Skip to main content

ಸೈದ್ಧಾಂತಿಕವಾಗಿ ಭ್ರಷ್ಟ(corrupt) ರಾಗುವುದು ಶೋಷಿತ ಸಮುದಾಯಗಳ ಜನರ ಚಾಳಿಯಾಗಬಾರದು




-ರಘೋತ್ತಮ ಹೊ.ಬ

ಇಡೀ ದೇಶದಲ್ಲಿ ಸೈದ್ಧಾಂತಿಕವಾಗಿ ಸ್ಪಷ್ಟ ನಿಲುವುಗಳನ್ನು ಹೊಂದಿರುವ ಎರಡು ವರ್ಗಗಳನ್ನು ರಾಜಕೀಯ ಶಾಸ್ತ್ರಜ್ಞರು ಗುರುತಿಸಿದ್ದಾರೆ. ಆ ಎರಡು ಜನಾಂಗಗಳೆಂದರೆ,

1. ಬ್ರಾಹ್ಮಣರು

2. ದಲಿತರು ಅಥವಾ ಶೋಷಿತ ಸಮುದಾಯಗಳು.

ಬ್ರಾಹ್ಮಣ ಸಮುದಾಯ ವೇದ ಉಪನಿಷತ್ತುಗಳನ್ನು ತನ್ನ ಸೈದ್ಧಾಂತಿಕ ಹಿನ್ನೆಲೆಯಾಗಿ ಅನುಸರಿಸಿದರೆ ದಲಿತ ಸಮುದಾಯ ಅದು ಬಾಬಾಸಾಹೇಬ್ ಅಂಬೇಡ್ಕರ್ ರ ಸಿದ್ಧಾಂತವನ್ನು ಅನುಸರಿಸುತ್ತದೆ. ಹಾಗಿದ್ದರೆ ಇವೆರಡರ ನಡುವೆ ಬರುವ ಇತರ ಜನಾಂಗ- ಜಾತಿಗಳ ಕತೆ? ಖಂಡಿತ, ಅಂತಹ ಸ್ಪಷ್ಟತೆ ಇರದವರು ಎಂದೇ ತಜ್ಞರು ಗುರುತಿಸುತ್ತಾರೆ. ಈ ನಿಟ್ಟಿನಲ್ಲಿ ಸ್ಪಷ್ಟ ದಲಿತ ಸಮುದಾಯದ ಸೈದ್ಧಾಂತಿಕತೆ ಅದು ಬಾಬಾಸಾಹೇಬ್ ಅಂಬೇಡ್ಕರ್ ಬರಹ ಮತ್ತು ಚಿಂತನೆಗಳಾಗಿವೆ. ಅಂದಹಾಗೆ ಇದನ್ನು ಕರ್ನಾಟಕದ ಮಟ್ಟಿಗೆ ನೋಡುವುದಲ್ಲ, ಅಖಿಲ ಭಾರತ ಮಟ್ಟಕ್ಕೆ ನೋಡಿ ಹೇಳುವುದಾಗಿದೆ. ಯಾಕೆಂದರೆ ಕಾಶ್ಮೀರಕ್ಕೆ ಹೋಗಿ ನೀವು ಜೈಭೀಮ್ ಎನ್ನಬಹುದು, ಪಶ್ಚಿಮ ಬಂಗಾಳಕ್ಕೆ ಹೋಗಿ ಜೈಭೀಮ್ ಎನ್ನಬಹುದು, ಗುಜರಾತ್ ಗೆ ಹೋಗಿ ನೀಲಿ ಬಾವುಟ ಹಿಡಿದು ಜೈಭೀಮ್ ಎನ್ನಬಹುದು, ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ,  ಮಹಾರಾಷ್ಟ್ರ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಒರಿಸ್ಸ... ಹೀಗೆ ನೀವು ಯಾವುದೇ ಮೂಲೆಗೆ ಹೋಗಿಯೂ ಜೈಭೀಮ್ ಮತ್ತು ನೀಲಿ ಬಾವುಟ ಹಿಡಿದರೆ ಎಲ್ಲಾ ಕಡೆಯೂ ಒಂದೇ ಮಾತು ಅದು ಅಂಬೇಡ್ಕರ್ ಹೆಸರು ಮತ್ತು ಚಿಂತನೆಯಾಗಿದೆ. ಆದ್ದರಿಂದ ದಲಿತರು ಅದು ರಾಷ್ಟ್ರವ್ಯಾಪಿ ಜನಾಂಗವಾಗಿದೆ ಮತ್ತು ಅಂಬೇಡ್ಕರ್ ವಾದ ಅದು ರಾಷ್ಟ್ರವ್ಯಾಪಿ ಚಿಂತನೆಯಾಗಿದೆ. ಮೊದಲೆ ಹೇಳಿದ ಹಾಗೆ ಬ್ರಾಹ್ಮಣ ಸಮುದಾಯ ಕೂಡ ಹಾಗೆ ರಾಷ್ಟ್ರವ್ಯಾಪಿ ಚಿಂತನೆ ಹೊಂದಿರುವ ಸಮುದಾಯವಾಗಿದೆ. 

ದಲಿತ ಸಮುದಾಯ ಹೀಗೆ ಅದು ತನ್ನ ರಾಷ್ಟ್ರವ್ಯಾಪಿ ಲಕ್ಷಣ ಪಡೆಯಲು ಮುಖ್ಯ ಕಾರಣ ಅದು ಬಾಬಾಸಾಹೇಬ್ ಅಂಬೇಡ್ಕರ್ ರವರು ತಮ್ಮ ಚಳುವಳಿ ಕಟ್ಟಿದ, ಬೆಳೆಸಿದ ಮಾದರಿ. ಈ ಮಾದರಿಯನ್ನು ನಾಶ ಪಡಿಸಲು ಸಾಧ್ಯವೇ? ಖಂಡಿತವಾಗಿಯೂ ಸಾಧ್ಯವಿಲ್ಲ. ಯಾಕೆಂದರೆ ಯಾವುದೇ ಚಿಂತನೆ ಕಲ್ಲು ಮಣ್ಣು ರೀತಿಯಲ್ಲಿ ಹಾರ್ಡ್ ವೇರ್ ರೂಪದಲ್ಲಿ ಇದ್ದರೆ ಅದನ್ನು ನಾಶ ಪಡಿಸಬಹುದು ಆದರೆ ಆಲೋಚನೆ ಚಿಂತನೆಯ ರೂಪ ಪಡೆದಾಗ ಓದದಿದ್ದರೂ ಬರೆಯದಿದ್ದರೂ ಸ್ಮೃತಿ ( ನೆನಪು) ರೂಪದಲ್ಲಿ ಅದು ಬೆಳೆಯುತ್ತ ಹೋಗುತ್ತದೆ. ಮಾನವ ಜನಾಂಗದಲ್ಲಿ ಉಳಿಯುತ್ತ ಹೋಗುತ್ತದೆ. ಮತ್ತೂ ಒಂದು ಅಂಶವೆಂದರೆ ಯಾವುದನ್ನು ನಾಶ ಪಡಿಸಲು ಯಾರಾದರೂ ಯತ್ನಿಸಿದರೆ ಅಲ್ಲಿ ಉಂಟಾಗುವ ಸಂಘರ್ಷದ ಫಲವಾಗಿ ಅದು ಮತ್ತೂ ಬೆಳೆಯುತ್ತದೆ!

ಆದ್ದರಿಂದ ಬಾಬಾಸಾಹೇಬ್ ಅಂಬೇಡ್ಕರ್ ರ ಚಿಂತನೆಗಳನ್ನು ಅದನ್ನು ನಾಶಪಡಿಸಲು ಸಾಧ್ಯವಿಲ್ಲ. ನಿಜ ಹೇಳಬೇಕೆಂದರೆ ಅದು ಶರವೇಗದಲ್ಲಿ ಪ್ರಪಂಚದಾದ್ಯಂತ ಬೆಳೆಯುತ್ತ ಹೋಗುತ್ತಿದೆ. ಉದಾಹರಣೆಗೆ; ಅಮೆರಿಕದ ನ್ಯೂಯಾರ್ಕ್ ನಗರದ ಕೊಲಂಬಿಯಾ ಯೂನಿವರ್ಸಿಟಿ ಬಾಬಾಸಾಹೇಬ್ ಅಂಬೇಡ್ಕರ್ ರ ಬರಹಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿ ಪ್ರಕಟಿಸಿದೆ. ಪರಿಣಾಮ ಇಂದು ಅಲ್ಲಿಯ ಕಪ್ಪು ಜನರು ಮತ್ತು ಸಮಾನತೆ ಬಯಸುವ ಎಲ್ಲಾ ಜನರು ಓದಲು ಆರಂಭಿಸಿದ್ದಾರೆ. ಆಫ್ರಿಕಾ, ಕೆನಡಾ, ಆಸ್ಟ್ರೇಲಿಯಾ... ಹೀಗೆ ಪ್ರಪಂಚದಾದ್ಯಂತ ಅದು ಓದಿಸಲ್ಪಡುತ್ತ ಓದಿಸಿಕೊಳ್ಳುತ್ತ ಚಿಂತನೆಯ ರೂಪದಲ್ಲಿ ಬೆಳೆಯುತ್ತ ಸಾಗಿದೆ. ಹಿಂದೆ ಬೌದ್ಧ ಧರ್ಮ ಹೂ ಯೆನ್ ತ್ಸಾಂಗ್ ಮತ್ತು ಫಾಹಿಯಾನ್ ರ ಮೂಲಕ ಹೇಗೆ ಪೌರ್ವಾತ್ಯ ದೇಶಗಳನ್ನು ತಲುಪಿತೊ ಹಾಗೆ ಇಂದು ಬಾಬಾಸಾಹೇಬ್ ಅಂಬೇಡ್ಕರ್ ರ ಚಿಂತನೆ ಡಿಜಿಟಲ್ ರೂಪದ ಕಾರಣ ಪಾಶ್ಚಿಮಾತ್ಯ ದೇಶಗಳನ್ನು ತಲುಪುತ್ತಿದೆ. ಇದಕ್ಕೆ ಕಾರಣವೂ ಸ್ಪಷ್ಟ, ಅಂದರೆ ಜಾತಿ ವ್ಯವಸ್ಥೆ ಮತ್ತು ಭೇದಭಾವಗಳು ಎಲ್ಲೆಲ್ಲಿ ಕಾಲಿಡುತ್ತಿದೆಯೋ ಅಲ್ಲೆಲ್ಲ ಜನರು ಬಾಬಾಸಾಹೇಬ್ ಅಂಬೇಡ್ಕರ್ ರ ಬರಹಗಳನ್ನು ಆಂಟಿಡೋಟ್ ಆಗಿ ಚಿಕಿತ್ಸಾ ರೂಪವಾಗಿ ಬಳಸಲಾರಂಭಿಸಿದ್ದಾರೆ. ಆದ್ದರಿಂದ ಅಂಬೇಡ್ಕರ್ ವಾದ ಅದು ಮುಗಿದು ಹೋಗುತ್ತದೆ ಮುಗಿಸಿ ಬಿಡುತ್ತೇವೆ ಎಂದು ಯಾರೂ ಕನಸಲ್ಲು ಸಹ ಚಿಂತನೆ ಮಾಡಬಾರದು. ರಾಷ್ಟ್ರವ್ಯಾಪಿ ಇರಲಿ ವಿಶ್ವವ್ಯಾಪಿ ಬೆಳೆಯುವ ಸ್ಕೋಪ್ ಅದು ಇಂದು ಪಡೆದುಕೊಳ್ಳುತ್ತಿದೆ. ಮುಖ್ಯವಾಗಿ ಬಾಬಾಸಾಹೇಬ್ ಅಂಬೇಡ್ಕರ್ ರ ಚಿಂತನೆಗಳು ಇಂಗ್ಲಿಷ್ ಭಾಷೆಯಲ್ಲಿ ಇರುವುದು ಅದು ಪ್ರಪಂಚದ ಮೂಲೆ ಮೂಲೆ ತಲುಪಲು ಇಂದು ಪ್ರಮುಖ ಕಾರಣ ಎಂಬುದು ಸ್ಪಷ್ಟ.

ಆದ್ದರಿಂದ ದಲಿತರು ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ರ ಚಿಂತನೆ ಅದು pan India ಅಥವಾ ಅಖಂಡ ಭಾರತ ವ್ಯಾಪಕವಾಗಿದೆ‌. ದುರಂತ ಎಂದರೆ ಈ ಮಹತ್ವ ತಿಳಿಯದ ಕೆಲವು ಸ್ಥಳೀಯ ಶೋಷಿತ ಸಮುದಾಯಗಳ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಅಂಬೇಡ್ಕರ್ ಚಿಂತನೆಗಳನ್ನು ವಿರೂಪಗೊಳಿಸಿ just for his personal gain ಮಾತನಾಡಿದ್ದಾರೆ. ಅಂತಹವರ ಕ್ಷುಲ್ಲಕತನ ಎಂದರೆ ತನಗೆ ಮಾತ್ರ ಎಲ್ಲಾ ಗೊತ್ತು ಇತರರಿಗೆ ಗೊತ್ತಿಲ್ಲ ಎಂಬುದಾಗಿದೆ ಮತ್ತು ಇದಕ್ಕಾಗಿ ಅವರು ಬಳಸುತ್ತಿರುವುದು ಸಭಿಕರನ್ನು ಮೋಹಕವಾಗಿ ಸೆಳೆಯುವಂತೆ ಭಾಷಣ ಮಾಡುವ ತಮ್ಮ ಶೈಲಿಯನ್ನಾಗಿದೆ. ಪ್ರಶ್ನೆ ಎಂದರೆ ಅಂಬೇಡ್ಕರ್ ರ ಚಿಂತನೆಗಳನ್ನು ತಿರುಚಿ ಮಾತಾಡಿದರೆ ಜನರಿಗೆ ವಿಶೇಷವಾಗಿ ದಲಿತ ಸಮುದಾಯದಲ್ಲಿಯೇ ಇರುವ ಬುದ್ಧಿಜೀವಿಗಳಿಗೆ ಅರ್ಥ ಆಗುವುದಿಲ್ಲ ಎಂದೇ? ಅಥವಾ ಕೆಲವು ಪುಂಗ್ ಲೀ ಗಳು ಮಾಡುವ ರೀತಿ ಮೋಹಕ ಭಾಷಣಗಳ ಮೂಲಕ ದುರ್ಬಲಗೊಳಿಸುವಷ್ಟು ಅಂಬೇಡ್ಕರ್ ರ ಬರಹಗಳು ದುರ್ಬಲವೇ? ಖಂಡಿತ ಇಲ್ಲ. ಬಾಬಾಸಾಹೇಬ್ ಅಂಬೇಡ್ಕರ್ ರ ಚಿಂತನೆಗಳನ್ನು ತಿರುಚುವುದು ಅಷ್ಟು ಸುಲಭವಲ್ಲ. ಯಾಕೆಂದರೆ ಮೂಲ ಬಾಬಾಸಾಹೇಬ್ ಅಂಬೇಡ್ಕರ್ ರ ಒರಿಜಿನಲ್ ಚಿಂತನೆಗಳು ಇಂದು ಜನರ ಕೈ ತುದಿಯಲ್ಲೇ ಡಿಜಿಟಲ್ ರೂಪದಲ್ಲಿ ಇವೆ. ಆದ್ದರಿಂದ ಅಂತಹ ಸ್ವಾರ್ಥದ ದಲಿತ ಸಮುದಾಯದ ಮೋಹಕ ಭಾಷಣದ ರಾಜಕಾರಣಿಗಳು ನೀವು ಯಾರನ್ನಾದರೂ ತಿರುಚಿಕೊಳ್ಳಿ, ತಿರುಚಿ ಎಲ್ಲಾದರೂ ಪೇಚಾಡಿ. ಆದರೆ ಬಾಬಾಸಾಹೇಬ್ ಅಂಬೇಡ್ಕರರ ಹೆಸರು ಮಾತ್ರ ಎತ್ತಬೇಡಿ. ಜನಸಾಮಾನ್ಯರು ಅಷ್ಟೇ ಅಂತಹವರ ವಿರುದ್ಧ ಬೀದಿಗಿಳಿಯಿರಿ, ಪ್ರಶ್ನೆ ಮಾಡಿ, ಎಚ್ಚರಿಕೆ ನೀಡಿ. ಜೈಭೀಮ್.



Comments

Popular posts from this blog

ಪುಲಕೇಶಿ ಹೊಲೆಯರವನೆ? ಚಾಲುಕ್ಯರು ಛಲವಾದಿಗಳೇ? -ರಘೋತ್ತಮ ಹೊ.ಬ

"ಹೊಲಯರು - ಮಾದರು -ರಾಜರು" ಎಂಬ ತಮ್ಮ ಸಂಶೋಧನಾ ಕೃತಿಯಲ್ಲಿ ಸಂಶೋಧಕರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಆದ ಶ್ರೀ ಎಂ.ನಂಜುಂಡಸ್ವಾಮಿ ಐಪಿಎಸ್ ರವರು ಹೊಲೆಯರು ಮತ್ತು ಮಾದಿಗರು ಈ ಎರಡೂ ಜನಾಂಗಗಳು ಕರ್ನಾಟಕ ರಾಜ್ಯದಲ್ಲಿ ರಾಜರಾಗಿದ್ದವರು ರಾಜ್ಯ ಆಳಿದವರು ಎಂದು ಸಂಶೋಧನೆ ಮೂಲಕ ಸಾಧಿಸಿದ್ದಾರೆ. ಅದರಲ್ಲಿ ಬಹು ಮುಖ್ಯವಾದದ್ದು ಬಾದಾಮಿಯ ಚಾಲುಕ್ಯರು ಹೊಲೆಯ ವಂಶಸ್ಥರು ಮತ್ತು ಛಲವಾದಿ ಜನಾಂಗದವರು ಎಂದು ಲೇಖಕರು ತಮ್ಮ ಭಾಷಾಶಾಸ್ತ್ರದ ಸಂಶೋಧನೆಯ ಆಧಾರದಲ್ಲಿ ಹೇಳುತ್ತಾರೆ. "ಹೊಲಯರು - ಮಾದರು -ರಾಜರು" ಆ ಕೃತಿಯಲ್ಲಿ ಪುಟ ಸಂಖ್ಯೆ 96ರಲ್ಲಿ  ನಂಜುಂಡಸ್ವಾಮಿಯವರು ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯ ಮತ್ತು ಬೇಲೂರು ಚನ್ನಕೇಶವ ದೇವಾಲಯಗಳಲ್ಲಿ ಹೊಲೆಯನಿಗೆ ನೀಡುವ ಗೌರವ ಉಲ್ಲೇಖಿಸುತ್ತ "ಆ ಗೌರವ ರಾಜನಿಗೆ ನೀಡುವ ಗೌರವದಂತಿದೆ. ಹೊಲೆಯ ರಾಜನಿಂದಲೇ ಆ ದೇವಾಲಯ ನಿರ್ಮಾಣವಾಗಿರುವುದರ ಸಂಕೇತವಾಗಿ ಆತನಿಗೆ ಈಗಲೂ ಆ ಗೌರವ ಸಿಗುತ್ತಿದೆ" ಎಂದು ಹೇಳುತ್ತಾರೆ. ಇನ್ನೂ ಬಾಗಲಕೋಟೆಯ ದೇಸಾಯಿಗಳು ಈಗಲೂ ಹೊಲೆಯರ ಮನೆಯಿಂದ ಬೆಂಕಿ ತರುವ ಸಂಪ್ರದಾಯವನ್ನು ಸಹ ಲೇಖಕರು ಉಲ್ಲೇಖಿಸುತ್ತಾರೆ. ಆ  ಹಿನ್ನೆಲೆಯಲ್ಲಿ "ಹಿಂದೆ ನಾವು ಈ ನಾಡನ್ನು ಆಳಿದ ರಾಜರು. ಅದಕ್ಕಾಗಿ ನಮ್ಮ ಬಳಿ ಸಾಂಕೇತಿಕವಾಗಿ ಈಗಲೂ ಬಂದು ದೇಸಾಯಿಗಳು ಬೆಂಕಿ ಪಡೆದುಕೊಳ್ಳುತ್ತಿದ್ದಾರೆ. ಈಗ ನಮ್ಮನ್ನು ಛಲವಾದಿಗಳು ಎನ್ನುವರು. ಹಿಂದೆ ನ...

ಕೆ ಆರ್ ಎಸ್.ನಿರ್ಮಾಣ: ವಾಸ್ತವ ಇತಿಹಾಸ

        - ರಘೋತ್ತಮ ಹೊಬ  ಅದು 1902 ನೇ ಇಸವಿ. ಏಷ್ಯಾದಲ್ಲೆ ಪ್ರಪ್ರಥಮ ಜಲವಿದ್ಯುತ್ ಉತ್ಪಾದನಾ  ಕೇಂದ್ರ ಸ್ಥಾಪನೆಯಾದ ವರ್ಷ. ಅಂದಹಾಗೆ ಅದನ್ನು ಸ್ಥಾಪಿಸಿದವರು ಮೈಸೂರಿನ ಅಂದಿನ ಮಹಾರಾಜ #ನಾಲ್ವಡಿ_ಕೃಷ್ಣರಾಜಒಡೆಯರ್‍ರವರು. ಬ್ರಿಟಿಷರೊಂದಿಗೆ  ಕೋಲಾರ ಚಿನ್ನದ ಗಣಿಗೆ ವಿದ್ಯುತ್ ಸರಬರಾಜು ಮಾಡುವ ಒಪ್ಪಂದ ಮಾಡಿಕೊಂಡಿದ್ದ ಅವರು ಆ ನಿಟ್ಟಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಶಿವನಸಮುದ್ರ ಎಂಬಲ್ಲಿ ಪ್ರಪ್ರಥಮ ಜಲವಿದ್ಯುತ್ ಕೇಂದ್ರ ಸ್ಥಾಪಿಸಿದರು ಮತ್ತು ಆ ಕಾಲದಲ್ಲೆ 30,000 ವೋಲ್ಟ್  ವಿದ್ಯುತ್‍ಅನ್ನು ಕೋಲಾರದ ಚಿನ್ನದÀ ಗಣಿಗೆ ವರ್ಗಾಯಿಸಿದರು. ಈ ಸಂದರ್ಭದಲ್ಲಿ ಒಂದು ಮಾತು ಅದೇನೆಂದರೆ ಆಗಿನ್ನು ಸರ್.ಎಂ.ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನಕ್ಕೆ ಪ್ರವೇಶ ಪಡೆದೇ ಇರಲಿಲ್ಲ!    ಇರಲಿ, ಜಲವಿದ್ಯುತ್ ಕೇಂದ್ರವನ್ನೇನೋ ಒಡೆಯರ್‍ರವರು ಸ್ಥಾಪಿಸಿದರು. ಆದರೆ ವಿದ್ಯುತ್ ಉತ್ಪಾದನೆಗೆ ನೀರು ವರ್ಷಾಕಾಲ ದೊರೆಯುತ್ತದೆಯೇ? ಖಂಡಿತ ಇಲ್ಲ. ಮಳೆ ಬಂದಾಗ ವಿದ್ಯುತ್. ಇಲ್ಲದಿದ್ರೆ ನೋ ವಿದ್ಯುತ್! ಬೇಸಿಗೆ ಕಾಲದಲ್ಲಂತೂ ಒಂದು ವೋಲ್ಟ್ ಉತ್ಪತ್ತಿ ಕೂಡ ಕಷ್ಟವಾಗಿತ್ತು. ಇದರಿಂದ ಚಿನ್ನದ ಗಣಿಗೆ ನಿರಂತರ ವಿದ್ಯುತ್ ಸರಬರಾಜು ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದ್ದ ಒಡೆಯರ್‍ರಿಗೆ  ಅದರ ಪೂರೈಕೆ ಸವಾಲಿನ ಕೆಲಸವಾಗಿತ್ತು. ಈ ಕಾರಣಕ್ಕಾಗಿ ಅಂದರೆ ವಿದ್ಯುತ್ ಉತ್ಪಾದನ ಕೇಂದ್ರಕ್ಕೆ ನ...

ಶೌಚಾಲಯ ಶುಚಿಗೊಳಿಸುವುದನ್ನು "ಆ ಸಮುದಾಯ"ದವರೇ ಮಾಡಬೇಕೆ?

  ಸಂಸ್ಥೆಯೊಂದರಲ್ಲಿ ಮೀಟಿಂಗ್ ನಡೆಯುತ್ತಿತ್ತು. ಸದಸ್ಯರೊಬ್ಬರು "ನಮ್ಮ ಸಂಸ್ಥೆಯ ಶೌಚಾಲಯಗಳೆಲ್ಲವೂ ಗಲೀಜು ಆಗಿವೆ. ಆ ಯಮ್ಮನನ್ನು ಕರೆಸಿ" ಎಂದು ಮುಖ್ಯಸ್ಥರನ್ನು ಒತ್ತಾಯಿಸಿದರು. ಮತ್ತೊಬ್ಬರು "ಆ ಯಮ್ಮ ಸರಿಯಾಗಿ ಕ್ಲೀನ್ ಮಾಡೋಲ್ಲ, ಅವಳಿಗೆ ಕೊಬ್ಬು,"  ಹೀಗೆ ನಾಲಿಗೆ ಮೇಲೆ ಹಿಡಿತವಿಲ್ಲದೆ ಮಾತಾಡುತ್ತ ಹೋದರು!  ಹೌದು, ಅವರು ಮಾತಾಡುತ್ತಿದ್ದದ್ದು ಅಸ್ಪೃಶ್ಯ ಸಮುದಾಯವಾದ ಪೌರಕಾರ್ಮಿಕ ಸಮುದಾಯದ ಮಹಿಳೆಯೊಬ್ಬರ ಬಗ್ಗೆ. ಎಷ್ಟು ಕ್ರೂರವಾಗಿ ಅವರು ಆಕೆಯ ಬಗ್ಗೆ ಮಾತನಾಡುತ್ತಿದ್ದರೆಂದರೆ ಅವಳು ಕೂಡ ಮನುಷ್ಯಳು, ಅವಳಿಗೂ ಕೂಡ ಮಾನವ ಹಕ್ಕಿದೆ, ಆಕೆಗೂ ಕೂಡ ಗೌರವ ಕೊಡಬೇಕು, ಊಹ್ಞೂಂ, ಇಂತಹ ಸಣ್ಣ ಮನೋಭಾವವೂ ಅವರಲ್ಲಿರಲಿಲ್ಲ. ಜಾತಿ ವ್ಯವಸ್ಥೆಯ ಭೀಕರ ಚಿತ್ರಣ ಅಲ್ಲಿ ಎದ್ದು  ಕಾಣುತ್ತಿತ್ತು.  ಈ ದಿಸೆಯಲ್ಲಿ ಉಕ್ಕಿಬರುವ ಪ್ರಶ್ನೆಗಳೇನೆಂದರೆ ಶೌಚಾಲಯ ಶುಚಿಗೊಳಿಸುವುದನ್ನು ಪೌರಕಾರ್ಮಿಕ ಸಮುದಾಯವೇ ಏಕೆ ಮಾಡಬೇಕು? ಆ ಕಾಯಕವನ್ನು ಎಲ್ಲಾ ಜಾತಿಯವರು ಏಕೆ ಮಾಡಬಾರದು? ಯಾಕೆಂದರೆ ಉದಾಹರಣೆಗೆ ವ್ಯಕ್ತಿಗಳು ಅವರು ಶೌಚ ಮಾಡಿದ ನಂತರ ಅವರದ್ದನ್ನು ಅವರೇ ತೊಳೆದುಕೊಳ್ಳುತ್ತಾರಲ್ಲವೇ? ಅದಕ್ಕೂ ಒಬ್ಬ ಆಳನ್ನು "ಇಲ್ಲ, ಇದನ್ನು ನಾನು ಮುಟ್ಟುವುದಿಲ್ಲ. ಇದು ಗಲೀಜು"ಎಂದು ನೇಮಿಸಿಕೊಳ್ಳುತ್ತಾರೆಯೇ? ಇಲ್ಲ. ಹೀಗಿರುವಾಗ ಅವರದ್ದನ್ನು ಅವರು ತೊಳೆದುಕೊಳ್ಳುವಾಗ ಶೌಚಾಲಯ ಶುಚಿಗೊಳಿಸಲು ನಿರ್ದಿಷ್ಟ ಸಮುದಾಯದವರನ್ನು ಯ...