Skip to main content

ದ್ರೋಅ



-ರಘೋತ್ತಮ ಹೊ.ಬ,


ಎದೆಯೊಳಗಿನ ಸಂಕ್ಟ ಯಾರಿಗೂ ಹೇಳಬಾರದು ಎಂದಿದ್ದೆ

ಹೇಳದಿದ್ದರೆ ಎದೆ ನಾ ಒಡೆಯುವೆ ಎಂದಿತ್ತು

ಹೇಳಲೊರಟೆ

ಗೌರವ ಕೊಟ್ಟಿದ್ದೆ ಅವನಿಗೆ

ಅವ ಬರುವ ಕೆಲಸ ಕೊಡಿಸುವ ಮದುವೆ ಮಾಡಿಸುವ ಮಕ್ಕಳುಟ್ಟಿಸುವ

ಅದೃಷ್ಟಕ್ಜೆ ಅಪ್ಪ ಕೆಲಸ ಕೊಡಿಸಿದ್ದ ಮದುವೆ ಮಾಡಿಸಿದ್ದ ನಾ ಮಕ್ಕಳುಟ್ಟಿಸಿದ್ದೆ


ಗೌರವ ಕೊಟ್ಟಿದ್ದೆ ಅವನಿಗೆ

ಕಣ್ಣೆತ್ತಿ ನೋಡಿರಲಿಲ್ಲ

ಕೈ ಭದ್ರ ಕುಲುಕಿರಲಿಲ್ಲ

ಬರೆದಿದ್ದೆ ಜಗದಗಲ ಮುಗಿಲಗಲ

ಫೇಸ್ ಬುಕ್ಕು ವ್ಯಾಟ್ಸಪ್ಪು ಪತ್ರಿಕೆ

ನಾನೇ ತಿದ್ದಿದ್ದೆ ತೀಡಿದ್ದೆ ಮುದ್ರಿಸಿದ್ದೆ ಹಿರಿ ಹಿರಿ ಹಿಗ್ಗಿ ಹಂಚಿದ್ದೆ

ಬಂದ ನೋಡಿ ಶೂರ ಜಗದೇಕವೀರ

ನಾಡಿನಾದ್ಯಂತ ಸಂಭ್ರಮಿಸಿದ್ದೆ


ಎದೆಯುಳಗಿನ ಬುದ್ಧನ ಅವನಿಗೆ ಕೊಟ್ಟಿದ್ದೆ

ಮನದೊಳಗಿನ ಅಂಬೇಡ್ಕರನ ಅವನಲ್ಲಿ ಕಂಡಿದ್ದೆ

ದುಡ್ಡು ಕಾಸು ಎಲ್ಲದಕ್ಕೂ ಅವನೆ ಬಾಸು

ಬೆಳಗು ರಾತ್ರೆ ಅವನದೆ ಜಪ

ಸಂಜೆಯಾದರೆ ನೈಂಟಿಯೊಳಗೂ ಅವನದೆ ತಪ

ಗ್ಯಾನ ತಪ್ಪಿ ಬಿದ್ದಿದ್ದರೂ ಅವನನೆ ನೆನಪಿದ್ದೆ

ಅವನ ನಡೆ ನುಡಿ ಕುಣಿತ

ಭರವಸೆಯ ಹಿಮಾಲಯ ಕಂಡಿದ್ದೆ


ಕೈಕುಲುಕಲು ಸಾಲು ನಿಂತಿದ್ದೆ

ದನಿ ಕೇಳಲು ಕಿವಿ ತೆರೆದು ಕುಂತಿದ್ದೆ

ಹತ್ತಿರ ಬಂದರೆ ಪುಳಕ ದೂರ ಹೋದರೆ ನರಕ

ಯಾರಿಗೆ ಹೇಳಲಿ ನನ್ನ ತವಕ

ಹತ್ತಾರು ಮೈಲಿ ನಡೆದಿದ್ದೆ ಅವನ ಹಿಂದೆ

ಬದುಕಿನ ಎಲ್ಲವನು ಕಳೆದು

ಮದುವೆ ಮಕ್ಕಳು ವೃತ್ತಿ ಎಲ್ಲವನ್ನು ಬಿಟ್ಟು ನನ್ನಂತವರು ಸಾವಿರಾರು


ಒಂದೊಮ್ಮೆ ದಾರಿ ತಪ್ಪಲಾರಂಭಿಸಿದ್ದ ತಿದ್ದಲೋದೆ ಬೈಸಿಕೊಂಡೆ ಟ್ರೋಲ್ ಮಾಡಿಸಿಕೊಂಡೆ

ಗೆದ್ದ ಒಮ್ಮೆ ಜಗವ ಗೆದ್ದ ಎಂದೇ ಖುಷಿಗೊಂಡೆ

ನನ್ನ ಕೀರ್ತಿಯ ಪೇಟವ ಅವನಿಗೆ ತೊಡಿಸಿದ್ದೆ

ಕೆಲಸ ಮಕ್ಕಳು ಮದುವೆ ಎಲ್ಲಾ ಮಾಡಿಕೊಂಡಿದ್ದೆ

ಮಾಡಿಕೊಳ್ಳದವರು ಕ್ಯೂ ನಿಂತಿದ್ದರು

ಮಾಡಿಕೊಡುವ ಎಂದು!


ಹೌಹಾರಿದ್ದ.... ಸರ್ರನೆ ತಿರುಗಿದ್ದ ಹಿಂದಿರುಗಿದ್ದ ಯೂಟರ್ನ್ ತೆಗೆದುಕೊಂಡಿದ್ದ

ಯಾರು ಏನು ಎಂದು ನೋಡುವಷ್ಟರಲ್ಲಿ

ಅಧಿಕಾರದ ಬಂಡಿಯ ಜೊತೆಗೆ ಸರಸರನೆ ಓಡಿದ್ದ

ಅಯ್ಯೋ! ಅಪಾ...‌ ಇದೇನಪಾ...!

ಗಾಭರಿಗೊಂಡ ಎಲ್ಲರ ಜಪತಪ

ಅದೊಂದು ದಿನ ಎದುರುಕಂಡಿದ್ದೆ

ಸರ್ರನೆ ಮುಖ ತಿರುಗಿಸಿದ್ದ ಕಂಡು ಎದೆಯೊಡೆದಿದ್ದೆ ಯಾರಿಗೂ ಹೇಳದೆ

ಹೃದಯ ಭದ್ರ ಹಿಡಿದಿದ್ದೆ

ಚಿಂತಿಸಿದೆ ಮಂತಿಸಿದೆ ಬರೆದೆ ಕೂಗಾಡಿದೆ

ಅಧಿಕಾರದ ಭದ್ರ ಕೈ ಹಿಡಿದಿದ್ದ ಆತ

ಗಹಗಹಿಸಿ ನಕ್ಕಿದ್ದ ಕಂಡಿದ್ದ 

ಶತೃವಂತೆ ನನ್ನನ್ನೆ

ನನ್ನ ಬದುಕ ಕಿತ್ತುಕೊಂಡಿದ್ದ ಯೌವನ ಆಯಸ್ಸು ಮದುವೆ ಮಕ್ಕಳು ಹಣ ಐಶ್ವರ್ಯ ಅಯ್ಯೋ! ಪ್ರಾಣ ತೆತ್ತವರೆಷ್ಟೊ!


ನನಗಾದರೋ ಬರಹ ಸಿದ್ಧಿಸಿತ್ತು ಬರೆದೆ

ಕೀರ್ತಿ ಗಳಿಸಿದ್ದೆ

ಅವನಲ್ಲದಿದ್ದರೂ ಅವನ ಜುಟ್ಟ ಹಿಡಿಯುವ ಮಟ್ಟಕ್ಕೆ ಬೆಳೆದಿದ್ದೆ

ಸಂಜೆ ಬಾಡು ತಿಂಬುವ ಮಟ್ಟಕ್ಕೆ

ಬೆಳೆಯದ ನನ್ನಣ್ಣಂದಿರು ವಯಸ್ಸಾದ ಅಕ್ಕ ತಂಗಿಯರು

ಅವನ ಇನ್ನೂ ನಂಬಿಹರು

ಅವನೊ ಬಹು ಎಂದವನು

ಈಗ ಮನು ಅಪ್ಪಿಹನು

ಅಪ್ಪದ ಅಪ್ಪನಿಗುಟ್ಟಿದವರು?

ಯಾರಿಗೆ ಹೇಳುವುದೆಂದು ಎದೆಯೊಡೆದಿಹರು

ಚರ್ಚಿಹರು ಪರ್ಚಿಹರು ನೈಂಟಿಗಳ ಗಳಾಸುಗಳ ಎತ್ತಿ ಎತ್ತಿ ಚಿಂದಿಗೈಯಿಹರು

ಮೂರಾದಿ ಮಣ್ಣೆರಚಿ ಬೋರಿಹರು


ದ್ರೋಅ?

ಛೇ! ಛೇ! ಛೇ!

***

Comments

Popular posts from this blog

ಕೆ ಆರ್ ಎಸ್.ನಿರ್ಮಾಣ: ವಾಸ್ತವ ಇತಿಹಾಸ

        - ರಘೋತ್ತಮ ಹೊಬ  ಅದು 1902 ನೇ ಇಸವಿ. ಏಷ್ಯಾದಲ್ಲೆ ಪ್ರಪ್ರಥಮ ಜಲವಿದ್ಯುತ್ ಉತ್ಪಾದನಾ  ಕೇಂದ್ರ ಸ್ಥಾಪನೆಯಾದ ವರ್ಷ. ಅಂದಹಾಗೆ ಅದನ್ನು ಸ್ಥಾಪಿಸಿದವರು ಮೈಸೂರಿನ ಅಂದಿನ ಮಹಾರಾಜ #ನಾಲ್ವಡಿ_ಕೃಷ್ಣರಾಜಒಡೆಯರ್‍ರವರು. ಬ್ರಿಟಿಷರೊಂದಿಗೆ  ಕೋಲಾರ ಚಿನ್ನದ ಗಣಿಗೆ ವಿದ್ಯುತ್ ಸರಬರಾಜು ಮಾಡುವ ಒಪ್ಪಂದ ಮಾಡಿಕೊಂಡಿದ್ದ ಅವರು ಆ ನಿಟ್ಟಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಶಿವನಸಮುದ್ರ ಎಂಬಲ್ಲಿ ಪ್ರಪ್ರಥಮ ಜಲವಿದ್ಯುತ್ ಕೇಂದ್ರ ಸ್ಥಾಪಿಸಿದರು ಮತ್ತು ಆ ಕಾಲದಲ್ಲೆ 30,000 ವೋಲ್ಟ್  ವಿದ್ಯುತ್‍ಅನ್ನು ಕೋಲಾರದ ಚಿನ್ನದÀ ಗಣಿಗೆ ವರ್ಗಾಯಿಸಿದರು. ಈ ಸಂದರ್ಭದಲ್ಲಿ ಒಂದು ಮಾತು ಅದೇನೆಂದರೆ ಆಗಿನ್ನು ಸರ್.ಎಂ.ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನಕ್ಕೆ ಪ್ರವೇಶ ಪಡೆದೇ ಇರಲಿಲ್ಲ!    ಇರಲಿ, ಜಲವಿದ್ಯುತ್ ಕೇಂದ್ರವನ್ನೇನೋ ಒಡೆಯರ್‍ರವರು ಸ್ಥಾಪಿಸಿದರು. ಆದರೆ ವಿದ್ಯುತ್ ಉತ್ಪಾದನೆಗೆ ನೀರು ವರ್ಷಾಕಾಲ ದೊರೆಯುತ್ತದೆಯೇ? ಖಂಡಿತ ಇಲ್ಲ. ಮಳೆ ಬಂದಾಗ ವಿದ್ಯುತ್. ಇಲ್ಲದಿದ್ರೆ ನೋ ವಿದ್ಯುತ್! ಬೇಸಿಗೆ ಕಾಲದಲ್ಲಂತೂ ಒಂದು ವೋಲ್ಟ್ ಉತ್ಪತ್ತಿ ಕೂಡ ಕಷ್ಟವಾಗಿತ್ತು. ಇದರಿಂದ ಚಿನ್ನದ ಗಣಿಗೆ ನಿರಂತರ ವಿದ್ಯುತ್ ಸರಬರಾಜು ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದ್ದ ಒಡೆಯರ್‍ರಿಗೆ  ಅದರ ಪೂರೈಕೆ ಸವಾಲಿನ ಕೆಲಸವಾಗಿತ್ತು. ಈ ಕಾರಣಕ್ಕಾಗಿ ಅಂದರೆ ವಿದ್ಯುತ್ ಉತ್ಪಾದನ ಕೇಂದ್ರಕ್ಕೆ ನ...

ಪುಲಕೇಶಿ ಹೊಲೆಯರವನೆ? ಚಾಲುಕ್ಯರು ಛಲವಾದಿಗಳೇ? -ರಘೋತ್ತಮ ಹೊ.ಬ

"ಹೊಲಯರು - ಮಾದರು -ರಾಜರು" ಎಂಬ ತಮ್ಮ ಸಂಶೋಧನಾ ಕೃತಿಯಲ್ಲಿ ಸಂಶೋಧಕರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಆದ ಶ್ರೀ ಎಂ.ನಂಜುಂಡಸ್ವಾಮಿ ಐಪಿಎಸ್ ರವರು ಹೊಲೆಯರು ಮತ್ತು ಮಾದಿಗರು ಈ ಎರಡೂ ಜನಾಂಗಗಳು ಕರ್ನಾಟಕ ರಾಜ್ಯದಲ್ಲಿ ರಾಜರಾಗಿದ್ದವರು ರಾಜ್ಯ ಆಳಿದವರು ಎಂದು ಸಂಶೋಧನೆ ಮೂಲಕ ಸಾಧಿಸಿದ್ದಾರೆ. ಅದರಲ್ಲಿ ಬಹು ಮುಖ್ಯವಾದದ್ದು ಬಾದಾಮಿಯ ಚಾಲುಕ್ಯರು ಹೊಲೆಯ ವಂಶಸ್ಥರು ಮತ್ತು ಛಲವಾದಿ ಜನಾಂಗದವರು ಎಂದು ಲೇಖಕರು ತಮ್ಮ ಭಾಷಾಶಾಸ್ತ್ರದ ಸಂಶೋಧನೆಯ ಆಧಾರದಲ್ಲಿ ಹೇಳುತ್ತಾರೆ. "ಹೊಲಯರು - ಮಾದರು -ರಾಜರು" ಆ ಕೃತಿಯಲ್ಲಿ ಪುಟ ಸಂಖ್ಯೆ 96ರಲ್ಲಿ  ನಂಜುಂಡಸ್ವಾಮಿಯವರು ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯ ಮತ್ತು ಬೇಲೂರು ಚನ್ನಕೇಶವ ದೇವಾಲಯಗಳಲ್ಲಿ ಹೊಲೆಯನಿಗೆ ನೀಡುವ ಗೌರವ ಉಲ್ಲೇಖಿಸುತ್ತ "ಆ ಗೌರವ ರಾಜನಿಗೆ ನೀಡುವ ಗೌರವದಂತಿದೆ. ಹೊಲೆಯ ರಾಜನಿಂದಲೇ ಆ ದೇವಾಲಯ ನಿರ್ಮಾಣವಾಗಿರುವುದರ ಸಂಕೇತವಾಗಿ ಆತನಿಗೆ ಈಗಲೂ ಆ ಗೌರವ ಸಿಗುತ್ತಿದೆ" ಎಂದು ಹೇಳುತ್ತಾರೆ. ಇನ್ನೂ ಬಾಗಲಕೋಟೆಯ ದೇಸಾಯಿಗಳು ಈಗಲೂ ಹೊಲೆಯರ ಮನೆಯಿಂದ ಬೆಂಕಿ ತರುವ ಸಂಪ್ರದಾಯವನ್ನು ಸಹ ಲೇಖಕರು ಉಲ್ಲೇಖಿಸುತ್ತಾರೆ. ಆ  ಹಿನ್ನೆಲೆಯಲ್ಲಿ "ಹಿಂದೆ ನಾವು ಈ ನಾಡನ್ನು ಆಳಿದ ರಾಜರು. ಅದಕ್ಕಾಗಿ ನಮ್ಮ ಬಳಿ ಸಾಂಕೇತಿಕವಾಗಿ ಈಗಲೂ ಬಂದು ದೇಸಾಯಿಗಳು ಬೆಂಕಿ ಪಡೆದುಕೊಳ್ಳುತ್ತಿದ್ದಾರೆ. ಈಗ ನಮ್ಮನ್ನು ಛಲವಾದಿಗಳು ಎನ್ನುವರು. ಹಿಂದೆ ನ...

ಅವಕಾಶ ಕಿತ್ತುಕೊಳ್ಳಬೇಕು -ರಘೋತ್ತಮ ಹೊ.ಬ

ಶೋಷಿತ ಸಮುದಾಯಗಳ ಎಷ್ಟೋ ಜನ ಯಾರಾದರೂ ನಮ್ಮನ್ನು ನಮ್ಮ ಒಳ್ಳೆಯತನ ನೋಡಿ ಉದ್ಧಾರ ಮಾಡುತ್ತಾರೆ ಎಂದುಕೊಳ್ಳುತ್ತಾರೆ. ವಾಸ್ತವ ಎಂದರೆ ಅದು ಹಾಗಲ್ಲ ಎಂಬುದು. ಉದಾಹರಣೆಗೆ ಕಚೇರಿಗಳಲ್ಲಿ "ಡಿ" ಗ್ರೂಪ್ ನೌಕರಿ ಕೆಲಸ ಒಬ್ಬ ಮಾಡುತ್ತಿರುತ್ತಾನೆ ಎಂದುಕೊಳ್ಳಿ. ಪ್ರಶ್ನೆ ಎಂದರೆ ಅಲ್ಲಿಯ ಅಧಿಕಾರಿ ಆ ಡಿ ಗ್ರೂಪ್ ನೌಕರರನಿಗೆ ಆತನ ಒಳ್ಳೆಯತನ ನೋಡಿ ಕರೆದು ತನ್ನ ಸ್ಥಾನ ಕೊಡುತ್ತಾನೆಯೇ? ಇಲ್ಲ. ಹೆಚ್ಚೆಂದರೆ ಅದನ್ನು ಆತ ಆತನ ನಿಷ್ಠೆ ಎಂದುಕೊಳ್ಳಬಹುದು ಒಂದಷ್ಟು ಸಿಂಪಥಿ ತೋರಬಹುದು ಅಷ್ಟೇ. ಭಾರತದ ಸಾಮಾಜಿಕ ವ್ಯವಸ್ಥೆಯು ಕೂಡ ಹೀಗೇನೆ‌. ಹಾಗಿದ್ದರೆ ಡಿ ಗ್ರೂಪ್ ನೌಕರ ಏನು ಮಾಡಬಹುದು? ತನ್ನ ಮಗನನ್ನು ಅಥವಾ ಮಗಳನ್ನು ಆ ಅಧಿಕಾರಿ ಮಟ್ಟಕ್ಕೆ ಓದಿಸಿ ಆ ಸ್ಥಾನ ಪಡೆಯಬಹುದು ಅವಕಾಶ ಪಡೆಯಬಹುದು. ಶೋಷಿತ ಸಮುದಾಯಗಳು ಅಷ್ಟೇ, ಚೆನ್ನಾಗಿ ಶಿಕ್ಷಣ ಪಡೆದು ಉನ್ನತ ಉದ್ಯೋಗ ಪಡೆದರೆ ಅಥವಾ ಪ್ರಸ್ತುತ ದಿನಗಳಲ್ಲಿ ಬುದ್ಧಿವಂತಿಕೆಯಿಂದ ಯಾವುದಾದರೂ ಬಿಸಿನೆಸ್ ನಲ್ಲಿ do or die ಮಾದರಿಯಲ್ಲಿ ಶ್ರಮ ಹಾಕಿ ಯಶಸ್ಸು ಪಡೆದರೆ ಆ ಸ್ಥಾನ ಪಡೆಯಬಹುದು. ಯಾರೂ ಕೂಡ ಕರೆದು ಅವಕಾಶ ಕೊಡುವುದಿಲ್ಲ.  ಘಟನೆಯೊಂದನ್ನು ಹೇಳುವುದಾದರೆ, ಒಂದು ಸಾರ್ವಜನಿಕ ಕಾರ್ಯಕ್ರಮ ನಡೆದಿತ್ತು. ನಾನು ವಯಕ್ತಿಕವಾಗಿ ಯಾರು ನನ್ನನ್ನು ಕರೆಯಲಿ ಬಿಡಲಿ ಎಂದು ನನ್ನ ಸ್ಥಾನವನ್ನು ಭದ್ರವಾಗಿ ಪಡೆದೆ ಒಂದು ಚೇರ್ ಮೇಲೆ ನಾನೇ ಹೋಗಿ ಕುಳಿತುಕೊಳ್ಳುವುದರ ಮೂಲಕ. ಆದರೆ ದಲಿತ ಸಮುದಾಯ...