Skip to main content

ಎಸ್ಸಿಗಳು ಅಂದರೆ ಹೇಗಿರ್ತಾರೆ?

ಮೊನ್ನೆ ಒಬ್ಬರು ಏನೋ ಮಾತಾಡ್ತ "ಸಾರ್, ನೀವು ಯಾವ್ ಜಾತಿ" ಅಂದ್ರು. ನಾನು ಎಸ್ಸಿ ಕಣ್ರಿ ಅಂದೆ. "ಸಾರ್, ನೀವು ಎಸ್ಸಿ ಅಂದರೆ ನಂಬೋಕೆ" ಆಗಲ್ಲ ಸಾರ್"! ಅಂದರು. ಪ್ರಶ್ನೆ ಅಂದರೆ ಎಸ್ಸಿಗಳು ಅಂದರೆ ಹೇಗಿರ್ತಾರೆ? ಖಂಡಿತ, ಜಾತಿವಾದಿ ಜನರಲ್ಲಿ ನಾನು ಈ ಪ್ರಶ್ನೆ ಕೇಳುವುದಿಲ್ಲ. ಯಾಕೆಂದರೆ ನಾವು ತಪ್ಪು ಮಾಡುತ್ತಿದ್ದೇವೆ ಎಂದು ಅವರಿಗೆ ಅನಿಸದೆ ಇರುವುದರಿಂದ ನಾವು ಅವರಲ್ಲಿ ಏನೂ ಕೇಳಬಾರದು. ದಮ್ಮಯ್ಯ, ಗುಡ್ಡಯ್ಯ ಖಂಡಿತ ಅದರ ಅಗತ್ಯವಿಲ್ಲ.


 
ಆದರೆ ಅದೇ ಪ್ರಶ್ನೆಯನ್ನು ನಮಗೆ ನಾವೇ ಹಾಕಿಕೊಳ್ಳುವುದಾದರೆ, ಎಸ್ಸಿಗಳು ಹೇಗಿರ್ತಾರೆ? ಅವರಿಗೂ ಒಂದು ಮೂಗು, ಎರಡು ಕಣ್ಣು, ಒಂದು ಬಾಯಿ, ಮೂವತ್ತೆರಡು ಹಲ್ಲುಗಳು, ಎರಡು ಕಿವಿ... ಏನಾದರೂ extra? ಇಲ್ಲ. ಎಲ್ಲರಿಗೂ ಏನು ಇದೆಯೋ ಅದು ಇವರಿಗೂ ಇದೆ‌. ಆದರೆ ಅವರಲ್ಲಿ ಇಲ್ಲದ ಇವರಲ್ಲಿ ಇರುವ ಒಂದು ವಿಚಾರ ಇವರಲ್ಲಿ "ಅವರು ಇವರು, ಇವರನ್ನು ಆಚೆ ನಿಲ್ಲಿಸಬೇಕು ಇವರನ್ನು ಒಳಕೆ ಬಿಡಬೇಕು" ಎಂಬ ಭೇದದ ಮನಸ್ಸು ಇಲ್ಲ. ಅವರಲ್ಲಿ ಇದೆ. ಅವರಲ್ಲಿ ಇರುವ ಆ ಮನಸ್ಥಿತಿಗೆ ಯಾರು ಕಾರಣ? ಅವರೇ. 

ಅಂದಹಾಗೆ ಎಸ್ಸಿಗಳು ಶುಚಿಯಾಗಿರಲ್ಲ ಅದು ಇದು ಅಂತಾನ? ಖಂಡಿತ ಇಲ್ಲ. ಶುಚಿತ್ವಕ್ಕು ಅವರು ಇವರು ಅನ್ನೋದಕ್ಕು ಸಂಬಂಧವೇ ಇರೊಲ್ಲ. ಯಾಕೆಂದರೆ ಎಷ್ಟೋ ಸಂದರ್ಭಗಳಲ್ಲಿ ಅವರದೆ ಜನ ಗಲೀಜಾಗಿದ್ದರು ಅವರು ಅವರ ಜೊತೆಯೇ ಸೇರುತ್ತಾರೆ, ಇವರ ಜೊತೆ ಸೇರುವುದಿಲ್ಲ. ಕಾರಣ? ಮತ್ತದೆ ಮನಸ್ಸಿನ ಸ್ಥಿತಿ State of mind. ಹಿತ್ತಾಳೆ ಪಾತ್ರೆ ಹುಣಸೆಹಣ್ಣಲ್ಲಿ ತೊಳೆಯಬಹುದು ಆದರೆ ಮನಸ್ಸಿನ ಆ ಸ್ಥಿತಿಯನ್ನು, ಭೇದಭಾವದ ವರ್ತನೆಯನ್ನು ಯಾವ ಹುಣಿಸೆ ಹಣ್ಣಿಂದಲೂ ತೊಳೆಯಲು ಸಾಧ್ಯವಿಲ್ಲ. ನಿಜ ಹೇಳಬೇಕೆಂದರೆ, ತೊಳೆಯಲು ಹೋಗಲೇಬಾರದು. ತೊಳೆಯೋಕೆ ಹೋದರೆ ಇವರು ಹುಚ್ಚರಾಗಬೇಕಾಗುತ್ತದೆ. ಯಾಕೆಂದರೆ ಅದು ಹೋಗಲ್ಲ, ಇನ್ನೂ ತೊಳೆಯೋದು ಏನ್ ಬಂತು?

ಒಮ್ಮೊಮ್ಮೆ ಅವರು ನಮ್ಮ ಮನೆಗಳಿಗೆ ಬರುವ ಸಂದರ್ಭ ಬರಬಹುದು. ಪ್ರಶ್ನೆ ಎಂದರೆ ಅಂತಹ ಸಂದರ್ಭದಲ್ಲಿ ನಮ್ಮ ಮನೆ ಪಾವನವಾಗುತ್ತದೆಯೇ? ಇಲ್ಲ. Better ಅವರು ಹೋದ ನಂತರ ನಾವು ಕೂಡ ಯಾವುದಾದರೂ ನೀರಿನಿಂದ ಸಿಂಪಡಿಸಿ ಶುಚಿಗೊಳಿಸಿಕೊಳ್ಳುವುದು ಉತ್ತಮ. ಹಾಗೆಯೇ ಯಾವುದೇ ಕಾರಣಕ್ಕೂ ಅವರ ಮನೆಗಳಿಗೆ ನೀರು ಕೊಡಿ ಅದು ಕೊಡಿ ಇದು ಕೊಡಿ ಎಂದು ಹೋಗಬಾರದು. ಅವರೇ ಕರೆದರೂ ಹೋಗಬಾರದು. "ನೋಡಿ ಸ್ವಾಮಿ, ನಮ್ಮ ಮನೆಗೆ ನೀವು ಬರಲ್ಲ. ನಿಮ್ಮ ಮನೆಗೆ ನಾವು ಬರಲ್ಲ" ಅನ್ನಬೇಕು.

ಜಾತಿ ಮತ್ತು ಅಸ್ಪೃಶ್ಯತೆ ಅದು ಎಸ್ಸಿಗಳ ಸಮಸ್ಯೆಯಲ್ಲ. ಅದನ್ನು ಆಚರಿಸುವವರ ಸಮಸ್ಯೆ. ಪರಿಹಾರ? ಎಸ್ಸಿಗಳು ಆರ್ಥಿಕವಾಗಿ, ಶೈಕ್ಷಣಿಕವಾಗಿ ಕಷ್ಟ ಪಟ್ಟು, ಬರೇ ಕಷ್ಟ ಅಲ್ಲ, ಡಬಲ್ ಕಷ್ಟ ಪಟ್ಟು ಮುಂದಕ್ಕೆ ಬರಬೇಕು. ಡಬಲ್ ಕಷ್ಟ, ಯಾಕೆಂದರೆ ಒಂದು ಸಹಜವಾಗಿ ಸಾಧನೆ ಮಾಡೋಕೆ, ಎರಡನೆಯದು ಅವರು ನೀಡುವ ಅಡೆತಡೆ ಎದುರಿಸೋಕೆ. ಖಂಡಿತ, ಅಂತಹ ಶೈಕ್ಷಣಿಕ ಮತ್ತು ಸ್ವಾಭಿಮಾನದ ಹಣಕಾಸು ಸುಸ್ಥಿತಿ ಗಳಿಸಿದಾಗ ಅವರು ಇವರು, "ನೀವು ಎಸ್ಸಿ ನಾ?" ಎಂದು ಕೇಳುವ ಪ್ರಶ್ಬೆ ಬರುವುದಿಲ್ಲ. ಬಂದರೆ "ಒಂದು ನಿಮಿಷ, ಈಗ ಹೋಗಿ ಒಂದು ಹೊಸ ಸೂಟ್ ಹಾಕಿಕೊಂಡು ಬರುವೆ ಅಥವಾ ಈ ಕಾರು ಬೇಡ, ಬೇರೆ ಕಾರಲ್ಲಿ ಬರ್ಲಾ?" ಅಂದರೆ ಖಂಡಿತ ಅಂತಹವರು ಬಾಯಿ ಮುಚ್ಚಿಕೊಂಡು ಹೋಗುತ್ತಾರೆ. ಅದೇ ನಿಜವಾದ ಸ್ವಾಭಿಮಾನದ ಉತ್ತರವಾಗುತ್ತದೆ.

-ರಘೋತ್ತಮ ಹೊ.ಬ

Comments

Popular posts from this blog

Why did Dr Ambedkar converted to Buddhism? -Raghothama Hoba

Yesterday, someone asked me why did Dr.Ambedkar converted to "Buddhism",  But next series of questions he forget to ask me is “Why untouchability is still practiced against some caste in society? Why some caste people were kept away from temples? Why some caste and people belonging to those caste were being denied opportunities in every field of life such as business, trade, commerce, private companies, hotels, markets etc,. Why some caste people were meant to do menial jobs, scavenging and other things? To continue, why some caste people still being denied or avoided to get higher education? Why some caste people are unnecessarily tortured in working areas whether it is government or private. Answer to all this is untouchability. Let we call those people who are being subjected to untouchability as untouchables or Dalits or scheduled caste people. Now one has to think himself, what could happen if someone kept away from temples or made to stand outside the temple? Won’t it h...

ಜಾತಿ ಮತ್ತು ಅಸಮಾನತೆಯನ್ನು ಬುದ್ಧರು ಹೇಗೆ ಪ್ರಶ್ನಿಸುತ್ತಾರೆಂದರೆ...

- ರಘೋತ್ತಮ ಹೊಬ ತ್ರಿಪಿಟಕಗಳಲ್ಲಿ ಅದರಲ್ಲೂ ಸುತ್ತ ಪಿಟಕದ ಅಸ್ಸಲಾಯನ ಸುತ್ತ ಎಂಬ ಕತೆಯಲ್ಲಿ ಬುದ್ಧರು ಜಾತಿ ಮತ್ತು ಅಸಮಾನತೆ ವಿರೋಧಿಸಿ ಮಾತನಾಡುತ್ತಾರೆ. ಬುದ್ಧರು ಹೇಳುವುದು "ಶ್ರೇಷ್ಠ ಕುಲದ ಮಹಿಳೆಯರು ಕೂಡ ಋತು ಚಕ್ರ ಅನುಭವಿಸುತ್ತಾರೆ, ಗರ್ಭ ಧರಿಸುತ್ತಾರೆ. ಅವರಿಗೂ ಹೆರಿಗೆಯಾಗುತ್ತದೆ, ಮಗು ಆಗುತ್ತದೆ. ಇಂತಹ ಪ್ರಾಕೃತಿಕ ಪದ್ಧತಿ ಹೊರತುಪಡಿಸಿ ಅವರಿಗೆ ಇತರೆ ಯಾವುದಾದರೂ ಬೇರೆ ವಿಧಾನ ಇದೆಯೇ? ಹಾಗಿದ್ದರೆ ಅವರು ಹೇಗೆ ಇತರರಿಗಿಂತ ಭಿನ್ನ? ಅಥವಾ ಶ್ರೇಷ್ಠ?" ಹೀಗೆ ಬುದ್ಧರು ಅಸಮಾನತೆ ಮತ್ತು ಜಾತಿಯನ್ನು ಪ್ರಶ್ನಿಸುತ್ತಾರೆ.  ಹಾಗೆ ಅದೇ ಕತೆಯಲ್ಲಿ ಬುದ್ಧರು ಹೇಳುವುದು "ಶ್ರೇಷ್ಠ ಕುಲದ ಒಬ್ಬ ಯುವಕ ಮತ್ತು ಅದೇ ಕುಲದ ಒಬ್ಬ ಕನ್ಯೆ ಇಬ್ಬರೂ ಕೂಡಿದರೆ ಮನುಷ್ಯ ಜೀವಿ ಜನಿಸದೆ ಯಾವುದಾದರೂ ಪ್ರಾಣಿ ಜನಿಸುವುದೇ? ಹೀಗಿರುವಾಗ ಅವರು ಹೇಗೆ ಶ್ರೇಷ್ಠ?". ಹೇಳಿ ಹೇಗೆ ಶ್ರೇಷ್ಠ? ***

ಅಂದು ಪರಿಶಿಷ್ಟರ ಮೀಸಲಾತಿ ರದ್ದುಮಾಡಲು ಹೊರಟಾಗ ಅಂಬೇಡ್ಕರ್ ರವರ ಆಕ್ರೋಶ ಹೇಗಿತ್ತೆಂದರೆ... -ರಘೋತ್ತಮ ಹೊ.ಬ

1947 ಜನವರಿ ತಿಂಗಳ ಒಂದು ದಿನ "ಸಂವಿಧಾನ ಸಭೆ" (Constituent assembly) ಸಭೆ ಸೇರುತ್ತದೆ. ಅಂದು ಆ ಸಭೆ ಸೇರುವ ಉದ್ದೇಶ ಅರಿತಿದ್ದ ಬಾಬಾಸಾಹೇಬ್ ಅಂಬೇಡ್ಕರರು ಸಭೆಯ ಸದಸ್ಯರಾಗಿದ್ದರು ಕೂಡ ಸಭೆಯಿಂದ ದೂರ ಉಳಿದಿದ್ದರು. ಯಥಾಪ್ರಕಾರ ಸಂವಿಧಾನ ಸಭೆಯ "ಅಲ್ಪಸಂಖ್ಯಾತರ ಉಪಸಮಿತಿ"ಯ ಅಧ್ಯಕ್ಷರಾದ ಸರ್ದಾರ್ ವಲ್ಲಭಭಾಯ್ ಪಟೇಲ್ ಆ ದಿನ ಒಂದು ತಂತ್ರಗೈದು ಸಮಿತಿಯ ಅಧ್ಯಕ್ಷರಾದ ತಾವೇ ಹಾಜರಿದ್ದರೂ ಆಚಾರ್ಯ ಕೃಪಲಾನಿಯವರನ್ನು ಅಂದು ಸಭೆಯ ಅಧ್ಯಕ್ಷತೆ ವಹಿಸಿಕೊಳ್ಳುವಂತೆ ತಿಳಿಸುತ್ತಾರೆ. ಅಲ್ಲದೇ ಸರ್ದಾರ್ ವಲ್ಲಭಭಾಯ್ ಪಟೇಲರು ಅಂದು ಮಂಡಿಸುವ ನಿಲುವನ್ನು ಬೆಂಬಲಿಸುವ ಸಮಿತಿಯ ಸದಸ್ಯರುಗಳಿಗೆ ರಾಜ್ಯಪಾಲ, ಮುಖ್ಯಮಂತ್ರಿ.. ಹೀಗೆ ವಿವಿಧ ಹುದ್ದೆಗಳನ್ನು ನೀಡುವ ಆಮಿಷ ಒಡ್ಡಲಾಗಿರುತ್ತದೆ ! ಈ ಹಿನ್ನೆಲೆಯಲ್ಲಿ ಅಂದು ಸಭೆ ಸೇರಿದ ಸಂವಿಧಾನ ಸಭೆಯ ಆ "ಅಲ್ಪಸಂಖ್ಯಾತರ ಉಪಸಮಿತಿ" ಕೈಗೊಂಡ ನಿರ್ಣಯವೆಂದರೆ ಎಸ್ಸಿ, ಎಸ್ಟಿಗಳು ಸೇರಿದಂತೆ ಎಲ್ಲಾ ವರ್ಗಗಳ ಜನರಿಗೂ ಮೀಸಲಾತಿ ರದ್ದುಗೊಳಿಸುವ ನಿರ್ಧಾರ!! ಅಂದಹಾಗೆ ಹೀಗೆ ಎಸ್ಸಿ, ಎಸ್ಟಿಗಳಿಗೆ ಮೀಸಲಾತಿ ರದ್ದುಗೊಳಿಸುವ ನಿರ್ಧಾರ ಪ್ರಕಟಗೊಳ್ಳುತ್ತಿದ್ದಂತೆ ಮಾರನೇ ದಿನದ "ಹಿಂದೂಸ್ತಾನ್ ಟೈಮ್ಸ್" ಮತ್ತು "ಸ್ಟೇಟ್ಸ್ ಮನ್" ನಂತಹ ಇಂಗ್ಲಿಷ್ ಪತ್ರಿಕೆಗಳು ಈ ಸುದ್ದಿಗೆ ನೀಡಿದ ಹೆಡ್ ಲೈನ್ಸ್ ಏನು ಗೊತ್ತೇ? ಇಂದು Red letter day (ಇತಿಹಾಸದಲ್ಲಿ...