Skip to main content

ಅಂಬೇಡ್ಕರ್ ಮಕ್ಕಳು ಅದ್ಯಾವ ಮಟ್ಟಿಗೆ ಓದುತ್ತಿದ್ದಾರೆ?

 


-ರಘೋತ್ತಮ ಹೊ.ಬ

ಮೊನ್ನೆ ಒಂದಷ್ಟು ಯುವಕರು ಸಿಕ್ಕಿದ್ದರು. "ಜೈಭೀಮ್ಸರ್" ಎಂದ ಎಲ್ಲರೂ "ಏನ್ ಮಾಡ್ತಿದೀರಪ್ಪ, ಏನ್ ಓದಿದೀರಪ್ಪ" ಅಂದಾಗ "ಎಸ್ ಎಸ್ ಎಲ್ ಸಿ  ಸರ್" ಅಂದರು. ಮುಂದೆ ಓದ್ನಿಲ್ವ? ಅಂದಾಗ ಒಬ್ಬ ಮಾತ್ರ "ಪಿಯುಸಿ ಸರ್" ಅನ್ನುತ್ತ ಉಳಿದವರೆಲ್ಲ ಮುಖ ಕೆಳಗು ಮಾಡಿದರು. ಶೋಷಿತ ಸಮುದಾಯಗಳ ವಿದ್ಯಾರ್ಥಿಗಳ ಇಂದಿನ ಶಿಕ್ಷಣದ ಮಟ್ಟವಿದು. ಒಂದೆಡೆ ಶೋಷಕ ವ್ಯವಸ್ಥೆ ಇವರು ಶಿಕ್ಷಣ ಪಡೆಯಬಾರದು ಎಂಬಂತೆ ನೀತಿ ರೂಪಿಸುತ್ತಿದ್ದರೆ ಮತ್ತೊಂದೆಡೆ ಇವರು ತಾವು ಓದಬೇಕು, ಮುಂದೆ ಬರಬೇಕು ಎಂಬ ಕನಿಷ್ಠ ಗ್ಯಾನ ಕೂಡ ಮಾಡದೆ ಹತ್ತನೇ ತರಗತಿ ಹಂತಕ್ಕೆ ಶಿಕ್ಷಣ ನಿಲ್ಲಿಸುತ್ತಿದ್ದಾರೆ. ಹಾಗೆ ಅಲ್ಲಿಂದಲೇ ಪ್ರಾರಂಭ ಕುಡಿತ, ಜೂಜು, ರೌಡಿಸಂ ನಂತಹ ಕಾನೂನುಬಾಹಿರ ಬಾಬಾಸಾಹೇಬ್ ಅಂಬೇಡ್ಕರ್ ವಿರೋಧಿ ನಡವಳಿಕೆಗಳು.

ಪರಮಪೂಜ್ಯ ಬಾಬಾಸಾಹೇಬ್ ಅಂಬೇಡ್ಕರರು ಎಷ್ಟು ಓದಿದ್ದರು? ಬಹುಶಃ ಇತಿಹಾಸ ಅದನ್ನು ಈಗಲೂ ಒಂದು ದಾಖಲೆ ಎಂದೇ ಪರಿಗಣಿಸಬೇಕಾಗುತ್ತದೆ ಆ ಮಟ್ಟಿಗೆ ಡಾ.ಅಂಬೇಡ್ಕರರು ಓದಿದರು. ದೂರದ ಅಮೆರಿಕದಲ್ಲಿ ಎಂ.ಎ, ಪಿಹೆಚ್ಡಿ, ಲಂಡನ್ ನಲ್ಲಿ ಎಂ.ಎಸ್ಸಿ, ಡಿಎಸ್ಸಿ, ಬಾರ್ - ಅಟ್- ಲಾ, ಜರ್ಮನಿಯಲ್ಲೂ ತುಸು ಸಮಯ ವ್ಯಾಸಂಗ... ಅರೆ, ನಮ್ಮ ಹುಡುಗರು ಎಸ್ ಎಸ್ ಎಲ್ ಸಿ ಗೆ ನಿಂತು ಹೋಗುತ್ತಿದ್ದಾರೆ! ಇದ್ಯಾಕೆ ಅಂತ? ಅದರಲ್ಲೂ ಅವರ ಮೊಬೈಲ್ ಗಳಲ್ಲಿ ಜೈಭೀಮ್, ಬುದ್ಧ, ಅಂಬೇಡ್ಕರರ ವಾಲ್ ಪೇಪರ್ ಗಳು, ಫೇಸ್ ಬುಕ್ ವ್ಯಾಟ್ಸಪ್ ಗಳಲ್ಲೂ ಅಂಬೇಡ್ಕರರ ಪ್ರೊಫೈಲ್ ಫೋಟೊಗಳು. ಆದರೆ ಎಷ್ಟು ಓದಿದಿಯಾ ಎಂದು ಕೇಳಿದಾಗ ಎಸ್ ಎಸ್ ಎಲ್ ಸಿ ಎಂಬ ಕಂಠಪಾಠ.

ದುರಂತದ ಸ್ಥಿತಿ ಇದು. ಯಾವ ಬಾಬಾಸಾಹೇಬ್ ಅಂಬೇಡ್ಕರರು ತನ್ನ ಜನ ಶಿಕ್ಷಣದಲ್ಲಿ ಮುಂದೆ ಬರಲಿ ಎಂದು ಶೈಕ್ಷಣಿಕ ಮೀಸಲಾತಿ, ವಿದ್ಯಾರ್ಥಿ ವೇತನ, ಹಾಸ್ಟೆಲ್ ಸೌಲಭ್ಯ ಇತ್ಯಾದಿ ಕೊಡಿಸಿದರೊ ಅವರಮ ಕ್ಕಳು ಇಂದು ರೌಡಿಗಳು, ಕಡಿಮೆ ದುಡಿಮೆಯ ಕೂಲಿಗಳು, ಕುಡಿದು ತೂರಾಡಿ ಬೀಳುವ ಸಮಾಜಘಾತುಕರಾಗುತ್ತಿದ್ದಾರೆ. ಸ್ವಲ್ಪವೂ ಜವಾಬ್ದಾರಿ ಇಲ್ಲದ ಮುಂದಿನ ಕರಾಳ ಭವಿಷ್ಯದ ಅರಿವಿಲ್ಲದ ಬೇಜವಾಬ್ದಾರಿ ಪ್ರಜೆಗಳಾಗುತ್ತಿದ್ದಾರೆ. 

ವಾಸ್ತವ ಎಂದರೆ ದೌರ್ಜನ್ಯ ಮಾಡಲು ಸದಾ ತಯಾರಾಗಿ ನಿಂತಿರುವ ಆಳುವ ಮನುವಾದಿ ಜನಾಂಗಗಳು ಇವರಿಗಾಗಿ ಚಿತ್ರ ವಿಚಿತ್ರ ಕಾನೂನು ಮಾಡುತ್ತ ತಯಾರಾಗಿ ನಿಂತಿವೆ. ನಮ್ಮಂತಹವರು "ಅಯ್ಯೋ, ಇದರ ಬಗ್ಗೆ ನಾವು ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ಇದ್ದೇವಲ್ಲ" ಎಂದು ಬೆಂದು ಬಸವಳಿಯುತ್ತಿದ್ದೇವೆ. ಆದರೆ ನಮ್ಮ ವಿದ್ಯಾರ್ಥಿಗಳಿಗೆ ಯುವಕರಿಗೆ ಯುವತಿಯರಿಗೆ ಇದ್ಯಾವುದು ಅರಿವಾಗುತ್ತಿಲ್ಲ. ಬಹುಶಃ ನಮ್ಮಂತಹ ಪ್ರಜ್ಞಾವಂತಿಕೆಯ ಜನ ಈ ಯೋಚನೆಯೇ ತಪ್ಪೇನೊ ಎಂಬಂತೆ ಇವರ ಗಾಢ ನಿದ್ರೆ, ಉದಾಸೀನ ನಡೆ ಇದೆ. ಯಾಕೆಂದರೆ ಇಂದು ಯಾವುದೇ ಅಂಬೇಡ್ಕರ್ ಬಡಾವಣೆ, ಜಗಜೀವನ್ ರಾಮ್ ಬೀದಿ, ಪೌರಕಾರ್ಮಿಕರ ಕಾಲೋನಿಯಲ್ಲಿ ಯಾರೇ ಹೋಗಿ ನೋಡಿ ಶಿಕ್ಷಣ ಅಲ್ಲಿ ಬೆಳೆಯಲಾರದೆ ನರಳುತ್ತಿದೆ. ಪೋಷಕರ ಅಜ್ಞಾನ, ಅನಾದರ, ಮಕ್ಕಳ ಕಾಳಜಿ ಇಲ್ಲದಿರುವ ಮನಸ್ಸು ಒಂದೆಡೆ... ಯುವಕರ ಯುವತಿಯರ ಶಿಕ್ಷಣದ ಬಗೆಗಿನ ಬೇಜವಾಬ್ದಾರಿತನ ಇನ್ನೊಂದೆಡೆ. ಈ ನಡುವೆ ಇವರ ಶಿಕ್ಷಣ ಹೀಗೆ ಹಾಳಾಗಬೇಕು ಎಂದು ಬಯಸುವ ಮನುವಾದಿ ಸಮಾಜಕ್ಕೆ ಇವರ ಈ ನಡೆ ಹಾಲು ಅನ್ನ ಉಂಡಂತಾಗುತ್ತಿದೆ!

ಶತ ಶತಮಾನಗಳಿಂದ ಅಕ್ಷರ ಕಲಿಯಬೇಡಿ ಎಂದು ದೂರ ತಳ್ಳಲ್ಪಟ್ಟ ಜನರಿಗೆ ಅಕ್ಷರದ ಅವಕಾಶ ಕೊಡಿಸಲು ಬಾಬಾಸಾಹೇಬ್ ಅಂಬೇಡ್ಕರರು ಪಟ್ಟ ಶ್ರಮ, ಅವರ ಓದಿನ ಬದುಕೇ ಇದಕ್ಕೆ ಒಂದು ಉದಾಹರಣೆ. ಆದ್ದರಿಂದ ಈಗಲೂ ತಡವಾಗಿಲ್ಲ ಶೋಷಿತ ಸಮುದಾಯಗಳ ಯುವಕರು/ ಯುವತಿಯರು/ ವಿದ್ಯಾರ್ಥಿಗಳು

ಕನಿಷ್ಠ ಪಕ್ಷ ಪದವಿ ಮಟ್ಟಕ್ಕೆ ಓದುತ್ತೇವೆ ಎಂಬ ಪರಿಜ್ಞಾನ ಬೆಳೆಸಿಕೊಳ್ಳಬೇಕು. ಮದ್ಯಪಾನ, ರೌಡಿಸಂ, ಅರ್ಧಕ್ಕೆ ಕಾಲೇಜು ಬಿಡುವ ವ್ಯಸನದಿಂದ ಮುಕ್ತರಾಗಿ ಶಿಕ್ಷಣವೆಂಬ ಹುಲಿಯ ಹಾಲ ಕುಡಿಯಬೇಕು. ಅನ್ನ ಇಲ್ಲದಿದ್ದರೂ ಜ್ಞಾನ ನಮ್ಮ ಮನೆಯಲ್ಲಿ ಬಿದ್ದು ಒದ್ದಾಡುತ್ತಿದೆ ಎಂದು ನೋಡಿಕೊಳ್ಳಬೇಕು. ಆಗಷ್ಟೇ ಶತಶತಮಾನದ ನಮ್ಮ ನೋವು ಶಮನವಾಗಲು ಸಾಧ್ಯ. ಈ ನಿಟ್ಟಿನಲ್ಲಿ ಶೋಷಿತ ಸಮುದಾಯಗಳ ಯುವಕರು ಯುವತಿಯರು ಇತ್ತ ಗಮನಹರಿಸಲಿ, ತಮ್ಮ ಮನೆಗಳಲ್ಲಿ ಶಿಕ್ಷಣದ ಜ್ಯೋತಿ ಆರದಂತೆ ನೋಡಿಕೊಳ್ಳಲಿ.

***

#ದಲಿತರು #ಶಿಕ್ಷಣ

Comments

Popular posts from this blog

ಕೆ ಆರ್ ಎಸ್.ನಿರ್ಮಾಣ: ವಾಸ್ತವ ಇತಿಹಾಸ

        - ರಘೋತ್ತಮ ಹೊಬ  ಅದು 1902 ನೇ ಇಸವಿ. ಏಷ್ಯಾದಲ್ಲೆ ಪ್ರಪ್ರಥಮ ಜಲವಿದ್ಯುತ್ ಉತ್ಪಾದನಾ  ಕೇಂದ್ರ ಸ್ಥಾಪನೆಯಾದ ವರ್ಷ. ಅಂದಹಾಗೆ ಅದನ್ನು ಸ್ಥಾಪಿಸಿದವರು ಮೈಸೂರಿನ ಅಂದಿನ ಮಹಾರಾಜ #ನಾಲ್ವಡಿ_ಕೃಷ್ಣರಾಜಒಡೆಯರ್‍ರವರು. ಬ್ರಿಟಿಷರೊಂದಿಗೆ  ಕೋಲಾರ ಚಿನ್ನದ ಗಣಿಗೆ ವಿದ್ಯುತ್ ಸರಬರಾಜು ಮಾಡುವ ಒಪ್ಪಂದ ಮಾಡಿಕೊಂಡಿದ್ದ ಅವರು ಆ ನಿಟ್ಟಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಶಿವನಸಮುದ್ರ ಎಂಬಲ್ಲಿ ಪ್ರಪ್ರಥಮ ಜಲವಿದ್ಯುತ್ ಕೇಂದ್ರ ಸ್ಥಾಪಿಸಿದರು ಮತ್ತು ಆ ಕಾಲದಲ್ಲೆ 30,000 ವೋಲ್ಟ್  ವಿದ್ಯುತ್‍ಅನ್ನು ಕೋಲಾರದ ಚಿನ್ನದÀ ಗಣಿಗೆ ವರ್ಗಾಯಿಸಿದರು. ಈ ಸಂದರ್ಭದಲ್ಲಿ ಒಂದು ಮಾತು ಅದೇನೆಂದರೆ ಆಗಿನ್ನು ಸರ್.ಎಂ.ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನಕ್ಕೆ ಪ್ರವೇಶ ಪಡೆದೇ ಇರಲಿಲ್ಲ!    ಇರಲಿ, ಜಲವಿದ್ಯುತ್ ಕೇಂದ್ರವನ್ನೇನೋ ಒಡೆಯರ್‍ರವರು ಸ್ಥಾಪಿಸಿದರು. ಆದರೆ ವಿದ್ಯುತ್ ಉತ್ಪಾದನೆಗೆ ನೀರು ವರ್ಷಾಕಾಲ ದೊರೆಯುತ್ತದೆಯೇ? ಖಂಡಿತ ಇಲ್ಲ. ಮಳೆ ಬಂದಾಗ ವಿದ್ಯುತ್. ಇಲ್ಲದಿದ್ರೆ ನೋ ವಿದ್ಯುತ್! ಬೇಸಿಗೆ ಕಾಲದಲ್ಲಂತೂ ಒಂದು ವೋಲ್ಟ್ ಉತ್ಪತ್ತಿ ಕೂಡ ಕಷ್ಟವಾಗಿತ್ತು. ಇದರಿಂದ ಚಿನ್ನದ ಗಣಿಗೆ ನಿರಂತರ ವಿದ್ಯುತ್ ಸರಬರಾಜು ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದ್ದ ಒಡೆಯರ್‍ರಿಗೆ  ಅದರ ಪೂರೈಕೆ ಸವಾಲಿನ ಕೆಲಸವಾಗಿತ್ತು. ಈ ಕಾರಣಕ್ಕಾಗಿ ಅಂದರೆ ವಿದ್ಯುತ್ ಉತ್ಪಾದನ ಕೇಂದ್ರಕ್ಕೆ ನ...

ಪುಲಕೇಶಿ ಹೊಲೆಯರವನೆ? ಚಾಲುಕ್ಯರು ಛಲವಾದಿಗಳೇ? -ರಘೋತ್ತಮ ಹೊ.ಬ

"ಹೊಲಯರು - ಮಾದರು -ರಾಜರು" ಎಂಬ ತಮ್ಮ ಸಂಶೋಧನಾ ಕೃತಿಯಲ್ಲಿ ಸಂಶೋಧಕರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಆದ ಶ್ರೀ ಎಂ.ನಂಜುಂಡಸ್ವಾಮಿ ಐಪಿಎಸ್ ರವರು ಹೊಲೆಯರು ಮತ್ತು ಮಾದಿಗರು ಈ ಎರಡೂ ಜನಾಂಗಗಳು ಕರ್ನಾಟಕ ರಾಜ್ಯದಲ್ಲಿ ರಾಜರಾಗಿದ್ದವರು ರಾಜ್ಯ ಆಳಿದವರು ಎಂದು ಸಂಶೋಧನೆ ಮೂಲಕ ಸಾಧಿಸಿದ್ದಾರೆ. ಅದರಲ್ಲಿ ಬಹು ಮುಖ್ಯವಾದದ್ದು ಬಾದಾಮಿಯ ಚಾಲುಕ್ಯರು ಹೊಲೆಯ ವಂಶಸ್ಥರು ಮತ್ತು ಛಲವಾದಿ ಜನಾಂಗದವರು ಎಂದು ಲೇಖಕರು ತಮ್ಮ ಭಾಷಾಶಾಸ್ತ್ರದ ಸಂಶೋಧನೆಯ ಆಧಾರದಲ್ಲಿ ಹೇಳುತ್ತಾರೆ. "ಹೊಲಯರು - ಮಾದರು -ರಾಜರು" ಆ ಕೃತಿಯಲ್ಲಿ ಪುಟ ಸಂಖ್ಯೆ 96ರಲ್ಲಿ  ನಂಜುಂಡಸ್ವಾಮಿಯವರು ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯ ಮತ್ತು ಬೇಲೂರು ಚನ್ನಕೇಶವ ದೇವಾಲಯಗಳಲ್ಲಿ ಹೊಲೆಯನಿಗೆ ನೀಡುವ ಗೌರವ ಉಲ್ಲೇಖಿಸುತ್ತ "ಆ ಗೌರವ ರಾಜನಿಗೆ ನೀಡುವ ಗೌರವದಂತಿದೆ. ಹೊಲೆಯ ರಾಜನಿಂದಲೇ ಆ ದೇವಾಲಯ ನಿರ್ಮಾಣವಾಗಿರುವುದರ ಸಂಕೇತವಾಗಿ ಆತನಿಗೆ ಈಗಲೂ ಆ ಗೌರವ ಸಿಗುತ್ತಿದೆ" ಎಂದು ಹೇಳುತ್ತಾರೆ. ಇನ್ನೂ ಬಾಗಲಕೋಟೆಯ ದೇಸಾಯಿಗಳು ಈಗಲೂ ಹೊಲೆಯರ ಮನೆಯಿಂದ ಬೆಂಕಿ ತರುವ ಸಂಪ್ರದಾಯವನ್ನು ಸಹ ಲೇಖಕರು ಉಲ್ಲೇಖಿಸುತ್ತಾರೆ. ಆ  ಹಿನ್ನೆಲೆಯಲ್ಲಿ "ಹಿಂದೆ ನಾವು ಈ ನಾಡನ್ನು ಆಳಿದ ರಾಜರು. ಅದಕ್ಕಾಗಿ ನಮ್ಮ ಬಳಿ ಸಾಂಕೇತಿಕವಾಗಿ ಈಗಲೂ ಬಂದು ದೇಸಾಯಿಗಳು ಬೆಂಕಿ ಪಡೆದುಕೊಳ್ಳುತ್ತಿದ್ದಾರೆ. ಈಗ ನಮ್ಮನ್ನು ಛಲವಾದಿಗಳು ಎನ್ನುವರು. ಹಿಂದೆ ನ...

ಅವಕಾಶ ಕಿತ್ತುಕೊಳ್ಳಬೇಕು -ರಘೋತ್ತಮ ಹೊ.ಬ

ಶೋಷಿತ ಸಮುದಾಯಗಳ ಎಷ್ಟೋ ಜನ ಯಾರಾದರೂ ನಮ್ಮನ್ನು ನಮ್ಮ ಒಳ್ಳೆಯತನ ನೋಡಿ ಉದ್ಧಾರ ಮಾಡುತ್ತಾರೆ ಎಂದುಕೊಳ್ಳುತ್ತಾರೆ. ವಾಸ್ತವ ಎಂದರೆ ಅದು ಹಾಗಲ್ಲ ಎಂಬುದು. ಉದಾಹರಣೆಗೆ ಕಚೇರಿಗಳಲ್ಲಿ "ಡಿ" ಗ್ರೂಪ್ ನೌಕರಿ ಕೆಲಸ ಒಬ್ಬ ಮಾಡುತ್ತಿರುತ್ತಾನೆ ಎಂದುಕೊಳ್ಳಿ. ಪ್ರಶ್ನೆ ಎಂದರೆ ಅಲ್ಲಿಯ ಅಧಿಕಾರಿ ಆ ಡಿ ಗ್ರೂಪ್ ನೌಕರರನಿಗೆ ಆತನ ಒಳ್ಳೆಯತನ ನೋಡಿ ಕರೆದು ತನ್ನ ಸ್ಥಾನ ಕೊಡುತ್ತಾನೆಯೇ? ಇಲ್ಲ. ಹೆಚ್ಚೆಂದರೆ ಅದನ್ನು ಆತ ಆತನ ನಿಷ್ಠೆ ಎಂದುಕೊಳ್ಳಬಹುದು ಒಂದಷ್ಟು ಸಿಂಪಥಿ ತೋರಬಹುದು ಅಷ್ಟೇ. ಭಾರತದ ಸಾಮಾಜಿಕ ವ್ಯವಸ್ಥೆಯು ಕೂಡ ಹೀಗೇನೆ‌. ಹಾಗಿದ್ದರೆ ಡಿ ಗ್ರೂಪ್ ನೌಕರ ಏನು ಮಾಡಬಹುದು? ತನ್ನ ಮಗನನ್ನು ಅಥವಾ ಮಗಳನ್ನು ಆ ಅಧಿಕಾರಿ ಮಟ್ಟಕ್ಕೆ ಓದಿಸಿ ಆ ಸ್ಥಾನ ಪಡೆಯಬಹುದು ಅವಕಾಶ ಪಡೆಯಬಹುದು. ಶೋಷಿತ ಸಮುದಾಯಗಳು ಅಷ್ಟೇ, ಚೆನ್ನಾಗಿ ಶಿಕ್ಷಣ ಪಡೆದು ಉನ್ನತ ಉದ್ಯೋಗ ಪಡೆದರೆ ಅಥವಾ ಪ್ರಸ್ತುತ ದಿನಗಳಲ್ಲಿ ಬುದ್ಧಿವಂತಿಕೆಯಿಂದ ಯಾವುದಾದರೂ ಬಿಸಿನೆಸ್ ನಲ್ಲಿ do or die ಮಾದರಿಯಲ್ಲಿ ಶ್ರಮ ಹಾಕಿ ಯಶಸ್ಸು ಪಡೆದರೆ ಆ ಸ್ಥಾನ ಪಡೆಯಬಹುದು. ಯಾರೂ ಕೂಡ ಕರೆದು ಅವಕಾಶ ಕೊಡುವುದಿಲ್ಲ.  ಘಟನೆಯೊಂದನ್ನು ಹೇಳುವುದಾದರೆ, ಒಂದು ಸಾರ್ವಜನಿಕ ಕಾರ್ಯಕ್ರಮ ನಡೆದಿತ್ತು. ನಾನು ವಯಕ್ತಿಕವಾಗಿ ಯಾರು ನನ್ನನ್ನು ಕರೆಯಲಿ ಬಿಡಲಿ ಎಂದು ನನ್ನ ಸ್ಥಾನವನ್ನು ಭದ್ರವಾಗಿ ಪಡೆದೆ ಒಂದು ಚೇರ್ ಮೇಲೆ ನಾನೇ ಹೋಗಿ ಕುಳಿತುಕೊಳ್ಳುವುದರ ಮೂಲಕ. ಆದರೆ ದಲಿತ ಸಮುದಾಯ...