Skip to main content

ಲಾಕ್ ಡೌನ್ ತೆರವುಗೊಳಿಸುತ್ತಿರುವ ಈ ಸಮಯ ದಲಿತರು ಬಿಸಿನೆಸ್ ಗೆ ತೆರೆದುಕೊಳ್ಳಲು ಸುಸಮಯ

 






-ರಘೋತ್ತಮ ಹೊ.ಬ


ಒಂದು ಓಟದ ಸ್ಪರ್ಧೆ ( ಅದು ಎಂದೂ ಮುಗಿಯದ ಸ್ಪರ್ಧೆ). ಅಂದಹಾಗೆ ಆ ಓಟದಲ್ಲಿ ಈಗಾಗಲೇ ನೂರಾರು ಮೈಲಿ ಓಡಿರುವವರು ಕೆಲವರು ಇನ್ನೂ ಆರಂಭದ ಗೆರೆಯಲ್ಲೇ ಅಥವಾ ಅದಕ್ಕಿಂತ ಸ್ವಲ್ಪ ಮುಂದೆ ಇರುವವರು. ಆರಂಭದ ಗೆರೆಯಲ್ಲಿ ಇರುವವರು "ನೀವು ಓಡುವಂತಿಲ್ಲ ಎಂಬ ಕಾನೂನು ನಿರ್ಬಂಧದ ಮೂಲಕ ತಡೆಯಲ್ಪಟ್ಟವರು, ಎಚ್ಚೆತ್ತುಕೊಳ್ಳುವಷ್ಟರಲ್ಲಿ ಬಹಳ ಹಿಂದೆಯೇ ಉಳಿಯಲ್ಪಟ್ಟವರು, ಈಗಲೂ ನಿಮ್ಮ ಕೈಯಲ್ಲಿ ಆಗಲ್ಲ ಎಂಬ ಆತ್ಮವಿಶ್ವಾಸ ದ ಕೊರತೆಯಿಂದ ನರಳುತ್ತಿರುವವರು..". ಖಂಡಿತ, ಈ ದೃಷ್ಟಾಂತ ದಲಿತರ ಬಿಸಿನೆಸ್ ಗೆ ಸಂಬಂಧಿಸಿದ್ದು. ಮನುಸ್ಮೃತಿಯಂತಹ ಕಾನೂನುಗಳ ಮೂಲಕ ಇವರಿಗೆ ವ್ಯಾಪಾರ ವ್ಯವಹಾರ ಮಾಡಲು ಶತಶತಮಾನಗಳು ತಡೆಯೊಡ್ಡಲಾಗಿದೆ. ಅಸ್ಪೃಶ್ಯತೆ ಮೂಲಕ " ಅಯ್ಯೋ , ನಮ್ಮ ಕೈಯಲ್ಲಿ ಆಗೋದೆ ಇಲ್ಲ " ಎಂಬ ಮಟ್ಟಕ್ಕೆ ಇವರನ್ನು ವ್ಯಾಪಾರ ವ್ಯವಹಾರ ಕ್ಷೇತ್ರದಲ್ಲಿ ತಂದು ನಿಲ್ಲಿಸಲಾಗಿದೆ!

ಆದರೆ ಸದ್ಯದ ಅಪರೂಪದ ವಾಸ್ತವ ಎಂದರೆ ಕೊರೊನ ಮತ್ತು ಲಾಕ್ ಡೌನ್ ನ ಈ ಸಮಯದಲ್ಲಿ ನೂರಾರು ಮೈಲಿ ಓಡಿ ಮುಂದೆ ಹೋಗಿದ್ದವರು ಮತ್ತೆ ವಾಪಸ್ ಆರಂಭಿಕ ಗೆರೆಗೆ ಬಂದಿದ್ದಾರೆ. ದಲಿತರ ಜೊತೆಗೆ ನಿಂತಿದ್ದಾರೆ ಅಥವಾ ದಲಿತರು ಅವರ ಜೊತೆ ಇಂದು ಸ್ಪರ್ಧೆ ಮಾಡಲು ಸುಸಮಯ. ಯಥಾಪ್ರಕಾರ ದಲಿತರಿಗೆ ಬಂಡವಾಳ, ಆತ್ಮವಿಶ್ವಾಸ, ನಮ್ಮ ಕೈಯಲ್ಲಿ ಆಗುತ್ತಾ, ನಾವು ಮಾಡಬಹುದಾ ಎಂಬ ಆಲೋಚನೆಗಳು ತೊಡಕಾಗಿ ಕಾಣುತ್ತವೆ. ಆದರೆ ಸ್ಪರ್ಧೆಗೆ ಇಳಿದ ಮೇಲೆ ಭಾಗವಹಿಸಲೇಬೇಕು ಓಡಲೆ ಬೇಕು. ಓಡದಿದ್ದರೆ ಇನ್ನೆಂದೂ ವಿಮೋಚನೆ ಸಾಧ್ಯವಿಲ್ಲ. ಹಾಗೆಯೇ ನಮ್ಮನ್ಯಾರೂ ದೇವಲೋಕದಿಂದ ಅಥವಾ ಸಿನಿಮಾಗಳಲ್ಲಿ ತೋರುವಂತೆ ಅನ್ಯ ಗ್ರಹ ಜೀವಿಗಳು ಕರೆದುಕೊಂಡು ಹೋಗುವುದಿಲ್ಲ. ನಾವೇ ಓಡಬೇಕು, ಓಡಿ ಗೆಲ್ಲಬೇಕು. ಈ ನಿಟ್ಟಿನಲ್ಲಿ ಲಾಕ್ ಡೌನ್ ನ ಈ ಸಮಯ ಎಲ್ಲರ ಜೊತೆ ಸಮಾನ ಸ್ಪರ್ಧೆ ಆರಂಭಿಸಲು ಖಂಡಿತ ಸುಸಮಯ.

ಆಗಬೇಕಾದ್ದೆಂದರೆ ಮೈಕೊಡವಿ ಏಳಬೇಕಿರುವುದು. ಆದದ್ದು ಆಗುತ್ತದೆ ಒಂದು ಕೈ ನೋಡೇ ಬಿಡುವ ಎಂಬ ಚಾಲೆಂಜ್ ಈಗ ಬೇಕಿರುವುದು. ವ್ಯಾಪಾರ ವ್ಯವಹಾರ ನಷ್ಟ ಆಗುತ್ತದಾ? ಆಗಲಿ. ನಷ್ಟ ನಮಗೆ ಹೊಸದೇನಲ್ಲ ತಾನೇ? ಲಾಭ ಬಂದರೆ ? ನಮ್ಮ ಸಮುದಾಯದ ಬದುಕೇ ಬದಲಾಗುತ್ತದೆ. ದಿಕ್ಕೇ ಬದಲಾಗುತ್ತದೆ. ಅಂದರೆ ನಾವು ಕಳೆದುಕೊಳ್ಳುವುದು ಏನೂ ಇಲ್ಲ ಎಲ್ಲಾ ಪಡೆದುಕೊಳ್ಳುವುದೇ ಆಗಿದೆ. ಇದನ್ನೇ ಡಾ.ಅಂಬೇಡ್ಕರ್ ರವರು ಹೇಳಿರುವುದು. 

ಎಷ್ಟೋ ಜನ ದಲಿತರು ವಿಶೇಷವಾಗಿ ಸರ್ಕಾರಿ ನೌಕರರು ತಮ್ಮ ಮಕ್ಕಳಿಗೆ ತಮ್ಮ ಹಾಗೆ ಸರ್ಕಾರಿ ನೌಕರಿ ಕೊಡಿಸುವ ಕುರುಡು ಮಾತಾಡುತ್ತಾರೆ. ಆದರೆ ಒಂದು ವಾಸ್ತವ, ಸರ್ಕಾರಿ ನೌಕರಿ ವಂಶಪಾರಂಪರ್ಯವಲ್ಲ. ಆದರೆ ವ್ಯಾಪಾರ ವ್ಯವಹಾರ, ಬಿಸಿನೆಸ್ ವಂಶಪಾರಂಪರ್ಯ. ತಂದೆ ಮಾಡಿಟ್ಟರೆ ಮಗ ಅದನ್ನು ಮುಂದುವರೆಸಬಹುದು. ಆ ಮೂಲಕ ಸಮುದಾಯ ಕೂಡ ಶ್ರೀಮಂತ ಆಗುತ್ತದೆ. ಇಂತಹ ಶ್ರೀಮಂತರು ದಲಿತ ಸಮುದಾಯದಲ್ಲಿ ಹೆಚ್ಚು ಹೆಚ್ಚು ಬೆಳೆದರೆ ಅಲ್ಲಿ ಇಡೀ ಸಮುದಾಯಕ್ಕೆ ಆತ್ಮವಿಶ್ವಾಸ ಸಿಗುತ್ತದೆ. ನಿಂದನೆ, ಅಪಮಾನ ತಾನಾಗೇ ಕಡಿಮೆಯಾಗುತ್ತದೆ.

ಬಿಸಿನೆಸ್ ಆರಂಭಿಸುವಾಗ ನಾವು ದಲಿತರು ನಮ್ಮ ಹತ್ತಿರ ಯಾರು ಬರುತ್ತಾರೆ? ಎಂಬ ಪ್ರಶ್ನೆ ಬಂದೇ ಬರುತ್ತದೆ. ಅಂದಹಾಗೆ ನಾವು ಏನೂ ಮಾಡದೆ ಮನೆಯಲ್ಲಿ ಕುಳಿತರು ಕೂಡ ನಾವು ದಲಿತರೆ! ಆಗಲಾದರೂ ನಮ್ಮ ಬಳಿ ಯಾರಾದರೂ ಬರುತ್ತಾರಾ? ಇಲ್ಲ. ಆದ್ದರಿಂದ ನಾವು "ನಾವು ದಲಿತರು, ನಮ್ಮನ್ನು ಅಸ್ಪೃಶ್ಯತೆ ಕಾಡುತ್ತದೆ" ಎಂಬ basic ಚಿಂತನೆ ಅರಬ್ಬೀ ಸಮುದ್ರಕ್ಕೆ ಎಸೆದು ಏಳಬೇಕು. ಯಾವುದಾದರೊಂದು ಫುಟ್ ಪಾತ್ ವ್ಯಾಪಾರ ವ್ಯವಹಾರ ಆದರೂ ಸರಿ ಆರಂಭಿಸಬೇಕು. ಒಂದು ಟೀ ಅಂಗಡಿ, ಒಂದು ಹೊಟೆಲ್, ಒಂದು ದಿನಸಿ ಅಂಗಡಿ, ಬಟ್ಟೆ ಅಂಗಡಿ... ಹೀಗೆ. ಅಂತಿಮವಾಗಿ ಲೇಖನ ಲಾಭ ಬಂದೇ ಬರುತ್ತದೆ. ಈಗಲ್ಲದಿದ್ದರೂ ನಮ್ಮ ಮಕ್ಕಳ ಕಾಲಕ್ಕೆ ಮೊಮ್ಮಕ್ಕಳ ಕಾಲಕ್ಕೆ ಬಂದೇ ಬರುತ್ತದೆ. ಆಗ ನಮ್ಮ ಮುಂದಿನ ಭವಿಷ್ಯದ ಜನಾಂಗ "ನಿಮ್ಮ ತಾತ ಏನ್ ಮಾಡ್ತಿದ್ದ?" ಎಂದು ಯಾರಾದರೂ ಪ್ರಶ್ನೆ ಕೇಳಿದರೆ "ವ್ಯಾಪಾರ ವ್ಯವಹಾರ ಮಾಡ್ತಿಧ" ಎಂದು ಹೇಳುತ್ತದೆ. 

ಈ ನಿಟ್ಟಿನಲ್ಲಿ ಅವರು ಹೇಳಬೇಕಾದರೆ ಹೇಳುವಂತಾಗಬೇಕಾದರೆ ಹಾಲಿ ದಲಿತರು ಅದು ರಾಜ್ಯದಲ್ಲಿ ಒಂದು ಕೋಟಿಗೂ ಮಿಕ್ಕಿ ಒಂದು ದೇಶದ ಜನಸಂಖ್ಯೆಯಷ್ಟಿರುವ ದಲಿತರು ವ್ಯಾಪಾರ ವ್ಯವಹಾರದಲ್ಲಿ ತೊಡಗಿಸಿಕೊಳ್ಳಲು ಮುಂದೆ ಬರಬೇಕು. ಲಾಕ್ ಡೌನ್ ತೆರವಿನ ಈ ಸಮಯ ದಲಿತರು ವ್ಯಾಪಾರ ವ್ಯವಹಾರ ದಲ್ಲಿ ತೊಡಗಿಸಿಕೊಳ್ಳಲು ಸುಸಮಯ ಎಂಬುದನ್ನು ಅರಿಯಬೇಕು. 

***

Comments

Popular posts from this blog

ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆಗಳು

  ಹಿಂದೂ ಮತ್ತು ಅಸ್ಪೃಶ್ಯನೊಬ್ಬ ಪ್ರಯಾಣ ಮಾಡುವ ಸಂದರ್ಭದಲ್ಲಿ ಪರಸ್ಪರ ಭೇಟಿಯಾದಾಗ... "ಯಾವಾಗಲಾದರೊಮ್ಮೆ ಅಕ್ಕಪಕ್ಕ ಕುಳಿತು ಪ್ರಯಾಣ ಮಾಡುವ ಸಂದರ್ಭದಲ್ಲಿ ಪರಸ್ಪರ ಜಾತಿ ತಿಳಿಯದಿದ್ದಾಗ ಜಾತಿವಾದಿ ಹಿಂದೂಗಳು ಮತ್ತು ಅಸ್ಪೃಶ್ಯರು ತುಂಬಾ ಆಪ್ತ ಸ್ನೇಹಿತರಂತೆ ವರ್ತಿಸುತ್ತಾರೆ. ಪರಸ್ಪರ ಬೀಡಿ, ಸಿಗರೆಟ್, ಹಣ್ಣುಗಳು, ಎಲೆ- ಅಡಿಕೆ ಹೀಗೆ ಅವರು ಹಂಚಿಕೊಳ್ಳುತ್ತಾರೆ. ಆದರೆ ಇದ್ದಕ್ಕಿದ್ದಂತೆ ಆ ಹಿಂದೂ ವ್ಯಕ್ತಿಗೆ ತಾನು ಇಷ್ಟು ಹೊತ್ತು ಮಾತನಾಡುತ್ತಿದ್ದ ವ್ಯಕ್ತಿ ಅಸ್ಪೃಶ್ಯ ಎಂದು ತಿಳಿಯುತ್ತಿದ್ದಂತೆ ಆತನ ಮನಸ್ಸಿನಲ್ಲಿ ದ್ವೇಷದ ಮನೋಭಾವ ಮೊಳಕೆಯೊಡೆಯುತ್ತದೆ, ತಾನು ಮೋಸಗೊಳಗಾದೆನೆಲ್ಲ ಎಂದು ಆತ ಯೋಚಿಸಲು ಆರಂಭಿಸುತ್ತಾನೆ. ಆತ ಕೋಪಗೊಳ್ಳುತ್ತಾನೆ. ಅಂತಿಮವಾಗಿ ತಾತ್ಕಾಲಿಕ ಆ ಸ್ನೇಹ ಜಗಳ ಮತ್ತು ಬೈಗುಳದ ಮೂಲಕ ಅಂತ್ಯಗೊಳ್ಳುತ್ತದೆ". -ಡಾ.ಬಿ.ಆರ್.ಅಂಬೇಡ್ಕರ್ ( Ambedkar writings and speeches, Vol.17, Part 3, Pp.132) ಕನ್ನಡಕ್ಕೆ: ರಘೋತ್ತಮ ಹೊಬ)

ಮುಂದೊಂದು ದಿನ ಎಲ್ಲರೂ ಬೌದ್ಧರಾಗಲಿದ್ದಾರೆ -ಡಾ.ಅಂಬೇಡ್ಕರ್

  "ಪ್ರತಿಯೊಂದು ಧರ್ಮವು ಉತ್ತರಿಸಬೇಕಾದ ಒಂದು ಪ್ರಶ್ನೆ ಇದೆ. ಅದೆಂದರೆ ತಳ ಸಮುದಾಯ ಮತ್ತು ದೌರ್ಜನ್ಯ ಪೀಡಿತ ಸಮುದಾಯಗಳಿಗೆ ಧರ್ಮವೊಂದು ನೀಡಬಹುದಾದ ನೈತಿಕ ಮತ್ತು ಬೌದ್ಧಿಕ ಬೆಂಬಲವಾದರು ಏನು ಎಂಬುದು? ಧರ್ಮವೊಂದು ಅಂತಹದ್ದೊಂದು ಬೆಂಬಲ ನೀಡಲಿಲ್ಲ ಎಂದರೆ ಅದು ದುರದೃಷ್ಟಕರ ಪರಿಸ್ಥಿತಿಯಲ್ಲಿ ಇದೆ ಎಂದೆ ಅರ್ಥ. ಆದ್ದರಿಂದ  ಹಿಂದೂ ಧರ್ಮವು  ಕೋಟ್ಯಾಂತರ ಸಂಖ್ಯೆಯಲ್ಲಿ ಇರುವ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಜನರಿಗೆ ನೈತಿಕ ಮತ್ತು ಬೌದ್ಧಿಕ ಬೆಂಬಲ ನೀಡುತ್ತದೆಯೇ? ಖಂಡಿತ ಇಲ್ಲ. ಈ ನಿಟ್ಟಿನಲ್ಲಿ ತಮಗೆ ಬೌದ್ಧಿಕ ಮತ್ತು ನೈತಿಕ ಬೆಂಬಲ ನೀಡದ ಹಿಂದೂ ಧರ್ಮದ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಜನರು ಇರಲು ಬಯಸುತ್ತಾರೆ ಎಂದು ಹಿಂದೂಗಳು ಅಪೇಕ್ಷೆ ಪಡಲು ಸಾಧ್ಯವೇ? ಅಂದಹಾಗೆ ಅಂತಹದ್ದೊಂದು ಅಪೇಕ್ಷೆ ಅಕ್ಷರಶಃ ವ್ಯರ್ಥದ್ದು.  "ಯಾಕೆಂದರೆ ಹಿಂದೂ ಧರ್ಮ ಅದು ಜ್ವಾಲಾಮುಖಿಯ ಮೇಲೆ ತೇಲುತ್ತಿದೆ. ಆ ನಿಟ್ಟಿನಲ್ಲಿ ಇಂದು ಅದು(ಜ್ವಾಲಾಮುಖಿ) ನಂದಿದ ಹಾಗೆ ಕಾಣುತ್ತಿದೆ. ಆದರೆ ವಾಸ್ತವ ಅದಲ್ಲ‌‌. ಮೊಂದೊಂದು ದಿನ ಈ ಕೋಟ್ಯಂತರ (ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ) ಮಂದಿಗೆ ತಮ್ಮ ಈ ಹೀನ ಸ್ಥಿತಿಯ ಬಗ್ಗೆ ಅರಿವಾದಾಗ ಮತ್ತು ಅದಕ್ಕೆ ಹಿಂದೂ ಧರ್ಮದ ಸಾಮಾಜಿಕ ತತ್ವ ಕಾರಣ ಎಂದು ತಿಳಿದಾಗ ಆ ಜ್ವಾಲಾಮುಖಿ ಜೀವಂತಗೊಳ್ಳಲಿದೆ. ಇದಕ್ಕೆ ಸಾಕ್ಷಿಯಾಗಿ ರೋಮನ್ ಸಾಮ್ರಾಜ್ಯದಲ್ಲಿ ಕ್ರಿಶ್ಚಿಯ...

ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್: ಮರೆಯಬಾರದ ಮೈಸೂರು ದೊರೆ

  ನಾಲ್ವಡಿ ಕೃಷ್ಣರಾಜ ಒಡೆಯರ್ -ರಘೋತ್ತಮ ಹೊಬ "ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು" ಇದು ಬಾಬಾಸಾಹೇಬ್ ಡಾ.ಅಂಬೇಡ್ಕರ್ ರವರ ಸುಪ್ರಸಿದ್ದ ನಾಣ್ಣುಡಿ. ಅದರಲ್ಲೂ ಹಳೆ ಮೈಸೂರು ಭಾಗದವರು ತಮ್ಮ ಭವ್ಯ ಇತಿಹಾಸವನ್ನು ಮರೆಯಲೇಬಾರದು. ಏಕೆಂದರೆ ರಾಜ್ಯದ ಇತರೆ ಪ್ರದೇಶಗಳಿಗೆ ಹೋಲಿಸಿದರೆ ಹಳೆ ಮೈಸೂರು ಭಾಗ ಅಭಿವೃದ್ಧಿಯಲ್ಲಿ ಮಂಚೂಣಿಯಲ್ಲಿದೆ ಎಂದರೆ ಅದಕ್ಕೆ ಕಾರಣ ಅದರ ಭವ್ಯ ಇತಿಹಾಸ. ಇಂತಹ ಭವ್ಯ ಇತಿಹಾಸದ ನಿರ್ಮಾತೃವಾಗಿ ತನ್ಮೂಲಕ ಮಾದರಿ ಮೈಸೂರಿಗೆ ಮುನ್ನುಡಿ ಬರೆದ ಧೃವತಾರೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್. ಆಳರಸರಿಗೆ ಮಾದರಿಯಾದ ರಾಜಯೋಗಿ.  ನಾಲ್ವಡಿಯವರು ಜನಿಸಿದ್ದು 1884 ರ ಜೂನ್ 4ರಂದು. ತಂದೆ ಶ್ರೀ ಚಾಮರಾಜ ಒಡೆಯರ್, ತಾಯಿ ಕೆಂಪನಂಜಮ್ಮಣ್ಣಿ (ವಾಣಿ ವಿಲಾಸ ಸನ್ನಿಧಾನ). ಬಾಲಕ ಕೃಷ್ಣರಾಜರ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಮೈಸೂರಿನಲ್ಲೇ. ರಾಯಲ್ ಸ್ಕೂಲ್ ಎಂಬ ಪ್ರತ್ಯೇಕ ಶಾಲೆಯಲ್ಲಿ ಇವರ ಸಹಪಾಠಿಗಳಾಗಿದ್ದವರು ಮಿರ್ಜಾ  ಇಸ್ಮಾಯಿಲ್, ಲಕ್ಷ್ಮೀಕಾಂತರಾಜ್ ಅರಸ್, ಮುಂತಾದವರು. 1894 ರಲ್ಲಿ ತಂದೆ ಚಾಮರಾಜ ಒಡೆಯರ್ ರವರ ನಿಧನದಿಂದಾಗಿ ಬಾಲಕ ಕೃಷ್ಣರಾಜನಿಗೆ ರಾಜ್ಯದ ಹೊಣೆ ಬಿದ್ದಾಗ ಅವರಿಗೆ ಕೇವಲ 10 ವರ್ಷ. ಪೆಬ್ರವರಿ 1, 1895 ರಲ್ಲಿ ಯುವರಾಜ ಕೃಷ್ಣರಾಜರಿಗೆ ಪಟ್ಟಾಭಿಷೇಕ ಮಹೋತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ ಬ್ರಿಟಿಷ್ ರಿಜೆನ್ಸಿ ಆಳ್ವಿಕೆಯಲ್ಲಿ ಮೈಸೂರಿನ ಗೌರ್ನರ್ ಮತ್ತು ಮಹಾರಾಜರ ಟ್ಯೂಟರ...