Skip to main content

ವೈದ್ಯರಿಗೆ ನಮನಗಳು

 


-ರಘೋತ್ತಮ ಹೊ.ಬ

ವೈದ್ಯರು, ಆಡು ಭಾಷೆಯಲ್ಲಿ ಡಾಕ್ಟರ್ ಗಳು ಜೀವ ಉಳಿಸುವ ಪ್ರತಿಭೆಗಳು ಅವರು. ಮನುಷ್ಯ ತನ್ನ ಏಳೆಗೆಗೆ ಉಳಿವಿಗೆ ತಾನೇ ಕಂಡುಕೊಂಡ ಶ್ರೇಷ್ಠ ವೃತ್ತಿ ಅದು. ಅದು ಇರಲಿಲ್ಲ ಎಂದರೆ ಎಲ್ಲರೂ ಎಲ್ಲದಕ್ಕೂ ದೇವರ ಮೊರೆ ಹೋಗಬೇಕಿರುತ್ತಿತ್ತು. ಆದರೆ ಹಾಗಾಗಿಲ್ಲ. 

ವೈದ್ಯ ವೃತ್ತಿಯಲ್ಲಿ ಜಾತಿ ಇಲ್ಲವೇ? ಖಂಡಿತ ಇಲ್ಲ. ನಿಮ್ಹಾನ್ಸ್ ನ ಖ್ಯಾತ ವೈದ್ಯರಾದ ಗೆಳೆಯರಾದ ಡಾ.ಲಿಂಗರಾಜುರವರು ಬಹಳ ಸ್ಪಷ್ಟವಾಗಿ ಹೇಳುವುದು "ಇಲ್ಲಿ ಕೆಲಸ ಗೊತ್ತಿರುವವರೆ ಶ್ರೇಷ್ಠರು ಜಾತಿ ಗೀತಿ ಇಲ್ಲಿ ಏನೂ ಇಲ್ಲ" ಎಂದು. ಹಾಗಿದ್ದರೆ ಈಚೆಗೆ ಅಲೋಪತಿ ವಿರುದ್ಧ ಕೆಲವರಿಂದ ಟೀಕೆಗಳು ಬರುತ್ತವಲ್ಲ? ವೈದ್ಯ ವೃತ್ತಿಯಲ್ಲೂ ಧರ್ಮ ಹುಡುಕುವವರ ಜನ ವಿರೋಧಿಗಳ ಕ್ಷುಲ್ಲಕ ನಡೆಯದು. ವಾಸ್ತವ ಏನೆಂದರೆ ಹಿಂದೆ ಭಾರತದಲ್ಲಿ ವೈದ್ಯ ವೃತ್ತಿ ಇತಿಹಾಸದಲ್ಲಿ ಆರಂಭ ಆಯಿತು. ಆದರೆ ಮೌಢ್ಯ, ಜಾತಿ ಮತ್ತು ಅಸ್ಪೃಶ್ಯತೆಗೆ ಆದ್ಯತೆ ಕೊಟ್ಟಿದ್ದರಿಂದ ಅದು ಅಲ್ಲೇ ನಿಂತಿತು. ಹೇಗೆಂದರೆ ರೋಗಿಗಳನ್ನು ಅವರ ಜಾತಿ ಮೀರಿ ಮುಟ್ಟಬೇಕಾಗುತ್ತದಲ್ಲ ಎಂದು ಅನೇಕರು ಹಿಂಜರಿಯುತ್ತಿದ್ದರಂತೆ! ಈ ಬಗ್ಗೆ ತಮಿಳುನಾಡಿನ ಪಂಡಿತ ಅಯೋಧಿ ದಾಸ್ ರವರ ಜೀವನ ಚರಿತ್ರೆಯಲ್ಲಿ ನಾವು ಕಾಣಬಹುದು. ಬಾಬಾಸಾಹೇಬ್ ಅಂಬೇಡ್ಕರರು ಕೂಡ ಜಾತಿ ಮತ್ತು ಅಸ್ಪೃಶ್ಯತೆಗೆ ಆದ್ಯತೆ ಕೊಟ್ಟಿದ್ದರಿಂದ ವೈಜ್ಞಾನಿಕ ಸಂಶೋಧನೆ ಹಿಂದುಳಿಯಿತು ಎಂದು ಒಂದೆಡೆ ಹೇಳುತ್ತಾರೆ. 

ಆದರೆ ವಸಾಹತುಶಾಹಿಗಳ ಆಗಮನದ ನಂತರ ಈಗಿನ ಮೆಡಿಸಿನ್ ಪದ್ಧತಿ ಆರಂಭವಾಯಿತು. ಇಲ್ಲಿ ನಾವು ತಿಳಿಯಬೇಕಾದ್ದೆಂದರೆ, ವೈದ್ಯ ವೃತ್ತಿಗೆ ದೇಶಗಳ ಗಡಿಯೂ ಇಲ್ಲ, ಎಲ್ಲೇ ಹೊಸ ಸಂಶೋಧನೆ ಯಾವುದೇ ರೋಗಕ್ಕೂ ನಡೆದರೂ ಅದು ಎಲ್ಲಾ ದೇಶಗಳನ್ನು ತಲುಪಬೇಕು! ಇದೇ ವೈದ್ಯ ವೃತ್ತಿಯ ವಿಶಿಷ್ಟ ಲಕ್ಷಣವಾಗಿದೆ. 

ಇನ್ನೂ ವೈದ್ಯರ ಬಗ್ಗೆ ಹೇಳುವುದಾದರೆ ಮನುಷ್ಯ ವೈದ್ಯರ ಮುಂದೆ ಸುಳ್ಳು ಹೇಳಲು ಸಾಧ್ಯವಿಲ್ಲ. ಹೇಳಿದರೂ ನಷ್ಟ ಸಂಬಂಧಿಸಿದ ವ್ಯಕ್ತಿಗೆ ಹೊರತು ವೈದ್ಯರಿಗಲ್ಲ. ವಯಕ್ತಿಕವಾಗಿ ನಾನು ಕೂಡ ಹಿಂದೆ ದಂತ ವೈದ್ಯಕೀಯ ಓದಲು ಸೇರಿದ್ದೆ ಆದರೆ ಒಂದಷ್ಟು ಶೈಕ್ಷಣಿಕ ವರ್ಷ ವ್ಯರ್ಥಮಾಡಿಕೊಂಡೆ ಹೊರತು ಬೇರೇನು ಲಾಭ ಆಗಲಿಲ್ಲ. ಹಾಗೆ ನನ್ನ ಆಸಕ್ತಿಯ ಕ್ಷೇತ್ರ ಅದಾಗಿರಲಿಲ್ಲ. ಆದರೆ ವಯಕ್ತಿಕವಾಗಿ ನನ್ನ ಬದುಕಿನ ಅನೇಕ ಕಷ್ಟದ ಸಂದರ್ಭಗಳಲ್ಲಿ ವೈದ್ಯ ವೃತ್ತಿ ನನ್ನ ಬದುಕಿಸಿದೆ. ಆರೋಗ್ಯದ ತೊಂದರೆಗಳಿಂದ ಕಾಪಾಡಿದೆ. ಸೋಜಿಗವೆಂದರೆ ಆ ಯಾವುದೇ ಡಾಕ್ಟರ್ ಗಳಿಗೆ ನಾವು ಪರಿಚಿತರಲ್ಲ, ಕೇವಲ ರೋಗಿಗಳಷ್ಟೆ! ಇದೇ ಈ ವೃತ್ತಿಯ ಶ್ರೇಷ್ಠತೆಯಾಗಿದೆ. 

ಪ್ರತಿಯೊಬ್ಬ ಪ್ರಜೆ ಕೂಡ ವೈದ್ಯರಿಗೆ ಗೌರವ ಕೊಡಬೇಕು. ನಮ್ಮ ಅಜ್ಞಾನ ಮತ್ತು ಸ್ವಾರ್ಥ ಚಿಂತನೆಗೆ ಅವರನ್ನು ದೂರಬಾರದು ಅಥವಾ ಮಾತಾಡಬಾರದು. ಹಾಗೆಯೇ ಹೆಚ್ಚು ಹೆಚ್ಚು ವೈದ್ಯರನ್ನು ಕೊಡುವ ನಿಟ್ಟಿನಲ್ಲಿ ಸಮಾಜ ಹೆಚ್ಚು ಮುತುವರ್ಜಿ ವಹಿಸಬೇಕು. ಡೊನೆಷನ್ ಆಧಾರದ ಮೇಲೆ ವೈದ್ಯಕೀಯ ಪ್ರವೇಶ ಕೊಡುವುದರ ಬದಲು ಆಸಕ್ತಿ ನೋಡಿ ವೈದ್ಯಕೀಯ ಪ್ರವೇಶ ನೀಡಿ ವೈದ್ಯರನ್ನು ವ್ಯವಸ್ಥೆ ತಯಾರು ಮಾಡಬೇಕು. ಕೊವಿಡ್ ನ ಈ ಸಂಕಷ್ಟದಲ್ಲಿ ಜೀವದ ಹಂಗು ತೊರೆದು ಅವರು ನೀಡುತ್ತಿರುವ ಸೇವೆ ಬರೀ ಸೇವೆಯಲ್ಲ ಬದಲಿಗೆ ತ್ಯಾಗವಾಗಿದೆ. ಈ ದಿಸೆಯಲ್ಲಿ ಪ್ರತಿಯೊಬ್ಬರೂ ವೈದ್ಯರ ಹಾದಿ ಅನುಕರಿಸಬೇಕು ಅನುಸರಿಸಬೇಕು. ನಿಸ್ವಾರ್ಥದಿ ಸಮಾಜ ಚಿಕಿತ್ಸೆಯಲ್ಲಿ ತೊಡಗಿಸಿಕೊಳ್ಳಬೇಕು, ಮನುಕುಲವ ಉಳಿಸಬೇಕು. 

ಹ್ಯಾಪಿ ಡಾಕ್ಟರ್ಸ್ ಡೇ. ಡಾಕ್ಟರ್ ಗಳಿಗೆ ಶುಭವಾಗಲಿ.


Comments

Popular posts from this blog

ಪುಲಕೇಶಿ ಹೊಲೆಯರವನೆ? ಚಾಲುಕ್ಯರು ಛಲವಾದಿಗಳೇ? -ರಘೋತ್ತಮ ಹೊ.ಬ

"ಹೊಲಯರು - ಮಾದರು -ರಾಜರು" ಎಂಬ ತಮ್ಮ ಸಂಶೋಧನಾ ಕೃತಿಯಲ್ಲಿ ಸಂಶೋಧಕರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಆದ ಶ್ರೀ ಎಂ.ನಂಜುಂಡಸ್ವಾಮಿ ಐಪಿಎಸ್ ರವರು ಹೊಲೆಯರು ಮತ್ತು ಮಾದಿಗರು ಈ ಎರಡೂ ಜನಾಂಗಗಳು ಕರ್ನಾಟಕ ರಾಜ್ಯದಲ್ಲಿ ರಾಜರಾಗಿದ್ದವರು ರಾಜ್ಯ ಆಳಿದವರು ಎಂದು ಸಂಶೋಧನೆ ಮೂಲಕ ಸಾಧಿಸಿದ್ದಾರೆ. ಅದರಲ್ಲಿ ಬಹು ಮುಖ್ಯವಾದದ್ದು ಬಾದಾಮಿಯ ಚಾಲುಕ್ಯರು ಹೊಲೆಯ ವಂಶಸ್ಥರು ಮತ್ತು ಛಲವಾದಿ ಜನಾಂಗದವರು ಎಂದು ಲೇಖಕರು ತಮ್ಮ ಭಾಷಾಶಾಸ್ತ್ರದ ಸಂಶೋಧನೆಯ ಆಧಾರದಲ್ಲಿ ಹೇಳುತ್ತಾರೆ. "ಹೊಲಯರು - ಮಾದರು -ರಾಜರು" ಆ ಕೃತಿಯಲ್ಲಿ ಪುಟ ಸಂಖ್ಯೆ 96ರಲ್ಲಿ  ನಂಜುಂಡಸ್ವಾಮಿಯವರು ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯ ಮತ್ತು ಬೇಲೂರು ಚನ್ನಕೇಶವ ದೇವಾಲಯಗಳಲ್ಲಿ ಹೊಲೆಯನಿಗೆ ನೀಡುವ ಗೌರವ ಉಲ್ಲೇಖಿಸುತ್ತ "ಆ ಗೌರವ ರಾಜನಿಗೆ ನೀಡುವ ಗೌರವದಂತಿದೆ. ಹೊಲೆಯ ರಾಜನಿಂದಲೇ ಆ ದೇವಾಲಯ ನಿರ್ಮಾಣವಾಗಿರುವುದರ ಸಂಕೇತವಾಗಿ ಆತನಿಗೆ ಈಗಲೂ ಆ ಗೌರವ ಸಿಗುತ್ತಿದೆ" ಎಂದು ಹೇಳುತ್ತಾರೆ. ಇನ್ನೂ ಬಾಗಲಕೋಟೆಯ ದೇಸಾಯಿಗಳು ಈಗಲೂ ಹೊಲೆಯರ ಮನೆಯಿಂದ ಬೆಂಕಿ ತರುವ ಸಂಪ್ರದಾಯವನ್ನು ಸಹ ಲೇಖಕರು ಉಲ್ಲೇಖಿಸುತ್ತಾರೆ. ಆ  ಹಿನ್ನೆಲೆಯಲ್ಲಿ "ಹಿಂದೆ ನಾವು ಈ ನಾಡನ್ನು ಆಳಿದ ರಾಜರು. ಅದಕ್ಕಾಗಿ ನಮ್ಮ ಬಳಿ ಸಾಂಕೇತಿಕವಾಗಿ ಈಗಲೂ ಬಂದು ದೇಸಾಯಿಗಳು ಬೆಂಕಿ ಪಡೆದುಕೊಳ್ಳುತ್ತಿದ್ದಾರೆ. ಈಗ ನಮ್ಮನ್ನು ಛಲವಾದಿಗಳು ಎನ್ನುವರು. ಹಿಂದೆ ನ...

ಕೆ ಆರ್ ಎಸ್.ನಿರ್ಮಾಣ: ವಾಸ್ತವ ಇತಿಹಾಸ

        - ರಘೋತ್ತಮ ಹೊಬ  ಅದು 1902 ನೇ ಇಸವಿ. ಏಷ್ಯಾದಲ್ಲೆ ಪ್ರಪ್ರಥಮ ಜಲವಿದ್ಯುತ್ ಉತ್ಪಾದನಾ  ಕೇಂದ್ರ ಸ್ಥಾಪನೆಯಾದ ವರ್ಷ. ಅಂದಹಾಗೆ ಅದನ್ನು ಸ್ಥಾಪಿಸಿದವರು ಮೈಸೂರಿನ ಅಂದಿನ ಮಹಾರಾಜ #ನಾಲ್ವಡಿ_ಕೃಷ್ಣರಾಜಒಡೆಯರ್‍ರವರು. ಬ್ರಿಟಿಷರೊಂದಿಗೆ  ಕೋಲಾರ ಚಿನ್ನದ ಗಣಿಗೆ ವಿದ್ಯುತ್ ಸರಬರಾಜು ಮಾಡುವ ಒಪ್ಪಂದ ಮಾಡಿಕೊಂಡಿದ್ದ ಅವರು ಆ ನಿಟ್ಟಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಶಿವನಸಮುದ್ರ ಎಂಬಲ್ಲಿ ಪ್ರಪ್ರಥಮ ಜಲವಿದ್ಯುತ್ ಕೇಂದ್ರ ಸ್ಥಾಪಿಸಿದರು ಮತ್ತು ಆ ಕಾಲದಲ್ಲೆ 30,000 ವೋಲ್ಟ್  ವಿದ್ಯುತ್‍ಅನ್ನು ಕೋಲಾರದ ಚಿನ್ನದÀ ಗಣಿಗೆ ವರ್ಗಾಯಿಸಿದರು. ಈ ಸಂದರ್ಭದಲ್ಲಿ ಒಂದು ಮಾತು ಅದೇನೆಂದರೆ ಆಗಿನ್ನು ಸರ್.ಎಂ.ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನಕ್ಕೆ ಪ್ರವೇಶ ಪಡೆದೇ ಇರಲಿಲ್ಲ!    ಇರಲಿ, ಜಲವಿದ್ಯುತ್ ಕೇಂದ್ರವನ್ನೇನೋ ಒಡೆಯರ್‍ರವರು ಸ್ಥಾಪಿಸಿದರು. ಆದರೆ ವಿದ್ಯುತ್ ಉತ್ಪಾದನೆಗೆ ನೀರು ವರ್ಷಾಕಾಲ ದೊರೆಯುತ್ತದೆಯೇ? ಖಂಡಿತ ಇಲ್ಲ. ಮಳೆ ಬಂದಾಗ ವಿದ್ಯುತ್. ಇಲ್ಲದಿದ್ರೆ ನೋ ವಿದ್ಯುತ್! ಬೇಸಿಗೆ ಕಾಲದಲ್ಲಂತೂ ಒಂದು ವೋಲ್ಟ್ ಉತ್ಪತ್ತಿ ಕೂಡ ಕಷ್ಟವಾಗಿತ್ತು. ಇದರಿಂದ ಚಿನ್ನದ ಗಣಿಗೆ ನಿರಂತರ ವಿದ್ಯುತ್ ಸರಬರಾಜು ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದ್ದ ಒಡೆಯರ್‍ರಿಗೆ  ಅದರ ಪೂರೈಕೆ ಸವಾಲಿನ ಕೆಲಸವಾಗಿತ್ತು. ಈ ಕಾರಣಕ್ಕಾಗಿ ಅಂದರೆ ವಿದ್ಯುತ್ ಉತ್ಪಾದನ ಕೇಂದ್ರಕ್ಕೆ ನ...

ಮುಚ್ಚಿಡಲ್ಪಟ್ಟ ಅಂಬೇಡ್ಕರ್ ರ ಭವ್ಯ ಇತಿಹಾಸ -ರಘೋತ್ತಮ ಹೊ.ಬ

  ಬಾಬಾಸಾಹೇಬ್ ಡಾ||ಅಂಬೇಡ್ಕರ್ ರವರ ಬಗ್ಗೆ ಈ ದೇಶದ ಜನತೆಗೆ ಏನು ಗೊತ್ತು? ಗೊತ್ತಿರುವುದಿಷ್ಟೆ, ಅಂಬೇಡ್ಕರರು ಯಾರೂ ಮುಟ್ಟಿಸಿಕೊಳ್ಳಲಾಗದ ಒಂದು ಕೀಳು ಜಾತಿಯಲಿ ಹುಟ್ಟಿದರು ಬಾಲ್ಯದಿಂದಲೆ ಅಸ್ಪೃಶ್ಯತೆಯ ನೋವನ್ನು ಅನುಭವಿಸಿದರು. ತಮ್ಮ ತಂದೆಯನ್ನು ನೋಡಲು ಗಾಡಿಯಲಿ ಹೋಗುತ್ತಿದ್ದಾಗ ಗಾಡಿಯಿಂದ ತಳ್ಳಲ್ಪಟ್ಟರು. ಹೀಗೆ ಅವಮಾನಕ್ಕೊಳಗಾದ ಅಂಬೇಡ್ಕರರು ಮುಂದೆ ಉನ್ನತ ಜ್ಞಾನಪಡೆದು ಈ ದೇಶದ ‘ಸಂವಿಧಾನ ಶಿಲ್ಪಿ' ಎನಿಸಿಕೊಂಡರು. ಅಸ್ಪೃಶ್ಯರ ಉದ್ಧಾರಕ್ಕಾಗಿ ಹೋರಾಡಿದರು ಎಂಬುದಷ್ಟೆ. ಬಹುಶಃ ಇದಕ್ಕಿಂತ ಹೆಚ್ಚಿಗೆ ಅಂಬೇಡ್ಕರರ ಬಗ್ಗೆ ಈ ದೇಶದ ಜನತೆಗೆ ಗೊತ್ತಿರುವುದು ಸಾಧ್ಯವಿಲ್ಲ. ಅಥವಾ ಮೇಲೆ ಹೇಳಿರುವುದೇ ಹೆಚ್ಚಿರಬೇಕು! ದಲಿತರಿಗೆ ಮೀಸಲಾತಿ ತಂದುಕೊಟ್ಟದಷ್ಟೆ ಅವರ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ತನ್ಮೂಲಕ ಅಂಬೇಡ್ಕರ್ ಎಂಬ"ಮಹಾನ್ ಇತಿಹಾಸವನ್ನು" ಮುಚ್ಚಲಾಗುತ್ತಿದೆ!       ಹಾಗಿದ್ದರೆ ಅಂಬೇಡ್ಕರ್ ರವರ ಸಾಧನೆ ಇದಿಷ್ಟು ಮಾತ್ರವಾ? ಅಥವಾ ಇನ್ನೇನು ಇಲ್ಲವಾ? ಯಾಕೆಂದರೆ 2006ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕದ ಅಧ್ಯಕ್ಷ   ಜಾರ್ಜ್ ಬುಷ್ "ಗಾಂಧಿ, ಠಾಗೋರ್ ಮತ್ತು ನೆಹರೂ"ರವರುಗಳನ್ನು ನವಭಾರತದ ನಿರ್ಮಾತೃಗಳೆನ್ನುತ್ತಾರೆ. ಅಂಬೇಡ್ಕರ್ ರವರನ್ನು ಈ ಪರಿಯಲ್ಲಿ ಇತಿಹಾಸದಲ್ಲಿ ಕುಬ್ಜರನ್ನಾಗಿಸುವ ಅಥವಾ ಮರೆಮಾಚುವ ಪ್ರಯತ್ನ ನಿರಂತರವಾಗಿ ನಡೆಯುತ್ತಿರುವಾಗ ಬುಷ್‍ ರಂತಹವರು ಇದಕ್ಕಿಂತ ಹೆಚ್ಚ...