Skip to main content

ಬೌದ್ಧ ಧರ್ಮದೆಡೆ ನಮ್ಮ ಉದಾಸೀನತೆ?

 


ನಾವು ಬೌದ್ಧ ಧರ್ಮವನ್ನು ಇನ್ನಷ್ಟು ವರ್ಷ ಹೀಗೆ neglect ಮಾಡ್ತ ಹೋದರೆ ಬಹುಶಃ ಕರ್ನಾಟಕದಲ್ಲಿ ಅದು ಇತಿಹಾಸದ ತಳ ಸೇರಲಿದೆ. ಯಾವ ಪರಮಪೂಜ್ಯ ಬಾಬಾಸಾಹೇಬರು ತಮ್ಮ ಜೀವನದ ಅಂತಿಮ ಘಳಿಗೆಯಲ್ಲಿ ಬೌದ್ಧ ಧರ್ಮಕ್ಕೆ ಮಿಡಿದರೊ ನನ್ನ ಜನ ಈ ಧರ್ಮವನ್ನು ಪುನರುಜ್ಜೀವನಗೊಳಿಸುವರು ಎಂದು ತುಡಿದರೊ ಅದನ್ನು ಶೋಷಿತ ಸಮುದಾಯ ಅರಿಯುತ್ತಿಲ್ಲ. ಬಾಬಾಸಾಹೇಬರು ಕೊಟ್ಟ ಹಕ್ಕು ಬೇಕು ಆದರೆ ಅವರು ನೀಡಿದ ಕರ್ತವ್ಯದ ಕಡೆ ಗಮನವಿಲ್ಲ. 

    ಇಷ್ಟೊತ್ತಿಗೆ ಮನಸ್ಸು ಮಾಡಿದ್ದರೆ ಶೋಷಿತರಿಗೆ ಬಾಬಾಸಾಹೇಬರು ನಿಧನರಾದ ಈ 62 ವರ್ಷಗಳಲ್ಲಿ ಧರ್ಮ ಪುನರುಜ್ಜೀವನಗೊಳಿಸಲು ಕೇವಲ 10 ವರ್ಷ ಸಾಕಿತ್ತು. ಆದರೆ ಬಾಬಾಸಾಹೇಬರ ಈ ಆಶಯ ಕೇವಲ ಅವರ "ಬುದ್ಧ ಅಂಡ್ ಹಿಸ್ ಧಮ್ಮ" ಕೃತಿಯಲ್ಲಿ ಅಡಗಿ ಕುಳಿತಿದೆ ಅಷ್ಟೇ.ಈ ನಿಟ್ಟಿನಲ್ಲಿ ಬುಡಕಟ್ಟು ಹಬ್ಬ ಆಚರಣೆಗಳನ್ನು ಈಗಲೂ ಅದ್ದೂರಿಯಾಗಿ ಆಚರಿಸುವವರು ಒಂದೆಡೆಯಾದರೆ ಅದಕ್ಕೆ ವೈದಿಕ touch ಕೊಟ್ಟು ಸ್ವಲ್ಪ standard ಆಗಿರುವವರು ಇನ್ನೊಂದೆಡೆ. ಮತ್ತೊಂದಷ್ಟು ಜನ ಬಾಬಾಸಾಹೇಬರ ಚಿಂತನೆ ತಿಳಿದೂ ತಿಳಿದೂ ಧರ್ಮದ ಬಗ್ಗೆ ಕಡೇಪಕ್ಷ ಕೇವಲ 10% ಗಮನಹರಿಸದ ಜಾಣಗುರುಡರು. 
ಈ ದಿಸೆಯಲ್ಲಿ ಇಂತಹ ಧಾರ್ಮಿಕ ಉದಾಸೀನತೆ, ಬೌದ್ಧ ಧರ್ಮ ಕಟ್ಟುವಲ್ಲಿ ನಮ್ಮ ಜಾಣ ಕುರುಡು ಬುದ್ಧಿ ಎಷ್ಟು ದಿನ ಎಂಬುದು?

    ಮೊನ್ನೆ ಮಗಳ ಹುಟ್ಟು ಹಬ್ಬದ ಪ್ರಯುಕ್ತ ವಿಹಾರವೊಂದಕ್ಕೆ ಹೋಗಿದ್ದೆ. ಸರ್ಕಾರದ ಮತ್ತು ದಾನಿಗಳ ನೆರವಿನಿಂದ ಕಟ್ಟಲಾದ ಆ ವಿಹಾರಕ್ಕೆ ಗೆಳೆಯರೊಬ್ಬರು ಹೇಳಿದಂತೆ ಉಪಾಸಕರ ಕೊರತೆ. ಅದೇ ಪಕ್ಕದಲ್ಲಿ ಗಣಪತಿ ದೇವಸ್ಥಾನ ಇದೆ ಅಲ್ಲಿಗೆ ನೂಕು ನುಗ್ಗಲು! 
ಒಟ್ಟಾರೆ ನಮ್ಮ ಜನರಿಗೆ ಬಾಬಾಸಾಹೇಬರು ಕೊಟ್ಟ ಆರ್ಥಿಕ, ಶೈಕ್ಷಣಿಕ, ರಾಜಕೀಯ ಎಲ್ಲಾ ಅನುಕೂಲ ಗಳು ಬೇಕು. ಆದರೆ ಹೊರಿಸಿದ ಹೊಣೆಗಾರಿಕೆ, ಕರ್ತವ್ಯ ಬೇಡ. ಬೌದ್ಧ ಧರ್ಮ ಎಂಬ ಆ ಧರ್ಮ ಬೇಡ‌. ಈ ದಿಸೆಯಲ್ಲಿ ಇದು ಇನ್ನೆಷ್ಟು ದಿನ ಮುಂದುವರೆಯಬೇಕು? ಬಾಬಾಸಾಹೇಬರು ನೀಡಿದ ಈ ಧಾರ್ಮಿಕ ಕರ್ತವ್ಯವನ್ನು ಇನ್ನೆಷ್ಟು ದಿನ ನಾವು ಕೈಚೆಲ್ಲಿ ಕೂರಬೇಕು? 

ಈ ನಿಟ್ಟಿನಲ್ಲಿ ಈಗಲೂ ತಡವಾಗಿಲ್ಲ. ಪ್ರತಿ ಊರಿನಲ್ಲಿ ಸಾಧ್ಯ ಆಗದಿದ್ದರೂ ಪರವಾಗಿಲ್ಲ ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಪ್ರತಿ ಭಾನುವಾರ ಶೋಷಿತ ಸಮುದಾಯದ ಬಂಧುಗಳು ಒಂದೆಡೆ ಸೇರಬೇಕು. ಬುದ್ಧ ಪೂಜೆ, ಬುದ್ಧ ಗೀತ ಗಾಯನ, ಬುದ್ಧ ಬೋಧನೆ ಯನ್ನು ಕಡೇ ಪಕ್ಷ ಒಂದು ಗಂಟೆ ಕಡ್ಡಾಯವಾಗಿ ಮಾಡಲು ಪ್ರಾರಂಭಿಸಬೇಕು. ಆ ಮೂಲಕ ಬಾಬಾಸಾಹೇಬರ ಬೌದ್ಧ ಕರ್ತವ್ಯವನ್ನು ಕಾರ್ಯರೂಪಕ್ಕಿಳಿಸಲು ಮುಂದಡಿ ಇಡಬೇಕು ಎಂಬುದೇ ಸದ್ಯದ ಕಳಕಳಿ. 
-ರಘೋತ್ತಮ ಹೊಬ

Comments

Popular posts from this blog

ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆಗಳು

  ಹಿಂದೂ ಮತ್ತು ಅಸ್ಪೃಶ್ಯನೊಬ್ಬ ಪ್ರಯಾಣ ಮಾಡುವ ಸಂದರ್ಭದಲ್ಲಿ ಪರಸ್ಪರ ಭೇಟಿಯಾದಾಗ... "ಯಾವಾಗಲಾದರೊಮ್ಮೆ ಅಕ್ಕಪಕ್ಕ ಕುಳಿತು ಪ್ರಯಾಣ ಮಾಡುವ ಸಂದರ್ಭದಲ್ಲಿ ಪರಸ್ಪರ ಜಾತಿ ತಿಳಿಯದಿದ್ದಾಗ ಜಾತಿವಾದಿ ಹಿಂದೂಗಳು ಮತ್ತು ಅಸ್ಪೃಶ್ಯರು ತುಂಬಾ ಆಪ್ತ ಸ್ನೇಹಿತರಂತೆ ವರ್ತಿಸುತ್ತಾರೆ. ಪರಸ್ಪರ ಬೀಡಿ, ಸಿಗರೆಟ್, ಹಣ್ಣುಗಳು, ಎಲೆ- ಅಡಿಕೆ ಹೀಗೆ ಅವರು ಹಂಚಿಕೊಳ್ಳುತ್ತಾರೆ. ಆದರೆ ಇದ್ದಕ್ಕಿದ್ದಂತೆ ಆ ಹಿಂದೂ ವ್ಯಕ್ತಿಗೆ ತಾನು ಇಷ್ಟು ಹೊತ್ತು ಮಾತನಾಡುತ್ತಿದ್ದ ವ್ಯಕ್ತಿ ಅಸ್ಪೃಶ್ಯ ಎಂದು ತಿಳಿಯುತ್ತಿದ್ದಂತೆ ಆತನ ಮನಸ್ಸಿನಲ್ಲಿ ದ್ವೇಷದ ಮನೋಭಾವ ಮೊಳಕೆಯೊಡೆಯುತ್ತದೆ, ತಾನು ಮೋಸಗೊಳಗಾದೆನೆಲ್ಲ ಎಂದು ಆತ ಯೋಚಿಸಲು ಆರಂಭಿಸುತ್ತಾನೆ. ಆತ ಕೋಪಗೊಳ್ಳುತ್ತಾನೆ. ಅಂತಿಮವಾಗಿ ತಾತ್ಕಾಲಿಕ ಆ ಸ್ನೇಹ ಜಗಳ ಮತ್ತು ಬೈಗುಳದ ಮೂಲಕ ಅಂತ್ಯಗೊಳ್ಳುತ್ತದೆ". -ಡಾ.ಬಿ.ಆರ್.ಅಂಬೇಡ್ಕರ್ ( Ambedkar writings and speeches, Vol.17, Part 3, Pp.132) ಕನ್ನಡಕ್ಕೆ: ರಘೋತ್ತಮ ಹೊಬ)

ಮುಂದೊಂದು ದಿನ ಎಲ್ಲರೂ ಬೌದ್ಧರಾಗಲಿದ್ದಾರೆ -ಡಾ.ಅಂಬೇಡ್ಕರ್

  "ಪ್ರತಿಯೊಂದು ಧರ್ಮವು ಉತ್ತರಿಸಬೇಕಾದ ಒಂದು ಪ್ರಶ್ನೆ ಇದೆ. ಅದೆಂದರೆ ತಳ ಸಮುದಾಯ ಮತ್ತು ದೌರ್ಜನ್ಯ ಪೀಡಿತ ಸಮುದಾಯಗಳಿಗೆ ಧರ್ಮವೊಂದು ನೀಡಬಹುದಾದ ನೈತಿಕ ಮತ್ತು ಬೌದ್ಧಿಕ ಬೆಂಬಲವಾದರು ಏನು ಎಂಬುದು? ಧರ್ಮವೊಂದು ಅಂತಹದ್ದೊಂದು ಬೆಂಬಲ ನೀಡಲಿಲ್ಲ ಎಂದರೆ ಅದು ದುರದೃಷ್ಟಕರ ಪರಿಸ್ಥಿತಿಯಲ್ಲಿ ಇದೆ ಎಂದೆ ಅರ್ಥ. ಆದ್ದರಿಂದ  ಹಿಂದೂ ಧರ್ಮವು  ಕೋಟ್ಯಾಂತರ ಸಂಖ್ಯೆಯಲ್ಲಿ ಇರುವ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಜನರಿಗೆ ನೈತಿಕ ಮತ್ತು ಬೌದ್ಧಿಕ ಬೆಂಬಲ ನೀಡುತ್ತದೆಯೇ? ಖಂಡಿತ ಇಲ್ಲ. ಈ ನಿಟ್ಟಿನಲ್ಲಿ ತಮಗೆ ಬೌದ್ಧಿಕ ಮತ್ತು ನೈತಿಕ ಬೆಂಬಲ ನೀಡದ ಹಿಂದೂ ಧರ್ಮದ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಜನರು ಇರಲು ಬಯಸುತ್ತಾರೆ ಎಂದು ಹಿಂದೂಗಳು ಅಪೇಕ್ಷೆ ಪಡಲು ಸಾಧ್ಯವೇ? ಅಂದಹಾಗೆ ಅಂತಹದ್ದೊಂದು ಅಪೇಕ್ಷೆ ಅಕ್ಷರಶಃ ವ್ಯರ್ಥದ್ದು.  "ಯಾಕೆಂದರೆ ಹಿಂದೂ ಧರ್ಮ ಅದು ಜ್ವಾಲಾಮುಖಿಯ ಮೇಲೆ ತೇಲುತ್ತಿದೆ. ಆ ನಿಟ್ಟಿನಲ್ಲಿ ಇಂದು ಅದು(ಜ್ವಾಲಾಮುಖಿ) ನಂದಿದ ಹಾಗೆ ಕಾಣುತ್ತಿದೆ. ಆದರೆ ವಾಸ್ತವ ಅದಲ್ಲ‌‌. ಮೊಂದೊಂದು ದಿನ ಈ ಕೋಟ್ಯಂತರ (ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ) ಮಂದಿಗೆ ತಮ್ಮ ಈ ಹೀನ ಸ್ಥಿತಿಯ ಬಗ್ಗೆ ಅರಿವಾದಾಗ ಮತ್ತು ಅದಕ್ಕೆ ಹಿಂದೂ ಧರ್ಮದ ಸಾಮಾಜಿಕ ತತ್ವ ಕಾರಣ ಎಂದು ತಿಳಿದಾಗ ಆ ಜ್ವಾಲಾಮುಖಿ ಜೀವಂತಗೊಳ್ಳಲಿದೆ. ಇದಕ್ಕೆ ಸಾಕ್ಷಿಯಾಗಿ ರೋಮನ್ ಸಾಮ್ರಾಜ್ಯದಲ್ಲಿ ಕ್ರಿಶ್ಚಿಯ...

ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್: ಮರೆಯಬಾರದ ಮೈಸೂರು ದೊರೆ

  ನಾಲ್ವಡಿ ಕೃಷ್ಣರಾಜ ಒಡೆಯರ್ -ರಘೋತ್ತಮ ಹೊಬ "ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು" ಇದು ಬಾಬಾಸಾಹೇಬ್ ಡಾ.ಅಂಬೇಡ್ಕರ್ ರವರ ಸುಪ್ರಸಿದ್ದ ನಾಣ್ಣುಡಿ. ಅದರಲ್ಲೂ ಹಳೆ ಮೈಸೂರು ಭಾಗದವರು ತಮ್ಮ ಭವ್ಯ ಇತಿಹಾಸವನ್ನು ಮರೆಯಲೇಬಾರದು. ಏಕೆಂದರೆ ರಾಜ್ಯದ ಇತರೆ ಪ್ರದೇಶಗಳಿಗೆ ಹೋಲಿಸಿದರೆ ಹಳೆ ಮೈಸೂರು ಭಾಗ ಅಭಿವೃದ್ಧಿಯಲ್ಲಿ ಮಂಚೂಣಿಯಲ್ಲಿದೆ ಎಂದರೆ ಅದಕ್ಕೆ ಕಾರಣ ಅದರ ಭವ್ಯ ಇತಿಹಾಸ. ಇಂತಹ ಭವ್ಯ ಇತಿಹಾಸದ ನಿರ್ಮಾತೃವಾಗಿ ತನ್ಮೂಲಕ ಮಾದರಿ ಮೈಸೂರಿಗೆ ಮುನ್ನುಡಿ ಬರೆದ ಧೃವತಾರೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್. ಆಳರಸರಿಗೆ ಮಾದರಿಯಾದ ರಾಜಯೋಗಿ.  ನಾಲ್ವಡಿಯವರು ಜನಿಸಿದ್ದು 1884 ರ ಜೂನ್ 4ರಂದು. ತಂದೆ ಶ್ರೀ ಚಾಮರಾಜ ಒಡೆಯರ್, ತಾಯಿ ಕೆಂಪನಂಜಮ್ಮಣ್ಣಿ (ವಾಣಿ ವಿಲಾಸ ಸನ್ನಿಧಾನ). ಬಾಲಕ ಕೃಷ್ಣರಾಜರ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಮೈಸೂರಿನಲ್ಲೇ. ರಾಯಲ್ ಸ್ಕೂಲ್ ಎಂಬ ಪ್ರತ್ಯೇಕ ಶಾಲೆಯಲ್ಲಿ ಇವರ ಸಹಪಾಠಿಗಳಾಗಿದ್ದವರು ಮಿರ್ಜಾ  ಇಸ್ಮಾಯಿಲ್, ಲಕ್ಷ್ಮೀಕಾಂತರಾಜ್ ಅರಸ್, ಮುಂತಾದವರು. 1894 ರಲ್ಲಿ ತಂದೆ ಚಾಮರಾಜ ಒಡೆಯರ್ ರವರ ನಿಧನದಿಂದಾಗಿ ಬಾಲಕ ಕೃಷ್ಣರಾಜನಿಗೆ ರಾಜ್ಯದ ಹೊಣೆ ಬಿದ್ದಾಗ ಅವರಿಗೆ ಕೇವಲ 10 ವರ್ಷ. ಪೆಬ್ರವರಿ 1, 1895 ರಲ್ಲಿ ಯುವರಾಜ ಕೃಷ್ಣರಾಜರಿಗೆ ಪಟ್ಟಾಭಿಷೇಕ ಮಹೋತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ ಬ್ರಿಟಿಷ್ ರಿಜೆನ್ಸಿ ಆಳ್ವಿಕೆಯಲ್ಲಿ ಮೈಸೂರಿನ ಗೌರ್ನರ್ ಮತ್ತು ಮಹಾರಾಜರ ಟ್ಯೂಟರ...