Skip to main content

ಎಸ್ಸಿಗಳು ಅಂದರೆ ಹೇಗಿರ್ತಾರೆ?

ಮೊನ್ನೆ ಒಬ್ಬರು ಏನೋ ಮಾತಾಡ್ತ "ಸಾರ್, ನೀವು ಯಾವ್ ಜಾತಿ" ಅಂದ್ರು. ನಾನು ಎಸ್ಸಿ ಕಣ್ರಿ ಅಂದೆ. "ಸಾರ್, ನೀವು ಎಸ್ಸಿ ಅಂದರೆ ನಂಬೋಕೆ" ಆಗಲ್ಲ ಸಾರ್"! ಅಂದರು. ಪ್ರಶ್ನೆ ಅಂದರೆ ಎಸ್ಸಿಗಳು ಅಂದರೆ ಹೇಗಿರ್ತಾರೆ? ಖಂಡಿತ, ಜಾತಿವಾದಿ ಜನರಲ್ಲಿ ನಾನು ಈ ಪ್ರಶ್ನೆ ಕೇಳುವುದಿಲ್ಲ. ಯಾಕೆಂದರೆ ನಾವು ತಪ್ಪು ಮಾಡುತ್ತಿದ್ದೇವೆ ಎಂದು ಅವರಿಗೆ ಅನಿಸದೆ ಇರುವುದರಿಂದ ನಾವು ಅವರಲ್ಲಿ ಏನೂ ಕೇಳಬಾರದು. ದಮ್ಮಯ್ಯ, ಗುಡ್ಡಯ್ಯ ಖಂಡಿತ ಅದರ ಅಗತ್ಯವಿಲ್ಲ.


 
ಆದರೆ ಅದೇ ಪ್ರಶ್ನೆಯನ್ನು ನಮಗೆ ನಾವೇ ಹಾಕಿಕೊಳ್ಳುವುದಾದರೆ, ಎಸ್ಸಿಗಳು ಹೇಗಿರ್ತಾರೆ? ಅವರಿಗೂ ಒಂದು ಮೂಗು, ಎರಡು ಕಣ್ಣು, ಒಂದು ಬಾಯಿ, ಮೂವತ್ತೆರಡು ಹಲ್ಲುಗಳು, ಎರಡು ಕಿವಿ... ಏನಾದರೂ extra? ಇಲ್ಲ. ಎಲ್ಲರಿಗೂ ಏನು ಇದೆಯೋ ಅದು ಇವರಿಗೂ ಇದೆ‌. ಆದರೆ ಅವರಲ್ಲಿ ಇಲ್ಲದ ಇವರಲ್ಲಿ ಇರುವ ಒಂದು ವಿಚಾರ ಇವರಲ್ಲಿ "ಅವರು ಇವರು, ಇವರನ್ನು ಆಚೆ ನಿಲ್ಲಿಸಬೇಕು ಇವರನ್ನು ಒಳಕೆ ಬಿಡಬೇಕು" ಎಂಬ ಭೇದದ ಮನಸ್ಸು ಇಲ್ಲ. ಅವರಲ್ಲಿ ಇದೆ. ಅವರಲ್ಲಿ ಇರುವ ಆ ಮನಸ್ಥಿತಿಗೆ ಯಾರು ಕಾರಣ? ಅವರೇ. 

ಅಂದಹಾಗೆ ಎಸ್ಸಿಗಳು ಶುಚಿಯಾಗಿರಲ್ಲ ಅದು ಇದು ಅಂತಾನ? ಖಂಡಿತ ಇಲ್ಲ. ಶುಚಿತ್ವಕ್ಕು ಅವರು ಇವರು ಅನ್ನೋದಕ್ಕು ಸಂಬಂಧವೇ ಇರೊಲ್ಲ. ಯಾಕೆಂದರೆ ಎಷ್ಟೋ ಸಂದರ್ಭಗಳಲ್ಲಿ ಅವರದೆ ಜನ ಗಲೀಜಾಗಿದ್ದರು ಅವರು ಅವರ ಜೊತೆಯೇ ಸೇರುತ್ತಾರೆ, ಇವರ ಜೊತೆ ಸೇರುವುದಿಲ್ಲ. ಕಾರಣ? ಮತ್ತದೆ ಮನಸ್ಸಿನ ಸ್ಥಿತಿ State of mind. ಹಿತ್ತಾಳೆ ಪಾತ್ರೆ ಹುಣಸೆಹಣ್ಣಲ್ಲಿ ತೊಳೆಯಬಹುದು ಆದರೆ ಮನಸ್ಸಿನ ಆ ಸ್ಥಿತಿಯನ್ನು, ಭೇದಭಾವದ ವರ್ತನೆಯನ್ನು ಯಾವ ಹುಣಿಸೆ ಹಣ್ಣಿಂದಲೂ ತೊಳೆಯಲು ಸಾಧ್ಯವಿಲ್ಲ. ನಿಜ ಹೇಳಬೇಕೆಂದರೆ, ತೊಳೆಯಲು ಹೋಗಲೇಬಾರದು. ತೊಳೆಯೋಕೆ ಹೋದರೆ ಇವರು ಹುಚ್ಚರಾಗಬೇಕಾಗುತ್ತದೆ. ಯಾಕೆಂದರೆ ಅದು ಹೋಗಲ್ಲ, ಇನ್ನೂ ತೊಳೆಯೋದು ಏನ್ ಬಂತು?

ಒಮ್ಮೊಮ್ಮೆ ಅವರು ನಮ್ಮ ಮನೆಗಳಿಗೆ ಬರುವ ಸಂದರ್ಭ ಬರಬಹುದು. ಪ್ರಶ್ನೆ ಎಂದರೆ ಅಂತಹ ಸಂದರ್ಭದಲ್ಲಿ ನಮ್ಮ ಮನೆ ಪಾವನವಾಗುತ್ತದೆಯೇ? ಇಲ್ಲ. Better ಅವರು ಹೋದ ನಂತರ ನಾವು ಕೂಡ ಯಾವುದಾದರೂ ನೀರಿನಿಂದ ಸಿಂಪಡಿಸಿ ಶುಚಿಗೊಳಿಸಿಕೊಳ್ಳುವುದು ಉತ್ತಮ. ಹಾಗೆಯೇ ಯಾವುದೇ ಕಾರಣಕ್ಕೂ ಅವರ ಮನೆಗಳಿಗೆ ನೀರು ಕೊಡಿ ಅದು ಕೊಡಿ ಇದು ಕೊಡಿ ಎಂದು ಹೋಗಬಾರದು. ಅವರೇ ಕರೆದರೂ ಹೋಗಬಾರದು. "ನೋಡಿ ಸ್ವಾಮಿ, ನಮ್ಮ ಮನೆಗೆ ನೀವು ಬರಲ್ಲ. ನಿಮ್ಮ ಮನೆಗೆ ನಾವು ಬರಲ್ಲ" ಅನ್ನಬೇಕು.

ಜಾತಿ ಮತ್ತು ಅಸ್ಪೃಶ್ಯತೆ ಅದು ಎಸ್ಸಿಗಳ ಸಮಸ್ಯೆಯಲ್ಲ. ಅದನ್ನು ಆಚರಿಸುವವರ ಸಮಸ್ಯೆ. ಪರಿಹಾರ? ಎಸ್ಸಿಗಳು ಆರ್ಥಿಕವಾಗಿ, ಶೈಕ್ಷಣಿಕವಾಗಿ ಕಷ್ಟ ಪಟ್ಟು, ಬರೇ ಕಷ್ಟ ಅಲ್ಲ, ಡಬಲ್ ಕಷ್ಟ ಪಟ್ಟು ಮುಂದಕ್ಕೆ ಬರಬೇಕು. ಡಬಲ್ ಕಷ್ಟ, ಯಾಕೆಂದರೆ ಒಂದು ಸಹಜವಾಗಿ ಸಾಧನೆ ಮಾಡೋಕೆ, ಎರಡನೆಯದು ಅವರು ನೀಡುವ ಅಡೆತಡೆ ಎದುರಿಸೋಕೆ. ಖಂಡಿತ, ಅಂತಹ ಶೈಕ್ಷಣಿಕ ಮತ್ತು ಸ್ವಾಭಿಮಾನದ ಹಣಕಾಸು ಸುಸ್ಥಿತಿ ಗಳಿಸಿದಾಗ ಅವರು ಇವರು, "ನೀವು ಎಸ್ಸಿ ನಾ?" ಎಂದು ಕೇಳುವ ಪ್ರಶ್ಬೆ ಬರುವುದಿಲ್ಲ. ಬಂದರೆ "ಒಂದು ನಿಮಿಷ, ಈಗ ಹೋಗಿ ಒಂದು ಹೊಸ ಸೂಟ್ ಹಾಕಿಕೊಂಡು ಬರುವೆ ಅಥವಾ ಈ ಕಾರು ಬೇಡ, ಬೇರೆ ಕಾರಲ್ಲಿ ಬರ್ಲಾ?" ಅಂದರೆ ಖಂಡಿತ ಅಂತಹವರು ಬಾಯಿ ಮುಚ್ಚಿಕೊಂಡು ಹೋಗುತ್ತಾರೆ. ಅದೇ ನಿಜವಾದ ಸ್ವಾಭಿಮಾನದ ಉತ್ತರವಾಗುತ್ತದೆ.

-ರಘೋತ್ತಮ ಹೊ.ಬ

Comments

Popular posts from this blog

ಪುಲಕೇಶಿ ಹೊಲೆಯರವನೆ? ಚಾಲುಕ್ಯರು ಛಲವಾದಿಗಳೇ? -ರಘೋತ್ತಮ ಹೊ.ಬ

"ಹೊಲಯರು - ಮಾದರು -ರಾಜರು" ಎಂಬ ತಮ್ಮ ಸಂಶೋಧನಾ ಕೃತಿಯಲ್ಲಿ ಸಂಶೋಧಕರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಆದ ಶ್ರೀ ಎಂ.ನಂಜುಂಡಸ್ವಾಮಿ ಐಪಿಎಸ್ ರವರು ಹೊಲೆಯರು ಮತ್ತು ಮಾದಿಗರು ಈ ಎರಡೂ ಜನಾಂಗಗಳು ಕರ್ನಾಟಕ ರಾಜ್ಯದಲ್ಲಿ ರಾಜರಾಗಿದ್ದವರು ರಾಜ್ಯ ಆಳಿದವರು ಎಂದು ಸಂಶೋಧನೆ ಮೂಲಕ ಸಾಧಿಸಿದ್ದಾರೆ. ಅದರಲ್ಲಿ ಬಹು ಮುಖ್ಯವಾದದ್ದು ಬಾದಾಮಿಯ ಚಾಲುಕ್ಯರು ಹೊಲೆಯ ವಂಶಸ್ಥರು ಮತ್ತು ಛಲವಾದಿ ಜನಾಂಗದವರು ಎಂದು ಲೇಖಕರು ತಮ್ಮ ಭಾಷಾಶಾಸ್ತ್ರದ ಸಂಶೋಧನೆಯ ಆಧಾರದಲ್ಲಿ ಹೇಳುತ್ತಾರೆ. "ಹೊಲಯರು - ಮಾದರು -ರಾಜರು" ಆ ಕೃತಿಯಲ್ಲಿ ಪುಟ ಸಂಖ್ಯೆ 96ರಲ್ಲಿ  ನಂಜುಂಡಸ್ವಾಮಿಯವರು ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯ ಮತ್ತು ಬೇಲೂರು ಚನ್ನಕೇಶವ ದೇವಾಲಯಗಳಲ್ಲಿ ಹೊಲೆಯನಿಗೆ ನೀಡುವ ಗೌರವ ಉಲ್ಲೇಖಿಸುತ್ತ "ಆ ಗೌರವ ರಾಜನಿಗೆ ನೀಡುವ ಗೌರವದಂತಿದೆ. ಹೊಲೆಯ ರಾಜನಿಂದಲೇ ಆ ದೇವಾಲಯ ನಿರ್ಮಾಣವಾಗಿರುವುದರ ಸಂಕೇತವಾಗಿ ಆತನಿಗೆ ಈಗಲೂ ಆ ಗೌರವ ಸಿಗುತ್ತಿದೆ" ಎಂದು ಹೇಳುತ್ತಾರೆ. ಇನ್ನೂ ಬಾಗಲಕೋಟೆಯ ದೇಸಾಯಿಗಳು ಈಗಲೂ ಹೊಲೆಯರ ಮನೆಯಿಂದ ಬೆಂಕಿ ತರುವ ಸಂಪ್ರದಾಯವನ್ನು ಸಹ ಲೇಖಕರು ಉಲ್ಲೇಖಿಸುತ್ತಾರೆ. ಆ  ಹಿನ್ನೆಲೆಯಲ್ಲಿ "ಹಿಂದೆ ನಾವು ಈ ನಾಡನ್ನು ಆಳಿದ ರಾಜರು. ಅದಕ್ಕಾಗಿ ನಮ್ಮ ಬಳಿ ಸಾಂಕೇತಿಕವಾಗಿ ಈಗಲೂ ಬಂದು ದೇಸಾಯಿಗಳು ಬೆಂಕಿ ಪಡೆದುಕೊಳ್ಳುತ್ತಿದ್ದಾರೆ. ಈಗ ನಮ್ಮನ್ನು ಛಲವಾದಿಗಳು ಎನ್ನುವರು. ಹಿಂದೆ ನ...

ಕೆ ಆರ್ ಎಸ್.ನಿರ್ಮಾಣ: ವಾಸ್ತವ ಇತಿಹಾಸ

        - ರಘೋತ್ತಮ ಹೊಬ  ಅದು 1902 ನೇ ಇಸವಿ. ಏಷ್ಯಾದಲ್ಲೆ ಪ್ರಪ್ರಥಮ ಜಲವಿದ್ಯುತ್ ಉತ್ಪಾದನಾ  ಕೇಂದ್ರ ಸ್ಥಾಪನೆಯಾದ ವರ್ಷ. ಅಂದಹಾಗೆ ಅದನ್ನು ಸ್ಥಾಪಿಸಿದವರು ಮೈಸೂರಿನ ಅಂದಿನ ಮಹಾರಾಜ #ನಾಲ್ವಡಿ_ಕೃಷ್ಣರಾಜಒಡೆಯರ್‍ರವರು. ಬ್ರಿಟಿಷರೊಂದಿಗೆ  ಕೋಲಾರ ಚಿನ್ನದ ಗಣಿಗೆ ವಿದ್ಯುತ್ ಸರಬರಾಜು ಮಾಡುವ ಒಪ್ಪಂದ ಮಾಡಿಕೊಂಡಿದ್ದ ಅವರು ಆ ನಿಟ್ಟಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಶಿವನಸಮುದ್ರ ಎಂಬಲ್ಲಿ ಪ್ರಪ್ರಥಮ ಜಲವಿದ್ಯುತ್ ಕೇಂದ್ರ ಸ್ಥಾಪಿಸಿದರು ಮತ್ತು ಆ ಕಾಲದಲ್ಲೆ 30,000 ವೋಲ್ಟ್  ವಿದ್ಯುತ್‍ಅನ್ನು ಕೋಲಾರದ ಚಿನ್ನದÀ ಗಣಿಗೆ ವರ್ಗಾಯಿಸಿದರು. ಈ ಸಂದರ್ಭದಲ್ಲಿ ಒಂದು ಮಾತು ಅದೇನೆಂದರೆ ಆಗಿನ್ನು ಸರ್.ಎಂ.ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನಕ್ಕೆ ಪ್ರವೇಶ ಪಡೆದೇ ಇರಲಿಲ್ಲ!    ಇರಲಿ, ಜಲವಿದ್ಯುತ್ ಕೇಂದ್ರವನ್ನೇನೋ ಒಡೆಯರ್‍ರವರು ಸ್ಥಾಪಿಸಿದರು. ಆದರೆ ವಿದ್ಯುತ್ ಉತ್ಪಾದನೆಗೆ ನೀರು ವರ್ಷಾಕಾಲ ದೊರೆಯುತ್ತದೆಯೇ? ಖಂಡಿತ ಇಲ್ಲ. ಮಳೆ ಬಂದಾಗ ವಿದ್ಯುತ್. ಇಲ್ಲದಿದ್ರೆ ನೋ ವಿದ್ಯುತ್! ಬೇಸಿಗೆ ಕಾಲದಲ್ಲಂತೂ ಒಂದು ವೋಲ್ಟ್ ಉತ್ಪತ್ತಿ ಕೂಡ ಕಷ್ಟವಾಗಿತ್ತು. ಇದರಿಂದ ಚಿನ್ನದ ಗಣಿಗೆ ನಿರಂತರ ವಿದ್ಯುತ್ ಸರಬರಾಜು ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದ್ದ ಒಡೆಯರ್‍ರಿಗೆ  ಅದರ ಪೂರೈಕೆ ಸವಾಲಿನ ಕೆಲಸವಾಗಿತ್ತು. ಈ ಕಾರಣಕ್ಕಾಗಿ ಅಂದರೆ ವಿದ್ಯುತ್ ಉತ್ಪಾದನ ಕೇಂದ್ರಕ್ಕೆ ನ...

ಮುಚ್ಚಿಡಲ್ಪಟ್ಟ ಅಂಬೇಡ್ಕರ್ ರ ಭವ್ಯ ಇತಿಹಾಸ -ರಘೋತ್ತಮ ಹೊ.ಬ

  ಬಾಬಾಸಾಹೇಬ್ ಡಾ||ಅಂಬೇಡ್ಕರ್ ರವರ ಬಗ್ಗೆ ಈ ದೇಶದ ಜನತೆಗೆ ಏನು ಗೊತ್ತು? ಗೊತ್ತಿರುವುದಿಷ್ಟೆ, ಅಂಬೇಡ್ಕರರು ಯಾರೂ ಮುಟ್ಟಿಸಿಕೊಳ್ಳಲಾಗದ ಒಂದು ಕೀಳು ಜಾತಿಯಲಿ ಹುಟ್ಟಿದರು ಬಾಲ್ಯದಿಂದಲೆ ಅಸ್ಪೃಶ್ಯತೆಯ ನೋವನ್ನು ಅನುಭವಿಸಿದರು. ತಮ್ಮ ತಂದೆಯನ್ನು ನೋಡಲು ಗಾಡಿಯಲಿ ಹೋಗುತ್ತಿದ್ದಾಗ ಗಾಡಿಯಿಂದ ತಳ್ಳಲ್ಪಟ್ಟರು. ಹೀಗೆ ಅವಮಾನಕ್ಕೊಳಗಾದ ಅಂಬೇಡ್ಕರರು ಮುಂದೆ ಉನ್ನತ ಜ್ಞಾನಪಡೆದು ಈ ದೇಶದ ‘ಸಂವಿಧಾನ ಶಿಲ್ಪಿ' ಎನಿಸಿಕೊಂಡರು. ಅಸ್ಪೃಶ್ಯರ ಉದ್ಧಾರಕ್ಕಾಗಿ ಹೋರಾಡಿದರು ಎಂಬುದಷ್ಟೆ. ಬಹುಶಃ ಇದಕ್ಕಿಂತ ಹೆಚ್ಚಿಗೆ ಅಂಬೇಡ್ಕರರ ಬಗ್ಗೆ ಈ ದೇಶದ ಜನತೆಗೆ ಗೊತ್ತಿರುವುದು ಸಾಧ್ಯವಿಲ್ಲ. ಅಥವಾ ಮೇಲೆ ಹೇಳಿರುವುದೇ ಹೆಚ್ಚಿರಬೇಕು! ದಲಿತರಿಗೆ ಮೀಸಲಾತಿ ತಂದುಕೊಟ್ಟದಷ್ಟೆ ಅವರ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ತನ್ಮೂಲಕ ಅಂಬೇಡ್ಕರ್ ಎಂಬ"ಮಹಾನ್ ಇತಿಹಾಸವನ್ನು" ಮುಚ್ಚಲಾಗುತ್ತಿದೆ!       ಹಾಗಿದ್ದರೆ ಅಂಬೇಡ್ಕರ್ ರವರ ಸಾಧನೆ ಇದಿಷ್ಟು ಮಾತ್ರವಾ? ಅಥವಾ ಇನ್ನೇನು ಇಲ್ಲವಾ? ಯಾಕೆಂದರೆ 2006ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕದ ಅಧ್ಯಕ್ಷ   ಜಾರ್ಜ್ ಬುಷ್ "ಗಾಂಧಿ, ಠಾಗೋರ್ ಮತ್ತು ನೆಹರೂ"ರವರುಗಳನ್ನು ನವಭಾರತದ ನಿರ್ಮಾತೃಗಳೆನ್ನುತ್ತಾರೆ. ಅಂಬೇಡ್ಕರ್ ರವರನ್ನು ಈ ಪರಿಯಲ್ಲಿ ಇತಿಹಾಸದಲ್ಲಿ ಕುಬ್ಜರನ್ನಾಗಿಸುವ ಅಥವಾ ಮರೆಮಾಚುವ ಪ್ರಯತ್ನ ನಿರಂತರವಾಗಿ ನಡೆಯುತ್ತಿರುವಾಗ ಬುಷ್‍ ರಂತಹವರು ಇದಕ್ಕಿಂತ ಹೆಚ್ಚ...