Skip to main content

ಒಂದು ಸಮುದಾಯದ ಸಂಘಟಿತ ರೂಪ ಮತ್ತು ಅದರ ಆರ್ಥಿಕತೆ

 




-ರಘೋತ್ತಮ ಹೊ.ಬ

ಮೊನ್ನೆ ಒಂದು ಅಂಗಡಿಯಲ್ಲಿ 40 ಸಾವಿರ ರೂಗೆ ಒಂದು ಹೊಸ ಟಿವಿ ತೆಗೆದುಕೊಂಡೆ. ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಅಂಗಡಿಯ ಆ ಮಾಲೀಕರು "ಸರ್, ಇದಕ್ಕೆ ಸ್ಟೆಬಿಲೈಜರ್ ಬೇಕಾಗುತ್ತದೆ" ಎಂದು ಪಕ್ಕದಲ್ಲೇ ಇದ್ದ ಒಂದು ಅಂಗಡಿಯಿಂದ ಸ್ಟೆಬಲೈಜರ್ ತೆಗೆದುಕೊಳ್ಳಲು ಹೇಳಿದರು. 4 ಸಾವಿರ ರೂ ತೆತ್ತು ನಾನು ಆ ಅಂಗಡಿಯಿಂದ ಸ್ಟೆಬಿಲೈಜರ್ ಕೊಂಡುಕೊಂಡೆ. ಹಾಗೆ ಆಟೋದಲ್ಲಿ ಮನೆಗೆ ಟಿವಿ ಕಳಿಸುವುದಾಗಿ ಹೇಳಿದ ಆ ಅಂಗಡಿ ಮಾಲೀಕರು ತಮ್ಮದೇ ಸಮುದಾಯದ ಆಟೋ ಚಾಲಕನಿಗೆ ಆ ಕೆಲಸ ವಹಿಸಿದ್ದರು! ಹಾಗೆ ಟಿವಿ ಸ್ವೀಕರಿಸಿದ ನಾನು ಟಿವಿ ಇನ್ ಸ್ಟಾಲ್ ಮಾಡುವವರಿಗಾಗಿ ಕಾದು ಕುಳಿತಾಗ ಅದೇ ಸಮುದಾಯದ ಇಬ್ಬರು ಮೆಕ್ಯಾನಿಕ್ ಗಳು ಟಿವಿ ಇನ್ ಸ್ಟಾಲ್ ಮಾಡಲು ಬಂದರು. ಅವರಿಗೂ ಕೂಡ ನಾನು ಅಮೌಂಟ್ ಕೊಟ್ಟು ಕಳುಹಿಸಿದೆ. ಹೋಗುವಾಗ ಆ ಮೆಕ್ಯಾನಿಕ್ ಗಳು "ಸರ್, ಕೇಬಲ್‌ ಟಿವಿಗಿಂತ ಡಿಷ್ ಹಾಕಿಸಿಕೊಳ್ಳಿ ಎಂದು ಡಿಟಿಹೆಚ್ ಕಂಪನಿಯ ನಂಬರ್ ಒಂದನ್ನು ಕೊಟ್ಟರು. ಅಂದಹಾಗೆ ಡಿಟಿಹೆಚ್ ಕಂಪನಿಯ ಆ ಫ್ರ್ಯಾಂಚೈಸಿ ವ್ಯಕ್ತಿ ಕೂಡ ಅದೇ ಸಮುದಾಯದವರಾಗಿದ್ದರು. ಹಾಗೆ ಆನ್ ಲೈನ್ ಪೇಮೆಂಟ್ ನಂತರ ಆ ವ್ಯಕ್ತಿ ಡಿಷ್ ಹಾಕಲು ಇಬ್ಬರು ಹುಡುಗರನ್ನು ಕಳುಹಿಸಿದರು ಅವರು ಕೂಡ ಅದೇ ಸಮುದಾಯದವರಾಗಿದ್ದರು! ಅಂದರೆ ಒಬ್ಬ ಟಿವಿ ಅಂಗಡಿಯ ಮಾಲೀಕ ತನ್ನದೆ ಸಮುದಾಯದ ಒಬ್ಬ ಎಲೆಕ್ಟ್ರಿಕ್ ಅಂಗಡಿಯವ, ಓರ್ವ ಆಟೋ ಚಾಲಕ, ಓರ್ವ ಮೆಕ್ಯಾನಿಕ್, ಓರ್ವ ಡಿಟಿಹೆಚ್ ಫ್ರ್ಯಾಂಚೈಸಿ, ಇಬ್ಬರು ಕಾರ್ಮಿಕ... ಹೀಗೆ ಆರು ಜನರಿಗೆ ಬಿಸಿನೆಸ್ ಮಾಡಿಕೊಟ್ಟಿದ್ದ. 40 ಸಾವಿರ ರೂ ಟಿವಿಗೆ ಇನ್ನೂ ಹತ್ತು ಸಾವಿರ ತನ್ನದೇ ಸಮುದಾಯಕ್ಕೆ ತಲುಪುವಂತೆ ಆತ ನೋಡಿಕೊಂಡಿದ್ದ. ಇದನ್ನೆಲ್ಲ ನೋಡುತ್ತಿದ್ದ ನನಗೆ ಆಶ್ಚರ್ಯ ಜೊತೆಗೆ ಖುಷಿ ಕೂಡ ಆಯಿತು. ಹೇಗೆ ಒಂದು ಸಮುದಾಯ ಒಂದು ನೆಟ್ವರ್ಕ್ ಮೂಲಕ ತನ್ನ ಆರ್ಥಿಕತೆ ಕಟ್ಟಿಕೊಳ್ಳುತ್ತಿದೆ, ಎಲ್ಲಾ ಅಡೆ ತಡೆಗಳ ನಡುವೆಯೂ ಹೇಗೆ ಬದುಕುತ್ತಿದೆ ಎಂಬುದು ಅರಿವಿಗೆ ಬಂತು.

ಖಂಡಿತವಾಗಿ, ಇಂದು ಶೋಷಿತ ವರ್ಗದ ಜನರು ಕೂಡ ಮೇಲ್ಕಾಣಿಸಿದ ಅಂತಹ ಸಮುದಾಯ ಆರ್ಥಿಕ ಜಾಲ ಅಥವಾ ನೆಟ್ವರ್ಕ್ ಬೆಳೆಸಿಕೊಳ್ಳಬೇಕಿದೆ ರೂಢಿಸಿಕೊಳ್ಳಬೇಕಿದೆ. ಎಲ್ಲವನ್ನೂ ಸರ್ಕಾರದತ್ತ ನೋಡುವ ಬದಲು ಒಂದು ಸಂಘಟಿತ ಸಮುದಾಯವಾಗಿ ತಾನು ಹೀಗೆ ಆರ್ಥಿಕತೆ ಬೆಳೆಸಿಕೊಳ್ಳಲು ಸಾಧ್ಯವಾ ಎಂದು ಯೋಚಿಸಬೇಕಿದೆ. ಯಾಕೆಂದರೆ ಶೋಷಿತ ಸಮುದಾಯಗಳ ಶಕ್ತಿ ಅದು ಅದರ ಜನಸಂಖ್ಯೆಯಾಗಿದೆ. ಎಷ್ಟೋ ಜಿಲ್ಲೆಗಳಲ್ಲಿ ಉದಾಹರಣೆಗೆ ಚಾಮರಾಜನಗರ, ಮೈಸೂರು, ಚಿತ್ರದುರ್ಗ, ಗುಲ್ಬರ್ಗ, ಬೆಳಗಾವಿ, ಬೀದರ್, ವಿಜಯಪುರ..‌ ಹೀಗೆ ಜಿಲ್ಲೆಗಳಲ್ಲಿ ಶೋಷಿತ ವರ್ಗದ ಜನರ ಜನಸಂಖ್ಯೆ ಶೇ.30 ರ ಆಸುಪಾಸಿನಲ್ಲಿದೆ. ಈ ನಿಟ್ಟಿನಲ್ಲಿ ಈ ಬಗ್ಗೆ ಅರೆಕ್ಷಣ ಯೋಚಿಸಿ ಈಗಾಗಲೇ ತಾನು ಯಾರ ಬಳಿ ವ್ಯಾಪಾರ ವ್ಯವಹಾರ ಮಾಡುತ್ತಿದೆಯೋ ಅಂತಹವರ ಜೊತೆಗೆ ವ್ಯಾಪಾರ ವ್ಯವಹಾರ ನಿಲ್ಲಿಸಿ ಶೋಷಿತ ಸಮುದಾಯ ತನ್ನವರತ್ತ ಕಣ್ತೆರೆದರೆ ಅಥವಾ ತನ್ನವರ ಬಳಿ ಅಂತಹ ವ್ಯಾಪಾರ ವ್ಯವಹಾರಸ್ಥರು ಇಲ್ಲದಾಗ ತಾವುಗಳೇ ಯಾಕೆ ಆ ನಿಟ್ಟಿನಲ್ಲಿ ಯೋಚಿಸಬಾರದು ಎಂದು ವ್ಯಾಪಾರ ವ್ಯವಹಾರಕ್ಕೆ ಇಳಿದರೆ, ಒಂದು ನೆಟ್ವರ್ಕ್ ರೂಪಿಸಿದರೆ, ಆ ನಿಟ್ಟಿನಲ್ಲಿ ಪ್ರಯತ್ನಕ್ಕೆ ಇಳಿದರೆ ಖಂಡಿತ ಯಶಸ್ಸು ಸಿಕ್ಕೇ ಸಿಗುತ್ತದೆ.

ಇಂತಹ ಪ್ರಯತ್ನಗಳಿಗೆ ಕೆಲವರಿಂದ ನೆಗೆಟಿವ್ ವಿಚಾರಗಳು ಬರಬಹುದು. ಈ ದಿಸೆಯಲ್ಲಿ ಅಂತಹ ನೆಗೆಟಿವ್ ಸಲಹೆಗಳನ್ನು ಬದಿಗೊತ್ತಿ ಪಾಸಿಟಿವ್ ಆಗಿ ಮುಂದುವರಿದರೆ ಖಂಡಿತ ಶೋಷಿತ ಸಮುದಾಯಗಳು ಮೇಲ್ಕಾಣಿಸಿದ ಸಮುದಾಯದ ರೀತಿ ಆರ್ಥಿಕವಾಗಿ ಬಲಾಢ್ಯರಾಗಬಹುದು. ಅಂದಹಾಗೆ ಒಮ್ಮೆ ಹೀಗೆ ಆರ್ಥಿಕವಾಗಿ ಶೋಷಿತ ಸಮುದಾಯಗಳು ಬಲಾಢ್ಯರಾದರೆ ಅಸ್ಪೃಶ್ಯತೆ ತಕ್ಕಮಟ್ಟಿಗೆ ದೂರ ಸರಿಯಲಿದೆ. ಸಮುದಾಯದ ಸ್ವಾಭಿಮಾನ ಕೂಡ ಎತ್ತಿಹಿಡಿಯಲ್ಪಡಲಿದೆ.


***

#ದಲಿತ_ಉದ್ಯಮಶೀಲತೆ


Comments

Popular posts from this blog

ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆಗಳು

  ಹಿಂದೂ ಮತ್ತು ಅಸ್ಪೃಶ್ಯನೊಬ್ಬ ಪ್ರಯಾಣ ಮಾಡುವ ಸಂದರ್ಭದಲ್ಲಿ ಪರಸ್ಪರ ಭೇಟಿಯಾದಾಗ... "ಯಾವಾಗಲಾದರೊಮ್ಮೆ ಅಕ್ಕಪಕ್ಕ ಕುಳಿತು ಪ್ರಯಾಣ ಮಾಡುವ ಸಂದರ್ಭದಲ್ಲಿ ಪರಸ್ಪರ ಜಾತಿ ತಿಳಿಯದಿದ್ದಾಗ ಜಾತಿವಾದಿ ಹಿಂದೂಗಳು ಮತ್ತು ಅಸ್ಪೃಶ್ಯರು ತುಂಬಾ ಆಪ್ತ ಸ್ನೇಹಿತರಂತೆ ವರ್ತಿಸುತ್ತಾರೆ. ಪರಸ್ಪರ ಬೀಡಿ, ಸಿಗರೆಟ್, ಹಣ್ಣುಗಳು, ಎಲೆ- ಅಡಿಕೆ ಹೀಗೆ ಅವರು ಹಂಚಿಕೊಳ್ಳುತ್ತಾರೆ. ಆದರೆ ಇದ್ದಕ್ಕಿದ್ದಂತೆ ಆ ಹಿಂದೂ ವ್ಯಕ್ತಿಗೆ ತಾನು ಇಷ್ಟು ಹೊತ್ತು ಮಾತನಾಡುತ್ತಿದ್ದ ವ್ಯಕ್ತಿ ಅಸ್ಪೃಶ್ಯ ಎಂದು ತಿಳಿಯುತ್ತಿದ್ದಂತೆ ಆತನ ಮನಸ್ಸಿನಲ್ಲಿ ದ್ವೇಷದ ಮನೋಭಾವ ಮೊಳಕೆಯೊಡೆಯುತ್ತದೆ, ತಾನು ಮೋಸಗೊಳಗಾದೆನೆಲ್ಲ ಎಂದು ಆತ ಯೋಚಿಸಲು ಆರಂಭಿಸುತ್ತಾನೆ. ಆತ ಕೋಪಗೊಳ್ಳುತ್ತಾನೆ. ಅಂತಿಮವಾಗಿ ತಾತ್ಕಾಲಿಕ ಆ ಸ್ನೇಹ ಜಗಳ ಮತ್ತು ಬೈಗುಳದ ಮೂಲಕ ಅಂತ್ಯಗೊಳ್ಳುತ್ತದೆ". -ಡಾ.ಬಿ.ಆರ್.ಅಂಬೇಡ್ಕರ್ ( Ambedkar writings and speeches, Vol.17, Part 3, Pp.132) ಕನ್ನಡಕ್ಕೆ: ರಘೋತ್ತಮ ಹೊಬ)

ಮುಂದೊಂದು ದಿನ ಎಲ್ಲರೂ ಬೌದ್ಧರಾಗಲಿದ್ದಾರೆ -ಡಾ.ಅಂಬೇಡ್ಕರ್

  "ಪ್ರತಿಯೊಂದು ಧರ್ಮವು ಉತ್ತರಿಸಬೇಕಾದ ಒಂದು ಪ್ರಶ್ನೆ ಇದೆ. ಅದೆಂದರೆ ತಳ ಸಮುದಾಯ ಮತ್ತು ದೌರ್ಜನ್ಯ ಪೀಡಿತ ಸಮುದಾಯಗಳಿಗೆ ಧರ್ಮವೊಂದು ನೀಡಬಹುದಾದ ನೈತಿಕ ಮತ್ತು ಬೌದ್ಧಿಕ ಬೆಂಬಲವಾದರು ಏನು ಎಂಬುದು? ಧರ್ಮವೊಂದು ಅಂತಹದ್ದೊಂದು ಬೆಂಬಲ ನೀಡಲಿಲ್ಲ ಎಂದರೆ ಅದು ದುರದೃಷ್ಟಕರ ಪರಿಸ್ಥಿತಿಯಲ್ಲಿ ಇದೆ ಎಂದೆ ಅರ್ಥ. ಆದ್ದರಿಂದ  ಹಿಂದೂ ಧರ್ಮವು  ಕೋಟ್ಯಾಂತರ ಸಂಖ್ಯೆಯಲ್ಲಿ ಇರುವ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಜನರಿಗೆ ನೈತಿಕ ಮತ್ತು ಬೌದ್ಧಿಕ ಬೆಂಬಲ ನೀಡುತ್ತದೆಯೇ? ಖಂಡಿತ ಇಲ್ಲ. ಈ ನಿಟ್ಟಿನಲ್ಲಿ ತಮಗೆ ಬೌದ್ಧಿಕ ಮತ್ತು ನೈತಿಕ ಬೆಂಬಲ ನೀಡದ ಹಿಂದೂ ಧರ್ಮದ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಜನರು ಇರಲು ಬಯಸುತ್ತಾರೆ ಎಂದು ಹಿಂದೂಗಳು ಅಪೇಕ್ಷೆ ಪಡಲು ಸಾಧ್ಯವೇ? ಅಂದಹಾಗೆ ಅಂತಹದ್ದೊಂದು ಅಪೇಕ್ಷೆ ಅಕ್ಷರಶಃ ವ್ಯರ್ಥದ್ದು.  "ಯಾಕೆಂದರೆ ಹಿಂದೂ ಧರ್ಮ ಅದು ಜ್ವಾಲಾಮುಖಿಯ ಮೇಲೆ ತೇಲುತ್ತಿದೆ. ಆ ನಿಟ್ಟಿನಲ್ಲಿ ಇಂದು ಅದು(ಜ್ವಾಲಾಮುಖಿ) ನಂದಿದ ಹಾಗೆ ಕಾಣುತ್ತಿದೆ. ಆದರೆ ವಾಸ್ತವ ಅದಲ್ಲ‌‌. ಮೊಂದೊಂದು ದಿನ ಈ ಕೋಟ್ಯಂತರ (ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ) ಮಂದಿಗೆ ತಮ್ಮ ಈ ಹೀನ ಸ್ಥಿತಿಯ ಬಗ್ಗೆ ಅರಿವಾದಾಗ ಮತ್ತು ಅದಕ್ಕೆ ಹಿಂದೂ ಧರ್ಮದ ಸಾಮಾಜಿಕ ತತ್ವ ಕಾರಣ ಎಂದು ತಿಳಿದಾಗ ಆ ಜ್ವಾಲಾಮುಖಿ ಜೀವಂತಗೊಳ್ಳಲಿದೆ. ಇದಕ್ಕೆ ಸಾಕ್ಷಿಯಾಗಿ ರೋಮನ್ ಸಾಮ್ರಾಜ್ಯದಲ್ಲಿ ಕ್ರಿಶ್ಚಿಯ...

ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್: ಮರೆಯಬಾರದ ಮೈಸೂರು ದೊರೆ

  ನಾಲ್ವಡಿ ಕೃಷ್ಣರಾಜ ಒಡೆಯರ್ -ರಘೋತ್ತಮ ಹೊಬ "ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು" ಇದು ಬಾಬಾಸಾಹೇಬ್ ಡಾ.ಅಂಬೇಡ್ಕರ್ ರವರ ಸುಪ್ರಸಿದ್ದ ನಾಣ್ಣುಡಿ. ಅದರಲ್ಲೂ ಹಳೆ ಮೈಸೂರು ಭಾಗದವರು ತಮ್ಮ ಭವ್ಯ ಇತಿಹಾಸವನ್ನು ಮರೆಯಲೇಬಾರದು. ಏಕೆಂದರೆ ರಾಜ್ಯದ ಇತರೆ ಪ್ರದೇಶಗಳಿಗೆ ಹೋಲಿಸಿದರೆ ಹಳೆ ಮೈಸೂರು ಭಾಗ ಅಭಿವೃದ್ಧಿಯಲ್ಲಿ ಮಂಚೂಣಿಯಲ್ಲಿದೆ ಎಂದರೆ ಅದಕ್ಕೆ ಕಾರಣ ಅದರ ಭವ್ಯ ಇತಿಹಾಸ. ಇಂತಹ ಭವ್ಯ ಇತಿಹಾಸದ ನಿರ್ಮಾತೃವಾಗಿ ತನ್ಮೂಲಕ ಮಾದರಿ ಮೈಸೂರಿಗೆ ಮುನ್ನುಡಿ ಬರೆದ ಧೃವತಾರೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್. ಆಳರಸರಿಗೆ ಮಾದರಿಯಾದ ರಾಜಯೋಗಿ.  ನಾಲ್ವಡಿಯವರು ಜನಿಸಿದ್ದು 1884 ರ ಜೂನ್ 4ರಂದು. ತಂದೆ ಶ್ರೀ ಚಾಮರಾಜ ಒಡೆಯರ್, ತಾಯಿ ಕೆಂಪನಂಜಮ್ಮಣ್ಣಿ (ವಾಣಿ ವಿಲಾಸ ಸನ್ನಿಧಾನ). ಬಾಲಕ ಕೃಷ್ಣರಾಜರ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಮೈಸೂರಿನಲ್ಲೇ. ರಾಯಲ್ ಸ್ಕೂಲ್ ಎಂಬ ಪ್ರತ್ಯೇಕ ಶಾಲೆಯಲ್ಲಿ ಇವರ ಸಹಪಾಠಿಗಳಾಗಿದ್ದವರು ಮಿರ್ಜಾ  ಇಸ್ಮಾಯಿಲ್, ಲಕ್ಷ್ಮೀಕಾಂತರಾಜ್ ಅರಸ್, ಮುಂತಾದವರು. 1894 ರಲ್ಲಿ ತಂದೆ ಚಾಮರಾಜ ಒಡೆಯರ್ ರವರ ನಿಧನದಿಂದಾಗಿ ಬಾಲಕ ಕೃಷ್ಣರಾಜನಿಗೆ ರಾಜ್ಯದ ಹೊಣೆ ಬಿದ್ದಾಗ ಅವರಿಗೆ ಕೇವಲ 10 ವರ್ಷ. ಪೆಬ್ರವರಿ 1, 1895 ರಲ್ಲಿ ಯುವರಾಜ ಕೃಷ್ಣರಾಜರಿಗೆ ಪಟ್ಟಾಭಿಷೇಕ ಮಹೋತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ ಬ್ರಿಟಿಷ್ ರಿಜೆನ್ಸಿ ಆಳ್ವಿಕೆಯಲ್ಲಿ ಮೈಸೂರಿನ ಗೌರ್ನರ್ ಮತ್ತು ಮಹಾರಾಜರ ಟ್ಯೂಟರ...