Skip to main content

ಕತೆ: ಸ್ಟೀಲ್ ತಟ್ಟೆ

 

-ರಘೋತ್ತಮ ಹೊ.ಬ

"ಏನಪ್ಪೊ, ಚಂದಾಗಿದಿಯ?" ರಂಗಣ್ಣ ಹೋಟೆಲ್ ಮಹದೇವಪ್ಪನ್ನ ಕೇಳಿದ. "ಬಾ ರಂಗ ಎಲ್ಲಾ ಕೊರೊನ. ಮಳ ಬ್ಯಳ ಬ್ಯಾರ ಕಿತ್ಕ ಹೊಯ್ತು. ಟೀ ಕೊಡ್ಲ, ಕುಡ್ದಯ" ಮಹಾದೇವಪ್ಪ ಹೇಳಿದ. "ತತ್ತ, ನಮ್ಮಪ್ಪನ್ ಕಾಲ್ದಿಂದ್ಲು ನಿನ್ ತಮೆ ತಾನ ನಾಮು ಟೀ ಕುಡಿಯದು" ರಂಗ ಉತ್ತರಿಸಿದ. "ಬುಡ್ಡ, ಆ ಕಾಲದ್ ಮಾತ್ ಯಾತಕ್ ಆಡಿಯೆ. ಎಲ್ಲಾ ಕೆಟ್ಟೊಯ್ತು. ನೋಡು ಅಮಾ ಸಂತೋಷ, ನನ್ ಎದುರ್ಗೈ ಕಾಲ್ ಮ್ಯಾಲ ಕಾಲಕ್ಕಂದ್ ಕೂತನೈ. ಕ್ಯೋಳಮು ಅಂದ್ರು ಅದ್ಯಾನ ಮಹಾನಾಯಕ..‌ ಅಂಬೇಡ್ಕರ್ರು... ಅಂತಾನೈ. ಅದೇಂಡ ಅಮಾ ಅಷ್ಟ್ ಬುದ್ಧಿವಂತನಾ? ನಮ್ ಬುದ್ಯವ್ರಿಗಿಂತ ಬುದ್ಧಿವಂತನಾ?"

"ಅಪ್ಪೋ, ಇದ್ಯಾನ್ ಹಿಂಗ್ ಅಂದೈ. ಮೊಕ್ಕ ಟೀ ಎರಚ್ ಬುಟ್ಟಾನು. ನಮ್ ಕಾಲದಲಿ ಏನೋ ಮೋಡ್ ಗಾಲ. ನೀಮ್ ಯೋಳ್ದಂಗ್ ಕ್ಯೋಳ್ಕಂಡ್ ಬಿದ್ದಿದ್ಮು‌. ಈಗ್ಲು ಅಂಗೆಯಾ? ಅದೇ, ನಿಮ್ಮವರ್ಗಾದ್ರೆ ಸ್ಟೀಲ್ ಲೋಟ. ನಮ್ಮವರ್ಗ ಪೇಪರ್ ಲೋಟ..." ರಂಗ ಹೇಳುತ್ತಿದ್ದ... "ಡೋ, ನಮ್ಮೂರ್ಲಿ ನೀರ್ಗ ಕಷ್ಟ ಅಂತ ನಿಂಗ್ ಗೊತ್ತಿಲ್ವಡ. ಅದುಕ್ಕೆ ಕಡ ಪೇಪರ್ ಲೋಟ, ಪೇಪರ್ ತಟ್ಟೆ. ಒಂದ್ ಕೆಲ್ಸ ಮಾಡ್ತೀನ್ ಬುಡು, ನಾಳಯಿಂದ ಬಾಳ ಯಲ ಕೊಡ್ತೀನಿ...". 

"ಒಪ್ಪೊವ್, ನಿಮ್ಮವ್ರ್ ಗ್ಯಾಕ ಸ್ಟೀಲ್ ಲೋಟ ಕೊಟ್ಟಯಿ ಅದ್ಯೋಳು. ನಮ್ ಕರ್ಮ ಪೇಪರ್ ಲೋಟದಲ್ಲೆ ಕುಡಿತಿಮಿ. ಅದ್ಯೋಳು ಅದ್ಯಾಕ ನಿಮ್ಮವ್ರ್ ಗ ಸ್ಟೀಲ್ ಲೋಟ, ಸ್ಟೀಲ್ ತಟ್ಟೆ, ಒಳಕ್ಕೆ ಕರ್ಕಂದು ಇಕ್ಕತಿದೈ. ನಮ್ಮನ್ನ ಹೊರ್ಗ ಕಟ್ಟ ಮ್ಯಾಲ ಕೂರ್ಸಿ ಕೊಡ್ತಿದೈ. ನೋಡು ನಮ್ ಸಂತೋಷನ ತಂಟ್ಕ ಬರ್ ಬ್ಯಾಡ. ಅಮ ಅಂಬೇಡ್ಕರು ಬುದ್ಧ ಏನಾರ ಅಂದ್ಕಳ್ಳಿ. ಸಿಟಿ ಸೇರ್ಕಳ್ಳಿ ಬುಡಪ್ಪ. ಯ್ಯಾನ, ನಿನ್ ತಮೆ ಬಂದು ನನ್ ಥರಾನೆ ಪೇಪರ್ ಲೋಟ‌‌‌.. ಪೇಪರ್ ತಟ್ಟೆ.. ಥೂ! ಅದೆ, ಮಾನಾಯ್ಕದಲ್ಲಿ ತೋರಿಸ್ ದ್ರಲ್ಲ ಕಂಟ ಕಟ್ಕಂಡು ಬರ್ಬೇಕ? ಕಸಬಳ್ಳು ಕಟ್ಕಂಡು ಬರ್ಬೇಕ? ಒಬ್ಬರ್ಗೊಂತರ ಕೊಡದ್ನ ಮಾಡದ್ನ ನಿಲ್ಸು. ಜನ ಎಚ್ಚತ್ಗಂಡರ. ನೋಡು, ಹಿಂಗೆ ಆದ್ರ ನಾನೆ ಒಂದ್ ಹೋಟ್ಲು ತಗತಿನಿ. ಎಲ್ಲರ್ಗು ಸ್ಟೀಲ್ ತಟ್ಟೆ ಸ್ಟೀಲ್ ಲೋಟ... ಅದೆ ಸರಿ... ಅದೆ ಸರಿ. ನೀಮ್ ಈ ಕಾಲಕ್ಕ ಉದ್ಧಾರ ಆಗಲ್ಲ... ನ್ಯಡ್ಡ ಸಂತೋಸ, ಅದ್ಯಾನ್ ಕಿಂತ್ಕಂಡನು ಇಮ. ನಾಮೇ ಒಂದ್ ಹೊಟ್ಲು ತಗೆಯಮ್ ಕಡ. ನಾಮೆ ಕುಡಿಯಮ್ ಕಡ, ನಾಮೆ ಉಣ್ಣಮು.. ಸ್ಟೀಲ್ ಲೋಟದಲ್ಲೆ ಸ್ಟೀಲ್ ತಟ್ಟೆಲೇ.. ಸ್ಟೀಲ್ ತಟ್ಟೆಲೇ...

***

Comments

Popular posts from this blog

ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆಗಳು

  ಹಿಂದೂ ಮತ್ತು ಅಸ್ಪೃಶ್ಯನೊಬ್ಬ ಪ್ರಯಾಣ ಮಾಡುವ ಸಂದರ್ಭದಲ್ಲಿ ಪರಸ್ಪರ ಭೇಟಿಯಾದಾಗ... "ಯಾವಾಗಲಾದರೊಮ್ಮೆ ಅಕ್ಕಪಕ್ಕ ಕುಳಿತು ಪ್ರಯಾಣ ಮಾಡುವ ಸಂದರ್ಭದಲ್ಲಿ ಪರಸ್ಪರ ಜಾತಿ ತಿಳಿಯದಿದ್ದಾಗ ಜಾತಿವಾದಿ ಹಿಂದೂಗಳು ಮತ್ತು ಅಸ್ಪೃಶ್ಯರು ತುಂಬಾ ಆಪ್ತ ಸ್ನೇಹಿತರಂತೆ ವರ್ತಿಸುತ್ತಾರೆ. ಪರಸ್ಪರ ಬೀಡಿ, ಸಿಗರೆಟ್, ಹಣ್ಣುಗಳು, ಎಲೆ- ಅಡಿಕೆ ಹೀಗೆ ಅವರು ಹಂಚಿಕೊಳ್ಳುತ್ತಾರೆ. ಆದರೆ ಇದ್ದಕ್ಕಿದ್ದಂತೆ ಆ ಹಿಂದೂ ವ್ಯಕ್ತಿಗೆ ತಾನು ಇಷ್ಟು ಹೊತ್ತು ಮಾತನಾಡುತ್ತಿದ್ದ ವ್ಯಕ್ತಿ ಅಸ್ಪೃಶ್ಯ ಎಂದು ತಿಳಿಯುತ್ತಿದ್ದಂತೆ ಆತನ ಮನಸ್ಸಿನಲ್ಲಿ ದ್ವೇಷದ ಮನೋಭಾವ ಮೊಳಕೆಯೊಡೆಯುತ್ತದೆ, ತಾನು ಮೋಸಗೊಳಗಾದೆನೆಲ್ಲ ಎಂದು ಆತ ಯೋಚಿಸಲು ಆರಂಭಿಸುತ್ತಾನೆ. ಆತ ಕೋಪಗೊಳ್ಳುತ್ತಾನೆ. ಅಂತಿಮವಾಗಿ ತಾತ್ಕಾಲಿಕ ಆ ಸ್ನೇಹ ಜಗಳ ಮತ್ತು ಬೈಗುಳದ ಮೂಲಕ ಅಂತ್ಯಗೊಳ್ಳುತ್ತದೆ". -ಡಾ.ಬಿ.ಆರ್.ಅಂಬೇಡ್ಕರ್ ( Ambedkar writings and speeches, Vol.17, Part 3, Pp.132) ಕನ್ನಡಕ್ಕೆ: ರಘೋತ್ತಮ ಹೊಬ)

ಮುಂದೊಂದು ದಿನ ಎಲ್ಲರೂ ಬೌದ್ಧರಾಗಲಿದ್ದಾರೆ -ಡಾ.ಅಂಬೇಡ್ಕರ್

  "ಪ್ರತಿಯೊಂದು ಧರ್ಮವು ಉತ್ತರಿಸಬೇಕಾದ ಒಂದು ಪ್ರಶ್ನೆ ಇದೆ. ಅದೆಂದರೆ ತಳ ಸಮುದಾಯ ಮತ್ತು ದೌರ್ಜನ್ಯ ಪೀಡಿತ ಸಮುದಾಯಗಳಿಗೆ ಧರ್ಮವೊಂದು ನೀಡಬಹುದಾದ ನೈತಿಕ ಮತ್ತು ಬೌದ್ಧಿಕ ಬೆಂಬಲವಾದರು ಏನು ಎಂಬುದು? ಧರ್ಮವೊಂದು ಅಂತಹದ್ದೊಂದು ಬೆಂಬಲ ನೀಡಲಿಲ್ಲ ಎಂದರೆ ಅದು ದುರದೃಷ್ಟಕರ ಪರಿಸ್ಥಿತಿಯಲ್ಲಿ ಇದೆ ಎಂದೆ ಅರ್ಥ. ಆದ್ದರಿಂದ  ಹಿಂದೂ ಧರ್ಮವು  ಕೋಟ್ಯಾಂತರ ಸಂಖ್ಯೆಯಲ್ಲಿ ಇರುವ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಜನರಿಗೆ ನೈತಿಕ ಮತ್ತು ಬೌದ್ಧಿಕ ಬೆಂಬಲ ನೀಡುತ್ತದೆಯೇ? ಖಂಡಿತ ಇಲ್ಲ. ಈ ನಿಟ್ಟಿನಲ್ಲಿ ತಮಗೆ ಬೌದ್ಧಿಕ ಮತ್ತು ನೈತಿಕ ಬೆಂಬಲ ನೀಡದ ಹಿಂದೂ ಧರ್ಮದ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಜನರು ಇರಲು ಬಯಸುತ್ತಾರೆ ಎಂದು ಹಿಂದೂಗಳು ಅಪೇಕ್ಷೆ ಪಡಲು ಸಾಧ್ಯವೇ? ಅಂದಹಾಗೆ ಅಂತಹದ್ದೊಂದು ಅಪೇಕ್ಷೆ ಅಕ್ಷರಶಃ ವ್ಯರ್ಥದ್ದು.  "ಯಾಕೆಂದರೆ ಹಿಂದೂ ಧರ್ಮ ಅದು ಜ್ವಾಲಾಮುಖಿಯ ಮೇಲೆ ತೇಲುತ್ತಿದೆ. ಆ ನಿಟ್ಟಿನಲ್ಲಿ ಇಂದು ಅದು(ಜ್ವಾಲಾಮುಖಿ) ನಂದಿದ ಹಾಗೆ ಕಾಣುತ್ತಿದೆ. ಆದರೆ ವಾಸ್ತವ ಅದಲ್ಲ‌‌. ಮೊಂದೊಂದು ದಿನ ಈ ಕೋಟ್ಯಂತರ (ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ) ಮಂದಿಗೆ ತಮ್ಮ ಈ ಹೀನ ಸ್ಥಿತಿಯ ಬಗ್ಗೆ ಅರಿವಾದಾಗ ಮತ್ತು ಅದಕ್ಕೆ ಹಿಂದೂ ಧರ್ಮದ ಸಾಮಾಜಿಕ ತತ್ವ ಕಾರಣ ಎಂದು ತಿಳಿದಾಗ ಆ ಜ್ವಾಲಾಮುಖಿ ಜೀವಂತಗೊಳ್ಳಲಿದೆ. ಇದಕ್ಕೆ ಸಾಕ್ಷಿಯಾಗಿ ರೋಮನ್ ಸಾಮ್ರಾಜ್ಯದಲ್ಲಿ ಕ್ರಿಶ್ಚಿಯ...

ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್: ಮರೆಯಬಾರದ ಮೈಸೂರು ದೊರೆ

  ನಾಲ್ವಡಿ ಕೃಷ್ಣರಾಜ ಒಡೆಯರ್ -ರಘೋತ್ತಮ ಹೊಬ "ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು" ಇದು ಬಾಬಾಸಾಹೇಬ್ ಡಾ.ಅಂಬೇಡ್ಕರ್ ರವರ ಸುಪ್ರಸಿದ್ದ ನಾಣ್ಣುಡಿ. ಅದರಲ್ಲೂ ಹಳೆ ಮೈಸೂರು ಭಾಗದವರು ತಮ್ಮ ಭವ್ಯ ಇತಿಹಾಸವನ್ನು ಮರೆಯಲೇಬಾರದು. ಏಕೆಂದರೆ ರಾಜ್ಯದ ಇತರೆ ಪ್ರದೇಶಗಳಿಗೆ ಹೋಲಿಸಿದರೆ ಹಳೆ ಮೈಸೂರು ಭಾಗ ಅಭಿವೃದ್ಧಿಯಲ್ಲಿ ಮಂಚೂಣಿಯಲ್ಲಿದೆ ಎಂದರೆ ಅದಕ್ಕೆ ಕಾರಣ ಅದರ ಭವ್ಯ ಇತಿಹಾಸ. ಇಂತಹ ಭವ್ಯ ಇತಿಹಾಸದ ನಿರ್ಮಾತೃವಾಗಿ ತನ್ಮೂಲಕ ಮಾದರಿ ಮೈಸೂರಿಗೆ ಮುನ್ನುಡಿ ಬರೆದ ಧೃವತಾರೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್. ಆಳರಸರಿಗೆ ಮಾದರಿಯಾದ ರಾಜಯೋಗಿ.  ನಾಲ್ವಡಿಯವರು ಜನಿಸಿದ್ದು 1884 ರ ಜೂನ್ 4ರಂದು. ತಂದೆ ಶ್ರೀ ಚಾಮರಾಜ ಒಡೆಯರ್, ತಾಯಿ ಕೆಂಪನಂಜಮ್ಮಣ್ಣಿ (ವಾಣಿ ವಿಲಾಸ ಸನ್ನಿಧಾನ). ಬಾಲಕ ಕೃಷ್ಣರಾಜರ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಮೈಸೂರಿನಲ್ಲೇ. ರಾಯಲ್ ಸ್ಕೂಲ್ ಎಂಬ ಪ್ರತ್ಯೇಕ ಶಾಲೆಯಲ್ಲಿ ಇವರ ಸಹಪಾಠಿಗಳಾಗಿದ್ದವರು ಮಿರ್ಜಾ  ಇಸ್ಮಾಯಿಲ್, ಲಕ್ಷ್ಮೀಕಾಂತರಾಜ್ ಅರಸ್, ಮುಂತಾದವರು. 1894 ರಲ್ಲಿ ತಂದೆ ಚಾಮರಾಜ ಒಡೆಯರ್ ರವರ ನಿಧನದಿಂದಾಗಿ ಬಾಲಕ ಕೃಷ್ಣರಾಜನಿಗೆ ರಾಜ್ಯದ ಹೊಣೆ ಬಿದ್ದಾಗ ಅವರಿಗೆ ಕೇವಲ 10 ವರ್ಷ. ಪೆಬ್ರವರಿ 1, 1895 ರಲ್ಲಿ ಯುವರಾಜ ಕೃಷ್ಣರಾಜರಿಗೆ ಪಟ್ಟಾಭಿಷೇಕ ಮಹೋತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ ಬ್ರಿಟಿಷ್ ರಿಜೆನ್ಸಿ ಆಳ್ವಿಕೆಯಲ್ಲಿ ಮೈಸೂರಿನ ಗೌರ್ನರ್ ಮತ್ತು ಮಹಾರಾಜರ ಟ್ಯೂಟರ...