥಾಪಿಸಿದರು. ಆದರೆ ವಿದ್ಯುತ್ ಉತ್ಪಾದನೆಗೆ ನೀರು ವರ್ಷಾಕಾಲ ದೊರೆಯುತ್ತದೆಯೇ? ಖಂಡಿತ ಇಲ್ಲ. ಮಳೆ ಬಂದಾಗ ವಿದ್ಯುತ್. ಇಲ್ಲದಿದ್ರೆ ನೋ ವಿದ್ಯುತ್! ಬೇಸಿಗೆ ಕಾಲದಲ್ಲಂತೂ ಒಂದು ವೋಲ್ಟ್ ಉತ್ಪತ್ತಿ ಕೂಡ ಕಷ್ಟವಾಗಿತ್ತು. ಇದರಿಂದ ಚಿನ್ನದ ಗಣಿಗೆ ನಿರಂತರ ವಿದ್ಯುತ್ ಸರಬರಾಜು ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದ್ದ ಒಡೆಯರ್‍ರಿಗೆ  ಅದರ ಪೂರೈಕೆ ಸವಾಲಿನ ಕೆಲಸವಾಗಿತ್ತು. ಈ ಕಾರಣಕ್ಕಾಗಿ ಅಂದರೆ ವಿದ್ಯುತ್ ಉತ್ಪಾದನ ಕೇಂದ್ರಕ್ಕೆ ನ...

ಮುಚ್ಚಿಡಲ್ಪಟ್ಟ ಅಂಬೇಡ್ಕರ್ ರ ಭವ್ಯ ಇತಿಹಾಸ -ರಘೋತ್ತಮ ಹೊ.ಬ

  ಬಾಬಾಸಾಹೇಬ್ ಡಾ||ಅಂಬೇಡ್ಕರ್ ರವರ ಬಗ್ಗೆ ಈ ದೇಶದ ಜನತೆಗೆ ಏನು ಗೊತ್ತು? ಗೊತ್ತಿರುವುದಿಷ್ಟೆ, ಅಂಬೇಡ್ಕರರು ಯಾರೂ ಮುಟ್ಟಿಸಿಕೊಳ್ಳಲಾಗದ ಒಂದು ಕೀಳು ಜಾತಿಯಲಿ ಹುಟ್ಟಿದರು ಬಾಲ್ಯದಿಂದಲೆ ಅಸ್ಪೃಶ್ಯತೆಯ ನೋವನ್ನು ಅನುಭವಿಸಿದರು. ತಮ್ಮ ತಂದೆಯನ್ನು ನೋಡಲು ಗಾಡಿಯಲಿ ಹೋಗುತ್ತಿದ್ದಾಗ ಗಾಡಿಯಿಂದ ತಳ್ಳಲ್ಪಟ್ಟರು. ಹೀಗೆ ಅವಮಾನಕ್ಕೊಳಗಾದ ಅಂಬೇಡ್ಕರರು ಮುಂದೆ ಉನ್ನತ ಜ್ಞಾನಪಡೆದು ಈ ದೇಶದ ‘ಸಂವಿಧಾನ ಶಿಲ್ಪಿ' ಎನಿಸಿಕೊಂಡರು. ಅಸ್ಪೃಶ್ಯರ ಉದ್ಧಾರಕ್ಕಾಗಿ ಹೋರಾಡಿದರು ಎಂಬುದಷ್ಟೆ. ಬಹುಶಃ ಇದಕ್ಕಿಂತ ಹೆಚ್ಚಿಗೆ ಅಂಬೇಡ್ಕರರ ಬಗ್ಗೆ ಈ ದೇಶದ ಜನತೆಗೆ ಗೊತ್ತಿರುವುದು ಸಾಧ್ಯವಿಲ್ಲ. ಅಥವಾ ಮೇಲೆ ಹೇಳಿರುವುದೇ ಹೆಚ್ಚಿರಬೇಕು! ದಲಿತರಿಗೆ ಮೀಸಲಾತಿ ತಂದುಕೊಟ್ಟದಷ್ಟೆ ಅವರ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ತನ್ಮೂಲಕ ಅಂಬೇಡ್ಕರ್ ಎಂಬ"ಮಹಾನ್ ಇತಿಹಾಸವನ್ನು" ಮುಚ್ಚಲಾಗುತ್ತಿದೆ!       ಹಾಗಿದ್ದರೆ ಅಂಬೇಡ್ಕರ್ ರವರ ಸಾಧನೆ ಇದಿಷ್ಟು ಮಾತ್ರವಾ? ಅಥವಾ ಇನ್ನೇನು ಇಲ್ಲವಾ? ಯಾಕೆಂದರೆ 2006ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕದ ಅಧ್ಯಕ್ಷ   ಜಾರ್ಜ್ ಬುಷ್ "ಗಾಂಧಿ, ಠಾಗೋರ್ ಮತ್ತು ನೆಹರೂ"ರವರುಗಳನ್ನು ನವಭಾರತದ ನಿರ್ಮಾತೃಗಳೆನ್ನುತ್ತಾರೆ. ಅಂಬೇಡ್ಕರ್ ರವರನ್ನು ಈ ಪರಿಯಲ್ಲಿ ಇತಿಹಾಸದಲ್ಲಿ ಕುಬ್ಜರನ್ನಾಗಿಸುವ ಅಥವಾ ಮರೆಮಾಚುವ ಪ್ರಯತ್ನ ನಿರಂತರವಾಗಿ ನಡೆಯುತ್ತಿರುವಾಗ ಬುಷ್‍ ರಂತಹವರು ಇದಕ್ಕಿಂತ ಹೆಚ್ಚ...