Skip to main content

ವೈದ್ಯರಿಗೆ ನಮನಗಳು

 


-ರಘೋತ್ತಮ ಹೊ.ಬ

ವೈದ್ಯರು, ಆಡು ಭಾಷೆಯಲ್ಲಿ ಡಾಕ್ಟರ್ ಗಳು ಜೀವ ಉಳಿಸುವ ಪ್ರತಿಭೆಗಳು ಅವರು. ಮನುಷ್ಯ ತನ್ನ ಏಳೆಗೆಗೆ ಉಳಿವಿಗೆ ತಾನೇ ಕಂಡುಕೊಂಡ ಶ್ರೇಷ್ಠ ವೃತ್ತಿ ಅದು. ಅದು ಇರಲಿಲ್ಲ ಎಂದರೆ ಎಲ್ಲರೂ ಎಲ್ಲದಕ್ಕೂ ದೇವರ ಮೊರೆ ಹೋಗಬೇಕಿರುತ್ತಿತ್ತು. ಆದರೆ ಹಾಗಾಗಿಲ್ಲ. 

ವೈದ್ಯ ವೃತ್ತಿಯಲ್ಲಿ ಜಾತಿ ಇಲ್ಲವೇ? ಖಂಡಿತ ಇಲ್ಲ. ನಿಮ್ಹಾನ್ಸ್ ನ ಖ್ಯಾತ ವೈದ್ಯರಾದ ಗೆಳೆಯರಾದ ಡಾ.ಲಿಂಗರಾಜುರವರು ಬಹಳ ಸ್ಪಷ್ಟವಾಗಿ ಹೇಳುವುದು "ಇಲ್ಲಿ ಕೆಲಸ ಗೊತ್ತಿರುವವರೆ ಶ್ರೇಷ್ಠರು ಜಾತಿ ಗೀತಿ ಇಲ್ಲಿ ಏನೂ ಇಲ್ಲ" ಎಂದು. ಹಾಗಿದ್ದರೆ ಈಚೆಗೆ ಅಲೋಪತಿ ವಿರುದ್ಧ ಕೆಲವರಿಂದ ಟೀಕೆಗಳು ಬರುತ್ತವಲ್ಲ? ವೈದ್ಯ ವೃತ್ತಿಯಲ್ಲೂ ಧರ್ಮ ಹುಡುಕುವವರ ಜನ ವಿರೋಧಿಗಳ ಕ್ಷುಲ್ಲಕ ನಡೆಯದು. ವಾಸ್ತವ ಏನೆಂದರೆ ಹಿಂದೆ ಭಾರತದಲ್ಲಿ ವೈದ್ಯ ವೃತ್ತಿ ಇತಿಹಾಸದಲ್ಲಿ ಆರಂಭ ಆಯಿತು. ಆದರೆ ಮೌಢ್ಯ, ಜಾತಿ ಮತ್ತು ಅಸ್ಪೃಶ್ಯತೆಗೆ ಆದ್ಯತೆ ಕೊಟ್ಟಿದ್ದರಿಂದ ಅದು ಅಲ್ಲೇ ನಿಂತಿತು. ಹೇಗೆಂದರೆ ರೋಗಿಗಳನ್ನು ಅವರ ಜಾತಿ ಮೀರಿ ಮುಟ್ಟಬೇಕಾಗುತ್ತದಲ್ಲ ಎಂದು ಅನೇಕರು ಹಿಂಜರಿಯುತ್ತಿದ್ದರಂತೆ! ಈ ಬಗ್ಗೆ ತಮಿಳುನಾಡಿನ ಪಂಡಿತ ಅಯೋಧಿ ದಾಸ್ ರವರ ಜೀವನ ಚರಿತ್ರೆಯಲ್ಲಿ ನಾವು ಕಾಣಬಹುದು. ಬಾಬಾಸಾಹೇಬ್ ಅಂಬೇಡ್ಕರರು ಕೂಡ ಜಾತಿ ಮತ್ತು ಅಸ್ಪೃಶ್ಯತೆಗೆ ಆದ್ಯತೆ ಕೊಟ್ಟಿದ್ದರಿಂದ ವೈಜ್ಞಾನಿಕ ಸಂಶೋಧನೆ ಹಿಂದುಳಿಯಿತು ಎಂದು ಒಂದೆಡೆ ಹೇಳುತ್ತಾರೆ. 

ಆದರೆ ವಸಾಹತುಶಾಹಿಗಳ ಆಗಮನದ ನಂತರ ಈಗಿನ ಮೆಡಿಸಿನ್ ಪದ್ಧತಿ ಆರಂಭವಾಯಿತು. ಇಲ್ಲಿ ನಾವು ತಿಳಿಯಬೇಕಾದ್ದೆಂದರೆ, ವೈದ್ಯ ವೃತ್ತಿಗೆ ದೇಶಗಳ ಗಡಿಯೂ ಇಲ್ಲ, ಎಲ್ಲೇ ಹೊಸ ಸಂಶೋಧನೆ ಯಾವುದೇ ರೋಗಕ್ಕೂ ನಡೆದರೂ ಅದು ಎಲ್ಲಾ ದೇಶಗಳನ್ನು ತಲುಪಬೇಕು! ಇದೇ ವೈದ್ಯ ವೃತ್ತಿಯ ವಿಶಿಷ್ಟ ಲಕ್ಷಣವಾಗಿದೆ. 

ಇನ್ನೂ ವೈದ್ಯರ ಬಗ್ಗೆ ಹೇಳುವುದಾದರೆ ಮನುಷ್ಯ ವೈದ್ಯರ ಮುಂದೆ ಸುಳ್ಳು ಹೇಳಲು ಸಾಧ್ಯವಿಲ್ಲ. ಹೇಳಿದರೂ ನಷ್ಟ ಸಂಬಂಧಿಸಿದ ವ್ಯಕ್ತಿಗೆ ಹೊರತು ವೈದ್ಯರಿಗಲ್ಲ. ವಯಕ್ತಿಕವಾಗಿ ನಾನು ಕೂಡ ಹಿಂದೆ ದಂತ ವೈದ್ಯಕೀಯ ಓದಲು ಸೇರಿದ್ದೆ ಆದರೆ ಒಂದಷ್ಟು ಶೈಕ್ಷಣಿಕ ವರ್ಷ ವ್ಯರ್ಥಮಾಡಿಕೊಂಡೆ ಹೊರತು ಬೇರೇನು ಲಾಭ ಆಗಲಿಲ್ಲ. ಹಾಗೆ ನನ್ನ ಆಸಕ್ತಿಯ ಕ್ಷೇತ್ರ ಅದಾಗಿರಲಿಲ್ಲ. ಆದರೆ ವಯಕ್ತಿಕವಾಗಿ ನನ್ನ ಬದುಕಿನ ಅನೇಕ ಕಷ್ಟದ ಸಂದರ್ಭಗಳಲ್ಲಿ ವೈದ್ಯ ವೃತ್ತಿ ನನ್ನ ಬದುಕಿಸಿದೆ. ಆರೋಗ್ಯದ ತೊಂದರೆಗಳಿಂದ ಕಾಪಾಡಿದೆ. ಸೋಜಿಗವೆಂದರೆ ಆ ಯಾವುದೇ ಡಾಕ್ಟರ್ ಗಳಿಗೆ ನಾವು ಪರಿಚಿತರಲ್ಲ, ಕೇವಲ ರೋಗಿಗಳಷ್ಟೆ! ಇದೇ ಈ ವೃತ್ತಿಯ ಶ್ರೇಷ್ಠತೆಯಾಗಿದೆ. 

ಪ್ರತಿಯೊಬ್ಬ ಪ್ರಜೆ ಕೂಡ ವೈದ್ಯರಿಗೆ ಗೌರವ ಕೊಡಬೇಕು. ನಮ್ಮ ಅಜ್ಞಾನ ಮತ್ತು ಸ್ವಾರ್ಥ ಚಿಂತನೆಗೆ ಅವರನ್ನು ದೂರಬಾರದು ಅಥವಾ ಮಾತಾಡಬಾರದು. ಹಾಗೆಯೇ ಹೆಚ್ಚು ಹೆಚ್ಚು ವೈದ್ಯರನ್ನು ಕೊಡುವ ನಿಟ್ಟಿನಲ್ಲಿ ಸಮಾಜ ಹೆಚ್ಚು ಮುತುವರ್ಜಿ ವಹಿಸಬೇಕು. ಡೊನೆಷನ್ ಆಧಾರದ ಮೇಲೆ ವೈದ್ಯಕೀಯ ಪ್ರವೇಶ ಕೊಡುವುದರ ಬದಲು ಆಸಕ್ತಿ ನೋಡಿ ವೈದ್ಯಕೀಯ ಪ್ರವೇಶ ನೀಡಿ ವೈದ್ಯರನ್ನು ವ್ಯವಸ್ಥೆ ತಯಾರು ಮಾಡಬೇಕು. ಕೊವಿಡ್ ನ ಈ ಸಂಕಷ್ಟದಲ್ಲಿ ಜೀವದ ಹಂಗು ತೊರೆದು ಅವರು ನೀಡುತ್ತಿರುವ ಸೇವೆ ಬರೀ ಸೇವೆಯಲ್ಲ ಬದಲಿಗೆ ತ್ಯಾಗವಾಗಿದೆ. ಈ ದಿಸೆಯಲ್ಲಿ ಪ್ರತಿಯೊಬ್ಬರೂ ವೈದ್ಯರ ಹಾದಿ ಅನುಕರಿಸಬೇಕು ಅನುಸರಿಸಬೇಕು. ನಿಸ್ವಾರ್ಥದಿ ಸಮಾಜ ಚಿಕಿತ್ಸೆಯಲ್ಲಿ ತೊಡಗಿಸಿಕೊಳ್ಳಬೇಕು, ಮನುಕುಲವ ಉಳಿಸಬೇಕು. 

ಹ್ಯಾಪಿ ಡಾಕ್ಟರ್ಸ್ ಡೇ. ಡಾಕ್ಟರ್ ಗಳಿಗೆ ಶುಭವಾಗಲಿ.


Comments

Popular posts from this blog

ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆಗಳು

  ಹಿಂದೂ ಮತ್ತು ಅಸ್ಪೃಶ್ಯನೊಬ್ಬ ಪ್ರಯಾಣ ಮಾಡುವ ಸಂದರ್ಭದಲ್ಲಿ ಪರಸ್ಪರ ಭೇಟಿಯಾದಾಗ... "ಯಾವಾಗಲಾದರೊಮ್ಮೆ ಅಕ್ಕಪಕ್ಕ ಕುಳಿತು ಪ್ರಯಾಣ ಮಾಡುವ ಸಂದರ್ಭದಲ್ಲಿ ಪರಸ್ಪರ ಜಾತಿ ತಿಳಿಯದಿದ್ದಾಗ ಜಾತಿವಾದಿ ಹಿಂದೂಗಳು ಮತ್ತು ಅಸ್ಪೃಶ್ಯರು ತುಂಬಾ ಆಪ್ತ ಸ್ನೇಹಿತರಂತೆ ವರ್ತಿಸುತ್ತಾರೆ. ಪರಸ್ಪರ ಬೀಡಿ, ಸಿಗರೆಟ್, ಹಣ್ಣುಗಳು, ಎಲೆ- ಅಡಿಕೆ ಹೀಗೆ ಅವರು ಹಂಚಿಕೊಳ್ಳುತ್ತಾರೆ. ಆದರೆ ಇದ್ದಕ್ಕಿದ್ದಂತೆ ಆ ಹಿಂದೂ ವ್ಯಕ್ತಿಗೆ ತಾನು ಇಷ್ಟು ಹೊತ್ತು ಮಾತನಾಡುತ್ತಿದ್ದ ವ್ಯಕ್ತಿ ಅಸ್ಪೃಶ್ಯ ಎಂದು ತಿಳಿಯುತ್ತಿದ್ದಂತೆ ಆತನ ಮನಸ್ಸಿನಲ್ಲಿ ದ್ವೇಷದ ಮನೋಭಾವ ಮೊಳಕೆಯೊಡೆಯುತ್ತದೆ, ತಾನು ಮೋಸಗೊಳಗಾದೆನೆಲ್ಲ ಎಂದು ಆತ ಯೋಚಿಸಲು ಆರಂಭಿಸುತ್ತಾನೆ. ಆತ ಕೋಪಗೊಳ್ಳುತ್ತಾನೆ. ಅಂತಿಮವಾಗಿ ತಾತ್ಕಾಲಿಕ ಆ ಸ್ನೇಹ ಜಗಳ ಮತ್ತು ಬೈಗುಳದ ಮೂಲಕ ಅಂತ್ಯಗೊಳ್ಳುತ್ತದೆ". -ಡಾ.ಬಿ.ಆರ್.ಅಂಬೇಡ್ಕರ್ ( Ambedkar writings and speeches, Vol.17, Part 3, Pp.132) ಕನ್ನಡಕ್ಕೆ: ರಘೋತ್ತಮ ಹೊಬ)

ಮುಂದೊಂದು ದಿನ ಎಲ್ಲರೂ ಬೌದ್ಧರಾಗಲಿದ್ದಾರೆ -ಡಾ.ಅಂಬೇಡ್ಕರ್

  "ಪ್ರತಿಯೊಂದು ಧರ್ಮವು ಉತ್ತರಿಸಬೇಕಾದ ಒಂದು ಪ್ರಶ್ನೆ ಇದೆ. ಅದೆಂದರೆ ತಳ ಸಮುದಾಯ ಮತ್ತು ದೌರ್ಜನ್ಯ ಪೀಡಿತ ಸಮುದಾಯಗಳಿಗೆ ಧರ್ಮವೊಂದು ನೀಡಬಹುದಾದ ನೈತಿಕ ಮತ್ತು ಬೌದ್ಧಿಕ ಬೆಂಬಲವಾದರು ಏನು ಎಂಬುದು? ಧರ್ಮವೊಂದು ಅಂತಹದ್ದೊಂದು ಬೆಂಬಲ ನೀಡಲಿಲ್ಲ ಎಂದರೆ ಅದು ದುರದೃಷ್ಟಕರ ಪರಿಸ್ಥಿತಿಯಲ್ಲಿ ಇದೆ ಎಂದೆ ಅರ್ಥ. ಆದ್ದರಿಂದ  ಹಿಂದೂ ಧರ್ಮವು  ಕೋಟ್ಯಾಂತರ ಸಂಖ್ಯೆಯಲ್ಲಿ ಇರುವ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಜನರಿಗೆ ನೈತಿಕ ಮತ್ತು ಬೌದ್ಧಿಕ ಬೆಂಬಲ ನೀಡುತ್ತದೆಯೇ? ಖಂಡಿತ ಇಲ್ಲ. ಈ ನಿಟ್ಟಿನಲ್ಲಿ ತಮಗೆ ಬೌದ್ಧಿಕ ಮತ್ತು ನೈತಿಕ ಬೆಂಬಲ ನೀಡದ ಹಿಂದೂ ಧರ್ಮದ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಜನರು ಇರಲು ಬಯಸುತ್ತಾರೆ ಎಂದು ಹಿಂದೂಗಳು ಅಪೇಕ್ಷೆ ಪಡಲು ಸಾಧ್ಯವೇ? ಅಂದಹಾಗೆ ಅಂತಹದ್ದೊಂದು ಅಪೇಕ್ಷೆ ಅಕ್ಷರಶಃ ವ್ಯರ್ಥದ್ದು.  "ಯಾಕೆಂದರೆ ಹಿಂದೂ ಧರ್ಮ ಅದು ಜ್ವಾಲಾಮುಖಿಯ ಮೇಲೆ ತೇಲುತ್ತಿದೆ. ಆ ನಿಟ್ಟಿನಲ್ಲಿ ಇಂದು ಅದು(ಜ್ವಾಲಾಮುಖಿ) ನಂದಿದ ಹಾಗೆ ಕಾಣುತ್ತಿದೆ. ಆದರೆ ವಾಸ್ತವ ಅದಲ್ಲ‌‌. ಮೊಂದೊಂದು ದಿನ ಈ ಕೋಟ್ಯಂತರ (ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ) ಮಂದಿಗೆ ತಮ್ಮ ಈ ಹೀನ ಸ್ಥಿತಿಯ ಬಗ್ಗೆ ಅರಿವಾದಾಗ ಮತ್ತು ಅದಕ್ಕೆ ಹಿಂದೂ ಧರ್ಮದ ಸಾಮಾಜಿಕ ತತ್ವ ಕಾರಣ ಎಂದು ತಿಳಿದಾಗ ಆ ಜ್ವಾಲಾಮುಖಿ ಜೀವಂತಗೊಳ್ಳಲಿದೆ. ಇದಕ್ಕೆ ಸಾಕ್ಷಿಯಾಗಿ ರೋಮನ್ ಸಾಮ್ರಾಜ್ಯದಲ್ಲಿ ಕ್ರಿಶ್ಚಿಯ...

ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್: ಮರೆಯಬಾರದ ಮೈಸೂರು ದೊರೆ

  ನಾಲ್ವಡಿ ಕೃಷ್ಣರಾಜ ಒಡೆಯರ್ -ರಘೋತ್ತಮ ಹೊಬ "ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು" ಇದು ಬಾಬಾಸಾಹೇಬ್ ಡಾ.ಅಂಬೇಡ್ಕರ್ ರವರ ಸುಪ್ರಸಿದ್ದ ನಾಣ್ಣುಡಿ. ಅದರಲ್ಲೂ ಹಳೆ ಮೈಸೂರು ಭಾಗದವರು ತಮ್ಮ ಭವ್ಯ ಇತಿಹಾಸವನ್ನು ಮರೆಯಲೇಬಾರದು. ಏಕೆಂದರೆ ರಾಜ್ಯದ ಇತರೆ ಪ್ರದೇಶಗಳಿಗೆ ಹೋಲಿಸಿದರೆ ಹಳೆ ಮೈಸೂರು ಭಾಗ ಅಭಿವೃದ್ಧಿಯಲ್ಲಿ ಮಂಚೂಣಿಯಲ್ಲಿದೆ ಎಂದರೆ ಅದಕ್ಕೆ ಕಾರಣ ಅದರ ಭವ್ಯ ಇತಿಹಾಸ. ಇಂತಹ ಭವ್ಯ ಇತಿಹಾಸದ ನಿರ್ಮಾತೃವಾಗಿ ತನ್ಮೂಲಕ ಮಾದರಿ ಮೈಸೂರಿಗೆ ಮುನ್ನುಡಿ ಬರೆದ ಧೃವತಾರೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್. ಆಳರಸರಿಗೆ ಮಾದರಿಯಾದ ರಾಜಯೋಗಿ.  ನಾಲ್ವಡಿಯವರು ಜನಿಸಿದ್ದು 1884 ರ ಜೂನ್ 4ರಂದು. ತಂದೆ ಶ್ರೀ ಚಾಮರಾಜ ಒಡೆಯರ್, ತಾಯಿ ಕೆಂಪನಂಜಮ್ಮಣ್ಣಿ (ವಾಣಿ ವಿಲಾಸ ಸನ್ನಿಧಾನ). ಬಾಲಕ ಕೃಷ್ಣರಾಜರ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಮೈಸೂರಿನಲ್ಲೇ. ರಾಯಲ್ ಸ್ಕೂಲ್ ಎಂಬ ಪ್ರತ್ಯೇಕ ಶಾಲೆಯಲ್ಲಿ ಇವರ ಸಹಪಾಠಿಗಳಾಗಿದ್ದವರು ಮಿರ್ಜಾ  ಇಸ್ಮಾಯಿಲ್, ಲಕ್ಷ್ಮೀಕಾಂತರಾಜ್ ಅರಸ್, ಮುಂತಾದವರು. 1894 ರಲ್ಲಿ ತಂದೆ ಚಾಮರಾಜ ಒಡೆಯರ್ ರವರ ನಿಧನದಿಂದಾಗಿ ಬಾಲಕ ಕೃಷ್ಣರಾಜನಿಗೆ ರಾಜ್ಯದ ಹೊಣೆ ಬಿದ್ದಾಗ ಅವರಿಗೆ ಕೇವಲ 10 ವರ್ಷ. ಪೆಬ್ರವರಿ 1, 1895 ರಲ್ಲಿ ಯುವರಾಜ ಕೃಷ್ಣರಾಜರಿಗೆ ಪಟ್ಟಾಭಿಷೇಕ ಮಹೋತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ ಬ್ರಿಟಿಷ್ ರಿಜೆನ್ಸಿ ಆಳ್ವಿಕೆಯಲ್ಲಿ ಮೈಸೂರಿನ ಗೌರ್ನರ್ ಮತ್ತು ಮಹಾರಾಜರ ಟ್ಯೂಟರ...