Skip to main content

ಡಾ.ಬಿ.ಆರ್.ಅಂಬೇಡ್ಕರ್ ರವರ "ರಿಡಲ್ಸ್ ಇನ್ ಹಿಂದೂಯಿಸಂ" ಕೃತಿ --ರಘೋತ್ತಮ ಹೊ.ಬ


ಬಾಬಾಸಾಹೇಬ್ ಅಂಬೇಡ್ಕರ್ ರ ಸುಪ್ರಸಿದ್ಧ ಇಂಗ್ಲಿಷ್ ಕೃತಿ "ರಿಡಲ್ಸ್ ಇನ್ ಹಿಂದೂಯಿಸಂ (ಹಿಂದೂ ಧರ್ಮದಲ್ಲಿನ ಒಗಟುಗಳು)" ಬಹಳ ಮಹತ್ವದ ಕೃತಿಯಾಗಿದೆ. ತಮ್ಮ ಈ ಕೃತಿಯಲ್ಲಿ  ಡಾ.ಅಂಬೇಡ್ಕರ್ ರು ಅದೆಷ್ಟು ಬೋಲ್ಡ್ ಆಗಿ ಧರ್ಮದ ಎಲ್ಲಾ ಗೋಜಲುಗಳನ್ನು ಗೊಂದಲಗಳನ್ನು ಒಗಟುಗಳ(Riddles) ರೂಪದಲ್ಲಿ ಪಟ್ಟಿ ಮಾಡಿದ್ದಾರೆಂದರೆ... ಅವರ ಆ ಇಂಗ್ಲಿಷ್ ಪ್ರೌಢಿಮೆ.. ವೇದ, ಉಪನಿಷತ್, ಪುರಾಣಗಳು, ವಿವಿಧ ಶಾಸ್ತ್ರಗಳು, ವಿವಿಧ ಸ್ಮೃತಿ ಗಳು ಎಲ್ಲವನ್ನೂ ಇಂಗ್ಲಿಷ್ ನಲ್ಲಿ ಅವರು ಬರೆದಿರುವ ಶೈಲಿ totally beautiful. ಯಾಕೆಂದರೆ ಡಾ.ಅಂಬೇಡ್ಕರರು ತಮ್ಮ ಆ ಶ್ರೇಷ್ಠ ಇಂಗ್ಲಿಷ್ ನಲ್ಲಿ ಸಂಸ್ಕೃತ ಮೂಲದ ವೇದ, ಉಪನಿಷತ್, ಪುರಾಣ, ಸ್ಮೃತಿಗಳ ವಿಚಾರ ಇವುಗಳನ್ನೆಲ್ಲ ಮಂಡಿಸಿರುವ ರೀತಿ ಅಕ್ಷರಶಃ ಬೆರಗು ಮೂಡಿಸುತ್ತದೆ. ಆ ಮೂಲಕ ಇಡೀ ವಿಷಯವನ್ನು, ಸಮಸ್ಯೆಯನ್ನು ಬಾಬಾಸಾಹೇಬರು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುತ್ತಾರೆ. ಅಮೆರಿಕಾ ಮತ್ತು ಲಂಡನ್‌ ಎರಡೂ ವಾತಾವರಣಗಳ ಇಂಗ್ಲಿಷ್ ಅನ್ನು ಡಾ.ಅಂಬೇಡ್ಕರ್ ರವರು ಬಳಸಿರುವುದರಿಂದ ಅವುಗಳನ್ನು ಓದಲು ಅರ್ಥೈಸಿಕೊಳ್ಳಲು ಪಕ್ಕದಲ್ಲಿ ಡಿಕ್ಷನರಿ ಇಟ್ಟುಕೊಳ್ಳಬೇಕು ಎಂದು ಇಲ್ಲಿ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಅಷ್ಟೊಂದು ಕಠಿಣ ಮತ್ತು ಅಚ್ಚುಕಟ್ಟಾದ ಮಂಡನೆಯೇ ಆ ಕೃತಿಯ ವಿಶೇಷ. 


ಡಾ.ಅಂಬೇಡ್ಕರ್ ರ ಆ "ರಿಡಲ್ಸ್ ಇನ್ ಹಿಂದೂಯಿಸಂ" ಕೃತಿಯಲ್ಲಿ ಸುಮಾರು 27 ರಿಡಲ್ಸ್ ಅಥವಾ ಒಗಟುಗಳಿವೆ. ಘನವೆತ್ತ ಭಾರತ ಸರ್ಕಾರವೇ ಪ್ರಕಟಿಸಿರುವ ಆ ಕೃತಿಯನ್ನು ಪ್ರತಿಯೊಬ್ಬರೂ ಅದರಲ್ಲಿ ಏನಿದೆ ಎಂದು ತಿಳಿದುಕೊಳ್ಳಲಿಕ್ಕಾಗಿಯಾದರೂ ಓದಲೇಬೇಕು. ಯಾಕೆಂದರೆ ಮೊದಲ ಒಗಟಿನಲ್ಲಿಯೇ ಡಾ.ಅಂಬೇಡ್ಕರ್ ರು ಹೇಳುವ ವಿಚಾರ "ಒಬ್ಬ ವ್ಯಕ್ತಿ ಹಿಂದೂ ಏಕಾಗುತ್ತಾನೆ ಎಂಬುದನ್ನು ಅರಿಯುವುದರಲ್ಲಿ ಇರುವ ಸಂಕಷ್ಟ" ಎಂಬುದು. ಎರಡನೆಯ ಒಗಟಿನಲ್ಲಿ ವೇದಗಳ ಮೂಲ, ನಂತರದ ಒಗಟುಗಳಲ್ಲಿ ಶಾಸ್ತ್ರಗಳ, ಉಪನಿಷತ್ತುಗಳ, ದೇವರುಗಳ, ದೇವತೆಗಳ, ವಿವಿಧ ಸ್ಮೃತಿಗಳ, ಅಹಿಂಸೆ, ಹಿಂಸೆ... ಹೀಗೆ ಹಿಂದೂ ಧರ್ಮದಲ್ಲಿ ಬರುವ ಪ್ರತಿಯೊಂದನ್ನೂ ಡಾ.ಅಂಬೇಡ್ಕರರು ಒಗಟುಗಳ ರೂಪದಲ್ಲಿ ಓದುಗನ ಮುಂದಿಟ್ಟಿದ್ದಾರೆ.

ನಂತರದ ಅಧ್ಯಾಯಗಳಲ್ಲಿ ತ್ರಿಮೂರ್ತಿಗಳು, ಸ್ಮಾರ್ತ ಧರ್ಮ, ತಾಂತ್ರಿಕ್ ಧರ್ಮ, ನಾಲ್ಕು ವರ್ಣಗಳು, ನಾಲ್ಕು ಆಶ್ರಮಗಳು, ಕಲಿವರ್ಜ್ಯ ಎಂದರೇನು, ಕಲಿಯುಗ ಎಂದರೇನು, ಪಿತೃತ್ವ ಸಮಾಜ ಮಾತೃತ್ವ ಸಮಾಜ ಹೇಗಾಯಿತು... ಹೀಗೆ ಡಾ.ಅಂಬೇಡ್ಕರ್ ರು ವಿಚಾರಗಳನ್ನು ಸ್ಪಷ್ಟವಾಗಿ ದಾಖಲಿಸುತ್ತಾರೆ. ಹೀಗೆ ದಾಖಲಿಸುವ ಸಂದರ್ಭಗಳಲ್ಲಿ ಅವರು
ನೀಡುವ ರೆಫರೆನ್ಸ್ ಅಥವಾ ಆಕರ ಗ್ರಂಥಗಳು, ಅದರ ಅಂಶಗಳು ಅಕ್ಷರಶಃ ಬಾಬಾಸಾಹೇಬರ ಅತ್ಯಂತ ಶ್ರೇಷ್ಠ ಓದಿನ ಜಗತ್ತನ್ನು,  ಉತ್ಕೃಷ್ಟ ಸಂಶೋಧನಾ ಮಾರ್ಗವನ್ನು, ವಕೀಲಿ ಶೈಲಿಯ ವಿಚಾರ ಮಂಡನೆಯನ್ನು ಮಾರ್ಗದುದ್ದಕ್ಕು ಓದುಗರಿಗೆ ಉಣಬಡಿಸುತ್ತದೆ. 

ಕೊನೆಯಲ್ಲಿ ಅವರ ಆ ಕೃತಿ "ಕಲಿಯುಗ" ಅಂದರೆ ಈಗಿನ ಯುಗಕ್ಕೆ ಬಂದು ಅದಕ್ಕೆ ಸಂವಾದಿಯಾಗಿ ಮನ್ವಂತರ, ಹಾಗೆ "ರಾಮ ಮತ್ತು ಕೃಷ್ಣರ ಒಗಟು"ಗಳನ್ನು ದಾಖಲಿಸುತ್ತ ನಿಲ್ಲುತ್ತದೆ. ವಾಸ್ತವವೆಂದರೆ ತಮ್ಮ ಆ ಕೃತಿಯಲ್ಲಿ ಡಾ.ಅಂಬೇಡ್ಕರರು ಯಾವುದೇ ಧರ್ಮವನ್ನಾಗಲೀ ಮತ್ತೊಂದನ್ನಾಗಲಿ ನಿಂದಿಸಲು ಹೋಗಿಲ್ಲ. ಬದಲಿಗೆ ವಿದ್ವಾಂಸರ ಮುಂದೆ ಹತ್ತಾರು ಪ್ರಶ್ನೆಗಳನ್ನು ವೈಚಾರಿಕತೆ ಮತ್ತು ವೈಜ್ಞಾನಿಕತೆಯ ರೂಪದಲ್ಲಿ ಇಟ್ಟಿದ್ದಾರೆ. ಖಂಡಿತ, ಈ ವಿಷಯದಲ್ಲಿ ಆಸಕ್ತರು ಅಥವಾ ಈ ವಿಷಯವನ್ನು ಕಲಿಯುತ್ತಿರುವ ಧರ್ಮಶಾಸ್ತ್ರದ ಸಂಶೋಧನಾರ್ಥಿಗಳು ಬಾಬಾಸಾಹೇಬ್ ಅಂಬೇಡ್ಕರರ ಆ ಒಂದೊಂದು ಒಗಟನ್ನು ಒಂದೊಂದು ಸಂಶೋಧನಾ ಸವಾಲಾಗಿ ಸ್ವೀಕರಿಸಿ ಸೂಕ್ತ ಉತ್ತರ ನೀಡಬಹುದು. ಈ ನಿಟ್ಟಿನಲ್ಲಿ ಅದು ವಿದ್ಯಾರ್ಥಿಗಳನ್ನು ಅಕ್ಷರಶಃ ಪ್ರೇರೇಪಿಸುತ್ತದೆ. ಹಾಗೆ ಸಂಶೋಧನಾರ್ಥಿಗಳಿಗೆ ಎಲ್ಲಿಯೂ ಕೇಳದ ಈ ಒಗಟುಗಳಿಗೆ ಸೂಕ್ತ ಉತ್ತರ ನೀಡಲು ಈ ಕೃತಿ ಮಾರ್ಗ ತೋರುತ್ತದೆ, ಸತ್ಯ ಶೋಧನೆಗೆ ಕೈ ಹಿಡಿದು ಮುನ್ನಡೆಸುತ್ತದೆ.

ದುರಂತದ ವಿಚಾರವೆಂದರೆ ಬಾಬಾಸಾಹೇಬ್ ಅಂಬೇಡ್ಕರರ ಈ ಕೃತಿಯನ್ನು ಈ ಸಂಬಂಧ ಉತ್ತರಿಸಬೇಕಾದ ಯಾರೂ ಕೂಡ  ಸೂಕ್ತವಾಗಿ ಓದಿ, ಅಧ್ಯಯನ ಮಾಡಿ
ಒಗಟುಗಳಿಗೆ ಉತ್ತರಿಸಲು ಹೋಗಿರುವುದು ಎಲ್ಲಿಯೂ ದಾಖಲಾಗಿಲ್ಲ ಅಥವಾ ಈ ಸಂಬಂಧದ ಪ್ರತಿಸಂಶೋಧನಾ ಸಾಕ್ಷಿಗಳು ಕೂಡ ನಮ್ಮ ಮುಂದೆ ಎಲ್ಲಿಯೂ ದೊರಕಿಲ್ಲ. ಪೂರ್ವಾಗ್ರಹ ಪೀಡಿತ ಮನಸ್ಸು ಹೊಂದಿ ಅವುಗಳನ್ನು ಓದುವುದಿರಲಿ ಕಣ್ಣೆತ್ತಿ ನೋಡದವರೆ ಬಹುಸಂಖ್ಯಾತರಾಗಿದ್ದಾರೆ! ಒಟ್ಟಾರೆ ಹೇಳುವುದಾದರೆ, ಬಾಬಾಸಾಹೇಬ್ ಅಂಬೇಡ್ಕರರು ಎತ್ತಿರುವ ಆ ಒಗಟುಗಳು ಈಗಲೂ ಒಗಟಿನ ರೂಪದಲ್ಲಿಯೇ ಇವೆ. ಈ ನಿಟ್ಟಿನಲ್ಲಿ "ರಿಡಲ್ಸ್ ಇನ್ ಹಿಂದೂಯಿಸಂ" ಡಾ.ಅಂಬೇಡ್ಕರರ ಈ ಕೃತಿ ಉತ್ತರ ಕಾಣದ ಒಗಟುಗಳ ಗುಚ್ಛವಾಗಿ ಈಗಲೂ ಹಾಗೆಯೇ ಉಳಿದಿದೆ. 
***

Comments

Popular posts from this blog

ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆಗಳು

  ಹಿಂದೂ ಮತ್ತು ಅಸ್ಪೃಶ್ಯನೊಬ್ಬ ಪ್ರಯಾಣ ಮಾಡುವ ಸಂದರ್ಭದಲ್ಲಿ ಪರಸ್ಪರ ಭೇಟಿಯಾದಾಗ... "ಯಾವಾಗಲಾದರೊಮ್ಮೆ ಅಕ್ಕಪಕ್ಕ ಕುಳಿತು ಪ್ರಯಾಣ ಮಾಡುವ ಸಂದರ್ಭದಲ್ಲಿ ಪರಸ್ಪರ ಜಾತಿ ತಿಳಿಯದಿದ್ದಾಗ ಜಾತಿವಾದಿ ಹಿಂದೂಗಳು ಮತ್ತು ಅಸ್ಪೃಶ್ಯರು ತುಂಬಾ ಆಪ್ತ ಸ್ನೇಹಿತರಂತೆ ವರ್ತಿಸುತ್ತಾರೆ. ಪರಸ್ಪರ ಬೀಡಿ, ಸಿಗರೆಟ್, ಹಣ್ಣುಗಳು, ಎಲೆ- ಅಡಿಕೆ ಹೀಗೆ ಅವರು ಹಂಚಿಕೊಳ್ಳುತ್ತಾರೆ. ಆದರೆ ಇದ್ದಕ್ಕಿದ್ದಂತೆ ಆ ಹಿಂದೂ ವ್ಯಕ್ತಿಗೆ ತಾನು ಇಷ್ಟು ಹೊತ್ತು ಮಾತನಾಡುತ್ತಿದ್ದ ವ್ಯಕ್ತಿ ಅಸ್ಪೃಶ್ಯ ಎಂದು ತಿಳಿಯುತ್ತಿದ್ದಂತೆ ಆತನ ಮನಸ್ಸಿನಲ್ಲಿ ದ್ವೇಷದ ಮನೋಭಾವ ಮೊಳಕೆಯೊಡೆಯುತ್ತದೆ, ತಾನು ಮೋಸಗೊಳಗಾದೆನೆಲ್ಲ ಎಂದು ಆತ ಯೋಚಿಸಲು ಆರಂಭಿಸುತ್ತಾನೆ. ಆತ ಕೋಪಗೊಳ್ಳುತ್ತಾನೆ. ಅಂತಿಮವಾಗಿ ತಾತ್ಕಾಲಿಕ ಆ ಸ್ನೇಹ ಜಗಳ ಮತ್ತು ಬೈಗುಳದ ಮೂಲಕ ಅಂತ್ಯಗೊಳ್ಳುತ್ತದೆ". -ಡಾ.ಬಿ.ಆರ್.ಅಂಬೇಡ್ಕರ್ ( Ambedkar writings and speeches, Vol.17, Part 3, Pp.132) ಕನ್ನಡಕ್ಕೆ: ರಘೋತ್ತಮ ಹೊಬ)

ಮುಂದೊಂದು ದಿನ ಎಲ್ಲರೂ ಬೌದ್ಧರಾಗಲಿದ್ದಾರೆ -ಡಾ.ಅಂಬೇಡ್ಕರ್

  "ಪ್ರತಿಯೊಂದು ಧರ್ಮವು ಉತ್ತರಿಸಬೇಕಾದ ಒಂದು ಪ್ರಶ್ನೆ ಇದೆ. ಅದೆಂದರೆ ತಳ ಸಮುದಾಯ ಮತ್ತು ದೌರ್ಜನ್ಯ ಪೀಡಿತ ಸಮುದಾಯಗಳಿಗೆ ಧರ್ಮವೊಂದು ನೀಡಬಹುದಾದ ನೈತಿಕ ಮತ್ತು ಬೌದ್ಧಿಕ ಬೆಂಬಲವಾದರು ಏನು ಎಂಬುದು? ಧರ್ಮವೊಂದು ಅಂತಹದ್ದೊಂದು ಬೆಂಬಲ ನೀಡಲಿಲ್ಲ ಎಂದರೆ ಅದು ದುರದೃಷ್ಟಕರ ಪರಿಸ್ಥಿತಿಯಲ್ಲಿ ಇದೆ ಎಂದೆ ಅರ್ಥ. ಆದ್ದರಿಂದ  ಹಿಂದೂ ಧರ್ಮವು  ಕೋಟ್ಯಾಂತರ ಸಂಖ್ಯೆಯಲ್ಲಿ ಇರುವ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಜನರಿಗೆ ನೈತಿಕ ಮತ್ತು ಬೌದ್ಧಿಕ ಬೆಂಬಲ ನೀಡುತ್ತದೆಯೇ? ಖಂಡಿತ ಇಲ್ಲ. ಈ ನಿಟ್ಟಿನಲ್ಲಿ ತಮಗೆ ಬೌದ್ಧಿಕ ಮತ್ತು ನೈತಿಕ ಬೆಂಬಲ ನೀಡದ ಹಿಂದೂ ಧರ್ಮದ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಜನರು ಇರಲು ಬಯಸುತ್ತಾರೆ ಎಂದು ಹಿಂದೂಗಳು ಅಪೇಕ್ಷೆ ಪಡಲು ಸಾಧ್ಯವೇ? ಅಂದಹಾಗೆ ಅಂತಹದ್ದೊಂದು ಅಪೇಕ್ಷೆ ಅಕ್ಷರಶಃ ವ್ಯರ್ಥದ್ದು.  "ಯಾಕೆಂದರೆ ಹಿಂದೂ ಧರ್ಮ ಅದು ಜ್ವಾಲಾಮುಖಿಯ ಮೇಲೆ ತೇಲುತ್ತಿದೆ. ಆ ನಿಟ್ಟಿನಲ್ಲಿ ಇಂದು ಅದು(ಜ್ವಾಲಾಮುಖಿ) ನಂದಿದ ಹಾಗೆ ಕಾಣುತ್ತಿದೆ. ಆದರೆ ವಾಸ್ತವ ಅದಲ್ಲ‌‌. ಮೊಂದೊಂದು ದಿನ ಈ ಕೋಟ್ಯಂತರ (ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ) ಮಂದಿಗೆ ತಮ್ಮ ಈ ಹೀನ ಸ್ಥಿತಿಯ ಬಗ್ಗೆ ಅರಿವಾದಾಗ ಮತ್ತು ಅದಕ್ಕೆ ಹಿಂದೂ ಧರ್ಮದ ಸಾಮಾಜಿಕ ತತ್ವ ಕಾರಣ ಎಂದು ತಿಳಿದಾಗ ಆ ಜ್ವಾಲಾಮುಖಿ ಜೀವಂತಗೊಳ್ಳಲಿದೆ. ಇದಕ್ಕೆ ಸಾಕ್ಷಿಯಾಗಿ ರೋಮನ್ ಸಾಮ್ರಾಜ್ಯದಲ್ಲಿ ಕ್ರಿಶ್ಚಿಯ...

ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್: ಮರೆಯಬಾರದ ಮೈಸೂರು ದೊರೆ

  ನಾಲ್ವಡಿ ಕೃಷ್ಣರಾಜ ಒಡೆಯರ್ -ರಘೋತ್ತಮ ಹೊಬ "ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು" ಇದು ಬಾಬಾಸಾಹೇಬ್ ಡಾ.ಅಂಬೇಡ್ಕರ್ ರವರ ಸುಪ್ರಸಿದ್ದ ನಾಣ್ಣುಡಿ. ಅದರಲ್ಲೂ ಹಳೆ ಮೈಸೂರು ಭಾಗದವರು ತಮ್ಮ ಭವ್ಯ ಇತಿಹಾಸವನ್ನು ಮರೆಯಲೇಬಾರದು. ಏಕೆಂದರೆ ರಾಜ್ಯದ ಇತರೆ ಪ್ರದೇಶಗಳಿಗೆ ಹೋಲಿಸಿದರೆ ಹಳೆ ಮೈಸೂರು ಭಾಗ ಅಭಿವೃದ್ಧಿಯಲ್ಲಿ ಮಂಚೂಣಿಯಲ್ಲಿದೆ ಎಂದರೆ ಅದಕ್ಕೆ ಕಾರಣ ಅದರ ಭವ್ಯ ಇತಿಹಾಸ. ಇಂತಹ ಭವ್ಯ ಇತಿಹಾಸದ ನಿರ್ಮಾತೃವಾಗಿ ತನ್ಮೂಲಕ ಮಾದರಿ ಮೈಸೂರಿಗೆ ಮುನ್ನುಡಿ ಬರೆದ ಧೃವತಾರೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್. ಆಳರಸರಿಗೆ ಮಾದರಿಯಾದ ರಾಜಯೋಗಿ.  ನಾಲ್ವಡಿಯವರು ಜನಿಸಿದ್ದು 1884 ರ ಜೂನ್ 4ರಂದು. ತಂದೆ ಶ್ರೀ ಚಾಮರಾಜ ಒಡೆಯರ್, ತಾಯಿ ಕೆಂಪನಂಜಮ್ಮಣ್ಣಿ (ವಾಣಿ ವಿಲಾಸ ಸನ್ನಿಧಾನ). ಬಾಲಕ ಕೃಷ್ಣರಾಜರ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಮೈಸೂರಿನಲ್ಲೇ. ರಾಯಲ್ ಸ್ಕೂಲ್ ಎಂಬ ಪ್ರತ್ಯೇಕ ಶಾಲೆಯಲ್ಲಿ ಇವರ ಸಹಪಾಠಿಗಳಾಗಿದ್ದವರು ಮಿರ್ಜಾ  ಇಸ್ಮಾಯಿಲ್, ಲಕ್ಷ್ಮೀಕಾಂತರಾಜ್ ಅರಸ್, ಮುಂತಾದವರು. 1894 ರಲ್ಲಿ ತಂದೆ ಚಾಮರಾಜ ಒಡೆಯರ್ ರವರ ನಿಧನದಿಂದಾಗಿ ಬಾಲಕ ಕೃಷ್ಣರಾಜನಿಗೆ ರಾಜ್ಯದ ಹೊಣೆ ಬಿದ್ದಾಗ ಅವರಿಗೆ ಕೇವಲ 10 ವರ್ಷ. ಪೆಬ್ರವರಿ 1, 1895 ರಲ್ಲಿ ಯುವರಾಜ ಕೃಷ್ಣರಾಜರಿಗೆ ಪಟ್ಟಾಭಿಷೇಕ ಮಹೋತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ ಬ್ರಿಟಿಷ್ ರಿಜೆನ್ಸಿ ಆಳ್ವಿಕೆಯಲ್ಲಿ ಮೈಸೂರಿನ ಗೌರ್ನರ್ ಮತ್ತು ಮಹಾರಾಜರ ಟ್ಯೂಟರ...