Skip to main content

ಡಾ.ಬಿ.ಆರ್.ಅಂಬೇಡ್ಕರ್ ರವರ "ರಿಡಲ್ಸ್ ಇನ್ ಹಿಂದೂಯಿಸಂ" ಕೃತಿ --ರಘೋತ್ತಮ ಹೊ.ಬ


ಬಾಬಾಸಾಹೇಬ್ ಅಂಬೇಡ್ಕರ್ ರ ಸುಪ್ರಸಿದ್ಧ ಇಂಗ್ಲಿಷ್ ಕೃತಿ "ರಿಡಲ್ಸ್ ಇನ್ ಹಿಂದೂಯಿಸಂ (ಹಿಂದೂ ಧರ್ಮದಲ್ಲಿನ ಒಗಟುಗಳು)" ಬಹಳ ಮಹತ್ವದ ಕೃತಿಯಾಗಿದೆ. ತಮ್ಮ ಈ ಕೃತಿಯಲ್ಲಿ  ಡಾ.ಅಂಬೇಡ್ಕರ್ ರು ಅದೆಷ್ಟು ಬೋಲ್ಡ್ ಆಗಿ ಧರ್ಮದ ಎಲ್ಲಾ ಗೋಜಲುಗಳನ್ನು ಗೊಂದಲಗಳನ್ನು ಒಗಟುಗಳ(Riddles) ರೂಪದಲ್ಲಿ ಪಟ್ಟಿ ಮಾಡಿದ್ದಾರೆಂದರೆ... ಅವರ ಆ ಇಂಗ್ಲಿಷ್ ಪ್ರೌಢಿಮೆ.. ವೇದ, ಉಪನಿಷತ್, ಪುರಾಣಗಳು, ವಿವಿಧ ಶಾಸ್ತ್ರಗಳು, ವಿವಿಧ ಸ್ಮೃತಿ ಗಳು ಎಲ್ಲವನ್ನೂ ಇಂಗ್ಲಿಷ್ ನಲ್ಲಿ ಅವರು ಬರೆದಿರುವ ಶೈಲಿ totally beautiful. ಯಾಕೆಂದರೆ ಡಾ.ಅಂಬೇಡ್ಕರರು ತಮ್ಮ ಆ ಶ್ರೇಷ್ಠ ಇಂಗ್ಲಿಷ್ ನಲ್ಲಿ ಸಂಸ್ಕೃತ ಮೂಲದ ವೇದ, ಉಪನಿಷತ್, ಪುರಾಣ, ಸ್ಮೃತಿಗಳ ವಿಚಾರ ಇವುಗಳನ್ನೆಲ್ಲ ಮಂಡಿಸಿರುವ ರೀತಿ ಅಕ್ಷರಶಃ ಬೆರಗು ಮೂಡಿಸುತ್ತದೆ. ಆ ಮೂಲಕ ಇಡೀ ವಿಷಯವನ್ನು, ಸಮಸ್ಯೆಯನ್ನು ಬಾಬಾಸಾಹೇಬರು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುತ್ತಾರೆ. ಅಮೆರಿಕಾ ಮತ್ತು ಲಂಡನ್‌ ಎರಡೂ ವಾತಾವರಣಗಳ ಇಂಗ್ಲಿಷ್ ಅನ್ನು ಡಾ.ಅಂಬೇಡ್ಕರ್ ರವರು ಬಳಸಿರುವುದರಿಂದ ಅವುಗಳನ್ನು ಓದಲು ಅರ್ಥೈಸಿಕೊಳ್ಳಲು ಪಕ್ಕದಲ್ಲಿ ಡಿಕ್ಷನರಿ ಇಟ್ಟುಕೊಳ್ಳಬೇಕು ಎಂದು ಇಲ್ಲಿ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಅಷ್ಟೊಂದು ಕಠಿಣ ಮತ್ತು ಅಚ್ಚುಕಟ್ಟಾದ ಮಂಡನೆಯೇ ಆ ಕೃತಿಯ ವಿಶೇಷ. 


ಡಾ.ಅಂಬೇಡ್ಕರ್ ರ ಆ "ರಿಡಲ್ಸ್ ಇನ್ ಹಿಂದೂಯಿಸಂ" ಕೃತಿಯಲ್ಲಿ ಸುಮಾರು 27 ರಿಡಲ್ಸ್ ಅಥವಾ ಒಗಟುಗಳಿವೆ. ಘನವೆತ್ತ ಭಾರತ ಸರ್ಕಾರವೇ ಪ್ರಕಟಿಸಿರುವ ಆ ಕೃತಿಯನ್ನು ಪ್ರತಿಯೊಬ್ಬರೂ ಅದರಲ್ಲಿ ಏನಿದೆ ಎಂದು ತಿಳಿದುಕೊಳ್ಳಲಿಕ್ಕಾಗಿಯಾದರೂ ಓದಲೇಬೇಕು. ಯಾಕೆಂದರೆ ಮೊದಲ ಒಗಟಿನಲ್ಲಿಯೇ ಡಾ.ಅಂಬೇಡ್ಕರ್ ರು ಹೇಳುವ ವಿಚಾರ "ಒಬ್ಬ ವ್ಯಕ್ತಿ ಹಿಂದೂ ಏಕಾಗುತ್ತಾನೆ ಎಂಬುದನ್ನು ಅರಿಯುವುದರಲ್ಲಿ ಇರುವ ಸಂಕಷ್ಟ" ಎಂಬುದು. ಎರಡನೆಯ ಒಗಟಿನಲ್ಲಿ ವೇದಗಳ ಮೂಲ, ನಂತರದ ಒಗಟುಗಳಲ್ಲಿ ಶಾಸ್ತ್ರಗಳ, ಉಪನಿಷತ್ತುಗಳ, ದೇವರುಗಳ, ದೇವತೆಗಳ, ವಿವಿಧ ಸ್ಮೃತಿಗಳ, ಅಹಿಂಸೆ, ಹಿಂಸೆ... ಹೀಗೆ ಹಿಂದೂ ಧರ್ಮದಲ್ಲಿ ಬರುವ ಪ್ರತಿಯೊಂದನ್ನೂ ಡಾ.ಅಂಬೇಡ್ಕರರು ಒಗಟುಗಳ ರೂಪದಲ್ಲಿ ಓದುಗನ ಮುಂದಿಟ್ಟಿದ್ದಾರೆ.

ನಂತರದ ಅಧ್ಯಾಯಗಳಲ್ಲಿ ತ್ರಿಮೂರ್ತಿಗಳು, ಸ್ಮಾರ್ತ ಧರ್ಮ, ತಾಂತ್ರಿಕ್ ಧರ್ಮ, ನಾಲ್ಕು ವರ್ಣಗಳು, ನಾಲ್ಕು ಆಶ್ರಮಗಳು, ಕಲಿವರ್ಜ್ಯ ಎಂದರೇನು, ಕಲಿಯುಗ ಎಂದರೇನು, ಪಿತೃತ್ವ ಸಮಾಜ ಮಾತೃತ್ವ ಸಮಾಜ ಹೇಗಾಯಿತು... ಹೀಗೆ ಡಾ.ಅಂಬೇಡ್ಕರ್ ರು ವಿಚಾರಗಳನ್ನು ಸ್ಪಷ್ಟವಾಗಿ ದಾಖಲಿಸುತ್ತಾರೆ. ಹೀಗೆ ದಾಖಲಿಸುವ ಸಂದರ್ಭಗಳಲ್ಲಿ ಅವರು
ನೀಡುವ ರೆಫರೆನ್ಸ್ ಅಥವಾ ಆಕರ ಗ್ರಂಥಗಳು, ಅದರ ಅಂಶಗಳು ಅಕ್ಷರಶಃ ಬಾಬಾಸಾಹೇಬರ ಅತ್ಯಂತ ಶ್ರೇಷ್ಠ ಓದಿನ ಜಗತ್ತನ್ನು,  ಉತ್ಕೃಷ್ಟ ಸಂಶೋಧನಾ ಮಾರ್ಗವನ್ನು, ವಕೀಲಿ ಶೈಲಿಯ ವಿಚಾರ ಮಂಡನೆಯನ್ನು ಮಾರ್ಗದುದ್ದಕ್ಕು ಓದುಗರಿಗೆ ಉಣಬಡಿಸುತ್ತದೆ. 

ಕೊನೆಯಲ್ಲಿ ಅವರ ಆ ಕೃತಿ "ಕಲಿಯುಗ" ಅಂದರೆ ಈಗಿನ ಯುಗಕ್ಕೆ ಬಂದು ಅದಕ್ಕೆ ಸಂವಾದಿಯಾಗಿ ಮನ್ವಂತರ, ಹಾಗೆ "ರಾಮ ಮತ್ತು ಕೃಷ್ಣರ ಒಗಟು"ಗಳನ್ನು ದಾಖಲಿಸುತ್ತ ನಿಲ್ಲುತ್ತದೆ. ವಾಸ್ತವವೆಂದರೆ ತಮ್ಮ ಆ ಕೃತಿಯಲ್ಲಿ ಡಾ.ಅಂಬೇಡ್ಕರರು ಯಾವುದೇ ಧರ್ಮವನ್ನಾಗಲೀ ಮತ್ತೊಂದನ್ನಾಗಲಿ ನಿಂದಿಸಲು ಹೋಗಿಲ್ಲ. ಬದಲಿಗೆ ವಿದ್ವಾಂಸರ ಮುಂದೆ ಹತ್ತಾರು ಪ್ರಶ್ನೆಗಳನ್ನು ವೈಚಾರಿಕತೆ ಮತ್ತು ವೈಜ್ಞಾನಿಕತೆಯ ರೂಪದಲ್ಲಿ ಇಟ್ಟಿದ್ದಾರೆ. ಖಂಡಿತ, ಈ ವಿಷಯದಲ್ಲಿ ಆಸಕ್ತರು ಅಥವಾ ಈ ವಿಷಯವನ್ನು ಕಲಿಯುತ್ತಿರುವ ಧರ್ಮಶಾಸ್ತ್ರದ ಸಂಶೋಧನಾರ್ಥಿಗಳು ಬಾಬಾಸಾಹೇಬ್ ಅಂಬೇಡ್ಕರರ ಆ ಒಂದೊಂದು ಒಗಟನ್ನು ಒಂದೊಂದು ಸಂಶೋಧನಾ ಸವಾಲಾಗಿ ಸ್ವೀಕರಿಸಿ ಸೂಕ್ತ ಉತ್ತರ ನೀಡಬಹುದು. ಈ ನಿಟ್ಟಿನಲ್ಲಿ ಅದು ವಿದ್ಯಾರ್ಥಿಗಳನ್ನು ಅಕ್ಷರಶಃ ಪ್ರೇರೇಪಿಸುತ್ತದೆ. ಹಾಗೆ ಸಂಶೋಧನಾರ್ಥಿಗಳಿಗೆ ಎಲ್ಲಿಯೂ ಕೇಳದ ಈ ಒಗಟುಗಳಿಗೆ ಸೂಕ್ತ ಉತ್ತರ ನೀಡಲು ಈ ಕೃತಿ ಮಾರ್ಗ ತೋರುತ್ತದೆ, ಸತ್ಯ ಶೋಧನೆಗೆ ಕೈ ಹಿಡಿದು ಮುನ್ನಡೆಸುತ್ತದೆ.

ದುರಂತದ ವಿಚಾರವೆಂದರೆ ಬಾಬಾಸಾಹೇಬ್ ಅಂಬೇಡ್ಕರರ ಈ ಕೃತಿಯನ್ನು ಈ ಸಂಬಂಧ ಉತ್ತರಿಸಬೇಕಾದ ಯಾರೂ ಕೂಡ  ಸೂಕ್ತವಾಗಿ ಓದಿ, ಅಧ್ಯಯನ ಮಾಡಿ
ಒಗಟುಗಳಿಗೆ ಉತ್ತರಿಸಲು ಹೋಗಿರುವುದು ಎಲ್ಲಿಯೂ ದಾಖಲಾಗಿಲ್ಲ ಅಥವಾ ಈ ಸಂಬಂಧದ ಪ್ರತಿಸಂಶೋಧನಾ ಸಾಕ್ಷಿಗಳು ಕೂಡ ನಮ್ಮ ಮುಂದೆ ಎಲ್ಲಿಯೂ ದೊರಕಿಲ್ಲ. ಪೂರ್ವಾಗ್ರಹ ಪೀಡಿತ ಮನಸ್ಸು ಹೊಂದಿ ಅವುಗಳನ್ನು ಓದುವುದಿರಲಿ ಕಣ್ಣೆತ್ತಿ ನೋಡದವರೆ ಬಹುಸಂಖ್ಯಾತರಾಗಿದ್ದಾರೆ! ಒಟ್ಟಾರೆ ಹೇಳುವುದಾದರೆ, ಬಾಬಾಸಾಹೇಬ್ ಅಂಬೇಡ್ಕರರು ಎತ್ತಿರುವ ಆ ಒಗಟುಗಳು ಈಗಲೂ ಒಗಟಿನ ರೂಪದಲ್ಲಿಯೇ ಇವೆ. ಈ ನಿಟ್ಟಿನಲ್ಲಿ "ರಿಡಲ್ಸ್ ಇನ್ ಹಿಂದೂಯಿಸಂ" ಡಾ.ಅಂಬೇಡ್ಕರರ ಈ ಕೃತಿ ಉತ್ತರ ಕಾಣದ ಒಗಟುಗಳ ಗುಚ್ಛವಾಗಿ ಈಗಲೂ ಹಾಗೆಯೇ ಉಳಿದಿದೆ. 
***

Comments

Popular posts from this blog

ಜಾತಿ ಮತ್ತು ಅಸಮಾನತೆಯನ್ನು ಬುದ್ಧರು ಹೇಗೆ ಪ್ರಶ್ನಿಸುತ್ತಾರೆಂದರೆ...

- ರಘೋತ್ತಮ ಹೊಬ ತ್ರಿಪಿಟಕಗಳಲ್ಲಿ ಅದರಲ್ಲೂ ಸುತ್ತ ಪಿಟಕದ ಅಸ್ಸಲಾಯನ ಸುತ್ತ ಎಂಬ ಕತೆಯಲ್ಲಿ ಬುದ್ಧರು ಜಾತಿ ಮತ್ತು ಅಸಮಾನತೆ ವಿರೋಧಿಸಿ ಮಾತನಾಡುತ್ತಾರೆ. ಬುದ್ಧರು ಹೇಳುವುದು "ಶ್ರೇಷ್ಠ ಕುಲದ ಮಹಿಳೆಯರು ಕೂಡ ಋತು ಚಕ್ರ ಅನುಭವಿಸುತ್ತಾರೆ, ಗರ್ಭ ಧರಿಸುತ್ತಾರೆ. ಅವರಿಗೂ ಹೆರಿಗೆಯಾಗುತ್ತದೆ, ಮಗು ಆಗುತ್ತದೆ. ಇಂತಹ ಪ್ರಾಕೃತಿಕ ಪದ್ಧತಿ ಹೊರತುಪಡಿಸಿ ಅವರಿಗೆ ಇತರೆ ಯಾವುದಾದರೂ ಬೇರೆ ವಿಧಾನ ಇದೆಯೇ? ಹಾಗಿದ್ದರೆ ಅವರು ಹೇಗೆ ಇತರರಿಗಿಂತ ಭಿನ್ನ? ಅಥವಾ ಶ್ರೇಷ್ಠ?" ಹೀಗೆ ಬುದ್ಧರು ಅಸಮಾನತೆ ಮತ್ತು ಜಾತಿಯನ್ನು ಪ್ರಶ್ನಿಸುತ್ತಾರೆ.  ಹಾಗೆ ಅದೇ ಕತೆಯಲ್ಲಿ ಬುದ್ಧರು ಹೇಳುವುದು "ಶ್ರೇಷ್ಠ ಕುಲದ ಒಬ್ಬ ಯುವಕ ಮತ್ತು ಅದೇ ಕುಲದ ಒಬ್ಬ ಕನ್ಯೆ ಇಬ್ಬರೂ ಕೂಡಿದರೆ ಮನುಷ್ಯ ಜೀವಿ ಜನಿಸದೆ ಯಾವುದಾದರೂ ಪ್ರಾಣಿ ಜನಿಸುವುದೇ? ಹೀಗಿರುವಾಗ ಅವರು ಹೇಗೆ ಶ್ರೇಷ್ಠ?". ಹೇಳಿ ಹೇಗೆ ಶ್ರೇಷ್ಠ? ***

Why did Dr Ambedkar converted to Buddhism? -Raghothama Hoba

Yesterday, someone asked me why did Dr.Ambedkar converted to "Buddhism",  But next series of questions he forget to ask me is “Why untouchability is still practiced against some caste in society? Why some caste people were kept away from temples? Why some caste and people belonging to those caste were being denied opportunities in every field of life such as business, trade, commerce, private companies, hotels, markets etc,. Why some caste people were meant to do menial jobs, scavenging and other things? To continue, why some caste people still being denied or avoided to get higher education? Why some caste people are unnecessarily tortured in working areas whether it is government or private. Answer to all this is untouchability. Let we call those people who are being subjected to untouchability as untouchables or Dalits or scheduled caste people. Now one has to think himself, what could happen if someone kept away from temples or made to stand outside the temple? Won’t it h...

ಅಂದು ಪರಿಶಿಷ್ಟರ ಮೀಸಲಾತಿ ರದ್ದುಮಾಡಲು ಹೊರಟಾಗ ಅಂಬೇಡ್ಕರ್ ರವರ ಆಕ್ರೋಶ ಹೇಗಿತ್ತೆಂದರೆ... -ರಘೋತ್ತಮ ಹೊ.ಬ

1947 ಜನವರಿ ತಿಂಗಳ ಒಂದು ದಿನ "ಸಂವಿಧಾನ ಸಭೆ" (Constituent assembly) ಸಭೆ ಸೇರುತ್ತದೆ. ಅಂದು ಆ ಸಭೆ ಸೇರುವ ಉದ್ದೇಶ ಅರಿತಿದ್ದ ಬಾಬಾಸಾಹೇಬ್ ಅಂಬೇಡ್ಕರರು ಸಭೆಯ ಸದಸ್ಯರಾಗಿದ್ದರು ಕೂಡ ಸಭೆಯಿಂದ ದೂರ ಉಳಿದಿದ್ದರು. ಯಥಾಪ್ರಕಾರ ಸಂವಿಧಾನ ಸಭೆಯ "ಅಲ್ಪಸಂಖ್ಯಾತರ ಉಪಸಮಿತಿ"ಯ ಅಧ್ಯಕ್ಷರಾದ ಸರ್ದಾರ್ ವಲ್ಲಭಭಾಯ್ ಪಟೇಲ್ ಆ ದಿನ ಒಂದು ತಂತ್ರಗೈದು ಸಮಿತಿಯ ಅಧ್ಯಕ್ಷರಾದ ತಾವೇ ಹಾಜರಿದ್ದರೂ ಆಚಾರ್ಯ ಕೃಪಲಾನಿಯವರನ್ನು ಅಂದು ಸಭೆಯ ಅಧ್ಯಕ್ಷತೆ ವಹಿಸಿಕೊಳ್ಳುವಂತೆ ತಿಳಿಸುತ್ತಾರೆ. ಅಲ್ಲದೇ ಸರ್ದಾರ್ ವಲ್ಲಭಭಾಯ್ ಪಟೇಲರು ಅಂದು ಮಂಡಿಸುವ ನಿಲುವನ್ನು ಬೆಂಬಲಿಸುವ ಸಮಿತಿಯ ಸದಸ್ಯರುಗಳಿಗೆ ರಾಜ್ಯಪಾಲ, ಮುಖ್ಯಮಂತ್ರಿ.. ಹೀಗೆ ವಿವಿಧ ಹುದ್ದೆಗಳನ್ನು ನೀಡುವ ಆಮಿಷ ಒಡ್ಡಲಾಗಿರುತ್ತದೆ ! ಈ ಹಿನ್ನೆಲೆಯಲ್ಲಿ ಅಂದು ಸಭೆ ಸೇರಿದ ಸಂವಿಧಾನ ಸಭೆಯ ಆ "ಅಲ್ಪಸಂಖ್ಯಾತರ ಉಪಸಮಿತಿ" ಕೈಗೊಂಡ ನಿರ್ಣಯವೆಂದರೆ ಎಸ್ಸಿ, ಎಸ್ಟಿಗಳು ಸೇರಿದಂತೆ ಎಲ್ಲಾ ವರ್ಗಗಳ ಜನರಿಗೂ ಮೀಸಲಾತಿ ರದ್ದುಗೊಳಿಸುವ ನಿರ್ಧಾರ!! ಅಂದಹಾಗೆ ಹೀಗೆ ಎಸ್ಸಿ, ಎಸ್ಟಿಗಳಿಗೆ ಮೀಸಲಾತಿ ರದ್ದುಗೊಳಿಸುವ ನಿರ್ಧಾರ ಪ್ರಕಟಗೊಳ್ಳುತ್ತಿದ್ದಂತೆ ಮಾರನೇ ದಿನದ "ಹಿಂದೂಸ್ತಾನ್ ಟೈಮ್ಸ್" ಮತ್ತು "ಸ್ಟೇಟ್ಸ್ ಮನ್" ನಂತಹ ಇಂಗ್ಲಿಷ್ ಪತ್ರಿಕೆಗಳು ಈ ಸುದ್ದಿಗೆ ನೀಡಿದ ಹೆಡ್ ಲೈನ್ಸ್ ಏನು ಗೊತ್ತೇ? ಇಂದು Red letter day (ಇತಿಹಾಸದಲ್ಲಿ...