Skip to main content

ಅಸ್ಪೃಶ್ಯ ವರ್ಗದವರ ಮೀಸಲಾತಿ ಮತ್ತು ಇತರೆ ಸವಲತ್ತುಗಳ ಕತೆ -ರಘೋತ್ತಮ ಹೊಬ



ಅಸ್ಪೃಶ್ಯ ವರ್ಗದವರ ಮೀಸಲಾತಿ ಮತ್ತು ಇತರೆ ಸವಲತ್ತುಗಳ ಕತೆ ಹೇಗಿದೆಯೆಂದರೆ ಅಸ್ಪೃಶ್ಯ ವರ್ಗದವರಿಗಾಗಿ ಪರಿಶಿಷ್ಟ ಜಾತಿ ಎಂಬ ಮೀಸಲು ಕೆಟಗರಿ ಸೃಷ್ಟಿಸಲಾಗುತ್ತದೆ. ನಂತರ ಅಲ್ಲಿ ಅಸ್ಪೃಶ್ಯ ವರ್ಗದವರು ಪಡೆಯುವ ಸವಲತ್ತುಗಳ ಬಗ್ಗೆ ಪಟ್ಟಭದ್ರರ ಕಣ್ಣು ಬೀಳುತ್ತದೆ. ಆ ಕಾರಣ ಅಲ್ಲಿ ಬಿಲ ಕೊರೆಯುವ ಕೆಲಸ ಆರಂಭವಾಗುತ್ತದೆ. ಪರಿಣಾಮವೆಂಬಂತೆ ಪರಿಶಿಷ್ಟ ಜಾತಿ ಎಂಬ ಆ ಪಟ್ಟಿಗೆ ಸ್ಪೃಶ್ಯ ಸಮುದಾಯಗಳನ್ನು ಸೇರಿಸಲಾಗುತ್ತದೆ. ನಂತರ ಆ ಪಟ್ಟಿಯಲ್ಲಿ ಇರುವ ಕೆಲವು ಜಾತಿ ಹೆಸರುಗಳನ್ನು ಹೋಲುವ so called ಮೇಲ್ಜಾತಿ ಜನರು ಅಂತಹ ಹೋಲಿಕೆ ಕಾರಣಕ್ಕೆ ತಾವು ಕೂಡ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ಒಳ ನುಸುಳುತ್ತಾರೆ. ವ್ಯವಸ್ಥೆ ಇದನ್ನೆಲ್ಲ ಕಣ್ಣು ಮುಚ್ಚಿ ನೋಡುತ್ತ ಕುಳಿತುಕೊಳ್ಳುತ್ತದೆ ಅಥವಾ ಪರೋಕ್ಷವಾಗಿ ಬೆಂಬಲಿಸುತ್ತದೆ.

ಈ ಪ್ರಕ್ರಿಯೆ ನಂತರ ಪರಿಶಿಷ್ಟರ ಹೆಸರಲ್ಲಿ ಕೋಟಿ ಕೋಟಿ ಬಿಡುಗಡೆ ಆಗುತ್ತದೆ, ನೂರಾರು ನೇಮಕಾತಿ ಆಗುತ್ತದೆ. ಬಹುತೇಕ ನೇಮಕಾತಿಗಳು ಕೋಟಿ ಕೋಟಿ ಯೋಜನೆಗಳು ಪರಿಶಿಷ್ಟರ ಪಟ್ಟಿಯಲ್ಲಿ ಇದಕ್ಕೆಂದೆ ಸೇರಲ್ಪಟ್ಟಿರುವ ಅಥವಾ ಸೇರಿಸಲ್ಪಟ್ಟಿರುವ ಸ್ಪೃಶ್ಯ ಮತ್ತು ನಕಲಿ ಜಾತಿ ಪ್ರಮಾಣ ಪತ್ರ ಪಡೆದ ಪರಿಶಿಷ್ಟರನ್ನು ಸೇರುತ್ತದೆ. ಅಸ್ಪೃಶ್ಯ ಸಮುದಾಯಗಳು ಬಿಡುಗಡೆಯಾದ ಹಣ ಮತ್ತು ನೇಮಕಾತಿ ಜಾಹೀರಾತು ಪತ್ರಿಕೆಗಳಲ್ಲಿ ನೋಡಿ ಖುಷಿ ಪಟ್ಟಿದ್ದೆ ಪಟ್ಟಿದ್ದು! ಹಾಗೆ ದುಡ್ಡು ಖರ್ಚು ಮಾಡಿ ಅರ್ಜಿ ಸಲ್ಲಿಸಿ "ನಿಮಗ್ಯಾನಪ ಎಲ್ಲಾ ಫ್ರೀ" ಎಂದು ಕಂಡೋರ ಕೆಂಗಣ್ಣಿಗೆ ಗುರಿಯಾಗಿ ಪರೀಕ್ಷೆ ಬರೆದು ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದ್ದು ಕಂಡು ಬೇಸರಗೊಂಡಿದ್ದಷ್ಟೆ ಉಳಿದದ್ದು. 

ಈ ನಡುವೆ ಪರಿಶಿಷ್ಟರ ಯೋಜನೆಗಳಿಗಾಗಿ ಸಾವಿರಾರು ಕೋಟಿ ಬಿಡುಗಡೆ ಆಗುತ್ತದೆ. ಆ ದುಡ್ಡಿನಲ್ಲಿ ಅಸ್ಪೃಶ್ಯ ವರ್ಗದವರು ಆಗಾಗ ಮೇಲ್ಜಾತಿ ಬೀದಿ ತಿರುಗಾಡುವುದರಿಂದ ಅಲ್ಲಿ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲಾಗುತ್ತದೆ. ದಲಿತರು ದಸರೆ ಕೂಡ ನೋಡಲು ಹೋಗುವುದರಿಂದ , ಅಲ್ಲಿ ಕುಣಿಯುವ ಸಿನಿಮಾ ನಟರ ಹಾಡು ಕುಣಿತ ಅವರೂ ನೋಡುವುದರಿಂದ ಅಲ್ಲಿಗೂ ಎಸ್ಸಿ/ ಎಸ್ಟಿ ಹಣ ಬಿಡುಗಡೆ ಮಾಡಲಾಗುತ್ತದೆ. ಇದರ ನಡುವೆ ಬೇರೆ ಜಾತಿಯವರು ಹೀಗೆ "ಬಿಡುಗಡೆ ಮಾಡಲಾದ" ಹಣ ಮತ್ತು ಅಂತಹ ಸುದ್ದಿ ಓದಿ ಕರುಬಿದ್ದೆ ಕರುಬಿದ್ದು!

ಅಸ್ಪೃಶ್ಯ ಜನರಿಗಾಗಿ ವಿವಿಧ ನಿಗಮಗಳನ್ನು ಮಾಡಲಾಗುತ್ತದೆ. ಅಲ್ಲಿ ಹೇಗೆ ಅರ್ಜಿ ಸಲ್ಲಿಸಬೇಕು? ಅಸ್ಪೃಶ್ಯ ವರ್ಗದವರಿಗೆ ಗೊತ್ತೇ ಆಗುವುದಿಲ್ಲ, ಅದರ ಸುದ್ದಿಯೂ ಕೂಡ ಇವರಿಗೆ ಸಿಗುವುದೇ ಇಲ್ಲ. ಈ ನಡುವೆ ಜನಪ್ರತಿನಿಧಿಗಳ ಶಿಫಾರಸ್ಸು ಬೇಕು. ಅದು ಇವರಿಗೆ ಸಿಗುವುದೇ ಇಲ್ಲ. ಸಿಕ್ಕರೂ ಸಬ್ಸಿಡಿ ಮತ್ತೊಂದು ಮಗದೊಂದು ಇವರಿಗೆ ಮಂಜೂರು ಆದರೂ ಬ್ಯಾಂಕುಗಳು ಇದಕ್ಕೆ ಕೊಕ್ಕೆ ಹಾಕುತ್ತವೆ. ಫಲಾನುಭವಿ ಅರ್ಜಿದಾರರನನ್ನು ಅಲೆಸಿ ಅಲೆಸಿ ಸತಾಯಿಸುತ್ತವೆ. ಕೊನೆಗೆ ಸಾಲ ಧನಸಹಾಯ ಏನನ್ನೂ ಮಾಡದೆ ಮನೆಗೆ ಕಳಿಸುತ್ತವೆ. ಈ ನಡುವೆ ಹೀಗೆ ಮಾಡುವುದರಿಂದ ಅಸ್ಪೃಶ್ಯರ ಹಣ ಅದು ಹಾಗೆಯೇ ಉಳಿಯುತ್ತದೆ. ಉಳಿದ ಹಣ "ಖರ್ಚಾಗದ ಅನುದಾನ" ಎಂದು ದಾಖಲಾಗಿ ಮುಂದಿನ ವರ್ಷಕ್ಕೆ ಸೇರಿಸಲ್ಪಡುತ್ತದೆ.

ಹಾಗಿದ್ದರೆ ಅಸ್ಪೃಶ್ಯ ವರ್ಗದವರಿಗೆ ನಿಜಕ್ಕೂ ಸಿಗುವುದು? ಅಪ್ಲೈ ಮಾಡಿದ್ದರೆ ವರ್ಷಕ್ಕೊಮ್ಮೆ ಸಿಗುವ ಬಿಡುಗಾಸು ಮೆಟ್ರಿಕ್ ಪೂರ್ವ ಸ್ಕಾಲರ್ಶಿಪ್, ಅಕಸ್ಮಾತ್ ಹಾಸ್ಟೆಲ್ ಸೇರಿದ್ದರೆ ಅಲ್ಲಿ ನೀಡಲ್ಪಡುವ ಕಳಪೆ ಗುಣಮಟ್ಟದ ಮೂರ್ ಹೊತ್ತು ಊಟ ಅಷ್ಟೇ. 


***

Comments

Post a Comment

Popular posts from this blog

ಅವಕಾಶ ಕಿತ್ತುಕೊಳ್ಳಬೇಕು -ರಘೋತ್ತಮ ಹೊ.ಬ

ಶೋಷಿತ ಸಮುದಾಯಗಳ ಎಷ್ಟೋ ಜನ ಯಾರಾದರೂ ನಮ್ಮನ್ನು ನಮ್ಮ ಒಳ್ಳೆಯತನ ನೋಡಿ ಉದ್ಧಾರ ಮಾಡುತ್ತಾರೆ ಎಂದುಕೊಳ್ಳುತ್ತಾರೆ. ವಾಸ್ತವ ಎಂದರೆ ಅದು ಹಾಗಲ್ಲ ಎಂಬುದು. ಉದಾಹರಣೆಗೆ ಕಚೇರಿಗಳಲ್ಲಿ "ಡಿ" ಗ್ರೂಪ್ ನೌಕರಿ ಕೆಲಸ ಒಬ್ಬ ಮಾಡುತ್ತಿರುತ್ತಾನೆ ಎಂದುಕೊಳ್ಳಿ. ಪ್ರಶ್ನೆ ಎಂದರೆ ಅಲ್ಲಿಯ ಅಧಿಕಾರಿ ಆ ಡಿ ಗ್ರೂಪ್ ನೌಕರರನಿಗೆ ಆತನ ಒಳ್ಳೆಯತನ ನೋಡಿ ಕರೆದು ತನ್ನ ಸ್ಥಾನ ಕೊಡುತ್ತಾನೆಯೇ? ಇಲ್ಲ. ಹೆಚ್ಚೆಂದರೆ ಅದನ್ನು ಆತ ಆತನ ನಿಷ್ಠೆ ಎಂದುಕೊಳ್ಳಬಹುದು ಒಂದಷ್ಟು ಸಿಂಪಥಿ ತೋರಬಹುದು ಅಷ್ಟೇ. ಭಾರತದ ಸಾಮಾಜಿಕ ವ್ಯವಸ್ಥೆಯು ಕೂಡ ಹೀಗೇನೆ‌. ಹಾಗಿದ್ದರೆ ಡಿ ಗ್ರೂಪ್ ನೌಕರ ಏನು ಮಾಡಬಹುದು? ತನ್ನ ಮಗನನ್ನು ಅಥವಾ ಮಗಳನ್ನು ಆ ಅಧಿಕಾರಿ ಮಟ್ಟಕ್ಕೆ ಓದಿಸಿ ಆ ಸ್ಥಾನ ಪಡೆಯಬಹುದು ಅವಕಾಶ ಪಡೆಯಬಹುದು. ಶೋಷಿತ ಸಮುದಾಯಗಳು ಅಷ್ಟೇ, ಚೆನ್ನಾಗಿ ಶಿಕ್ಷಣ ಪಡೆದು ಉನ್ನತ ಉದ್ಯೋಗ ಪಡೆದರೆ ಅಥವಾ ಪ್ರಸ್ತುತ ದಿನಗಳಲ್ಲಿ ಬುದ್ಧಿವಂತಿಕೆಯಿಂದ ಯಾವುದಾದರೂ ಬಿಸಿನೆಸ್ ನಲ್ಲಿ do or die ಮಾದರಿಯಲ್ಲಿ ಶ್ರಮ ಹಾಕಿ ಯಶಸ್ಸು ಪಡೆದರೆ ಆ ಸ್ಥಾನ ಪಡೆಯಬಹುದು. ಯಾರೂ ಕೂಡ ಕರೆದು ಅವಕಾಶ ಕೊಡುವುದಿಲ್ಲ.  ಘಟನೆಯೊಂದನ್ನು ಹೇಳುವುದಾದರೆ, ಒಂದು ಸಾರ್ವಜನಿಕ ಕಾರ್ಯಕ್ರಮ ನಡೆದಿತ್ತು. ನಾನು ವಯಕ್ತಿಕವಾಗಿ ಯಾರು ನನ್ನನ್ನು ಕರೆಯಲಿ ಬಿಡಲಿ ಎಂದು ನನ್ನ ಸ್ಥಾನವನ್ನು ಭದ್ರವಾಗಿ ಪಡೆದೆ ಒಂದು ಚೇರ್ ಮೇಲೆ ನಾನೇ ಹೋಗಿ ಕುಳಿತುಕೊಳ್ಳುವುದರ ಮೂಲಕ. ಆದರೆ ದಲಿತ ಸಮುದಾಯ...

ಶೌಚಾಲಯ ಶುಚಿಗೊಳಿಸುವುದನ್ನು "ಆ ಸಮುದಾಯ"ದವರೇ ಮಾಡಬೇಕೆ?

  ಸಂಸ್ಥೆಯೊಂದರಲ್ಲಿ ಮೀಟಿಂಗ್ ನಡೆಯುತ್ತಿತ್ತು. ಸದಸ್ಯರೊಬ್ಬರು "ನಮ್ಮ ಸಂಸ್ಥೆಯ ಶೌಚಾಲಯಗಳೆಲ್ಲವೂ ಗಲೀಜು ಆಗಿವೆ. ಆ ಯಮ್ಮನನ್ನು ಕರೆಸಿ" ಎಂದು ಮುಖ್ಯಸ್ಥರನ್ನು ಒತ್ತಾಯಿಸಿದರು. ಮತ್ತೊಬ್ಬರು "ಆ ಯಮ್ಮ ಸರಿಯಾಗಿ ಕ್ಲೀನ್ ಮಾಡೋಲ್ಲ, ಅವಳಿಗೆ ಕೊಬ್ಬು,"  ಹೀಗೆ ನಾಲಿಗೆ ಮೇಲೆ ಹಿಡಿತವಿಲ್ಲದೆ ಮಾತಾಡುತ್ತ ಹೋದರು!  ಹೌದು, ಅವರು ಮಾತಾಡುತ್ತಿದ್ದದ್ದು ಅಸ್ಪೃಶ್ಯ ಸಮುದಾಯವಾದ ಪೌರಕಾರ್ಮಿಕ ಸಮುದಾಯದ ಮಹಿಳೆಯೊಬ್ಬರ ಬಗ್ಗೆ. ಎಷ್ಟು ಕ್ರೂರವಾಗಿ ಅವರು ಆಕೆಯ ಬಗ್ಗೆ ಮಾತನಾಡುತ್ತಿದ್ದರೆಂದರೆ ಅವಳು ಕೂಡ ಮನುಷ್ಯಳು, ಅವಳಿಗೂ ಕೂಡ ಮಾನವ ಹಕ್ಕಿದೆ, ಆಕೆಗೂ ಕೂಡ ಗೌರವ ಕೊಡಬೇಕು, ಊಹ್ಞೂಂ, ಇಂತಹ ಸಣ್ಣ ಮನೋಭಾವವೂ ಅವರಲ್ಲಿರಲಿಲ್ಲ. ಜಾತಿ ವ್ಯವಸ್ಥೆಯ ಭೀಕರ ಚಿತ್ರಣ ಅಲ್ಲಿ ಎದ್ದು  ಕಾಣುತ್ತಿತ್ತು.  ಈ ದಿಸೆಯಲ್ಲಿ ಉಕ್ಕಿಬರುವ ಪ್ರಶ್ನೆಗಳೇನೆಂದರೆ ಶೌಚಾಲಯ ಶುಚಿಗೊಳಿಸುವುದನ್ನು ಪೌರಕಾರ್ಮಿಕ ಸಮುದಾಯವೇ ಏಕೆ ಮಾಡಬೇಕು? ಆ ಕಾಯಕವನ್ನು ಎಲ್ಲಾ ಜಾತಿಯವರು ಏಕೆ ಮಾಡಬಾರದು? ಯಾಕೆಂದರೆ ಉದಾಹರಣೆಗೆ ವ್ಯಕ್ತಿಗಳು ಅವರು ಶೌಚ ಮಾಡಿದ ನಂತರ ಅವರದ್ದನ್ನು ಅವರೇ ತೊಳೆದುಕೊಳ್ಳುತ್ತಾರಲ್ಲವೇ? ಅದಕ್ಕೂ ಒಬ್ಬ ಆಳನ್ನು "ಇಲ್ಲ, ಇದನ್ನು ನಾನು ಮುಟ್ಟುವುದಿಲ್ಲ. ಇದು ಗಲೀಜು"ಎಂದು ನೇಮಿಸಿಕೊಳ್ಳುತ್ತಾರೆಯೇ? ಇಲ್ಲ. ಹೀಗಿರುವಾಗ ಅವರದ್ದನ್ನು ಅವರು ತೊಳೆದುಕೊಳ್ಳುವಾಗ ಶೌಚಾಲಯ ಶುಚಿಗೊಳಿಸಲು ನಿರ್ದಿಷ್ಟ ಸಮುದಾಯದವರನ್ನು ಯ...

ಪುಲಕೇಶಿ ಹೊಲೆಯರವನೆ? ಚಾಲುಕ್ಯರು ಛಲವಾದಿಗಳೇ? -ರಘೋತ್ತಮ ಹೊ.ಬ

"ಹೊಲಯರು - ಮಾದರು -ರಾಜರು" ಎಂಬ ತಮ್ಮ ಸಂಶೋಧನಾ ಕೃತಿಯಲ್ಲಿ ಸಂಶೋಧಕರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಆದ ಶ್ರೀ ಎಂ.ನಂಜುಂಡಸ್ವಾಮಿ ಐಪಿಎಸ್ ರವರು ಹೊಲೆಯರು ಮತ್ತು ಮಾದಿಗರು ಈ ಎರಡೂ ಜನಾಂಗಗಳು ಕರ್ನಾಟಕ ರಾಜ್ಯದಲ್ಲಿ ರಾಜರಾಗಿದ್ದವರು ರಾಜ್ಯ ಆಳಿದವರು ಎಂದು ಸಂಶೋಧನೆ ಮೂಲಕ ಸಾಧಿಸಿದ್ದಾರೆ. ಅದರಲ್ಲಿ ಬಹು ಮುಖ್ಯವಾದದ್ದು ಬಾದಾಮಿಯ ಚಾಲುಕ್ಯರು ಹೊಲೆಯ ವಂಶಸ್ಥರು ಮತ್ತು ಛಲವಾದಿ ಜನಾಂಗದವರು ಎಂದು ಲೇಖಕರು ತಮ್ಮ ಭಾಷಾಶಾಸ್ತ್ರದ ಸಂಶೋಧನೆಯ ಆಧಾರದಲ್ಲಿ ಹೇಳುತ್ತಾರೆ. "ಹೊಲಯರು - ಮಾದರು -ರಾಜರು" ಆ ಕೃತಿಯಲ್ಲಿ ಪುಟ ಸಂಖ್ಯೆ 96ರಲ್ಲಿ  ನಂಜುಂಡಸ್ವಾಮಿಯವರು ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯ ಮತ್ತು ಬೇಲೂರು ಚನ್ನಕೇಶವ ದೇವಾಲಯಗಳಲ್ಲಿ ಹೊಲೆಯನಿಗೆ ನೀಡುವ ಗೌರವ ಉಲ್ಲೇಖಿಸುತ್ತ "ಆ ಗೌರವ ರಾಜನಿಗೆ ನೀಡುವ ಗೌರವದಂತಿದೆ. ಹೊಲೆಯ ರಾಜನಿಂದಲೇ ಆ ದೇವಾಲಯ ನಿರ್ಮಾಣವಾಗಿರುವುದರ ಸಂಕೇತವಾಗಿ ಆತನಿಗೆ ಈಗಲೂ ಆ ಗೌರವ ಸಿಗುತ್ತಿದೆ" ಎಂದು ಹೇಳುತ್ತಾರೆ. ಇನ್ನೂ ಬಾಗಲಕೋಟೆಯ ದೇಸಾಯಿಗಳು ಈಗಲೂ ಹೊಲೆಯರ ಮನೆಯಿಂದ ಬೆಂಕಿ ತರುವ ಸಂಪ್ರದಾಯವನ್ನು ಸಹ ಲೇಖಕರು ಉಲ್ಲೇಖಿಸುತ್ತಾರೆ. ಆ  ಹಿನ್ನೆಲೆಯಲ್ಲಿ "ಹಿಂದೆ ನಾವು ಈ ನಾಡನ್ನು ಆಳಿದ ರಾಜರು. ಅದಕ್ಕಾಗಿ ನಮ್ಮ ಬಳಿ ಸಾಂಕೇತಿಕವಾಗಿ ಈಗಲೂ ಬಂದು ದೇಸಾಯಿಗಳು ಬೆಂಕಿ ಪಡೆದುಕೊಳ್ಳುತ್ತಿದ್ದಾರೆ. ಈಗ ನಮ್ಮನ್ನು ಛಲವಾದಿಗಳು ಎನ್ನುವರು. ಹಿಂದೆ ನ...