Skip to main content

ಅಸ್ಪೃಶ್ಯ ವರ್ಗದವರ ಮೀಸಲಾತಿ ಮತ್ತು ಇತರೆ ಸವಲತ್ತುಗಳ ಕತೆ -ರಘೋತ್ತಮ ಹೊಬ



ಅಸ್ಪೃಶ್ಯ ವರ್ಗದವರ ಮೀಸಲಾತಿ ಮತ್ತು ಇತರೆ ಸವಲತ್ತುಗಳ ಕತೆ ಹೇಗಿದೆಯೆಂದರೆ ಅಸ್ಪೃಶ್ಯ ವರ್ಗದವರಿಗಾಗಿ ಪರಿಶಿಷ್ಟ ಜಾತಿ ಎಂಬ ಮೀಸಲು ಕೆಟಗರಿ ಸೃಷ್ಟಿಸಲಾಗುತ್ತದೆ. ನಂತರ ಅಲ್ಲಿ ಅಸ್ಪೃಶ್ಯ ವರ್ಗದವರು ಪಡೆಯುವ ಸವಲತ್ತುಗಳ ಬಗ್ಗೆ ಪಟ್ಟಭದ್ರರ ಕಣ್ಣು ಬೀಳುತ್ತದೆ. ಆ ಕಾರಣ ಅಲ್ಲಿ ಬಿಲ ಕೊರೆಯುವ ಕೆಲಸ ಆರಂಭವಾಗುತ್ತದೆ. ಪರಿಣಾಮವೆಂಬಂತೆ ಪರಿಶಿಷ್ಟ ಜಾತಿ ಎಂಬ ಆ ಪಟ್ಟಿಗೆ ಸ್ಪೃಶ್ಯ ಸಮುದಾಯಗಳನ್ನು ಸೇರಿಸಲಾಗುತ್ತದೆ. ನಂತರ ಆ ಪಟ್ಟಿಯಲ್ಲಿ ಇರುವ ಕೆಲವು ಜಾತಿ ಹೆಸರುಗಳನ್ನು ಹೋಲುವ so called ಮೇಲ್ಜಾತಿ ಜನರು ಅಂತಹ ಹೋಲಿಕೆ ಕಾರಣಕ್ಕೆ ತಾವು ಕೂಡ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ಒಳ ನುಸುಳುತ್ತಾರೆ. ವ್ಯವಸ್ಥೆ ಇದನ್ನೆಲ್ಲ ಕಣ್ಣು ಮುಚ್ಚಿ ನೋಡುತ್ತ ಕುಳಿತುಕೊಳ್ಳುತ್ತದೆ ಅಥವಾ ಪರೋಕ್ಷವಾಗಿ ಬೆಂಬಲಿಸುತ್ತದೆ.

ಈ ಪ್ರಕ್ರಿಯೆ ನಂತರ ಪರಿಶಿಷ್ಟರ ಹೆಸರಲ್ಲಿ ಕೋಟಿ ಕೋಟಿ ಬಿಡುಗಡೆ ಆಗುತ್ತದೆ, ನೂರಾರು ನೇಮಕಾತಿ ಆಗುತ್ತದೆ. ಬಹುತೇಕ ನೇಮಕಾತಿಗಳು ಕೋಟಿ ಕೋಟಿ ಯೋಜನೆಗಳು ಪರಿಶಿಷ್ಟರ ಪಟ್ಟಿಯಲ್ಲಿ ಇದಕ್ಕೆಂದೆ ಸೇರಲ್ಪಟ್ಟಿರುವ ಅಥವಾ ಸೇರಿಸಲ್ಪಟ್ಟಿರುವ ಸ್ಪೃಶ್ಯ ಮತ್ತು ನಕಲಿ ಜಾತಿ ಪ್ರಮಾಣ ಪತ್ರ ಪಡೆದ ಪರಿಶಿಷ್ಟರನ್ನು ಸೇರುತ್ತದೆ. ಅಸ್ಪೃಶ್ಯ ಸಮುದಾಯಗಳು ಬಿಡುಗಡೆಯಾದ ಹಣ ಮತ್ತು ನೇಮಕಾತಿ ಜಾಹೀರಾತು ಪತ್ರಿಕೆಗಳಲ್ಲಿ ನೋಡಿ ಖುಷಿ ಪಟ್ಟಿದ್ದೆ ಪಟ್ಟಿದ್ದು! ಹಾಗೆ ದುಡ್ಡು ಖರ್ಚು ಮಾಡಿ ಅರ್ಜಿ ಸಲ್ಲಿಸಿ "ನಿಮಗ್ಯಾನಪ ಎಲ್ಲಾ ಫ್ರೀ" ಎಂದು ಕಂಡೋರ ಕೆಂಗಣ್ಣಿಗೆ ಗುರಿಯಾಗಿ ಪರೀಕ್ಷೆ ಬರೆದು ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದ್ದು ಕಂಡು ಬೇಸರಗೊಂಡಿದ್ದಷ್ಟೆ ಉಳಿದದ್ದು. 

ಈ ನಡುವೆ ಪರಿಶಿಷ್ಟರ ಯೋಜನೆಗಳಿಗಾಗಿ ಸಾವಿರಾರು ಕೋಟಿ ಬಿಡುಗಡೆ ಆಗುತ್ತದೆ. ಆ ದುಡ್ಡಿನಲ್ಲಿ ಅಸ್ಪೃಶ್ಯ ವರ್ಗದವರು ಆಗಾಗ ಮೇಲ್ಜಾತಿ ಬೀದಿ ತಿರುಗಾಡುವುದರಿಂದ ಅಲ್ಲಿ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲಾಗುತ್ತದೆ. ದಲಿತರು ದಸರೆ ಕೂಡ ನೋಡಲು ಹೋಗುವುದರಿಂದ , ಅಲ್ಲಿ ಕುಣಿಯುವ ಸಿನಿಮಾ ನಟರ ಹಾಡು ಕುಣಿತ ಅವರೂ ನೋಡುವುದರಿಂದ ಅಲ್ಲಿಗೂ ಎಸ್ಸಿ/ ಎಸ್ಟಿ ಹಣ ಬಿಡುಗಡೆ ಮಾಡಲಾಗುತ್ತದೆ. ಇದರ ನಡುವೆ ಬೇರೆ ಜಾತಿಯವರು ಹೀಗೆ "ಬಿಡುಗಡೆ ಮಾಡಲಾದ" ಹಣ ಮತ್ತು ಅಂತಹ ಸುದ್ದಿ ಓದಿ ಕರುಬಿದ್ದೆ ಕರುಬಿದ್ದು!

ಅಸ್ಪೃಶ್ಯ ಜನರಿಗಾಗಿ ವಿವಿಧ ನಿಗಮಗಳನ್ನು ಮಾಡಲಾಗುತ್ತದೆ. ಅಲ್ಲಿ ಹೇಗೆ ಅರ್ಜಿ ಸಲ್ಲಿಸಬೇಕು? ಅಸ್ಪೃಶ್ಯ ವರ್ಗದವರಿಗೆ ಗೊತ್ತೇ ಆಗುವುದಿಲ್ಲ, ಅದರ ಸುದ್ದಿಯೂ ಕೂಡ ಇವರಿಗೆ ಸಿಗುವುದೇ ಇಲ್ಲ. ಈ ನಡುವೆ ಜನಪ್ರತಿನಿಧಿಗಳ ಶಿಫಾರಸ್ಸು ಬೇಕು. ಅದು ಇವರಿಗೆ ಸಿಗುವುದೇ ಇಲ್ಲ. ಸಿಕ್ಕರೂ ಸಬ್ಸಿಡಿ ಮತ್ತೊಂದು ಮಗದೊಂದು ಇವರಿಗೆ ಮಂಜೂರು ಆದರೂ ಬ್ಯಾಂಕುಗಳು ಇದಕ್ಕೆ ಕೊಕ್ಕೆ ಹಾಕುತ್ತವೆ. ಫಲಾನುಭವಿ ಅರ್ಜಿದಾರರನನ್ನು ಅಲೆಸಿ ಅಲೆಸಿ ಸತಾಯಿಸುತ್ತವೆ. ಕೊನೆಗೆ ಸಾಲ ಧನಸಹಾಯ ಏನನ್ನೂ ಮಾಡದೆ ಮನೆಗೆ ಕಳಿಸುತ್ತವೆ. ಈ ನಡುವೆ ಹೀಗೆ ಮಾಡುವುದರಿಂದ ಅಸ್ಪೃಶ್ಯರ ಹಣ ಅದು ಹಾಗೆಯೇ ಉಳಿಯುತ್ತದೆ. ಉಳಿದ ಹಣ "ಖರ್ಚಾಗದ ಅನುದಾನ" ಎಂದು ದಾಖಲಾಗಿ ಮುಂದಿನ ವರ್ಷಕ್ಕೆ ಸೇರಿಸಲ್ಪಡುತ್ತದೆ.

ಹಾಗಿದ್ದರೆ ಅಸ್ಪೃಶ್ಯ ವರ್ಗದವರಿಗೆ ನಿಜಕ್ಕೂ ಸಿಗುವುದು? ಅಪ್ಲೈ ಮಾಡಿದ್ದರೆ ವರ್ಷಕ್ಕೊಮ್ಮೆ ಸಿಗುವ ಬಿಡುಗಾಸು ಮೆಟ್ರಿಕ್ ಪೂರ್ವ ಸ್ಕಾಲರ್ಶಿಪ್, ಅಕಸ್ಮಾತ್ ಹಾಸ್ಟೆಲ್ ಸೇರಿದ್ದರೆ ಅಲ್ಲಿ ನೀಡಲ್ಪಡುವ ಕಳಪೆ ಗುಣಮಟ್ಟದ ಮೂರ್ ಹೊತ್ತು ಊಟ ಅಷ್ಟೇ. 


***

Comments

Post a Comment

Popular posts from this blog

ಕೆ ಆರ್ ಎಸ್.ನಿರ್ಮಾಣ: ವಾಸ್ತವ ಇತಿಹಾಸ

        - ರಘೋತ್ತಮ ಹೊಬ  ಅದು 1902 ನೇ ಇಸವಿ. ಏಷ್ಯಾದಲ್ಲೆ ಪ್ರಪ್ರಥಮ ಜಲವಿದ್ಯುತ್ ಉತ್ಪಾದನಾ  ಕೇಂದ್ರ ಸ್ಥಾಪನೆಯಾದ ವರ್ಷ. ಅಂದಹಾಗೆ ಅದನ್ನು ಸ್ಥಾಪಿಸಿದವರು ಮೈಸೂರಿನ ಅಂದಿನ ಮಹಾರಾಜ #ನಾಲ್ವಡಿ_ಕೃಷ್ಣರಾಜಒಡೆಯರ್‍ರವರು. ಬ್ರಿಟಿಷರೊಂದಿಗೆ  ಕೋಲಾರ ಚಿನ್ನದ ಗಣಿಗೆ ವಿದ್ಯುತ್ ಸರಬರಾಜು ಮಾಡುವ ಒಪ್ಪಂದ ಮಾಡಿಕೊಂಡಿದ್ದ ಅವರು ಆ ನಿಟ್ಟಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಶಿವನಸಮುದ್ರ ಎಂಬಲ್ಲಿ ಪ್ರಪ್ರಥಮ ಜಲವಿದ್ಯುತ್ ಕೇಂದ್ರ ಸ್ಥಾಪಿಸಿದರು ಮತ್ತು ಆ ಕಾಲದಲ್ಲೆ 30,000 ವೋಲ್ಟ್  ವಿದ್ಯುತ್‍ಅನ್ನು ಕೋಲಾರದ ಚಿನ್ನದÀ ಗಣಿಗೆ ವರ್ಗಾಯಿಸಿದರು. ಈ ಸಂದರ್ಭದಲ್ಲಿ ಒಂದು ಮಾತು ಅದೇನೆಂದರೆ ಆಗಿನ್ನು ಸರ್.ಎಂ.ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನಕ್ಕೆ ಪ್ರವೇಶ ಪಡೆದೇ ಇರಲಿಲ್ಲ!    ಇರಲಿ, ಜಲವಿದ್ಯುತ್ ಕೇಂದ್ರವನ್ನೇನೋ ಒಡೆಯರ್‍ರವರು ಸ್ಥಾಪಿಸಿದರು. ಆದರೆ ವಿದ್ಯುತ್ ಉತ್ಪಾದನೆಗೆ ನೀರು ವರ್ಷಾಕಾಲ ದೊರೆಯುತ್ತದೆಯೇ? ಖಂಡಿತ ಇಲ್ಲ. ಮಳೆ ಬಂದಾಗ ವಿದ್ಯುತ್. ಇಲ್ಲದಿದ್ರೆ ನೋ ವಿದ್ಯುತ್! ಬೇಸಿಗೆ ಕಾಲದಲ್ಲಂತೂ ಒಂದು ವೋಲ್ಟ್ ಉತ್ಪತ್ತಿ ಕೂಡ ಕಷ್ಟವಾಗಿತ್ತು. ಇದರಿಂದ ಚಿನ್ನದ ಗಣಿಗೆ ನಿರಂತರ ವಿದ್ಯುತ್ ಸರಬರಾಜು ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದ್ದ ಒಡೆಯರ್‍ರಿಗೆ  ಅದರ ಪೂರೈಕೆ ಸವಾಲಿನ ಕೆಲಸವಾಗಿತ್ತು. ಈ ಕಾರಣಕ್ಕಾಗಿ ಅಂದರೆ ವಿದ್ಯುತ್ ಉತ್ಪಾದನ ಕೇಂದ್ರಕ್ಕೆ ನ...

ಪುಲಕೇಶಿ ಹೊಲೆಯರವನೆ? ಚಾಲುಕ್ಯರು ಛಲವಾದಿಗಳೇ? -ರಘೋತ್ತಮ ಹೊ.ಬ

"ಹೊಲಯರು - ಮಾದರು -ರಾಜರು" ಎಂಬ ತಮ್ಮ ಸಂಶೋಧನಾ ಕೃತಿಯಲ್ಲಿ ಸಂಶೋಧಕರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಆದ ಶ್ರೀ ಎಂ.ನಂಜುಂಡಸ್ವಾಮಿ ಐಪಿಎಸ್ ರವರು ಹೊಲೆಯರು ಮತ್ತು ಮಾದಿಗರು ಈ ಎರಡೂ ಜನಾಂಗಗಳು ಕರ್ನಾಟಕ ರಾಜ್ಯದಲ್ಲಿ ರಾಜರಾಗಿದ್ದವರು ರಾಜ್ಯ ಆಳಿದವರು ಎಂದು ಸಂಶೋಧನೆ ಮೂಲಕ ಸಾಧಿಸಿದ್ದಾರೆ. ಅದರಲ್ಲಿ ಬಹು ಮುಖ್ಯವಾದದ್ದು ಬಾದಾಮಿಯ ಚಾಲುಕ್ಯರು ಹೊಲೆಯ ವಂಶಸ್ಥರು ಮತ್ತು ಛಲವಾದಿ ಜನಾಂಗದವರು ಎಂದು ಲೇಖಕರು ತಮ್ಮ ಭಾಷಾಶಾಸ್ತ್ರದ ಸಂಶೋಧನೆಯ ಆಧಾರದಲ್ಲಿ ಹೇಳುತ್ತಾರೆ. "ಹೊಲಯರು - ಮಾದರು -ರಾಜರು" ಆ ಕೃತಿಯಲ್ಲಿ ಪುಟ ಸಂಖ್ಯೆ 96ರಲ್ಲಿ  ನಂಜುಂಡಸ್ವಾಮಿಯವರು ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯ ಮತ್ತು ಬೇಲೂರು ಚನ್ನಕೇಶವ ದೇವಾಲಯಗಳಲ್ಲಿ ಹೊಲೆಯನಿಗೆ ನೀಡುವ ಗೌರವ ಉಲ್ಲೇಖಿಸುತ್ತ "ಆ ಗೌರವ ರಾಜನಿಗೆ ನೀಡುವ ಗೌರವದಂತಿದೆ. ಹೊಲೆಯ ರಾಜನಿಂದಲೇ ಆ ದೇವಾಲಯ ನಿರ್ಮಾಣವಾಗಿರುವುದರ ಸಂಕೇತವಾಗಿ ಆತನಿಗೆ ಈಗಲೂ ಆ ಗೌರವ ಸಿಗುತ್ತಿದೆ" ಎಂದು ಹೇಳುತ್ತಾರೆ. ಇನ್ನೂ ಬಾಗಲಕೋಟೆಯ ದೇಸಾಯಿಗಳು ಈಗಲೂ ಹೊಲೆಯರ ಮನೆಯಿಂದ ಬೆಂಕಿ ತರುವ ಸಂಪ್ರದಾಯವನ್ನು ಸಹ ಲೇಖಕರು ಉಲ್ಲೇಖಿಸುತ್ತಾರೆ. ಆ  ಹಿನ್ನೆಲೆಯಲ್ಲಿ "ಹಿಂದೆ ನಾವು ಈ ನಾಡನ್ನು ಆಳಿದ ರಾಜರು. ಅದಕ್ಕಾಗಿ ನಮ್ಮ ಬಳಿ ಸಾಂಕೇತಿಕವಾಗಿ ಈಗಲೂ ಬಂದು ದೇಸಾಯಿಗಳು ಬೆಂಕಿ ಪಡೆದುಕೊಳ್ಳುತ್ತಿದ್ದಾರೆ. ಈಗ ನಮ್ಮನ್ನು ಛಲವಾದಿಗಳು ಎನ್ನುವರು. ಹಿಂದೆ ನ...

ಅವಕಾಶ ಕಿತ್ತುಕೊಳ್ಳಬೇಕು -ರಘೋತ್ತಮ ಹೊ.ಬ

ಶೋಷಿತ ಸಮುದಾಯಗಳ ಎಷ್ಟೋ ಜನ ಯಾರಾದರೂ ನಮ್ಮನ್ನು ನಮ್ಮ ಒಳ್ಳೆಯತನ ನೋಡಿ ಉದ್ಧಾರ ಮಾಡುತ್ತಾರೆ ಎಂದುಕೊಳ್ಳುತ್ತಾರೆ. ವಾಸ್ತವ ಎಂದರೆ ಅದು ಹಾಗಲ್ಲ ಎಂಬುದು. ಉದಾಹರಣೆಗೆ ಕಚೇರಿಗಳಲ್ಲಿ "ಡಿ" ಗ್ರೂಪ್ ನೌಕರಿ ಕೆಲಸ ಒಬ್ಬ ಮಾಡುತ್ತಿರುತ್ತಾನೆ ಎಂದುಕೊಳ್ಳಿ. ಪ್ರಶ್ನೆ ಎಂದರೆ ಅಲ್ಲಿಯ ಅಧಿಕಾರಿ ಆ ಡಿ ಗ್ರೂಪ್ ನೌಕರರನಿಗೆ ಆತನ ಒಳ್ಳೆಯತನ ನೋಡಿ ಕರೆದು ತನ್ನ ಸ್ಥಾನ ಕೊಡುತ್ತಾನೆಯೇ? ಇಲ್ಲ. ಹೆಚ್ಚೆಂದರೆ ಅದನ್ನು ಆತ ಆತನ ನಿಷ್ಠೆ ಎಂದುಕೊಳ್ಳಬಹುದು ಒಂದಷ್ಟು ಸಿಂಪಥಿ ತೋರಬಹುದು ಅಷ್ಟೇ. ಭಾರತದ ಸಾಮಾಜಿಕ ವ್ಯವಸ್ಥೆಯು ಕೂಡ ಹೀಗೇನೆ‌. ಹಾಗಿದ್ದರೆ ಡಿ ಗ್ರೂಪ್ ನೌಕರ ಏನು ಮಾಡಬಹುದು? ತನ್ನ ಮಗನನ್ನು ಅಥವಾ ಮಗಳನ್ನು ಆ ಅಧಿಕಾರಿ ಮಟ್ಟಕ್ಕೆ ಓದಿಸಿ ಆ ಸ್ಥಾನ ಪಡೆಯಬಹುದು ಅವಕಾಶ ಪಡೆಯಬಹುದು. ಶೋಷಿತ ಸಮುದಾಯಗಳು ಅಷ್ಟೇ, ಚೆನ್ನಾಗಿ ಶಿಕ್ಷಣ ಪಡೆದು ಉನ್ನತ ಉದ್ಯೋಗ ಪಡೆದರೆ ಅಥವಾ ಪ್ರಸ್ತುತ ದಿನಗಳಲ್ಲಿ ಬುದ್ಧಿವಂತಿಕೆಯಿಂದ ಯಾವುದಾದರೂ ಬಿಸಿನೆಸ್ ನಲ್ಲಿ do or die ಮಾದರಿಯಲ್ಲಿ ಶ್ರಮ ಹಾಕಿ ಯಶಸ್ಸು ಪಡೆದರೆ ಆ ಸ್ಥಾನ ಪಡೆಯಬಹುದು. ಯಾರೂ ಕೂಡ ಕರೆದು ಅವಕಾಶ ಕೊಡುವುದಿಲ್ಲ.  ಘಟನೆಯೊಂದನ್ನು ಹೇಳುವುದಾದರೆ, ಒಂದು ಸಾರ್ವಜನಿಕ ಕಾರ್ಯಕ್ರಮ ನಡೆದಿತ್ತು. ನಾನು ವಯಕ್ತಿಕವಾಗಿ ಯಾರು ನನ್ನನ್ನು ಕರೆಯಲಿ ಬಿಡಲಿ ಎಂದು ನನ್ನ ಸ್ಥಾನವನ್ನು ಭದ್ರವಾಗಿ ಪಡೆದೆ ಒಂದು ಚೇರ್ ಮೇಲೆ ನಾನೇ ಹೋಗಿ ಕುಳಿತುಕೊಳ್ಳುವುದರ ಮೂಲಕ. ಆದರೆ ದಲಿತ ಸಮುದಾಯ...