Skip to main content

ತಮ್ಮಿಂದ, ತಮ್ಮವರಿಗಾಗಿ, ತಮ್ಮವರಿಗೋಸ್ಕರ ವ್ಯಾಪಾರ ವ್ಯವಹಾರ... -ರಘೋತ್ತಮ ಹೊ.ಬ


ಒಂದು ಮಾಹಿತಿಯ ಪ್ರಕಾರ "ಕೊರೊನ ಕಾರಣಕ್ಕೆ ಯಾರು ಸಾಯುತ್ತಿಲ್ಲ, ಆಕ್ಸಿಜನ್ ಕೊರತೆಯ ಕಾರಣಕ್ಕೆ ಜನ ಸಾಯುತ್ತಿದ್ದಾರೆ" ಎಂಬುದು. ಹ್ಞಾಂ, ಇದೇ ಸಮೀಕರಣ ಅಸ್ಪೃಶ್ಯತೆಗೂ ಅಪ್ಲೈ ಆಗುತ್ತದೆ. "ಅಸ್ಪೃಶ್ಯತೆ ಕಾರಣಕ್ಕೆ ಯಾರೂ ಸಾಯುತ್ತಿಲ್ಲ, ಬದಲಿಗೆ ಅವರ ಮೇಲೆ ಹೇರಿರುವ ಹಣಕಾಸು ಕಟ್ಟುಪಾಡಿನ ಕಾರಣಕ್ಕೆ ಅವರು ಸಾಯುತ್ತಿದ್ದಾರೆ"!

ಹೌದು, ಅಸ್ಪೃಶ್ಯತೆ ಅದು ಅಸ್ಪೃಶ್ಯ ಸಮುದಾಯಗಳ ಸಮಸ್ಯೆಯಲ್ಲ. ಅದು ಅದನ್ನು ಆಚರಿಸುವವರ ಸಮಸ್ಯೆ. ಆದರೆ ನೋವು ಮತ್ತು ನಷ್ಟ ಅನುಭವಿಸುತ್ತಿರುವವರು ಮಾತ್ರ ಅಸ್ಪೃಶ್ಯ ವರ್ಗದವರು ಎಂದು ಆ ಕಾಲದಲ್ಲೇ ಡಾ.ಅಂಬೇಡ್ಕರ್ ರವರು ಹೇಳಿದ್ದಾರೆ. ಹಾಗೆಯೇ "ಅಸ್ಪೃಶ್ಯತೆ ಆಚರಿಸುತ್ತಿರುವವರು ಯಾವುದೇ ಕಾರಣಕ್ಕು ಆಚರಣೆ ನಿಲ್ಲಿಸುವುದಿಲ್ಲ. ಯಾಕೆಂದರೆ ಅದು ಒಂದು ಕೊಳ್ಳೆ ಹೊಡೆಯುವ ಮತ್ತು ಆ ಕೊಳ್ಳೆಯಲ್ಲಿ ಪರಸ್ಪರ ಹಂಚಿಕೊಳ್ಳುವ, ಪಾಲು ಮಾಡಿಕೊಳ್ಳುವ ಪದ್ಧತಿಯಾಗಿದೆ" ಎಂದು ಕೂಡ ಅಂಬೇಡ್ಕರರು ಹೇಳಿದ್ದಾರೆ. ಆದ್ದರಿಂದ ಅಸ್ಪೃಶ್ಯತೆಯನ್ನು ಯಾರೋ ನಿರ್ಮೂಲನೆ ಮಾಡ್ತಾರೆ ಅಥವಾ ಸರ್ಕಾರ ನಿರ್ಮೂಲನೆ ಮಾಡುತ್ತೆ ಎಂದು ಜನ ಕಾಯುವುದು ತಪ್ಪು. ಬದಲಿಗೆ ತಮ್ಮ ಮೇಲೆ ಹೇರಿರುವ ಕಟ್ಟುಪಾಡುಗಳಿಂದ, ಹಾಕಿರುವ ಕಣ್ಣಿಗೆ ಕಾಣದ ಬೇಡಿಗಳಿಂದ ಬಿಡಿಸಿಕೊಳ್ಳುವುದ ಕಲಿಯಬೇಕು. 

ಅಂತಹ ಬೇಡಿಗಳೆಂದರೆ, ಪ್ರಮುಖವಾಗಿ ವ್ಯಾಪಾರ- ವ್ಯವಹಾರ ಮಾಡಬೇಡ, ಹಣಕಾಸು ಸಂಪಾದನೆ ಮಾಡಬೇಡ, ಜಮೀನು- ಸೈಟು ತೆಗೆದುಕೊಳ್ಳಬೇಡ,  ಸ್ವಂತ ಮನೆ ಕಟ್ಟಿಸಿಕೊಳ್ಳಬೇಡ, ಆಸ್ತಿ ಮಾಡಿಕೊಳ್ಳಬೇಡ, ಚಿನ್ನ - ಒಡವೆ ಮಾಡಿಸಿಕೊಳ್ಳಬೇಡ, ಓದಬೇಡ, ಬರೆಯಬೇಡ, ಒಳ್ಳೆಯ ಬಟ್ಟೆ ಹಾಕಿಕೊಳ್ಳಬೇಡ, ಒಳ್ಳೆಯ ಊಟ ಮಾಡಬೇಡ, ಸ್ಟೈಲ್ ಮಾಡಬೇಡ, ಘನತೆಯ ಬದುಕ ಬದುಕಬೇಡ... ಇತ್ಯಾದಿ. ಈ ಪಟ್ಟಿ ನೋಡಿದರೆ ಬಹುತೇಕರಿಗೆ ಮೊದಲ ನೋಟಕ್ಕೆ ಇದು ವಾಸ್ತವನಾ ಎಂದು ಆಶ್ಚರ್ಯವಾಗಬಹುದು. ಆದರೆ ಇದು ವಾಸ್ತವ ಎಂಬುದು ಅವರ ಎರಡನೇ ನೋಟಕ್ಕೆ, ಚಿಂತನೆಗೆ ಅರ್ಥ ಆಗುತ್ತದೆ.

ಈ ದಿಸೆಯಲ್ಲಿ ಒಂದಷ್ಟು ಬೇಡಿ ಅಥವಾ ಕಟ್ಟುಪಾಡುಗಳಿಂದ ಹೊರ ಬರುವ ಕೆಲಸ ನಡೆದಿದೆ ಎಂಬುದು ನಿಜ. ಆದರೆ ನಿಜದ ಬೇಡಿಯಾದ, ಕಟ್ಟುಪಾಡಾದ ಹಣಕಾಸು ಸಂಪಾದನೆಯ ಕಟ್ಟುಪಾಡಿನಿಂದ ಅಸ್ಪೃಶ್ಯ ವರ್ಗದವರು ಹೊರಬಂದಿಲ್ಲ. ಯಾರಿಗಾದರೂ ನಿರುದ್ಯೋಗಿಗೆ "ಒಂದು ಅಂಗಡಿ ಮುಂಗಟ್ಟು, ಹೊಟೆಲ್ ತೆಗೆಯಪ್ಪ" ಎಂದು ಸಲಹೆ ಕೊಟ್ಟರೆ, "ಅಯ್, ನಮ್ ಕೈಲಿ ಆದ್ದ ಸಾ, ನಮ್ಮವರಿಗೆ ಆದ್ದ ಸಾ, ಯಾರ್ ಬಂದರು ಸಾ" ಹೀಗೆ ರಾಗ ಹೊಡೆಯುತ್ತಾರೆ. ಆ ರಾಗ ಅವರ ತಪ್ಪಿನದ್ದಲ್ಲ. ಶತಶತಮಾನಗಳಿಂದ ಹೇರಿರುವ ಕಟ್ಟುಪಾಡಿನ ತಪ್ಪು ಅದು. ಅದು ಅವರಲ್ಲಿ ಹುಟ್ಟುಟ್ಟುತ್ತಲೇ ಅಂತಹ ಒಂದು ಮನಸ್ಥಿತಿ ಬೆಳೆಸಿದೆಯಷ್ಟೆ. ಈ ನಿಟ್ಟಿನಲ್ಲಿ ದಾರಿ ಬೇರೆ ಇಲ್ಲ, ಅದರಿಂದ ಹೊರಬರಬೇಕಿದೆ.

ಹೊರಬರುವುದು ಹೇಗೆ?

ಮೊದಲಿಗೆ ತಮ್ಮ ಸಮುದಾಯವನ್ನೇ ಅವರುಗಳು ಒಂದು ಆರ್ಥಿಕ ಗುಂಪು ಎಂದು ಪರಿಗಣಿಸಬೇಕು. ಎರಡನೆಯದು ತಮ್ಮ ಸಮುದಾಯದಲ್ಲೇ ಎಲ್ಲಾ ಬಗೆಯ ವ್ಯವಹಾರ ಮಾಡುವ ಸ್ವಯಂ ನಿರ್ಧಾರ ತೆಗೆದುಕೊಳ್ಳಬೇಕು. ಅಕಸ್ಮಾತ್ ಅಂತಹ ಒಂದು ವ್ಯವಹಾರದ ಕ್ಷೇತ್ರಗಳಲ್ಲಿ ತಮ್ಮವರು ಇಲ್ಲವೆಂದರೆ ಸೃಷ್ಟಿ ಮಾಡುವ ಬೆಳೆಸುವ ಕೆಲಸವನ್ನು ಎಲ್ಲರೂ ಸೇರಿ ಅಥವಾ ಪ್ರಜ್ಞಾವಂತರು ಮಾಡಬೇಕು. ಏನೇ ಕಷ್ಟ ಬಂದರೂ ಎಷ್ಟೇ ದೂರ ಆದರೂ ತಮ್ಮವರ ಅಂಗಡಿಗಳಲ್ಲೇ ನಾವು ಎಲ್ಲಾ ಬಗೆಯ ದಿನ ನಿತ್ಯದ ಅಗತ್ಯದ ವಸ್ತುಗಳನ್ನು ಖರೀದಿಸುತ್ತೇವೆ ಎಂಬ ಬದ್ಧತೆ ಹೊಂದಬೇಕು‌. ನಿಜ, ಇದು ಕಷ್ಟ. ಆದರೆ ಅಸ್ಪೃಶ್ಯತೆ ನಿವಾರಣೆಗೆ ಸಮುದಾಯ ತನ್ನನ್ನು ತಾನು ಹೀಗೆ ತೊಡಗಿಸಿಕೊಳ್ಳಲಿಲ್ಲವೆಂದರೆ ಬಹುಶಃ ಶತಶತಮಾನಗಳವರೆಗೆ ಇಂತಹ ನಿರ್ಬಂಧಗಳು, ಕಟ್ಟುಪಾಡುಗಳು ಮುಂದುವರಿಯಲಿವೆ. ನಮ್ಮ ಕೈಗಳಿಗೆ ತೊಡಿಸಿರುವ ಬೇಡಿಗಳನ್ನು ನಮ್ಮ ಮಕ್ಕಳುಗಳಿಗೆ ತೊಡಿಸುವ ಕೆಲಸವನ್ನು ನಾವೇ ಮಾಡುತ್ತೇವೆ! ಖಂಡಿತ, ಹಾಗಾಗಬಾರದು. ಬೇಡಿ ಕತ್ತರಿಸುವ ಕೆಲವನ್ನು ಪ್ರತಿಯೊಬ್ಬರೂ ತಮ್ಮ ಕೈಲಾದ ಮಟ್ಟಿಗೆ ಮಾಡಲೇಬೇಕು.

ಹೀಗೆ ಶೋಷಿತ ವರ್ಗದ ಜನರು ತಮ್ಮ ಆರ್ಥಿಕ ಸ್ವಾತಂತ್ರ್ಯ ಗಳಿಸುವುದು ತಕ್ಷಣಕ್ಕೆ ಕಷ್ಟ. ಉದಾಹರಣೆಗೆ ಇನ್ನೊಂದು ಜಾತಿಯವನ ಅಂಗಡಿಯಲ್ಲಿ ಅವರು ಸಾಲ ಪಡೆಯುತ್ತಿರುತ್ತಾರೆ. ಅಂಗಡಿಯಾತನೋ ಇವರನ್ನು ಸದಾ ಸಾಲದಲ್ಲಿಯೇ ಇರಿಸಲು ಇಷ್ಟಪಡುತ್ತಾನೆ‌. ಯಾಕೆಂದರೆ ಅವನಿಗೊಬ್ನ ಪರ್ಮನೆಂಟ್ ಗ್ರಾಹಕ ಬೇಕಲ್ಲ? ಹಾಗೆಯೇ ಸದಾ ನಗುನಗುತ್ತ ಮಾತನಾಡಿಸುತ್ತಾನೆ! Once again ಅದೇ ಗ್ರಾಹಕನನ್ನು ಉಳಿಸಿಕೊಳ್ಳುವ ತತ್ವ. ಅಂದಹಾಗೆ ಹಾಗೆ ಗ್ರಾಹಕನನ್ನು ಉಳಿಸಿಕೊಳ್ಳುವ ಆತ ಅದೇ ಗ್ರಾಹಕನ ವಿರುದ್ಧ ತಾನು ಅಸ್ಪೃಶ್ಯತೆ ಮಾಡಬಾರದು ಎಂದು ಖಂಡಿತ ಅಂದುಕೊಳ್ಳುವುದಿಲ್ಲ! ಯಾಕೆಂದರೆ ಅಸ್ಪೃಶ್ಯತೆ ಆಚರಣೆ ಅವನಿಗೆ same ಮದ್ಯಪಾನ ಮಾಡಿದಷ್ಟೇ ಕಿಕ್ ಕೊಡುತ್ತದೆ. ಇನ್ನು ಗುಂಪಿನಲ್ಲಿ ಆಚರಿಸಿದರೆ ಅದು ಪಾರ್ಟಿ ಮಾಡಿದಷ್ಟೆ ಮಜಾ ಆತನಿಗೆ ಅದು ಕೊಡುತ್ತದೆ. ಹೀಗಿರುವಾಗ ಅವನು ಹೇಗೆ ಅಸ್ಪೃಶ್ಯತೆ ನಿಲ್ಲಿಸುತ್ತಾನೆ?

ಇನ್ನು, ಅಸ್ಪೃಶ್ಯ ವರ್ಗದವರು ಅಸ್ಪೃಶ್ಯತೆ ನಿಲ್ಲಿಸಿ ಎಂದು ಆತನನ್ನು ಕೇಳಲಾಗುವುದಿಲ್ಲ. ಮುಖ್ಯವಾಗಿ ಅಲ್ಲಿ ಜಾತಿ ಜನಾಂಗದ ಸಮಸ್ಯೆ ಬರುತ್ತದೆ. ಕೇಳುವ ಆ ವ್ಯಕ್ತಿ ಆ ಕ್ಷಣಕ್ಕೆ ತನ್ನ ವಯಕ್ತಿಕ ಕೆಲಸ ಬಿಟ್ಟು ಮಾನಸಿಕ ನೆಮ್ಮದಿ ಕಳೆದುಕೊಳ್ಳಬೇಕಾಗುತ್ತದೆ. ಇನ್ನು, ಕೋರ್ಟು, ಕಚೇರಿ, ಪೋಲಿಸ್ ಠಾಣೆ‌‌‌... ಯಾರಿಗೆ ಬೇಕು ಆ ರಿಸ್ಕ್ ಎಂದು ಅಸ್ಪೃಶ್ಯ ವರ್ಗದ ಬಹುತೇಕ ಮಂದಿ ಆ ನಿಟ್ಟಿನಲ್ಲಿ ತಲೆಕೆಡಿಸಿಕೊಳ್ಳುವುದಿಲ್ಲ, ತಲೆ ಕೆಡಿಸಿಕೊಳ್ಳುವ ಅಗತ್ಯವೂ ಇಲ್ಲ. It is a waste of time. ಬದಲಿಗೆ ಬುಡಕ್ಕೆ ಬೆಂಕಿ ಇಟ್ಟರೆ? ತಮ್ಮ ವ್ಯವಹಾರ ಶೈಲಿಯನ್ನು ಅಸ್ಪೃಶ್ಯ ಸಮುದಾಯಗಳೇ ಬದಲಿಸಿಕೊಂಡರೆ? ಈ ನಿಟ್ಟಿನಲ್ಲಿ ಅಸ್ಪೃಶ್ಯ ಸಮುದಾಯಗಳು ತಮ್ಮದೇ ಸ್ವಂತ ರಾಜಕೀಯ ಪಕ್ಷದ ಮಾದರಿಯಲ್ಲಿ ತಮ್ಮದೇ ಸ್ವಂತ ವ್ಯಾಪಾರ- ವ್ಯವಹಾರ, ಬಿಸಿನೆಸ್ , ಹೊಟೆಲ್... ಹೀಗೆ ಬಗೆ ಬಗೆಯ ಕ್ಷೇತ್ರಗಳಲ್ಲಿ ಮಾಲೀಕರಾಗಿ, ಕಡೇ ಪಕ್ಷ ಗ್ರಾಹಕರಾಗಿ ತೊಡಗಿಸಿಕೊಳ್ಳಬೇಕು‌. "ತಮ್ಮಿಂದ, ತಮ್ಮವರಿಗಾಗಿ, ತಮ್ಮವರಿಗೋಸ್ಕರ ವ್ಯಾಪಾರ ವ್ಯವಹಾರ" ಎಂಬ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಅಸ್ಪೃಶ್ಯತೆಯ ಬೇಡಿ ಕಡಿದು ಬಿಸಾಡಬೇಕು.

*****

Comments

Popular posts from this blog

ಜಾತಿ ಮತ್ತು ಅಸಮಾನತೆಯನ್ನು ಬುದ್ಧರು ಹೇಗೆ ಪ್ರಶ್ನಿಸುತ್ತಾರೆಂದರೆ...

- ರಘೋತ್ತಮ ಹೊಬ ತ್ರಿಪಿಟಕಗಳಲ್ಲಿ ಅದರಲ್ಲೂ ಸುತ್ತ ಪಿಟಕದ ಅಸ್ಸಲಾಯನ ಸುತ್ತ ಎಂಬ ಕತೆಯಲ್ಲಿ ಬುದ್ಧರು ಜಾತಿ ಮತ್ತು ಅಸಮಾನತೆ ವಿರೋಧಿಸಿ ಮಾತನಾಡುತ್ತಾರೆ. ಬುದ್ಧರು ಹೇಳುವುದು "ಶ್ರೇಷ್ಠ ಕುಲದ ಮಹಿಳೆಯರು ಕೂಡ ಋತು ಚಕ್ರ ಅನುಭವಿಸುತ್ತಾರೆ, ಗರ್ಭ ಧರಿಸುತ್ತಾರೆ. ಅವರಿಗೂ ಹೆರಿಗೆಯಾಗುತ್ತದೆ, ಮಗು ಆಗುತ್ತದೆ. ಇಂತಹ ಪ್ರಾಕೃತಿಕ ಪದ್ಧತಿ ಹೊರತುಪಡಿಸಿ ಅವರಿಗೆ ಇತರೆ ಯಾವುದಾದರೂ ಬೇರೆ ವಿಧಾನ ಇದೆಯೇ? ಹಾಗಿದ್ದರೆ ಅವರು ಹೇಗೆ ಇತರರಿಗಿಂತ ಭಿನ್ನ? ಅಥವಾ ಶ್ರೇಷ್ಠ?" ಹೀಗೆ ಬುದ್ಧರು ಅಸಮಾನತೆ ಮತ್ತು ಜಾತಿಯನ್ನು ಪ್ರಶ್ನಿಸುತ್ತಾರೆ.  ಹಾಗೆ ಅದೇ ಕತೆಯಲ್ಲಿ ಬುದ್ಧರು ಹೇಳುವುದು "ಶ್ರೇಷ್ಠ ಕುಲದ ಒಬ್ಬ ಯುವಕ ಮತ್ತು ಅದೇ ಕುಲದ ಒಬ್ಬ ಕನ್ಯೆ ಇಬ್ಬರೂ ಕೂಡಿದರೆ ಮನುಷ್ಯ ಜೀವಿ ಜನಿಸದೆ ಯಾವುದಾದರೂ ಪ್ರಾಣಿ ಜನಿಸುವುದೇ? ಹೀಗಿರುವಾಗ ಅವರು ಹೇಗೆ ಶ್ರೇಷ್ಠ?". ಹೇಳಿ ಹೇಗೆ ಶ್ರೇಷ್ಠ? ***

Why did Dr Ambedkar converted to Buddhism? -Raghothama Hoba

Yesterday, someone asked me why did Dr.Ambedkar converted to "Buddhism",  But next series of questions he forget to ask me is “Why untouchability is still practiced against some caste in society? Why some caste people were kept away from temples? Why some caste and people belonging to those caste were being denied opportunities in every field of life such as business, trade, commerce, private companies, hotels, markets etc,. Why some caste people were meant to do menial jobs, scavenging and other things? To continue, why some caste people still being denied or avoided to get higher education? Why some caste people are unnecessarily tortured in working areas whether it is government or private. Answer to all this is untouchability. Let we call those people who are being subjected to untouchability as untouchables or Dalits or scheduled caste people. Now one has to think himself, what could happen if someone kept away from temples or made to stand outside the temple? Won’t it h...

ಅಂದು ಪರಿಶಿಷ್ಟರ ಮೀಸಲಾತಿ ರದ್ದುಮಾಡಲು ಹೊರಟಾಗ ಅಂಬೇಡ್ಕರ್ ರವರ ಆಕ್ರೋಶ ಹೇಗಿತ್ತೆಂದರೆ... -ರಘೋತ್ತಮ ಹೊ.ಬ

1947 ಜನವರಿ ತಿಂಗಳ ಒಂದು ದಿನ "ಸಂವಿಧಾನ ಸಭೆ" (Constituent assembly) ಸಭೆ ಸೇರುತ್ತದೆ. ಅಂದು ಆ ಸಭೆ ಸೇರುವ ಉದ್ದೇಶ ಅರಿತಿದ್ದ ಬಾಬಾಸಾಹೇಬ್ ಅಂಬೇಡ್ಕರರು ಸಭೆಯ ಸದಸ್ಯರಾಗಿದ್ದರು ಕೂಡ ಸಭೆಯಿಂದ ದೂರ ಉಳಿದಿದ್ದರು. ಯಥಾಪ್ರಕಾರ ಸಂವಿಧಾನ ಸಭೆಯ "ಅಲ್ಪಸಂಖ್ಯಾತರ ಉಪಸಮಿತಿ"ಯ ಅಧ್ಯಕ್ಷರಾದ ಸರ್ದಾರ್ ವಲ್ಲಭಭಾಯ್ ಪಟೇಲ್ ಆ ದಿನ ಒಂದು ತಂತ್ರಗೈದು ಸಮಿತಿಯ ಅಧ್ಯಕ್ಷರಾದ ತಾವೇ ಹಾಜರಿದ್ದರೂ ಆಚಾರ್ಯ ಕೃಪಲಾನಿಯವರನ್ನು ಅಂದು ಸಭೆಯ ಅಧ್ಯಕ್ಷತೆ ವಹಿಸಿಕೊಳ್ಳುವಂತೆ ತಿಳಿಸುತ್ತಾರೆ. ಅಲ್ಲದೇ ಸರ್ದಾರ್ ವಲ್ಲಭಭಾಯ್ ಪಟೇಲರು ಅಂದು ಮಂಡಿಸುವ ನಿಲುವನ್ನು ಬೆಂಬಲಿಸುವ ಸಮಿತಿಯ ಸದಸ್ಯರುಗಳಿಗೆ ರಾಜ್ಯಪಾಲ, ಮುಖ್ಯಮಂತ್ರಿ.. ಹೀಗೆ ವಿವಿಧ ಹುದ್ದೆಗಳನ್ನು ನೀಡುವ ಆಮಿಷ ಒಡ್ಡಲಾಗಿರುತ್ತದೆ ! ಈ ಹಿನ್ನೆಲೆಯಲ್ಲಿ ಅಂದು ಸಭೆ ಸೇರಿದ ಸಂವಿಧಾನ ಸಭೆಯ ಆ "ಅಲ್ಪಸಂಖ್ಯಾತರ ಉಪಸಮಿತಿ" ಕೈಗೊಂಡ ನಿರ್ಣಯವೆಂದರೆ ಎಸ್ಸಿ, ಎಸ್ಟಿಗಳು ಸೇರಿದಂತೆ ಎಲ್ಲಾ ವರ್ಗಗಳ ಜನರಿಗೂ ಮೀಸಲಾತಿ ರದ್ದುಗೊಳಿಸುವ ನಿರ್ಧಾರ!! ಅಂದಹಾಗೆ ಹೀಗೆ ಎಸ್ಸಿ, ಎಸ್ಟಿಗಳಿಗೆ ಮೀಸಲಾತಿ ರದ್ದುಗೊಳಿಸುವ ನಿರ್ಧಾರ ಪ್ರಕಟಗೊಳ್ಳುತ್ತಿದ್ದಂತೆ ಮಾರನೇ ದಿನದ "ಹಿಂದೂಸ್ತಾನ್ ಟೈಮ್ಸ್" ಮತ್ತು "ಸ್ಟೇಟ್ಸ್ ಮನ್" ನಂತಹ ಇಂಗ್ಲಿಷ್ ಪತ್ರಿಕೆಗಳು ಈ ಸುದ್ದಿಗೆ ನೀಡಿದ ಹೆಡ್ ಲೈನ್ಸ್ ಏನು ಗೊತ್ತೇ? ಇಂದು Red letter day (ಇತಿಹಾಸದಲ್ಲಿ...