Skip to main content

ಸೈದ್ಧಾಂತಿಕವಾಗಿ ಭ್ರಷ್ಟ(corrupt) ರಾಗುವುದು ಶೋಷಿತ ಸಮುದಾಯಗಳ ಜನರ ಚಾಳಿಯಾಗಬಾರದು




-ರಘೋತ್ತಮ ಹೊ.ಬ

ಇಡೀ ದೇಶದಲ್ಲಿ ಸೈದ್ಧಾಂತಿಕವಾಗಿ ಸ್ಪಷ್ಟ ನಿಲುವುಗಳನ್ನು ಹೊಂದಿರುವ ಎರಡು ವರ್ಗಗಳನ್ನು ರಾಜಕೀಯ ಶಾಸ್ತ್ರಜ್ಞರು ಗುರುತಿಸಿದ್ದಾರೆ. ಆ ಎರಡು ಜನಾಂಗಗಳೆಂದರೆ,

1. ಬ್ರಾಹ್ಮಣರು

2. ದಲಿತರು ಅಥವಾ ಶೋಷಿತ ಸಮುದಾಯಗಳು.

ಬ್ರಾಹ್ಮಣ ಸಮುದಾಯ ವೇದ ಉಪನಿಷತ್ತುಗಳನ್ನು ತನ್ನ ಸೈದ್ಧಾಂತಿಕ ಹಿನ್ನೆಲೆಯಾಗಿ ಅನುಸರಿಸಿದರೆ ದಲಿತ ಸಮುದಾಯ ಅದು ಬಾಬಾಸಾಹೇಬ್ ಅಂಬೇಡ್ಕರ್ ರ ಸಿದ್ಧಾಂತವನ್ನು ಅನುಸರಿಸುತ್ತದೆ. ಹಾಗಿದ್ದರೆ ಇವೆರಡರ ನಡುವೆ ಬರುವ ಇತರ ಜನಾಂಗ- ಜಾತಿಗಳ ಕತೆ? ಖಂಡಿತ, ಅಂತಹ ಸ್ಪಷ್ಟತೆ ಇರದವರು ಎಂದೇ ತಜ್ಞರು ಗುರುತಿಸುತ್ತಾರೆ. ಈ ನಿಟ್ಟಿನಲ್ಲಿ ಸ್ಪಷ್ಟ ದಲಿತ ಸಮುದಾಯದ ಸೈದ್ಧಾಂತಿಕತೆ ಅದು ಬಾಬಾಸಾಹೇಬ್ ಅಂಬೇಡ್ಕರ್ ಬರಹ ಮತ್ತು ಚಿಂತನೆಗಳಾಗಿವೆ. ಅಂದಹಾಗೆ ಇದನ್ನು ಕರ್ನಾಟಕದ ಮಟ್ಟಿಗೆ ನೋಡುವುದಲ್ಲ, ಅಖಿಲ ಭಾರತ ಮಟ್ಟಕ್ಕೆ ನೋಡಿ ಹೇಳುವುದಾಗಿದೆ. ಯಾಕೆಂದರೆ ಕಾಶ್ಮೀರಕ್ಕೆ ಹೋಗಿ ನೀವು ಜೈಭೀಮ್ ಎನ್ನಬಹುದು, ಪಶ್ಚಿಮ ಬಂಗಾಳಕ್ಕೆ ಹೋಗಿ ಜೈಭೀಮ್ ಎನ್ನಬಹುದು, ಗುಜರಾತ್ ಗೆ ಹೋಗಿ ನೀಲಿ ಬಾವುಟ ಹಿಡಿದು ಜೈಭೀಮ್ ಎನ್ನಬಹುದು, ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ,  ಮಹಾರಾಷ್ಟ್ರ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಒರಿಸ್ಸ... ಹೀಗೆ ನೀವು ಯಾವುದೇ ಮೂಲೆಗೆ ಹೋಗಿಯೂ ಜೈಭೀಮ್ ಮತ್ತು ನೀಲಿ ಬಾವುಟ ಹಿಡಿದರೆ ಎಲ್ಲಾ ಕಡೆಯೂ ಒಂದೇ ಮಾತು ಅದು ಅಂಬೇಡ್ಕರ್ ಹೆಸರು ಮತ್ತು ಚಿಂತನೆಯಾಗಿದೆ. ಆದ್ದರಿಂದ ದಲಿತರು ಅದು ರಾಷ್ಟ್ರವ್ಯಾಪಿ ಜನಾಂಗವಾಗಿದೆ ಮತ್ತು ಅಂಬೇಡ್ಕರ್ ವಾದ ಅದು ರಾಷ್ಟ್ರವ್ಯಾಪಿ ಚಿಂತನೆಯಾಗಿದೆ. ಮೊದಲೆ ಹೇಳಿದ ಹಾಗೆ ಬ್ರಾಹ್ಮಣ ಸಮುದಾಯ ಕೂಡ ಹಾಗೆ ರಾಷ್ಟ್ರವ್ಯಾಪಿ ಚಿಂತನೆ ಹೊಂದಿರುವ ಸಮುದಾಯವಾಗಿದೆ. 

ದಲಿತ ಸಮುದಾಯ ಹೀಗೆ ಅದು ತನ್ನ ರಾಷ್ಟ್ರವ್ಯಾಪಿ ಲಕ್ಷಣ ಪಡೆಯಲು ಮುಖ್ಯ ಕಾರಣ ಅದು ಬಾಬಾಸಾಹೇಬ್ ಅಂಬೇಡ್ಕರ್ ರವರು ತಮ್ಮ ಚಳುವಳಿ ಕಟ್ಟಿದ, ಬೆಳೆಸಿದ ಮಾದರಿ. ಈ ಮಾದರಿಯನ್ನು ನಾಶ ಪಡಿಸಲು ಸಾಧ್ಯವೇ? ಖಂಡಿತವಾಗಿಯೂ ಸಾಧ್ಯವಿಲ್ಲ. ಯಾಕೆಂದರೆ ಯಾವುದೇ ಚಿಂತನೆ ಕಲ್ಲು ಮಣ್ಣು ರೀತಿಯಲ್ಲಿ ಹಾರ್ಡ್ ವೇರ್ ರೂಪದಲ್ಲಿ ಇದ್ದರೆ ಅದನ್ನು ನಾಶ ಪಡಿಸಬಹುದು ಆದರೆ ಆಲೋಚನೆ ಚಿಂತನೆಯ ರೂಪ ಪಡೆದಾಗ ಓದದಿದ್ದರೂ ಬರೆಯದಿದ್ದರೂ ಸ್ಮೃತಿ ( ನೆನಪು) ರೂಪದಲ್ಲಿ ಅದು ಬೆಳೆಯುತ್ತ ಹೋಗುತ್ತದೆ. ಮಾನವ ಜನಾಂಗದಲ್ಲಿ ಉಳಿಯುತ್ತ ಹೋಗುತ್ತದೆ. ಮತ್ತೂ ಒಂದು ಅಂಶವೆಂದರೆ ಯಾವುದನ್ನು ನಾಶ ಪಡಿಸಲು ಯಾರಾದರೂ ಯತ್ನಿಸಿದರೆ ಅಲ್ಲಿ ಉಂಟಾಗುವ ಸಂಘರ್ಷದ ಫಲವಾಗಿ ಅದು ಮತ್ತೂ ಬೆಳೆಯುತ್ತದೆ!

ಆದ್ದರಿಂದ ಬಾಬಾಸಾಹೇಬ್ ಅಂಬೇಡ್ಕರ್ ರ ಚಿಂತನೆಗಳನ್ನು ಅದನ್ನು ನಾಶಪಡಿಸಲು ಸಾಧ್ಯವಿಲ್ಲ. ನಿಜ ಹೇಳಬೇಕೆಂದರೆ ಅದು ಶರವೇಗದಲ್ಲಿ ಪ್ರಪಂಚದಾದ್ಯಂತ ಬೆಳೆಯುತ್ತ ಹೋಗುತ್ತಿದೆ. ಉದಾಹರಣೆಗೆ; ಅಮೆರಿಕದ ನ್ಯೂಯಾರ್ಕ್ ನಗರದ ಕೊಲಂಬಿಯಾ ಯೂನಿವರ್ಸಿಟಿ ಬಾಬಾಸಾಹೇಬ್ ಅಂಬೇಡ್ಕರ್ ರ ಬರಹಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿ ಪ್ರಕಟಿಸಿದೆ. ಪರಿಣಾಮ ಇಂದು ಅಲ್ಲಿಯ ಕಪ್ಪು ಜನರು ಮತ್ತು ಸಮಾನತೆ ಬಯಸುವ ಎಲ್ಲಾ ಜನರು ಓದಲು ಆರಂಭಿಸಿದ್ದಾರೆ. ಆಫ್ರಿಕಾ, ಕೆನಡಾ, ಆಸ್ಟ್ರೇಲಿಯಾ... ಹೀಗೆ ಪ್ರಪಂಚದಾದ್ಯಂತ ಅದು ಓದಿಸಲ್ಪಡುತ್ತ ಓದಿಸಿಕೊಳ್ಳುತ್ತ ಚಿಂತನೆಯ ರೂಪದಲ್ಲಿ ಬೆಳೆಯುತ್ತ ಸಾಗಿದೆ. ಹಿಂದೆ ಬೌದ್ಧ ಧರ್ಮ ಹೂ ಯೆನ್ ತ್ಸಾಂಗ್ ಮತ್ತು ಫಾಹಿಯಾನ್ ರ ಮೂಲಕ ಹೇಗೆ ಪೌರ್ವಾತ್ಯ ದೇಶಗಳನ್ನು ತಲುಪಿತೊ ಹಾಗೆ ಇಂದು ಬಾಬಾಸಾಹೇಬ್ ಅಂಬೇಡ್ಕರ್ ರ ಚಿಂತನೆ ಡಿಜಿಟಲ್ ರೂಪದ ಕಾರಣ ಪಾಶ್ಚಿಮಾತ್ಯ ದೇಶಗಳನ್ನು ತಲುಪುತ್ತಿದೆ. ಇದಕ್ಕೆ ಕಾರಣವೂ ಸ್ಪಷ್ಟ, ಅಂದರೆ ಜಾತಿ ವ್ಯವಸ್ಥೆ ಮತ್ತು ಭೇದಭಾವಗಳು ಎಲ್ಲೆಲ್ಲಿ ಕಾಲಿಡುತ್ತಿದೆಯೋ ಅಲ್ಲೆಲ್ಲ ಜನರು ಬಾಬಾಸಾಹೇಬ್ ಅಂಬೇಡ್ಕರ್ ರ ಬರಹಗಳನ್ನು ಆಂಟಿಡೋಟ್ ಆಗಿ ಚಿಕಿತ್ಸಾ ರೂಪವಾಗಿ ಬಳಸಲಾರಂಭಿಸಿದ್ದಾರೆ. ಆದ್ದರಿಂದ ಅಂಬೇಡ್ಕರ್ ವಾದ ಅದು ಮುಗಿದು ಹೋಗುತ್ತದೆ ಮುಗಿಸಿ ಬಿಡುತ್ತೇವೆ ಎಂದು ಯಾರೂ ಕನಸಲ್ಲು ಸಹ ಚಿಂತನೆ ಮಾಡಬಾರದು. ರಾಷ್ಟ್ರವ್ಯಾಪಿ ಇರಲಿ ವಿಶ್ವವ್ಯಾಪಿ ಬೆಳೆಯುವ ಸ್ಕೋಪ್ ಅದು ಇಂದು ಪಡೆದುಕೊಳ್ಳುತ್ತಿದೆ. ಮುಖ್ಯವಾಗಿ ಬಾಬಾಸಾಹೇಬ್ ಅಂಬೇಡ್ಕರ್ ರ ಚಿಂತನೆಗಳು ಇಂಗ್ಲಿಷ್ ಭಾಷೆಯಲ್ಲಿ ಇರುವುದು ಅದು ಪ್ರಪಂಚದ ಮೂಲೆ ಮೂಲೆ ತಲುಪಲು ಇಂದು ಪ್ರಮುಖ ಕಾರಣ ಎಂಬುದು ಸ್ಪಷ್ಟ.

ಆದ್ದರಿಂದ ದಲಿತರು ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ರ ಚಿಂತನೆ ಅದು pan India ಅಥವಾ ಅಖಂಡ ಭಾರತ ವ್ಯಾಪಕವಾಗಿದೆ‌. ದುರಂತ ಎಂದರೆ ಈ ಮಹತ್ವ ತಿಳಿಯದ ಕೆಲವು ಸ್ಥಳೀಯ ಶೋಷಿತ ಸಮುದಾಯಗಳ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಅಂಬೇಡ್ಕರ್ ಚಿಂತನೆಗಳನ್ನು ವಿರೂಪಗೊಳಿಸಿ just for his personal gain ಮಾತನಾಡಿದ್ದಾರೆ. ಅಂತಹವರ ಕ್ಷುಲ್ಲಕತನ ಎಂದರೆ ತನಗೆ ಮಾತ್ರ ಎಲ್ಲಾ ಗೊತ್ತು ಇತರರಿಗೆ ಗೊತ್ತಿಲ್ಲ ಎಂಬುದಾಗಿದೆ ಮತ್ತು ಇದಕ್ಕಾಗಿ ಅವರು ಬಳಸುತ್ತಿರುವುದು ಸಭಿಕರನ್ನು ಮೋಹಕವಾಗಿ ಸೆಳೆಯುವಂತೆ ಭಾಷಣ ಮಾಡುವ ತಮ್ಮ ಶೈಲಿಯನ್ನಾಗಿದೆ. ಪ್ರಶ್ನೆ ಎಂದರೆ ಅಂಬೇಡ್ಕರ್ ರ ಚಿಂತನೆಗಳನ್ನು ತಿರುಚಿ ಮಾತಾಡಿದರೆ ಜನರಿಗೆ ವಿಶೇಷವಾಗಿ ದಲಿತ ಸಮುದಾಯದಲ್ಲಿಯೇ ಇರುವ ಬುದ್ಧಿಜೀವಿಗಳಿಗೆ ಅರ್ಥ ಆಗುವುದಿಲ್ಲ ಎಂದೇ? ಅಥವಾ ಕೆಲವು ಪುಂಗ್ ಲೀ ಗಳು ಮಾಡುವ ರೀತಿ ಮೋಹಕ ಭಾಷಣಗಳ ಮೂಲಕ ದುರ್ಬಲಗೊಳಿಸುವಷ್ಟು ಅಂಬೇಡ್ಕರ್ ರ ಬರಹಗಳು ದುರ್ಬಲವೇ? ಖಂಡಿತ ಇಲ್ಲ. ಬಾಬಾಸಾಹೇಬ್ ಅಂಬೇಡ್ಕರ್ ರ ಚಿಂತನೆಗಳನ್ನು ತಿರುಚುವುದು ಅಷ್ಟು ಸುಲಭವಲ್ಲ. ಯಾಕೆಂದರೆ ಮೂಲ ಬಾಬಾಸಾಹೇಬ್ ಅಂಬೇಡ್ಕರ್ ರ ಒರಿಜಿನಲ್ ಚಿಂತನೆಗಳು ಇಂದು ಜನರ ಕೈ ತುದಿಯಲ್ಲೇ ಡಿಜಿಟಲ್ ರೂಪದಲ್ಲಿ ಇವೆ. ಆದ್ದರಿಂದ ಅಂತಹ ಸ್ವಾರ್ಥದ ದಲಿತ ಸಮುದಾಯದ ಮೋಹಕ ಭಾಷಣದ ರಾಜಕಾರಣಿಗಳು ನೀವು ಯಾರನ್ನಾದರೂ ತಿರುಚಿಕೊಳ್ಳಿ, ತಿರುಚಿ ಎಲ್ಲಾದರೂ ಪೇಚಾಡಿ. ಆದರೆ ಬಾಬಾಸಾಹೇಬ್ ಅಂಬೇಡ್ಕರರ ಹೆಸರು ಮಾತ್ರ ಎತ್ತಬೇಡಿ. ಜನಸಾಮಾನ್ಯರು ಅಷ್ಟೇ ಅಂತಹವರ ವಿರುದ್ಧ ಬೀದಿಗಿಳಿಯಿರಿ, ಪ್ರಶ್ನೆ ಮಾಡಿ, ಎಚ್ಚರಿಕೆ ನೀಡಿ. ಜೈಭೀಮ್.



Comments

Popular posts from this blog

ಜಾತಿ ಮತ್ತು ಅಸಮಾನತೆಯನ್ನು ಬುದ್ಧರು ಹೇಗೆ ಪ್ರಶ್ನಿಸುತ್ತಾರೆಂದರೆ...

- ರಘೋತ್ತಮ ಹೊಬ ತ್ರಿಪಿಟಕಗಳಲ್ಲಿ ಅದರಲ್ಲೂ ಸುತ್ತ ಪಿಟಕದ ಅಸ್ಸಲಾಯನ ಸುತ್ತ ಎಂಬ ಕತೆಯಲ್ಲಿ ಬುದ್ಧರು ಜಾತಿ ಮತ್ತು ಅಸಮಾನತೆ ವಿರೋಧಿಸಿ ಮಾತನಾಡುತ್ತಾರೆ. ಬುದ್ಧರು ಹೇಳುವುದು "ಶ್ರೇಷ್ಠ ಕುಲದ ಮಹಿಳೆಯರು ಕೂಡ ಋತು ಚಕ್ರ ಅನುಭವಿಸುತ್ತಾರೆ, ಗರ್ಭ ಧರಿಸುತ್ತಾರೆ. ಅವರಿಗೂ ಹೆರಿಗೆಯಾಗುತ್ತದೆ, ಮಗು ಆಗುತ್ತದೆ. ಇಂತಹ ಪ್ರಾಕೃತಿಕ ಪದ್ಧತಿ ಹೊರತುಪಡಿಸಿ ಅವರಿಗೆ ಇತರೆ ಯಾವುದಾದರೂ ಬೇರೆ ವಿಧಾನ ಇದೆಯೇ? ಹಾಗಿದ್ದರೆ ಅವರು ಹೇಗೆ ಇತರರಿಗಿಂತ ಭಿನ್ನ? ಅಥವಾ ಶ್ರೇಷ್ಠ?" ಹೀಗೆ ಬುದ್ಧರು ಅಸಮಾನತೆ ಮತ್ತು ಜಾತಿಯನ್ನು ಪ್ರಶ್ನಿಸುತ್ತಾರೆ.  ಹಾಗೆ ಅದೇ ಕತೆಯಲ್ಲಿ ಬುದ್ಧರು ಹೇಳುವುದು "ಶ್ರೇಷ್ಠ ಕುಲದ ಒಬ್ಬ ಯುವಕ ಮತ್ತು ಅದೇ ಕುಲದ ಒಬ್ಬ ಕನ್ಯೆ ಇಬ್ಬರೂ ಕೂಡಿದರೆ ಮನುಷ್ಯ ಜೀವಿ ಜನಿಸದೆ ಯಾವುದಾದರೂ ಪ್ರಾಣಿ ಜನಿಸುವುದೇ? ಹೀಗಿರುವಾಗ ಅವರು ಹೇಗೆ ಶ್ರೇಷ್ಠ?". ಹೇಳಿ ಹೇಗೆ ಶ್ರೇಷ್ಠ? ***

Why did Dr Ambedkar converted to Buddhism? -Raghothama Hoba

Yesterday, someone asked me why did Dr.Ambedkar converted to "Buddhism",  But next series of questions he forget to ask me is “Why untouchability is still practiced against some caste in society? Why some caste people were kept away from temples? Why some caste and people belonging to those caste were being denied opportunities in every field of life such as business, trade, commerce, private companies, hotels, markets etc,. Why some caste people were meant to do menial jobs, scavenging and other things? To continue, why some caste people still being denied or avoided to get higher education? Why some caste people are unnecessarily tortured in working areas whether it is government or private. Answer to all this is untouchability. Let we call those people who are being subjected to untouchability as untouchables or Dalits or scheduled caste people. Now one has to think himself, what could happen if someone kept away from temples or made to stand outside the temple? Won’t it h...

ಅಂದು ಪರಿಶಿಷ್ಟರ ಮೀಸಲಾತಿ ರದ್ದುಮಾಡಲು ಹೊರಟಾಗ ಅಂಬೇಡ್ಕರ್ ರವರ ಆಕ್ರೋಶ ಹೇಗಿತ್ತೆಂದರೆ... -ರಘೋತ್ತಮ ಹೊ.ಬ

1947 ಜನವರಿ ತಿಂಗಳ ಒಂದು ದಿನ "ಸಂವಿಧಾನ ಸಭೆ" (Constituent assembly) ಸಭೆ ಸೇರುತ್ತದೆ. ಅಂದು ಆ ಸಭೆ ಸೇರುವ ಉದ್ದೇಶ ಅರಿತಿದ್ದ ಬಾಬಾಸಾಹೇಬ್ ಅಂಬೇಡ್ಕರರು ಸಭೆಯ ಸದಸ್ಯರಾಗಿದ್ದರು ಕೂಡ ಸಭೆಯಿಂದ ದೂರ ಉಳಿದಿದ್ದರು. ಯಥಾಪ್ರಕಾರ ಸಂವಿಧಾನ ಸಭೆಯ "ಅಲ್ಪಸಂಖ್ಯಾತರ ಉಪಸಮಿತಿ"ಯ ಅಧ್ಯಕ್ಷರಾದ ಸರ್ದಾರ್ ವಲ್ಲಭಭಾಯ್ ಪಟೇಲ್ ಆ ದಿನ ಒಂದು ತಂತ್ರಗೈದು ಸಮಿತಿಯ ಅಧ್ಯಕ್ಷರಾದ ತಾವೇ ಹಾಜರಿದ್ದರೂ ಆಚಾರ್ಯ ಕೃಪಲಾನಿಯವರನ್ನು ಅಂದು ಸಭೆಯ ಅಧ್ಯಕ್ಷತೆ ವಹಿಸಿಕೊಳ್ಳುವಂತೆ ತಿಳಿಸುತ್ತಾರೆ. ಅಲ್ಲದೇ ಸರ್ದಾರ್ ವಲ್ಲಭಭಾಯ್ ಪಟೇಲರು ಅಂದು ಮಂಡಿಸುವ ನಿಲುವನ್ನು ಬೆಂಬಲಿಸುವ ಸಮಿತಿಯ ಸದಸ್ಯರುಗಳಿಗೆ ರಾಜ್ಯಪಾಲ, ಮುಖ್ಯಮಂತ್ರಿ.. ಹೀಗೆ ವಿವಿಧ ಹುದ್ದೆಗಳನ್ನು ನೀಡುವ ಆಮಿಷ ಒಡ್ಡಲಾಗಿರುತ್ತದೆ ! ಈ ಹಿನ್ನೆಲೆಯಲ್ಲಿ ಅಂದು ಸಭೆ ಸೇರಿದ ಸಂವಿಧಾನ ಸಭೆಯ ಆ "ಅಲ್ಪಸಂಖ್ಯಾತರ ಉಪಸಮಿತಿ" ಕೈಗೊಂಡ ನಿರ್ಣಯವೆಂದರೆ ಎಸ್ಸಿ, ಎಸ್ಟಿಗಳು ಸೇರಿದಂತೆ ಎಲ್ಲಾ ವರ್ಗಗಳ ಜನರಿಗೂ ಮೀಸಲಾತಿ ರದ್ದುಗೊಳಿಸುವ ನಿರ್ಧಾರ!! ಅಂದಹಾಗೆ ಹೀಗೆ ಎಸ್ಸಿ, ಎಸ್ಟಿಗಳಿಗೆ ಮೀಸಲಾತಿ ರದ್ದುಗೊಳಿಸುವ ನಿರ್ಧಾರ ಪ್ರಕಟಗೊಳ್ಳುತ್ತಿದ್ದಂತೆ ಮಾರನೇ ದಿನದ "ಹಿಂದೂಸ್ತಾನ್ ಟೈಮ್ಸ್" ಮತ್ತು "ಸ್ಟೇಟ್ಸ್ ಮನ್" ನಂತಹ ಇಂಗ್ಲಿಷ್ ಪತ್ರಿಕೆಗಳು ಈ ಸುದ್ದಿಗೆ ನೀಡಿದ ಹೆಡ್ ಲೈನ್ಸ್ ಏನು ಗೊತ್ತೇ? ಇಂದು Red letter day (ಇತಿಹಾಸದಲ್ಲಿ...