Skip to main content

ಕತೆ: ಸ್ಟೀಲ್ ತಟ್ಟೆ

 

-ರಘೋತ್ತಮ ಹೊ.ಬ

"ಏನಪ್ಪೊ, ಚಂದಾಗಿದಿಯ?" ರಂಗಣ್ಣ ಹೋಟೆಲ್ ಮಹದೇವಪ್ಪನ್ನ ಕೇಳಿದ. "ಬಾ ರಂಗ ಎಲ್ಲಾ ಕೊರೊನ. ಮಳ ಬ್ಯಳ ಬ್ಯಾರ ಕಿತ್ಕ ಹೊಯ್ತು. ಟೀ ಕೊಡ್ಲ, ಕುಡ್ದಯ" ಮಹಾದೇವಪ್ಪ ಹೇಳಿದ. "ತತ್ತ, ನಮ್ಮಪ್ಪನ್ ಕಾಲ್ದಿಂದ್ಲು ನಿನ್ ತಮೆ ತಾನ ನಾಮು ಟೀ ಕುಡಿಯದು" ರಂಗ ಉತ್ತರಿಸಿದ. "ಬುಡ್ಡ, ಆ ಕಾಲದ್ ಮಾತ್ ಯಾತಕ್ ಆಡಿಯೆ. ಎಲ್ಲಾ ಕೆಟ್ಟೊಯ್ತು. ನೋಡು ಅಮಾ ಸಂತೋಷ, ನನ್ ಎದುರ್ಗೈ ಕಾಲ್ ಮ್ಯಾಲ ಕಾಲಕ್ಕಂದ್ ಕೂತನೈ. ಕ್ಯೋಳಮು ಅಂದ್ರು ಅದ್ಯಾನ ಮಹಾನಾಯಕ..‌ ಅಂಬೇಡ್ಕರ್ರು... ಅಂತಾನೈ. ಅದೇಂಡ ಅಮಾ ಅಷ್ಟ್ ಬುದ್ಧಿವಂತನಾ? ನಮ್ ಬುದ್ಯವ್ರಿಗಿಂತ ಬುದ್ಧಿವಂತನಾ?"

"ಅಪ್ಪೋ, ಇದ್ಯಾನ್ ಹಿಂಗ್ ಅಂದೈ. ಮೊಕ್ಕ ಟೀ ಎರಚ್ ಬುಟ್ಟಾನು. ನಮ್ ಕಾಲದಲಿ ಏನೋ ಮೋಡ್ ಗಾಲ. ನೀಮ್ ಯೋಳ್ದಂಗ್ ಕ್ಯೋಳ್ಕಂಡ್ ಬಿದ್ದಿದ್ಮು‌. ಈಗ್ಲು ಅಂಗೆಯಾ? ಅದೇ, ನಿಮ್ಮವರ್ಗಾದ್ರೆ ಸ್ಟೀಲ್ ಲೋಟ. ನಮ್ಮವರ್ಗ ಪೇಪರ್ ಲೋಟ..." ರಂಗ ಹೇಳುತ್ತಿದ್ದ... "ಡೋ, ನಮ್ಮೂರ್ಲಿ ನೀರ್ಗ ಕಷ್ಟ ಅಂತ ನಿಂಗ್ ಗೊತ್ತಿಲ್ವಡ. ಅದುಕ್ಕೆ ಕಡ ಪೇಪರ್ ಲೋಟ, ಪೇಪರ್ ತಟ್ಟೆ. ಒಂದ್ ಕೆಲ್ಸ ಮಾಡ್ತೀನ್ ಬುಡು, ನಾಳಯಿಂದ ಬಾಳ ಯಲ ಕೊಡ್ತೀನಿ...". 

"ಒಪ್ಪೊವ್, ನಿಮ್ಮವ್ರ್ ಗ್ಯಾಕ ಸ್ಟೀಲ್ ಲೋಟ ಕೊಟ್ಟಯಿ ಅದ್ಯೋಳು. ನಮ್ ಕರ್ಮ ಪೇಪರ್ ಲೋಟದಲ್ಲೆ ಕುಡಿತಿಮಿ. ಅದ್ಯೋಳು ಅದ್ಯಾಕ ನಿಮ್ಮವ್ರ್ ಗ ಸ್ಟೀಲ್ ಲೋಟ, ಸ್ಟೀಲ್ ತಟ್ಟೆ, ಒಳಕ್ಕೆ ಕರ್ಕಂದು ಇಕ್ಕತಿದೈ. ನಮ್ಮನ್ನ ಹೊರ್ಗ ಕಟ್ಟ ಮ್ಯಾಲ ಕೂರ್ಸಿ ಕೊಡ್ತಿದೈ. ನೋಡು ನಮ್ ಸಂತೋಷನ ತಂಟ್ಕ ಬರ್ ಬ್ಯಾಡ. ಅಮ ಅಂಬೇಡ್ಕರು ಬುದ್ಧ ಏನಾರ ಅಂದ್ಕಳ್ಳಿ. ಸಿಟಿ ಸೇರ್ಕಳ್ಳಿ ಬುಡಪ್ಪ. ಯ್ಯಾನ, ನಿನ್ ತಮೆ ಬಂದು ನನ್ ಥರಾನೆ ಪೇಪರ್ ಲೋಟ‌‌‌.. ಪೇಪರ್ ತಟ್ಟೆ.. ಥೂ! ಅದೆ, ಮಾನಾಯ್ಕದಲ್ಲಿ ತೋರಿಸ್ ದ್ರಲ್ಲ ಕಂಟ ಕಟ್ಕಂಡು ಬರ್ಬೇಕ? ಕಸಬಳ್ಳು ಕಟ್ಕಂಡು ಬರ್ಬೇಕ? ಒಬ್ಬರ್ಗೊಂತರ ಕೊಡದ್ನ ಮಾಡದ್ನ ನಿಲ್ಸು. ಜನ ಎಚ್ಚತ್ಗಂಡರ. ನೋಡು, ಹಿಂಗೆ ಆದ್ರ ನಾನೆ ಒಂದ್ ಹೋಟ್ಲು ತಗತಿನಿ. ಎಲ್ಲರ್ಗು ಸ್ಟೀಲ್ ತಟ್ಟೆ ಸ್ಟೀಲ್ ಲೋಟ... ಅದೆ ಸರಿ... ಅದೆ ಸರಿ. ನೀಮ್ ಈ ಕಾಲಕ್ಕ ಉದ್ಧಾರ ಆಗಲ್ಲ... ನ್ಯಡ್ಡ ಸಂತೋಸ, ಅದ್ಯಾನ್ ಕಿಂತ್ಕಂಡನು ಇಮ. ನಾಮೇ ಒಂದ್ ಹೊಟ್ಲು ತಗೆಯಮ್ ಕಡ. ನಾಮೆ ಕುಡಿಯಮ್ ಕಡ, ನಾಮೆ ಉಣ್ಣಮು.. ಸ್ಟೀಲ್ ಲೋಟದಲ್ಲೆ ಸ್ಟೀಲ್ ತಟ್ಟೆಲೇ.. ಸ್ಟೀಲ್ ತಟ್ಟೆಲೇ...

***

Comments

Popular posts from this blog

ಶೌಚಾಲಯ ಶುಚಿಗೊಳಿಸುವುದನ್ನು "ಆ ಸಮುದಾಯ"ದವರೇ ಮಾಡಬೇಕೆ?

  ಸಂಸ್ಥೆಯೊಂದರಲ್ಲಿ ಮೀಟಿಂಗ್ ನಡೆಯುತ್ತಿತ್ತು. ಸದಸ್ಯರೊಬ್ಬರು "ನಮ್ಮ ಸಂಸ್ಥೆಯ ಶೌಚಾಲಯಗಳೆಲ್ಲವೂ ಗಲೀಜು ಆಗಿವೆ. ಆ ಯಮ್ಮನನ್ನು ಕರೆಸಿ" ಎಂದು ಮುಖ್ಯಸ್ಥರನ್ನು ಒತ್ತಾಯಿಸಿದರು. ಮತ್ತೊಬ್ಬರು "ಆ ಯಮ್ಮ ಸರಿಯಾಗಿ ಕ್ಲೀನ್ ಮಾಡೋಲ್ಲ, ಅವಳಿಗೆ ಕೊಬ್ಬು,"  ಹೀಗೆ ನಾಲಿಗೆ ಮೇಲೆ ಹಿಡಿತವಿಲ್ಲದೆ ಮಾತಾಡುತ್ತ ಹೋದರು!  ಹೌದು, ಅವರು ಮಾತಾಡುತ್ತಿದ್ದದ್ದು ಅಸ್ಪೃಶ್ಯ ಸಮುದಾಯವಾದ ಪೌರಕಾರ್ಮಿಕ ಸಮುದಾಯದ ಮಹಿಳೆಯೊಬ್ಬರ ಬಗ್ಗೆ. ಎಷ್ಟು ಕ್ರೂರವಾಗಿ ಅವರು ಆಕೆಯ ಬಗ್ಗೆ ಮಾತನಾಡುತ್ತಿದ್ದರೆಂದರೆ ಅವಳು ಕೂಡ ಮನುಷ್ಯಳು, ಅವಳಿಗೂ ಕೂಡ ಮಾನವ ಹಕ್ಕಿದೆ, ಆಕೆಗೂ ಕೂಡ ಗೌರವ ಕೊಡಬೇಕು, ಊಹ್ಞೂಂ, ಇಂತಹ ಸಣ್ಣ ಮನೋಭಾವವೂ ಅವರಲ್ಲಿರಲಿಲ್ಲ. ಜಾತಿ ವ್ಯವಸ್ಥೆಯ ಭೀಕರ ಚಿತ್ರಣ ಅಲ್ಲಿ ಎದ್ದು  ಕಾಣುತ್ತಿತ್ತು.  ಈ ದಿಸೆಯಲ್ಲಿ ಉಕ್ಕಿಬರುವ ಪ್ರಶ್ನೆಗಳೇನೆಂದರೆ ಶೌಚಾಲಯ ಶುಚಿಗೊಳಿಸುವುದನ್ನು ಪೌರಕಾರ್ಮಿಕ ಸಮುದಾಯವೇ ಏಕೆ ಮಾಡಬೇಕು? ಆ ಕಾಯಕವನ್ನು ಎಲ್ಲಾ ಜಾತಿಯವರು ಏಕೆ ಮಾಡಬಾರದು? ಯಾಕೆಂದರೆ ಉದಾಹರಣೆಗೆ ವ್ಯಕ್ತಿಗಳು ಅವರು ಶೌಚ ಮಾಡಿದ ನಂತರ ಅವರದ್ದನ್ನು ಅವರೇ ತೊಳೆದುಕೊಳ್ಳುತ್ತಾರಲ್ಲವೇ? ಅದಕ್ಕೂ ಒಬ್ಬ ಆಳನ್ನು "ಇಲ್ಲ, ಇದನ್ನು ನಾನು ಮುಟ್ಟುವುದಿಲ್ಲ. ಇದು ಗಲೀಜು"ಎಂದು ನೇಮಿಸಿಕೊಳ್ಳುತ್ತಾರೆಯೇ? ಇಲ್ಲ. ಹೀಗಿರುವಾಗ ಅವರದ್ದನ್ನು ಅವರು ತೊಳೆದುಕೊಳ್ಳುವಾಗ ಶೌಚಾಲಯ ಶುಚಿಗೊಳಿಸಲು ನಿರ್ದಿಷ್ಟ ಸಮುದಾಯದವರನ್ನು ಯ...

ಅವಕಾಶ ಕಿತ್ತುಕೊಳ್ಳಬೇಕು -ರಘೋತ್ತಮ ಹೊ.ಬ

ಶೋಷಿತ ಸಮುದಾಯಗಳ ಎಷ್ಟೋ ಜನ ಯಾರಾದರೂ ನಮ್ಮನ್ನು ನಮ್ಮ ಒಳ್ಳೆಯತನ ನೋಡಿ ಉದ್ಧಾರ ಮಾಡುತ್ತಾರೆ ಎಂದುಕೊಳ್ಳುತ್ತಾರೆ. ವಾಸ್ತವ ಎಂದರೆ ಅದು ಹಾಗಲ್ಲ ಎಂಬುದು. ಉದಾಹರಣೆಗೆ ಕಚೇರಿಗಳಲ್ಲಿ "ಡಿ" ಗ್ರೂಪ್ ನೌಕರಿ ಕೆಲಸ ಒಬ್ಬ ಮಾಡುತ್ತಿರುತ್ತಾನೆ ಎಂದುಕೊಳ್ಳಿ. ಪ್ರಶ್ನೆ ಎಂದರೆ ಅಲ್ಲಿಯ ಅಧಿಕಾರಿ ಆ ಡಿ ಗ್ರೂಪ್ ನೌಕರರನಿಗೆ ಆತನ ಒಳ್ಳೆಯತನ ನೋಡಿ ಕರೆದು ತನ್ನ ಸ್ಥಾನ ಕೊಡುತ್ತಾನೆಯೇ? ಇಲ್ಲ. ಹೆಚ್ಚೆಂದರೆ ಅದನ್ನು ಆತ ಆತನ ನಿಷ್ಠೆ ಎಂದುಕೊಳ್ಳಬಹುದು ಒಂದಷ್ಟು ಸಿಂಪಥಿ ತೋರಬಹುದು ಅಷ್ಟೇ. ಭಾರತದ ಸಾಮಾಜಿಕ ವ್ಯವಸ್ಥೆಯು ಕೂಡ ಹೀಗೇನೆ‌. ಹಾಗಿದ್ದರೆ ಡಿ ಗ್ರೂಪ್ ನೌಕರ ಏನು ಮಾಡಬಹುದು? ತನ್ನ ಮಗನನ್ನು ಅಥವಾ ಮಗಳನ್ನು ಆ ಅಧಿಕಾರಿ ಮಟ್ಟಕ್ಕೆ ಓದಿಸಿ ಆ ಸ್ಥಾನ ಪಡೆಯಬಹುದು ಅವಕಾಶ ಪಡೆಯಬಹುದು. ಶೋಷಿತ ಸಮುದಾಯಗಳು ಅಷ್ಟೇ, ಚೆನ್ನಾಗಿ ಶಿಕ್ಷಣ ಪಡೆದು ಉನ್ನತ ಉದ್ಯೋಗ ಪಡೆದರೆ ಅಥವಾ ಪ್ರಸ್ತುತ ದಿನಗಳಲ್ಲಿ ಬುದ್ಧಿವಂತಿಕೆಯಿಂದ ಯಾವುದಾದರೂ ಬಿಸಿನೆಸ್ ನಲ್ಲಿ do or die ಮಾದರಿಯಲ್ಲಿ ಶ್ರಮ ಹಾಕಿ ಯಶಸ್ಸು ಪಡೆದರೆ ಆ ಸ್ಥಾನ ಪಡೆಯಬಹುದು. ಯಾರೂ ಕೂಡ ಕರೆದು ಅವಕಾಶ ಕೊಡುವುದಿಲ್ಲ.  ಘಟನೆಯೊಂದನ್ನು ಹೇಳುವುದಾದರೆ, ಒಂದು ಸಾರ್ವಜನಿಕ ಕಾರ್ಯಕ್ರಮ ನಡೆದಿತ್ತು. ನಾನು ವಯಕ್ತಿಕವಾಗಿ ಯಾರು ನನ್ನನ್ನು ಕರೆಯಲಿ ಬಿಡಲಿ ಎಂದು ನನ್ನ ಸ್ಥಾನವನ್ನು ಭದ್ರವಾಗಿ ಪಡೆದೆ ಒಂದು ಚೇರ್ ಮೇಲೆ ನಾನೇ ಹೋಗಿ ಕುಳಿತುಕೊಳ್ಳುವುದರ ಮೂಲಕ. ಆದರೆ ದಲಿತ ಸಮುದಾಯ...

ಪುಲಕೇಶಿ ಹೊಲೆಯರವನೆ? ಚಾಲುಕ್ಯರು ಛಲವಾದಿಗಳೇ? -ರಘೋತ್ತಮ ಹೊ.ಬ

"ಹೊಲಯರು - ಮಾದರು -ರಾಜರು" ಎಂಬ ತಮ್ಮ ಸಂಶೋಧನಾ ಕೃತಿಯಲ್ಲಿ ಸಂಶೋಧಕರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಆದ ಶ್ರೀ ಎಂ.ನಂಜುಂಡಸ್ವಾಮಿ ಐಪಿಎಸ್ ರವರು ಹೊಲೆಯರು ಮತ್ತು ಮಾದಿಗರು ಈ ಎರಡೂ ಜನಾಂಗಗಳು ಕರ್ನಾಟಕ ರಾಜ್ಯದಲ್ಲಿ ರಾಜರಾಗಿದ್ದವರು ರಾಜ್ಯ ಆಳಿದವರು ಎಂದು ಸಂಶೋಧನೆ ಮೂಲಕ ಸಾಧಿಸಿದ್ದಾರೆ. ಅದರಲ್ಲಿ ಬಹು ಮುಖ್ಯವಾದದ್ದು ಬಾದಾಮಿಯ ಚಾಲುಕ್ಯರು ಹೊಲೆಯ ವಂಶಸ್ಥರು ಮತ್ತು ಛಲವಾದಿ ಜನಾಂಗದವರು ಎಂದು ಲೇಖಕರು ತಮ್ಮ ಭಾಷಾಶಾಸ್ತ್ರದ ಸಂಶೋಧನೆಯ ಆಧಾರದಲ್ಲಿ ಹೇಳುತ್ತಾರೆ. "ಹೊಲಯರು - ಮಾದರು -ರಾಜರು" ಆ ಕೃತಿಯಲ್ಲಿ ಪುಟ ಸಂಖ್ಯೆ 96ರಲ್ಲಿ  ನಂಜುಂಡಸ್ವಾಮಿಯವರು ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯ ಮತ್ತು ಬೇಲೂರು ಚನ್ನಕೇಶವ ದೇವಾಲಯಗಳಲ್ಲಿ ಹೊಲೆಯನಿಗೆ ನೀಡುವ ಗೌರವ ಉಲ್ಲೇಖಿಸುತ್ತ "ಆ ಗೌರವ ರಾಜನಿಗೆ ನೀಡುವ ಗೌರವದಂತಿದೆ. ಹೊಲೆಯ ರಾಜನಿಂದಲೇ ಆ ದೇವಾಲಯ ನಿರ್ಮಾಣವಾಗಿರುವುದರ ಸಂಕೇತವಾಗಿ ಆತನಿಗೆ ಈಗಲೂ ಆ ಗೌರವ ಸಿಗುತ್ತಿದೆ" ಎಂದು ಹೇಳುತ್ತಾರೆ. ಇನ್ನೂ ಬಾಗಲಕೋಟೆಯ ದೇಸಾಯಿಗಳು ಈಗಲೂ ಹೊಲೆಯರ ಮನೆಯಿಂದ ಬೆಂಕಿ ತರುವ ಸಂಪ್ರದಾಯವನ್ನು ಸಹ ಲೇಖಕರು ಉಲ್ಲೇಖಿಸುತ್ತಾರೆ. ಆ  ಹಿನ್ನೆಲೆಯಲ್ಲಿ "ಹಿಂದೆ ನಾವು ಈ ನಾಡನ್ನು ಆಳಿದ ರಾಜರು. ಅದಕ್ಕಾಗಿ ನಮ್ಮ ಬಳಿ ಸಾಂಕೇತಿಕವಾಗಿ ಈಗಲೂ ಬಂದು ದೇಸಾಯಿಗಳು ಬೆಂಕಿ ಪಡೆದುಕೊಳ್ಳುತ್ತಿದ್ದಾರೆ. ಈಗ ನಮ್ಮನ್ನು ಛಲವಾದಿಗಳು ಎನ್ನುವರು. ಹಿಂದೆ ನ...