Skip to main content

ಕತೆ: ಸ್ಟೀಲ್ ತಟ್ಟೆ

 

-ರಘೋತ್ತಮ ಹೊ.ಬ

"ಏನಪ್ಪೊ, ಚಂದಾಗಿದಿಯ?" ರಂಗಣ್ಣ ಹೋಟೆಲ್ ಮಹದೇವಪ್ಪನ್ನ ಕೇಳಿದ. "ಬಾ ರಂಗ ಎಲ್ಲಾ ಕೊರೊನ. ಮಳ ಬ್ಯಳ ಬ್ಯಾರ ಕಿತ್ಕ ಹೊಯ್ತು. ಟೀ ಕೊಡ್ಲ, ಕುಡ್ದಯ" ಮಹಾದೇವಪ್ಪ ಹೇಳಿದ. "ತತ್ತ, ನಮ್ಮಪ್ಪನ್ ಕಾಲ್ದಿಂದ್ಲು ನಿನ್ ತಮೆ ತಾನ ನಾಮು ಟೀ ಕುಡಿಯದು" ರಂಗ ಉತ್ತರಿಸಿದ. "ಬುಡ್ಡ, ಆ ಕಾಲದ್ ಮಾತ್ ಯಾತಕ್ ಆಡಿಯೆ. ಎಲ್ಲಾ ಕೆಟ್ಟೊಯ್ತು. ನೋಡು ಅಮಾ ಸಂತೋಷ, ನನ್ ಎದುರ್ಗೈ ಕಾಲ್ ಮ್ಯಾಲ ಕಾಲಕ್ಕಂದ್ ಕೂತನೈ. ಕ್ಯೋಳಮು ಅಂದ್ರು ಅದ್ಯಾನ ಮಹಾನಾಯಕ..‌ ಅಂಬೇಡ್ಕರ್ರು... ಅಂತಾನೈ. ಅದೇಂಡ ಅಮಾ ಅಷ್ಟ್ ಬುದ್ಧಿವಂತನಾ? ನಮ್ ಬುದ್ಯವ್ರಿಗಿಂತ ಬುದ್ಧಿವಂತನಾ?"

"ಅಪ್ಪೋ, ಇದ್ಯಾನ್ ಹಿಂಗ್ ಅಂದೈ. ಮೊಕ್ಕ ಟೀ ಎರಚ್ ಬುಟ್ಟಾನು. ನಮ್ ಕಾಲದಲಿ ಏನೋ ಮೋಡ್ ಗಾಲ. ನೀಮ್ ಯೋಳ್ದಂಗ್ ಕ್ಯೋಳ್ಕಂಡ್ ಬಿದ್ದಿದ್ಮು‌. ಈಗ್ಲು ಅಂಗೆಯಾ? ಅದೇ, ನಿಮ್ಮವರ್ಗಾದ್ರೆ ಸ್ಟೀಲ್ ಲೋಟ. ನಮ್ಮವರ್ಗ ಪೇಪರ್ ಲೋಟ..." ರಂಗ ಹೇಳುತ್ತಿದ್ದ... "ಡೋ, ನಮ್ಮೂರ್ಲಿ ನೀರ್ಗ ಕಷ್ಟ ಅಂತ ನಿಂಗ್ ಗೊತ್ತಿಲ್ವಡ. ಅದುಕ್ಕೆ ಕಡ ಪೇಪರ್ ಲೋಟ, ಪೇಪರ್ ತಟ್ಟೆ. ಒಂದ್ ಕೆಲ್ಸ ಮಾಡ್ತೀನ್ ಬುಡು, ನಾಳಯಿಂದ ಬಾಳ ಯಲ ಕೊಡ್ತೀನಿ...". 

"ಒಪ್ಪೊವ್, ನಿಮ್ಮವ್ರ್ ಗ್ಯಾಕ ಸ್ಟೀಲ್ ಲೋಟ ಕೊಟ್ಟಯಿ ಅದ್ಯೋಳು. ನಮ್ ಕರ್ಮ ಪೇಪರ್ ಲೋಟದಲ್ಲೆ ಕುಡಿತಿಮಿ. ಅದ್ಯೋಳು ಅದ್ಯಾಕ ನಿಮ್ಮವ್ರ್ ಗ ಸ್ಟೀಲ್ ಲೋಟ, ಸ್ಟೀಲ್ ತಟ್ಟೆ, ಒಳಕ್ಕೆ ಕರ್ಕಂದು ಇಕ್ಕತಿದೈ. ನಮ್ಮನ್ನ ಹೊರ್ಗ ಕಟ್ಟ ಮ್ಯಾಲ ಕೂರ್ಸಿ ಕೊಡ್ತಿದೈ. ನೋಡು ನಮ್ ಸಂತೋಷನ ತಂಟ್ಕ ಬರ್ ಬ್ಯಾಡ. ಅಮ ಅಂಬೇಡ್ಕರು ಬುದ್ಧ ಏನಾರ ಅಂದ್ಕಳ್ಳಿ. ಸಿಟಿ ಸೇರ್ಕಳ್ಳಿ ಬುಡಪ್ಪ. ಯ್ಯಾನ, ನಿನ್ ತಮೆ ಬಂದು ನನ್ ಥರಾನೆ ಪೇಪರ್ ಲೋಟ‌‌‌.. ಪೇಪರ್ ತಟ್ಟೆ.. ಥೂ! ಅದೆ, ಮಾನಾಯ್ಕದಲ್ಲಿ ತೋರಿಸ್ ದ್ರಲ್ಲ ಕಂಟ ಕಟ್ಕಂಡು ಬರ್ಬೇಕ? ಕಸಬಳ್ಳು ಕಟ್ಕಂಡು ಬರ್ಬೇಕ? ಒಬ್ಬರ್ಗೊಂತರ ಕೊಡದ್ನ ಮಾಡದ್ನ ನಿಲ್ಸು. ಜನ ಎಚ್ಚತ್ಗಂಡರ. ನೋಡು, ಹಿಂಗೆ ಆದ್ರ ನಾನೆ ಒಂದ್ ಹೋಟ್ಲು ತಗತಿನಿ. ಎಲ್ಲರ್ಗು ಸ್ಟೀಲ್ ತಟ್ಟೆ ಸ್ಟೀಲ್ ಲೋಟ... ಅದೆ ಸರಿ... ಅದೆ ಸರಿ. ನೀಮ್ ಈ ಕಾಲಕ್ಕ ಉದ್ಧಾರ ಆಗಲ್ಲ... ನ್ಯಡ್ಡ ಸಂತೋಸ, ಅದ್ಯಾನ್ ಕಿಂತ್ಕಂಡನು ಇಮ. ನಾಮೇ ಒಂದ್ ಹೊಟ್ಲು ತಗೆಯಮ್ ಕಡ. ನಾಮೆ ಕುಡಿಯಮ್ ಕಡ, ನಾಮೆ ಉಣ್ಣಮು.. ಸ್ಟೀಲ್ ಲೋಟದಲ್ಲೆ ಸ್ಟೀಲ್ ತಟ್ಟೆಲೇ.. ಸ್ಟೀಲ್ ತಟ್ಟೆಲೇ...

***

Comments

Popular posts from this blog

ಪುಲಕೇಶಿ ಹೊಲೆಯರವನೆ? ಚಾಲುಕ್ಯರು ಛಲವಾದಿಗಳೇ? -ರಘೋತ್ತಮ ಹೊ.ಬ

"ಹೊಲಯರು - ಮಾದರು -ರಾಜರು" ಎಂಬ ತಮ್ಮ ಸಂಶೋಧನಾ ಕೃತಿಯಲ್ಲಿ ಸಂಶೋಧಕರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಆದ ಶ್ರೀ ಎಂ.ನಂಜುಂಡಸ್ವಾಮಿ ಐಪಿಎಸ್ ರವರು ಹೊಲೆಯರು ಮತ್ತು ಮಾದಿಗರು ಈ ಎರಡೂ ಜನಾಂಗಗಳು ಕರ್ನಾಟಕ ರಾಜ್ಯದಲ್ಲಿ ರಾಜರಾಗಿದ್ದವರು ರಾಜ್ಯ ಆಳಿದವರು ಎಂದು ಸಂಶೋಧನೆ ಮೂಲಕ ಸಾಧಿಸಿದ್ದಾರೆ. ಅದರಲ್ಲಿ ಬಹು ಮುಖ್ಯವಾದದ್ದು ಬಾದಾಮಿಯ ಚಾಲುಕ್ಯರು ಹೊಲೆಯ ವಂಶಸ್ಥರು ಮತ್ತು ಛಲವಾದಿ ಜನಾಂಗದವರು ಎಂದು ಲೇಖಕರು ತಮ್ಮ ಭಾಷಾಶಾಸ್ತ್ರದ ಸಂಶೋಧನೆಯ ಆಧಾರದಲ್ಲಿ ಹೇಳುತ್ತಾರೆ. "ಹೊಲಯರು - ಮಾದರು -ರಾಜರು" ಆ ಕೃತಿಯಲ್ಲಿ ಪುಟ ಸಂಖ್ಯೆ 96ರಲ್ಲಿ  ನಂಜುಂಡಸ್ವಾಮಿಯವರು ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯ ಮತ್ತು ಬೇಲೂರು ಚನ್ನಕೇಶವ ದೇವಾಲಯಗಳಲ್ಲಿ ಹೊಲೆಯನಿಗೆ ನೀಡುವ ಗೌರವ ಉಲ್ಲೇಖಿಸುತ್ತ "ಆ ಗೌರವ ರಾಜನಿಗೆ ನೀಡುವ ಗೌರವದಂತಿದೆ. ಹೊಲೆಯ ರಾಜನಿಂದಲೇ ಆ ದೇವಾಲಯ ನಿರ್ಮಾಣವಾಗಿರುವುದರ ಸಂಕೇತವಾಗಿ ಆತನಿಗೆ ಈಗಲೂ ಆ ಗೌರವ ಸಿಗುತ್ತಿದೆ" ಎಂದು ಹೇಳುತ್ತಾರೆ. ಇನ್ನೂ ಬಾಗಲಕೋಟೆಯ ದೇಸಾಯಿಗಳು ಈಗಲೂ ಹೊಲೆಯರ ಮನೆಯಿಂದ ಬೆಂಕಿ ತರುವ ಸಂಪ್ರದಾಯವನ್ನು ಸಹ ಲೇಖಕರು ಉಲ್ಲೇಖಿಸುತ್ತಾರೆ. ಆ  ಹಿನ್ನೆಲೆಯಲ್ಲಿ "ಹಿಂದೆ ನಾವು ಈ ನಾಡನ್ನು ಆಳಿದ ರಾಜರು. ಅದಕ್ಕಾಗಿ ನಮ್ಮ ಬಳಿ ಸಾಂಕೇತಿಕವಾಗಿ ಈಗಲೂ ಬಂದು ದೇಸಾಯಿಗಳು ಬೆಂಕಿ ಪಡೆದುಕೊಳ್ಳುತ್ತಿದ್ದಾರೆ. ಈಗ ನಮ್ಮನ್ನು ಛಲವಾದಿಗಳು ಎನ್ನುವರು. ಹಿಂದೆ ನ...

ಕೆ ಆರ್ ಎಸ್.ನಿರ್ಮಾಣ: ವಾಸ್ತವ ಇತಿಹಾಸ

        - ರಘೋತ್ತಮ ಹೊಬ  ಅದು 1902 ನೇ ಇಸವಿ. ಏಷ್ಯಾದಲ್ಲೆ ಪ್ರಪ್ರಥಮ ಜಲವಿದ್ಯುತ್ ಉತ್ಪಾದನಾ  ಕೇಂದ್ರ ಸ್ಥಾಪನೆಯಾದ ವರ್ಷ. ಅಂದಹಾಗೆ ಅದನ್ನು ಸ್ಥಾಪಿಸಿದವರು ಮೈಸೂರಿನ ಅಂದಿನ ಮಹಾರಾಜ #ನಾಲ್ವಡಿ_ಕೃಷ್ಣರಾಜಒಡೆಯರ್‍ರವರು. ಬ್ರಿಟಿಷರೊಂದಿಗೆ  ಕೋಲಾರ ಚಿನ್ನದ ಗಣಿಗೆ ವಿದ್ಯುತ್ ಸರಬರಾಜು ಮಾಡುವ ಒಪ್ಪಂದ ಮಾಡಿಕೊಂಡಿದ್ದ ಅವರು ಆ ನಿಟ್ಟಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಶಿವನಸಮುದ್ರ ಎಂಬಲ್ಲಿ ಪ್ರಪ್ರಥಮ ಜಲವಿದ್ಯುತ್ ಕೇಂದ್ರ ಸ್ಥಾಪಿಸಿದರು ಮತ್ತು ಆ ಕಾಲದಲ್ಲೆ 30,000 ವೋಲ್ಟ್  ವಿದ್ಯುತ್‍ಅನ್ನು ಕೋಲಾರದ ಚಿನ್ನದÀ ಗಣಿಗೆ ವರ್ಗಾಯಿಸಿದರು. ಈ ಸಂದರ್ಭದಲ್ಲಿ ಒಂದು ಮಾತು ಅದೇನೆಂದರೆ ಆಗಿನ್ನು ಸರ್.ಎಂ.ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನಕ್ಕೆ ಪ್ರವೇಶ ಪಡೆದೇ ಇರಲಿಲ್ಲ!    ಇರಲಿ, ಜಲವಿದ್ಯುತ್ ಕೇಂದ್ರವನ್ನೇನೋ ಒಡೆಯರ್‍ರವರು ಸ್ಥಾಪಿಸಿದರು. ಆದರೆ ವಿದ್ಯುತ್ ಉತ್ಪಾದನೆಗೆ ನೀರು ವರ್ಷಾಕಾಲ ದೊರೆಯುತ್ತದೆಯೇ? ಖಂಡಿತ ಇಲ್ಲ. ಮಳೆ ಬಂದಾಗ ವಿದ್ಯುತ್. ಇಲ್ಲದಿದ್ರೆ ನೋ ವಿದ್ಯುತ್! ಬೇಸಿಗೆ ಕಾಲದಲ್ಲಂತೂ ಒಂದು ವೋಲ್ಟ್ ಉತ್ಪತ್ತಿ ಕೂಡ ಕಷ್ಟವಾಗಿತ್ತು. ಇದರಿಂದ ಚಿನ್ನದ ಗಣಿಗೆ ನಿರಂತರ ವಿದ್ಯುತ್ ಸರಬರಾಜು ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದ್ದ ಒಡೆಯರ್‍ರಿಗೆ  ಅದರ ಪೂರೈಕೆ ಸವಾಲಿನ ಕೆಲಸವಾಗಿತ್ತು. ಈ ಕಾರಣಕ್ಕಾಗಿ ಅಂದರೆ ವಿದ್ಯುತ್ ಉತ್ಪಾದನ ಕೇಂದ್ರಕ್ಕೆ ನ...

ಮುಚ್ಚಿಡಲ್ಪಟ್ಟ ಅಂಬೇಡ್ಕರ್ ರ ಭವ್ಯ ಇತಿಹಾಸ -ರಘೋತ್ತಮ ಹೊ.ಬ

  ಬಾಬಾಸಾಹೇಬ್ ಡಾ||ಅಂಬೇಡ್ಕರ್ ರವರ ಬಗ್ಗೆ ಈ ದೇಶದ ಜನತೆಗೆ ಏನು ಗೊತ್ತು? ಗೊತ್ತಿರುವುದಿಷ್ಟೆ, ಅಂಬೇಡ್ಕರರು ಯಾರೂ ಮುಟ್ಟಿಸಿಕೊಳ್ಳಲಾಗದ ಒಂದು ಕೀಳು ಜಾತಿಯಲಿ ಹುಟ್ಟಿದರು ಬಾಲ್ಯದಿಂದಲೆ ಅಸ್ಪೃಶ್ಯತೆಯ ನೋವನ್ನು ಅನುಭವಿಸಿದರು. ತಮ್ಮ ತಂದೆಯನ್ನು ನೋಡಲು ಗಾಡಿಯಲಿ ಹೋಗುತ್ತಿದ್ದಾಗ ಗಾಡಿಯಿಂದ ತಳ್ಳಲ್ಪಟ್ಟರು. ಹೀಗೆ ಅವಮಾನಕ್ಕೊಳಗಾದ ಅಂಬೇಡ್ಕರರು ಮುಂದೆ ಉನ್ನತ ಜ್ಞಾನಪಡೆದು ಈ ದೇಶದ ‘ಸಂವಿಧಾನ ಶಿಲ್ಪಿ' ಎನಿಸಿಕೊಂಡರು. ಅಸ್ಪೃಶ್ಯರ ಉದ್ಧಾರಕ್ಕಾಗಿ ಹೋರಾಡಿದರು ಎಂಬುದಷ್ಟೆ. ಬಹುಶಃ ಇದಕ್ಕಿಂತ ಹೆಚ್ಚಿಗೆ ಅಂಬೇಡ್ಕರರ ಬಗ್ಗೆ ಈ ದೇಶದ ಜನತೆಗೆ ಗೊತ್ತಿರುವುದು ಸಾಧ್ಯವಿಲ್ಲ. ಅಥವಾ ಮೇಲೆ ಹೇಳಿರುವುದೇ ಹೆಚ್ಚಿರಬೇಕು! ದಲಿತರಿಗೆ ಮೀಸಲಾತಿ ತಂದುಕೊಟ್ಟದಷ್ಟೆ ಅವರ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ತನ್ಮೂಲಕ ಅಂಬೇಡ್ಕರ್ ಎಂಬ"ಮಹಾನ್ ಇತಿಹಾಸವನ್ನು" ಮುಚ್ಚಲಾಗುತ್ತಿದೆ!       ಹಾಗಿದ್ದರೆ ಅಂಬೇಡ್ಕರ್ ರವರ ಸಾಧನೆ ಇದಿಷ್ಟು ಮಾತ್ರವಾ? ಅಥವಾ ಇನ್ನೇನು ಇಲ್ಲವಾ? ಯಾಕೆಂದರೆ 2006ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕದ ಅಧ್ಯಕ್ಷ   ಜಾರ್ಜ್ ಬುಷ್ "ಗಾಂಧಿ, ಠಾಗೋರ್ ಮತ್ತು ನೆಹರೂ"ರವರುಗಳನ್ನು ನವಭಾರತದ ನಿರ್ಮಾತೃಗಳೆನ್ನುತ್ತಾರೆ. ಅಂಬೇಡ್ಕರ್ ರವರನ್ನು ಈ ಪರಿಯಲ್ಲಿ ಇತಿಹಾಸದಲ್ಲಿ ಕುಬ್ಜರನ್ನಾಗಿಸುವ ಅಥವಾ ಮರೆಮಾಚುವ ಪ್ರಯತ್ನ ನಿರಂತರವಾಗಿ ನಡೆಯುತ್ತಿರುವಾಗ ಬುಷ್‍ ರಂತಹವರು ಇದಕ್ಕಿಂತ ಹೆಚ್ಚ...