Skip to main content

ಒಂದು ಸಮುದಾಯದ ಸಂಘಟಿತ ರೂಪ ಮತ್ತು ಅದರ ಆರ್ಥಿಕತೆ

 




-ರಘೋತ್ತಮ ಹೊ.ಬ

ಮೊನ್ನೆ ಒಂದು ಅಂಗಡಿಯಲ್ಲಿ 40 ಸಾವಿರ ರೂಗೆ ಒಂದು ಹೊಸ ಟಿವಿ ತೆಗೆದುಕೊಂಡೆ. ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಅಂಗಡಿಯ ಆ ಮಾಲೀಕರು "ಸರ್, ಇದಕ್ಕೆ ಸ್ಟೆಬಿಲೈಜರ್ ಬೇಕಾಗುತ್ತದೆ" ಎಂದು ಪಕ್ಕದಲ್ಲೇ ಇದ್ದ ಒಂದು ಅಂಗಡಿಯಿಂದ ಸ್ಟೆಬಲೈಜರ್ ತೆಗೆದುಕೊಳ್ಳಲು ಹೇಳಿದರು. 4 ಸಾವಿರ ರೂ ತೆತ್ತು ನಾನು ಆ ಅಂಗಡಿಯಿಂದ ಸ್ಟೆಬಿಲೈಜರ್ ಕೊಂಡುಕೊಂಡೆ. ಹಾಗೆ ಆಟೋದಲ್ಲಿ ಮನೆಗೆ ಟಿವಿ ಕಳಿಸುವುದಾಗಿ ಹೇಳಿದ ಆ ಅಂಗಡಿ ಮಾಲೀಕರು ತಮ್ಮದೇ ಸಮುದಾಯದ ಆಟೋ ಚಾಲಕನಿಗೆ ಆ ಕೆಲಸ ವಹಿಸಿದ್ದರು! ಹಾಗೆ ಟಿವಿ ಸ್ವೀಕರಿಸಿದ ನಾನು ಟಿವಿ ಇನ್ ಸ್ಟಾಲ್ ಮಾಡುವವರಿಗಾಗಿ ಕಾದು ಕುಳಿತಾಗ ಅದೇ ಸಮುದಾಯದ ಇಬ್ಬರು ಮೆಕ್ಯಾನಿಕ್ ಗಳು ಟಿವಿ ಇನ್ ಸ್ಟಾಲ್ ಮಾಡಲು ಬಂದರು. ಅವರಿಗೂ ಕೂಡ ನಾನು ಅಮೌಂಟ್ ಕೊಟ್ಟು ಕಳುಹಿಸಿದೆ. ಹೋಗುವಾಗ ಆ ಮೆಕ್ಯಾನಿಕ್ ಗಳು "ಸರ್, ಕೇಬಲ್‌ ಟಿವಿಗಿಂತ ಡಿಷ್ ಹಾಕಿಸಿಕೊಳ್ಳಿ ಎಂದು ಡಿಟಿಹೆಚ್ ಕಂಪನಿಯ ನಂಬರ್ ಒಂದನ್ನು ಕೊಟ್ಟರು. ಅಂದಹಾಗೆ ಡಿಟಿಹೆಚ್ ಕಂಪನಿಯ ಆ ಫ್ರ್ಯಾಂಚೈಸಿ ವ್ಯಕ್ತಿ ಕೂಡ ಅದೇ ಸಮುದಾಯದವರಾಗಿದ್ದರು. ಹಾಗೆ ಆನ್ ಲೈನ್ ಪೇಮೆಂಟ್ ನಂತರ ಆ ವ್ಯಕ್ತಿ ಡಿಷ್ ಹಾಕಲು ಇಬ್ಬರು ಹುಡುಗರನ್ನು ಕಳುಹಿಸಿದರು ಅವರು ಕೂಡ ಅದೇ ಸಮುದಾಯದವರಾಗಿದ್ದರು! ಅಂದರೆ ಒಬ್ಬ ಟಿವಿ ಅಂಗಡಿಯ ಮಾಲೀಕ ತನ್ನದೆ ಸಮುದಾಯದ ಒಬ್ಬ ಎಲೆಕ್ಟ್ರಿಕ್ ಅಂಗಡಿಯವ, ಓರ್ವ ಆಟೋ ಚಾಲಕ, ಓರ್ವ ಮೆಕ್ಯಾನಿಕ್, ಓರ್ವ ಡಿಟಿಹೆಚ್ ಫ್ರ್ಯಾಂಚೈಸಿ, ಇಬ್ಬರು ಕಾರ್ಮಿಕ... ಹೀಗೆ ಆರು ಜನರಿಗೆ ಬಿಸಿನೆಸ್ ಮಾಡಿಕೊಟ್ಟಿದ್ದ. 40 ಸಾವಿರ ರೂ ಟಿವಿಗೆ ಇನ್ನೂ ಹತ್ತು ಸಾವಿರ ತನ್ನದೇ ಸಮುದಾಯಕ್ಕೆ ತಲುಪುವಂತೆ ಆತ ನೋಡಿಕೊಂಡಿದ್ದ. ಇದನ್ನೆಲ್ಲ ನೋಡುತ್ತಿದ್ದ ನನಗೆ ಆಶ್ಚರ್ಯ ಜೊತೆಗೆ ಖುಷಿ ಕೂಡ ಆಯಿತು. ಹೇಗೆ ಒಂದು ಸಮುದಾಯ ಒಂದು ನೆಟ್ವರ್ಕ್ ಮೂಲಕ ತನ್ನ ಆರ್ಥಿಕತೆ ಕಟ್ಟಿಕೊಳ್ಳುತ್ತಿದೆ, ಎಲ್ಲಾ ಅಡೆ ತಡೆಗಳ ನಡುವೆಯೂ ಹೇಗೆ ಬದುಕುತ್ತಿದೆ ಎಂಬುದು ಅರಿವಿಗೆ ಬಂತು.

ಖಂಡಿತವಾಗಿ, ಇಂದು ಶೋಷಿತ ವರ್ಗದ ಜನರು ಕೂಡ ಮೇಲ್ಕಾಣಿಸಿದ ಅಂತಹ ಸಮುದಾಯ ಆರ್ಥಿಕ ಜಾಲ ಅಥವಾ ನೆಟ್ವರ್ಕ್ ಬೆಳೆಸಿಕೊಳ್ಳಬೇಕಿದೆ ರೂಢಿಸಿಕೊಳ್ಳಬೇಕಿದೆ. ಎಲ್ಲವನ್ನೂ ಸರ್ಕಾರದತ್ತ ನೋಡುವ ಬದಲು ಒಂದು ಸಂಘಟಿತ ಸಮುದಾಯವಾಗಿ ತಾನು ಹೀಗೆ ಆರ್ಥಿಕತೆ ಬೆಳೆಸಿಕೊಳ್ಳಲು ಸಾಧ್ಯವಾ ಎಂದು ಯೋಚಿಸಬೇಕಿದೆ. ಯಾಕೆಂದರೆ ಶೋಷಿತ ಸಮುದಾಯಗಳ ಶಕ್ತಿ ಅದು ಅದರ ಜನಸಂಖ್ಯೆಯಾಗಿದೆ. ಎಷ್ಟೋ ಜಿಲ್ಲೆಗಳಲ್ಲಿ ಉದಾಹರಣೆಗೆ ಚಾಮರಾಜನಗರ, ಮೈಸೂರು, ಚಿತ್ರದುರ್ಗ, ಗುಲ್ಬರ್ಗ, ಬೆಳಗಾವಿ, ಬೀದರ್, ವಿಜಯಪುರ..‌ ಹೀಗೆ ಜಿಲ್ಲೆಗಳಲ್ಲಿ ಶೋಷಿತ ವರ್ಗದ ಜನರ ಜನಸಂಖ್ಯೆ ಶೇ.30 ರ ಆಸುಪಾಸಿನಲ್ಲಿದೆ. ಈ ನಿಟ್ಟಿನಲ್ಲಿ ಈ ಬಗ್ಗೆ ಅರೆಕ್ಷಣ ಯೋಚಿಸಿ ಈಗಾಗಲೇ ತಾನು ಯಾರ ಬಳಿ ವ್ಯಾಪಾರ ವ್ಯವಹಾರ ಮಾಡುತ್ತಿದೆಯೋ ಅಂತಹವರ ಜೊತೆಗೆ ವ್ಯಾಪಾರ ವ್ಯವಹಾರ ನಿಲ್ಲಿಸಿ ಶೋಷಿತ ಸಮುದಾಯ ತನ್ನವರತ್ತ ಕಣ್ತೆರೆದರೆ ಅಥವಾ ತನ್ನವರ ಬಳಿ ಅಂತಹ ವ್ಯಾಪಾರ ವ್ಯವಹಾರಸ್ಥರು ಇಲ್ಲದಾಗ ತಾವುಗಳೇ ಯಾಕೆ ಆ ನಿಟ್ಟಿನಲ್ಲಿ ಯೋಚಿಸಬಾರದು ಎಂದು ವ್ಯಾಪಾರ ವ್ಯವಹಾರಕ್ಕೆ ಇಳಿದರೆ, ಒಂದು ನೆಟ್ವರ್ಕ್ ರೂಪಿಸಿದರೆ, ಆ ನಿಟ್ಟಿನಲ್ಲಿ ಪ್ರಯತ್ನಕ್ಕೆ ಇಳಿದರೆ ಖಂಡಿತ ಯಶಸ್ಸು ಸಿಕ್ಕೇ ಸಿಗುತ್ತದೆ.

ಇಂತಹ ಪ್ರಯತ್ನಗಳಿಗೆ ಕೆಲವರಿಂದ ನೆಗೆಟಿವ್ ವಿಚಾರಗಳು ಬರಬಹುದು. ಈ ದಿಸೆಯಲ್ಲಿ ಅಂತಹ ನೆಗೆಟಿವ್ ಸಲಹೆಗಳನ್ನು ಬದಿಗೊತ್ತಿ ಪಾಸಿಟಿವ್ ಆಗಿ ಮುಂದುವರಿದರೆ ಖಂಡಿತ ಶೋಷಿತ ಸಮುದಾಯಗಳು ಮೇಲ್ಕಾಣಿಸಿದ ಸಮುದಾಯದ ರೀತಿ ಆರ್ಥಿಕವಾಗಿ ಬಲಾಢ್ಯರಾಗಬಹುದು. ಅಂದಹಾಗೆ ಒಮ್ಮೆ ಹೀಗೆ ಆರ್ಥಿಕವಾಗಿ ಶೋಷಿತ ಸಮುದಾಯಗಳು ಬಲಾಢ್ಯರಾದರೆ ಅಸ್ಪೃಶ್ಯತೆ ತಕ್ಕಮಟ್ಟಿಗೆ ದೂರ ಸರಿಯಲಿದೆ. ಸಮುದಾಯದ ಸ್ವಾಭಿಮಾನ ಕೂಡ ಎತ್ತಿಹಿಡಿಯಲ್ಪಡಲಿದೆ.


***

#ದಲಿತ_ಉದ್ಯಮಶೀಲತೆ


Comments

Popular posts from this blog

ಅವಕಾಶ ಕಿತ್ತುಕೊಳ್ಳಬೇಕು -ರಘೋತ್ತಮ ಹೊ.ಬ

ಶೋಷಿತ ಸಮುದಾಯಗಳ ಎಷ್ಟೋ ಜನ ಯಾರಾದರೂ ನಮ್ಮನ್ನು ನಮ್ಮ ಒಳ್ಳೆಯತನ ನೋಡಿ ಉದ್ಧಾರ ಮಾಡುತ್ತಾರೆ ಎಂದುಕೊಳ್ಳುತ್ತಾರೆ. ವಾಸ್ತವ ಎಂದರೆ ಅದು ಹಾಗಲ್ಲ ಎಂಬುದು. ಉದಾಹರಣೆಗೆ ಕಚೇರಿಗಳಲ್ಲಿ "ಡಿ" ಗ್ರೂಪ್ ನೌಕರಿ ಕೆಲಸ ಒಬ್ಬ ಮಾಡುತ್ತಿರುತ್ತಾನೆ ಎಂದುಕೊಳ್ಳಿ. ಪ್ರಶ್ನೆ ಎಂದರೆ ಅಲ್ಲಿಯ ಅಧಿಕಾರಿ ಆ ಡಿ ಗ್ರೂಪ್ ನೌಕರರನಿಗೆ ಆತನ ಒಳ್ಳೆಯತನ ನೋಡಿ ಕರೆದು ತನ್ನ ಸ್ಥಾನ ಕೊಡುತ್ತಾನೆಯೇ? ಇಲ್ಲ. ಹೆಚ್ಚೆಂದರೆ ಅದನ್ನು ಆತ ಆತನ ನಿಷ್ಠೆ ಎಂದುಕೊಳ್ಳಬಹುದು ಒಂದಷ್ಟು ಸಿಂಪಥಿ ತೋರಬಹುದು ಅಷ್ಟೇ. ಭಾರತದ ಸಾಮಾಜಿಕ ವ್ಯವಸ್ಥೆಯು ಕೂಡ ಹೀಗೇನೆ‌. ಹಾಗಿದ್ದರೆ ಡಿ ಗ್ರೂಪ್ ನೌಕರ ಏನು ಮಾಡಬಹುದು? ತನ್ನ ಮಗನನ್ನು ಅಥವಾ ಮಗಳನ್ನು ಆ ಅಧಿಕಾರಿ ಮಟ್ಟಕ್ಕೆ ಓದಿಸಿ ಆ ಸ್ಥಾನ ಪಡೆಯಬಹುದು ಅವಕಾಶ ಪಡೆಯಬಹುದು. ಶೋಷಿತ ಸಮುದಾಯಗಳು ಅಷ್ಟೇ, ಚೆನ್ನಾಗಿ ಶಿಕ್ಷಣ ಪಡೆದು ಉನ್ನತ ಉದ್ಯೋಗ ಪಡೆದರೆ ಅಥವಾ ಪ್ರಸ್ತುತ ದಿನಗಳಲ್ಲಿ ಬುದ್ಧಿವಂತಿಕೆಯಿಂದ ಯಾವುದಾದರೂ ಬಿಸಿನೆಸ್ ನಲ್ಲಿ do or die ಮಾದರಿಯಲ್ಲಿ ಶ್ರಮ ಹಾಕಿ ಯಶಸ್ಸು ಪಡೆದರೆ ಆ ಸ್ಥಾನ ಪಡೆಯಬಹುದು. ಯಾರೂ ಕೂಡ ಕರೆದು ಅವಕಾಶ ಕೊಡುವುದಿಲ್ಲ.  ಘಟನೆಯೊಂದನ್ನು ಹೇಳುವುದಾದರೆ, ಒಂದು ಸಾರ್ವಜನಿಕ ಕಾರ್ಯಕ್ರಮ ನಡೆದಿತ್ತು. ನಾನು ವಯಕ್ತಿಕವಾಗಿ ಯಾರು ನನ್ನನ್ನು ಕರೆಯಲಿ ಬಿಡಲಿ ಎಂದು ನನ್ನ ಸ್ಥಾನವನ್ನು ಭದ್ರವಾಗಿ ಪಡೆದೆ ಒಂದು ಚೇರ್ ಮೇಲೆ ನಾನೇ ಹೋಗಿ ಕುಳಿತುಕೊಳ್ಳುವುದರ ಮೂಲಕ. ಆದರೆ ದಲಿತ ಸಮುದಾಯ...

ಶೌಚಾಲಯ ಶುಚಿಗೊಳಿಸುವುದನ್ನು "ಆ ಸಮುದಾಯ"ದವರೇ ಮಾಡಬೇಕೆ?

  ಸಂಸ್ಥೆಯೊಂದರಲ್ಲಿ ಮೀಟಿಂಗ್ ನಡೆಯುತ್ತಿತ್ತು. ಸದಸ್ಯರೊಬ್ಬರು "ನಮ್ಮ ಸಂಸ್ಥೆಯ ಶೌಚಾಲಯಗಳೆಲ್ಲವೂ ಗಲೀಜು ಆಗಿವೆ. ಆ ಯಮ್ಮನನ್ನು ಕರೆಸಿ" ಎಂದು ಮುಖ್ಯಸ್ಥರನ್ನು ಒತ್ತಾಯಿಸಿದರು. ಮತ್ತೊಬ್ಬರು "ಆ ಯಮ್ಮ ಸರಿಯಾಗಿ ಕ್ಲೀನ್ ಮಾಡೋಲ್ಲ, ಅವಳಿಗೆ ಕೊಬ್ಬು,"  ಹೀಗೆ ನಾಲಿಗೆ ಮೇಲೆ ಹಿಡಿತವಿಲ್ಲದೆ ಮಾತಾಡುತ್ತ ಹೋದರು!  ಹೌದು, ಅವರು ಮಾತಾಡುತ್ತಿದ್ದದ್ದು ಅಸ್ಪೃಶ್ಯ ಸಮುದಾಯವಾದ ಪೌರಕಾರ್ಮಿಕ ಸಮುದಾಯದ ಮಹಿಳೆಯೊಬ್ಬರ ಬಗ್ಗೆ. ಎಷ್ಟು ಕ್ರೂರವಾಗಿ ಅವರು ಆಕೆಯ ಬಗ್ಗೆ ಮಾತನಾಡುತ್ತಿದ್ದರೆಂದರೆ ಅವಳು ಕೂಡ ಮನುಷ್ಯಳು, ಅವಳಿಗೂ ಕೂಡ ಮಾನವ ಹಕ್ಕಿದೆ, ಆಕೆಗೂ ಕೂಡ ಗೌರವ ಕೊಡಬೇಕು, ಊಹ್ಞೂಂ, ಇಂತಹ ಸಣ್ಣ ಮನೋಭಾವವೂ ಅವರಲ್ಲಿರಲಿಲ್ಲ. ಜಾತಿ ವ್ಯವಸ್ಥೆಯ ಭೀಕರ ಚಿತ್ರಣ ಅಲ್ಲಿ ಎದ್ದು  ಕಾಣುತ್ತಿತ್ತು.  ಈ ದಿಸೆಯಲ್ಲಿ ಉಕ್ಕಿಬರುವ ಪ್ರಶ್ನೆಗಳೇನೆಂದರೆ ಶೌಚಾಲಯ ಶುಚಿಗೊಳಿಸುವುದನ್ನು ಪೌರಕಾರ್ಮಿಕ ಸಮುದಾಯವೇ ಏಕೆ ಮಾಡಬೇಕು? ಆ ಕಾಯಕವನ್ನು ಎಲ್ಲಾ ಜಾತಿಯವರು ಏಕೆ ಮಾಡಬಾರದು? ಯಾಕೆಂದರೆ ಉದಾಹರಣೆಗೆ ವ್ಯಕ್ತಿಗಳು ಅವರು ಶೌಚ ಮಾಡಿದ ನಂತರ ಅವರದ್ದನ್ನು ಅವರೇ ತೊಳೆದುಕೊಳ್ಳುತ್ತಾರಲ್ಲವೇ? ಅದಕ್ಕೂ ಒಬ್ಬ ಆಳನ್ನು "ಇಲ್ಲ, ಇದನ್ನು ನಾನು ಮುಟ್ಟುವುದಿಲ್ಲ. ಇದು ಗಲೀಜು"ಎಂದು ನೇಮಿಸಿಕೊಳ್ಳುತ್ತಾರೆಯೇ? ಇಲ್ಲ. ಹೀಗಿರುವಾಗ ಅವರದ್ದನ್ನು ಅವರು ತೊಳೆದುಕೊಳ್ಳುವಾಗ ಶೌಚಾಲಯ ಶುಚಿಗೊಳಿಸಲು ನಿರ್ದಿಷ್ಟ ಸಮುದಾಯದವರನ್ನು ಯ...

ಪುಲಕೇಶಿ ಹೊಲೆಯರವನೆ? ಚಾಲುಕ್ಯರು ಛಲವಾದಿಗಳೇ? -ರಘೋತ್ತಮ ಹೊ.ಬ

"ಹೊಲಯರು - ಮಾದರು -ರಾಜರು" ಎಂಬ ತಮ್ಮ ಸಂಶೋಧನಾ ಕೃತಿಯಲ್ಲಿ ಸಂಶೋಧಕರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಆದ ಶ್ರೀ ಎಂ.ನಂಜುಂಡಸ್ವಾಮಿ ಐಪಿಎಸ್ ರವರು ಹೊಲೆಯರು ಮತ್ತು ಮಾದಿಗರು ಈ ಎರಡೂ ಜನಾಂಗಗಳು ಕರ್ನಾಟಕ ರಾಜ್ಯದಲ್ಲಿ ರಾಜರಾಗಿದ್ದವರು ರಾಜ್ಯ ಆಳಿದವರು ಎಂದು ಸಂಶೋಧನೆ ಮೂಲಕ ಸಾಧಿಸಿದ್ದಾರೆ. ಅದರಲ್ಲಿ ಬಹು ಮುಖ್ಯವಾದದ್ದು ಬಾದಾಮಿಯ ಚಾಲುಕ್ಯರು ಹೊಲೆಯ ವಂಶಸ್ಥರು ಮತ್ತು ಛಲವಾದಿ ಜನಾಂಗದವರು ಎಂದು ಲೇಖಕರು ತಮ್ಮ ಭಾಷಾಶಾಸ್ತ್ರದ ಸಂಶೋಧನೆಯ ಆಧಾರದಲ್ಲಿ ಹೇಳುತ್ತಾರೆ. "ಹೊಲಯರು - ಮಾದರು -ರಾಜರು" ಆ ಕೃತಿಯಲ್ಲಿ ಪುಟ ಸಂಖ್ಯೆ 96ರಲ್ಲಿ  ನಂಜುಂಡಸ್ವಾಮಿಯವರು ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯ ಮತ್ತು ಬೇಲೂರು ಚನ್ನಕೇಶವ ದೇವಾಲಯಗಳಲ್ಲಿ ಹೊಲೆಯನಿಗೆ ನೀಡುವ ಗೌರವ ಉಲ್ಲೇಖಿಸುತ್ತ "ಆ ಗೌರವ ರಾಜನಿಗೆ ನೀಡುವ ಗೌರವದಂತಿದೆ. ಹೊಲೆಯ ರಾಜನಿಂದಲೇ ಆ ದೇವಾಲಯ ನಿರ್ಮಾಣವಾಗಿರುವುದರ ಸಂಕೇತವಾಗಿ ಆತನಿಗೆ ಈಗಲೂ ಆ ಗೌರವ ಸಿಗುತ್ತಿದೆ" ಎಂದು ಹೇಳುತ್ತಾರೆ. ಇನ್ನೂ ಬಾಗಲಕೋಟೆಯ ದೇಸಾಯಿಗಳು ಈಗಲೂ ಹೊಲೆಯರ ಮನೆಯಿಂದ ಬೆಂಕಿ ತರುವ ಸಂಪ್ರದಾಯವನ್ನು ಸಹ ಲೇಖಕರು ಉಲ್ಲೇಖಿಸುತ್ತಾರೆ. ಆ  ಹಿನ್ನೆಲೆಯಲ್ಲಿ "ಹಿಂದೆ ನಾವು ಈ ನಾಡನ್ನು ಆಳಿದ ರಾಜರು. ಅದಕ್ಕಾಗಿ ನಮ್ಮ ಬಳಿ ಸಾಂಕೇತಿಕವಾಗಿ ಈಗಲೂ ಬಂದು ದೇಸಾಯಿಗಳು ಬೆಂಕಿ ಪಡೆದುಕೊಳ್ಳುತ್ತಿದ್ದಾರೆ. ಈಗ ನಮ್ಮನ್ನು ಛಲವಾದಿಗಳು ಎನ್ನುವರು. ಹಿಂದೆ ನ...