Skip to main content

ಜಾತಿ ದ್ವೇಷ ಮತ್ತು ನಾನು

ನಾನು ವಯಕ್ತಿಕವಾಗಿ ಜಾತಿವಾದಿಯಲ್ಲ. ಅಂಬೇಡ್ಕರ್ ವಾದ ಅಂತಹ ಜಾತಿವಾದಿ ಮನಸ್ಥಿತಿ ಕಲಿಸುವುದಿಲ್ಲ. ನಿಜ, ನಾನೊಂದು ಜಾತಿಯಲ್ಲಿ ಹುಟ್ಟಿದ್ದೇನೆ. ಅದು ನಾನು ಪುಣ್ಯ ಮಾಡಿದ್ದೇನೆ ಅಥವಾ ಪಾಪ ಮಾಡಿದ್ದೇನೆ ಎಂಬಂತೆ ಅಲ್ಲ, ಬದಲಿಗೆ ಭಾರತದ ಸಾಮಾಜಿಕ ವ್ಯವಸ್ಥೆ ಹಾಗೆ ಇದೆ. ಆ ಕಾರಣಕ್ಕಾಗಿ ನಿರ್ದಿಷ್ಟ ಜಾತಿಯೊಂದರಲ್ಲಿ ಹುಟ್ಟಿದ್ದೇನೆ ಅಷ್ಟೇ.

ಆ ಜಾತಿಯಲ್ಲಿ ಹುಟ್ಟಿದ್ದೇನೆ ಅಂದ ಮಾತ್ರಕ್ಕೆ ನಾನು ಇತರ ಜಾತಿಗಳವರನ್ನು ಯಾವ್ಯಾವುದೋ ಕಾರಣಕ್ಕೋ ಸದಾ ದ್ವೇಷಿಸುತ್ತಲೇ ಇರಬೇಕು, ದ್ವೇಷಿಸಲೇ ಬೇಕು ಎಂಬಂತೆ ಅಲ್ಲ. ಕ್ಷಮಿಸಿ, ಯಾರಾದರೂ ಹಾಗೆ ತಿಳಿದುಕೊಂಡಿದ್ದರೆ ಅದು ತಪ್ಪು. ನಾನು ಯಾವುದೇ ಜಾತಿಯನ್ನು , ಜಾತಿಯವರನ್ನು ದ್ವೇಷಿಸುವುದಿಲ್ಲ. ಹಾಗಂತ ನನ್ನ ಸ್ವಂತ ಜಾತಿಯ ಬಗ್ಗೆ ನನಗೆ ಅಭಿಮಾನವಿಲ್ಲವೆ? ಇದೇ. ಆದರೆ ಅದರರ್ಥ; ಬೇರೆ ಜಾತಿಯನ್ನು ದ್ವೇಷಿಸು ಎನ್ನುವುದಲ್ಲ, ದ್ವೇಷಿಸುತ್ತ ಕೂರುವುದು ಸಾಧ್ಯವಿಲ್ಲ, ದ್ವೇಷಿಸುವುದೂ ಇಲ್ಲ. 

ಜಾತಿ ಮನೋಭಾವ ಅದು ಎರಡಲಗಿನ ಕತ್ತಿ. ಹೇಗೆ ಒಂದು ಜಾತಿಯವರನ್ನು ಅವರು ಹಾಗೆ ಮಾಡಿದರು ಹೀಗೆ ಮಾಡಿದರು ಎಂದು ಹೇಳುತ್ತದೆಯೋ at the same time ಮತ್ತೊಂದು ಜಾತಿಯವರಾಗಿ ನಾವು ಕೂಡ ಅಂತಹದ್ದೆ ತಪ್ಪುಗಳನ್ನು ಮಾಡುತ್ತಿರುತ್ತೇವೆ. 

ಮತ್ತೊಂದು ವಿಚಾರ ನಾವು ಈ ಪ್ರಪಂಚದಲ್ಲಿ ಸಾಮಾನ್ಯ ಮನುಷ್ಯರಾಗಿ ಎಷ್ಟು ವರ್ಷ ಬದುಕುತ್ತೇವೆ? ಎಂಬುದು. ಒಂದು ಸಾವಿರ ವರ್ಷ? ಹಾಗಿದ್ದರೆ ಜಾತಿ ಹೊತ್ತುಕೊಂಡು ಮೆರೆಯೋಣ. ಆದರೆ ವಾಸ್ತವ we are impermanent. ಪ್ರಶ್ನೆ ಎಂದರೆ ಜಾತಿ ಯಾಕೆ permanent ಆಗಿರಬೇಕು?

ವಯಕ್ತಿಕವಾಗಿ ನಾನು ಮತ್ತೊಂದು ಜಾತಿಯನ್ನು, ಅವರು ಯಾವುದೇ ಜಾತಿ ಇರಲಿ ದ್ವೇಷಿಸುವುದಿಲ್ಲ, ದ್ವೇಷಿಸುವ ಮನಸ್ಥಿತಿ ಬೆಳೆಸಿಕೊಳ್ಳುವುದು ಸಾಧ್ಯವೂ ಇಲ್ಲ. ಮತ್ತೊಂದು ಜಾತಿಯನ್ನು, ಆ ಜಾತಿಯ ಜನರನ್ನು ದ್ವೇಷಿಸುವ ಮನೋಭಾವ ಅದೊಂದು ಮಾನಸಿಕ ರೋಗ. ಆ ರೋಗ ಬೆಳೆಸಿಕೊಂಡಷ್ಟು ಕೂಡ ನಮ್ಮ ಆರೋಗ್ಯ ಹದಗೆಡುತ್ತದೆ. ಯಾಕೆಂದರೆ ಮತ್ತೊಂದು ಜಾತಿಯನ್ನು ನೀನು ಯಾವ ಮಟ್ಟಕ್ಕೆ ದ್ವೇಷಿಸಬಹುದು? Ultimate ಆಗಿ ಆ ಮತ್ತೊಂದು ಜಾತಿಯ ಎಲ್ಲರನ್ನೂ ಮುಗಿಸುವ ಮಟ್ಟಕ್ಕೆ? ಕಾನೂನು ಅದಕ್ಕೆ ಅವಕಾಶ ಕೊಡುತ್ತದೆಯೇ? ಅಂತಹ ಜಾತಿ ರೋಗಿಯನ್ನು ಅದು ಒದ್ದು ಒಳ ಹಾಕುತ್ತದೆಯಲ್ಲವೇ? 

ಆದ್ದರಿಂದ "ಜಾತಿ ದ್ವೇಷ" ಅದೊಂದು ಮಾನಸಿಕ ರೋಗ (ಮುಂದಿನ ದಿನಗಳಲ್ಲಿ ಅಂತಹ ಜಾತಿ ರೋಗಕ್ಕೆ treatment ನೀಡುವ ಕ್ಲಿನಿಕ್ ಗಳು ಬರಬಹುದು). ಅದರಿಂದ ಗುಣಹೊಂದುವ ದಾರಿ ನಾವು ನಿರಂತರ ಕಂಡುಕೊಳ್ಳಬೇಕು, ಅಂತಹ ಪ್ರಯತ್ನದಲ್ಲಿ ಮನುಷ್ಯರಾಗಿ ನಾವು ಭಾಗಿಯಾಗಲೇಬೇಕು. ಆಡೋದು ಆಚಾರ, ತಿನ್ನೋದು ಬದನೆಕಾಯಿ ಎಂಬಂತಾಗಬಾರದು. ಆ ಕಾರಣ ನಾನಂತು ವಯಕ್ತಿಕವಾಗಿ ಇನ್ನೊಂದು ಜಾತಿಯ ದ್ವೇಷಿಯಾಗಲಾರೆ. ಅಕಸ್ಮಾತ್ ಅಂತಹ ರೋಗ ನನ್ನಲ್ಲಿ ಇದ್ದರೆ ಅದರಿಂದ ಗುಣಮುಖನಾಗುವ ಪ್ರಯತ್ನದಲ್ಲಿ ಜೀವನದುದ್ದಕ್ಕೂ ನಿರತನಾಗುವೆ. 

-ರಘೋತ್ತಮ ಹೊ.ಬ

#ಜಾತಿ #ಅಂಬೇಡ್ಕರ್_ವಾದ

#caste #dalit

Comments

Popular posts from this blog

ಕೆ ಆರ್ ಎಸ್.ನಿರ್ಮಾಣ: ವಾಸ್ತವ ಇತಿಹಾಸ

        - ರಘೋತ್ತಮ ಹೊಬ  ಅದು 1902 ನೇ ಇಸವಿ. ಏಷ್ಯಾದಲ್ಲೆ ಪ್ರಪ್ರಥಮ ಜಲವಿದ್ಯುತ್ ಉತ್ಪಾದನಾ  ಕೇಂದ್ರ ಸ್ಥಾಪನೆಯಾದ ವರ್ಷ. ಅಂದಹಾಗೆ ಅದನ್ನು ಸ್ಥಾಪಿಸಿದವರು ಮೈಸೂರಿನ ಅಂದಿನ ಮಹಾರಾಜ #ನಾಲ್ವಡಿ_ಕೃಷ್ಣರಾಜಒಡೆಯರ್‍ರವರು. ಬ್ರಿಟಿಷರೊಂದಿಗೆ  ಕೋಲಾರ ಚಿನ್ನದ ಗಣಿಗೆ ವಿದ್ಯುತ್ ಸರಬರಾಜು ಮಾಡುವ ಒಪ್ಪಂದ ಮಾಡಿಕೊಂಡಿದ್ದ ಅವರು ಆ ನಿಟ್ಟಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಶಿವನಸಮುದ್ರ ಎಂಬಲ್ಲಿ ಪ್ರಪ್ರಥಮ ಜಲವಿದ್ಯುತ್ ಕೇಂದ್ರ ಸ್ಥಾಪಿಸಿದರು ಮತ್ತು ಆ ಕಾಲದಲ್ಲೆ 30,000 ವೋಲ್ಟ್  ವಿದ್ಯುತ್‍ಅನ್ನು ಕೋಲಾರದ ಚಿನ್ನದÀ ಗಣಿಗೆ ವರ್ಗಾಯಿಸಿದರು. ಈ ಸಂದರ್ಭದಲ್ಲಿ ಒಂದು ಮಾತು ಅದೇನೆಂದರೆ ಆಗಿನ್ನು ಸರ್.ಎಂ.ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನಕ್ಕೆ ಪ್ರವೇಶ ಪಡೆದೇ ಇರಲಿಲ್ಲ!    ಇರಲಿ, ಜಲವಿದ್ಯುತ್ ಕೇಂದ್ರವನ್ನೇನೋ ಒಡೆಯರ್‍ರವರು ಸ್ಥಾಪಿಸಿದರು. ಆದರೆ ವಿದ್ಯುತ್ ಉತ್ಪಾದನೆಗೆ ನೀರು ವರ್ಷಾಕಾಲ ದೊರೆಯುತ್ತದೆಯೇ? ಖಂಡಿತ ಇಲ್ಲ. ಮಳೆ ಬಂದಾಗ ವಿದ್ಯುತ್. ಇಲ್ಲದಿದ್ರೆ ನೋ ವಿದ್ಯುತ್! ಬೇಸಿಗೆ ಕಾಲದಲ್ಲಂತೂ ಒಂದು ವೋಲ್ಟ್ ಉತ್ಪತ್ತಿ ಕೂಡ ಕಷ್ಟವಾಗಿತ್ತು. ಇದರಿಂದ ಚಿನ್ನದ ಗಣಿಗೆ ನಿರಂತರ ವಿದ್ಯುತ್ ಸರಬರಾಜು ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದ್ದ ಒಡೆಯರ್‍ರಿಗೆ  ಅದರ ಪೂರೈಕೆ ಸವಾಲಿನ ಕೆಲಸವಾಗಿತ್ತು. ಈ ಕಾರಣಕ್ಕಾಗಿ ಅಂದರೆ ವಿದ್ಯುತ್ ಉತ್ಪಾದನ ಕೇಂದ್ರಕ್ಕೆ ನ...

ಪುಲಕೇಶಿ ಹೊಲೆಯರವನೆ? ಚಾಲುಕ್ಯರು ಛಲವಾದಿಗಳೇ? -ರಘೋತ್ತಮ ಹೊ.ಬ

"ಹೊಲಯರು - ಮಾದರು -ರಾಜರು" ಎಂಬ ತಮ್ಮ ಸಂಶೋಧನಾ ಕೃತಿಯಲ್ಲಿ ಸಂಶೋಧಕರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಆದ ಶ್ರೀ ಎಂ.ನಂಜುಂಡಸ್ವಾಮಿ ಐಪಿಎಸ್ ರವರು ಹೊಲೆಯರು ಮತ್ತು ಮಾದಿಗರು ಈ ಎರಡೂ ಜನಾಂಗಗಳು ಕರ್ನಾಟಕ ರಾಜ್ಯದಲ್ಲಿ ರಾಜರಾಗಿದ್ದವರು ರಾಜ್ಯ ಆಳಿದವರು ಎಂದು ಸಂಶೋಧನೆ ಮೂಲಕ ಸಾಧಿಸಿದ್ದಾರೆ. ಅದರಲ್ಲಿ ಬಹು ಮುಖ್ಯವಾದದ್ದು ಬಾದಾಮಿಯ ಚಾಲುಕ್ಯರು ಹೊಲೆಯ ವಂಶಸ್ಥರು ಮತ್ತು ಛಲವಾದಿ ಜನಾಂಗದವರು ಎಂದು ಲೇಖಕರು ತಮ್ಮ ಭಾಷಾಶಾಸ್ತ್ರದ ಸಂಶೋಧನೆಯ ಆಧಾರದಲ್ಲಿ ಹೇಳುತ್ತಾರೆ. "ಹೊಲಯರು - ಮಾದರು -ರಾಜರು" ಆ ಕೃತಿಯಲ್ಲಿ ಪುಟ ಸಂಖ್ಯೆ 96ರಲ್ಲಿ  ನಂಜುಂಡಸ್ವಾಮಿಯವರು ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯ ಮತ್ತು ಬೇಲೂರು ಚನ್ನಕೇಶವ ದೇವಾಲಯಗಳಲ್ಲಿ ಹೊಲೆಯನಿಗೆ ನೀಡುವ ಗೌರವ ಉಲ್ಲೇಖಿಸುತ್ತ "ಆ ಗೌರವ ರಾಜನಿಗೆ ನೀಡುವ ಗೌರವದಂತಿದೆ. ಹೊಲೆಯ ರಾಜನಿಂದಲೇ ಆ ದೇವಾಲಯ ನಿರ್ಮಾಣವಾಗಿರುವುದರ ಸಂಕೇತವಾಗಿ ಆತನಿಗೆ ಈಗಲೂ ಆ ಗೌರವ ಸಿಗುತ್ತಿದೆ" ಎಂದು ಹೇಳುತ್ತಾರೆ. ಇನ್ನೂ ಬಾಗಲಕೋಟೆಯ ದೇಸಾಯಿಗಳು ಈಗಲೂ ಹೊಲೆಯರ ಮನೆಯಿಂದ ಬೆಂಕಿ ತರುವ ಸಂಪ್ರದಾಯವನ್ನು ಸಹ ಲೇಖಕರು ಉಲ್ಲೇಖಿಸುತ್ತಾರೆ. ಆ  ಹಿನ್ನೆಲೆಯಲ್ಲಿ "ಹಿಂದೆ ನಾವು ಈ ನಾಡನ್ನು ಆಳಿದ ರಾಜರು. ಅದಕ್ಕಾಗಿ ನಮ್ಮ ಬಳಿ ಸಾಂಕೇತಿಕವಾಗಿ ಈಗಲೂ ಬಂದು ದೇಸಾಯಿಗಳು ಬೆಂಕಿ ಪಡೆದುಕೊಳ್ಳುತ್ತಿದ್ದಾರೆ. ಈಗ ನಮ್ಮನ್ನು ಛಲವಾದಿಗಳು ಎನ್ನುವರು. ಹಿಂದೆ ನ...

ಅವಕಾಶ ಕಿತ್ತುಕೊಳ್ಳಬೇಕು -ರಘೋತ್ತಮ ಹೊ.ಬ

ಶೋಷಿತ ಸಮುದಾಯಗಳ ಎಷ್ಟೋ ಜನ ಯಾರಾದರೂ ನಮ್ಮನ್ನು ನಮ್ಮ ಒಳ್ಳೆಯತನ ನೋಡಿ ಉದ್ಧಾರ ಮಾಡುತ್ತಾರೆ ಎಂದುಕೊಳ್ಳುತ್ತಾರೆ. ವಾಸ್ತವ ಎಂದರೆ ಅದು ಹಾಗಲ್ಲ ಎಂಬುದು. ಉದಾಹರಣೆಗೆ ಕಚೇರಿಗಳಲ್ಲಿ "ಡಿ" ಗ್ರೂಪ್ ನೌಕರಿ ಕೆಲಸ ಒಬ್ಬ ಮಾಡುತ್ತಿರುತ್ತಾನೆ ಎಂದುಕೊಳ್ಳಿ. ಪ್ರಶ್ನೆ ಎಂದರೆ ಅಲ್ಲಿಯ ಅಧಿಕಾರಿ ಆ ಡಿ ಗ್ರೂಪ್ ನೌಕರರನಿಗೆ ಆತನ ಒಳ್ಳೆಯತನ ನೋಡಿ ಕರೆದು ತನ್ನ ಸ್ಥಾನ ಕೊಡುತ್ತಾನೆಯೇ? ಇಲ್ಲ. ಹೆಚ್ಚೆಂದರೆ ಅದನ್ನು ಆತ ಆತನ ನಿಷ್ಠೆ ಎಂದುಕೊಳ್ಳಬಹುದು ಒಂದಷ್ಟು ಸಿಂಪಥಿ ತೋರಬಹುದು ಅಷ್ಟೇ. ಭಾರತದ ಸಾಮಾಜಿಕ ವ್ಯವಸ್ಥೆಯು ಕೂಡ ಹೀಗೇನೆ‌. ಹಾಗಿದ್ದರೆ ಡಿ ಗ್ರೂಪ್ ನೌಕರ ಏನು ಮಾಡಬಹುದು? ತನ್ನ ಮಗನನ್ನು ಅಥವಾ ಮಗಳನ್ನು ಆ ಅಧಿಕಾರಿ ಮಟ್ಟಕ್ಕೆ ಓದಿಸಿ ಆ ಸ್ಥಾನ ಪಡೆಯಬಹುದು ಅವಕಾಶ ಪಡೆಯಬಹುದು. ಶೋಷಿತ ಸಮುದಾಯಗಳು ಅಷ್ಟೇ, ಚೆನ್ನಾಗಿ ಶಿಕ್ಷಣ ಪಡೆದು ಉನ್ನತ ಉದ್ಯೋಗ ಪಡೆದರೆ ಅಥವಾ ಪ್ರಸ್ತುತ ದಿನಗಳಲ್ಲಿ ಬುದ್ಧಿವಂತಿಕೆಯಿಂದ ಯಾವುದಾದರೂ ಬಿಸಿನೆಸ್ ನಲ್ಲಿ do or die ಮಾದರಿಯಲ್ಲಿ ಶ್ರಮ ಹಾಕಿ ಯಶಸ್ಸು ಪಡೆದರೆ ಆ ಸ್ಥಾನ ಪಡೆಯಬಹುದು. ಯಾರೂ ಕೂಡ ಕರೆದು ಅವಕಾಶ ಕೊಡುವುದಿಲ್ಲ.  ಘಟನೆಯೊಂದನ್ನು ಹೇಳುವುದಾದರೆ, ಒಂದು ಸಾರ್ವಜನಿಕ ಕಾರ್ಯಕ್ರಮ ನಡೆದಿತ್ತು. ನಾನು ವಯಕ್ತಿಕವಾಗಿ ಯಾರು ನನ್ನನ್ನು ಕರೆಯಲಿ ಬಿಡಲಿ ಎಂದು ನನ್ನ ಸ್ಥಾನವನ್ನು ಭದ್ರವಾಗಿ ಪಡೆದೆ ಒಂದು ಚೇರ್ ಮೇಲೆ ನಾನೇ ಹೋಗಿ ಕುಳಿತುಕೊಳ್ಳುವುದರ ಮೂಲಕ. ಆದರೆ ದಲಿತ ಸಮುದಾಯ...