Skip to main content

ಫುಟ್ ಪಾತ್ ಗಳು: ದಲಿತ ಉದ್ಯಮಶೀಲತೆಯ ಪ್ರಯೋಗಶಾಲೆಗಳು?- ರಘೋತ್ತಮ ಹೊಬ


"ಸರ್, ಏನ್ ವ್ಯಾಪಾರ ಮಾಡ್ಬೇಕು? ಹೇಗೆ ವ್ಯಾಪಾರ ಮಾಡ್ಬೇಕು? ಬಂಡವಾಳ ಹೇಗೆ?... ಈಚೆಗೆ ಇಂತಹ ಪ್ರಶ್ನೆ ಗಳು ನನಗೆ ಮಾಮೂಲಿಯಾಗಿಬಿಟ್ಟಿವೆ. ಸಲಹೆ ನೀಡುತ್ತಾ ನೀಡುತ್ತಾ ಒಂದು ರೀತಿ ಬಿಸಿನೆಸ್ ಗುರು ಆಗ್ಬಿಟ್ಟಿದ್ದೇನೆ. ಇರಲಿ, ನೋ ಪ್ರಾಬ್ಲಂ. ಈ ನಿಟ್ಟಿನಲ್ಲಿ ಸ್ನೇಹಿತರೊಬ್ಬರ ಈ ಸಲದ ಪ್ರಶ್ನೆ ಅಂದರೆ ದಲಿತ ಸಮುದಾಯದ ಯುವಕರು/ ಯುವತಿಯರು ತುಂಬಾ ಸರಳವಾಗಿ ಕಡಿಮೆ ವೆಚ್ಚದಲ್ಲಿ ಬಿಸಿನೆಸ್ ಹೇಗೆ ಮಾಡಬಹುದು? ಎಲ್ಲಿ ಮಾಡಬಹುದು ಎಂಬುದು. ಉತ್ತರ ಸರಳ: ಫುಟ್ ಪಾತ್ ಗಳು.

ಹೌದು, ರಸ್ತೆ ಫುಟ್ ಪಾತ್ ಗಳು, ಖಾಲಿ ನಿವೇಶನಗಳು ದಲಿತ ವ್ಯಾಪಾರ- ವ್ಯವಹಾರದ ಪ್ರಯೋಗ ಶಾಲೆಗಳಾಗುತ್ತವೆ. ಕಡಿಮೆ ಬಂಡವಾಳ, ಹೆಚ್ಚಿನ ಕಸ್ಟಮರ್ ಗಳನ್ನು ಸೆಳೆಯುವ ಸ್ಥಳಗಳು ಇವು ಎಂಬುದು ಪ್ರಮುಖ ಕಾರಣ. ಇದಕ್ಕೆ ಬೇಕಿರುವುದು? ಧೃಡನಿರ್ಧಾರ ಮತ್ತು ಆತ್ಮವಿಶ್ವಾಸ. ಹಾಗೆಯೇ ನಾಚಿಕೆ ಮತ್ತು ಮುಜುಗರರಹಿತ ನಿಲುವು. ಖಂಡಿತ, ಈ ಮೂರು ಅಂಶಗಳಿದ್ದರೆ ಬಂಡವಾಳ ಇಲ್ಲದಿದ್ದರೂ ದಲಿತ ಸಮುದಾಯದ ಯಾರೇ ಆದರೂ ಬಿಸಿನೆಸ್ ಮಾಡಬಹುದು. 

ಧೃಡನಿರ್ಧಾರದ ಬಗ್ಗೆ ಹೇಳುವುದಾದರೆ, ದಲಿತ ಯುವಕ/ ಯುವತಿಯೋರ್ವ ತಾನು ಬಿಸಿನೆಸ್ ಮಾಡಬೇಕು ಎಂದು ಕೊಳ್ಳುತ್ತಾನೆ/ಳೆ. ಆದರೆ ಅಸ್ಪೃಶ್ಯತೆ ಕಾರಣ ಆತನಿಗೆ/ ಆಕೆಗೆ ಇತರೆ ವರ್ಗದವರು ಅಂಗಡಿ ಮಳಿಗೆ ಬಾಡಿಗೆ ಕೊಡುವುದಿಲ್ಲ. ಪ್ರಶ್ನೆ ಅಂದರೆ ಏನು ಮಾಡಬೇಕು? ಬಿಸಿನೆಸ್ ಚಿಂತನೆ ಬಿಟ್ಟು ಬಿಡುವುದೆ? ಇಲ್ಲ. ಖಾಲಿ ಇರುವ ಸಾರ್ವಜನಿಕ ಜಾಗಗಳಲ್ಲಿ, ಕಸ್ಟಮರ್ ಗಳು ಹೆಚ್ಚು ಓಡಾಡುವ ಫುಟ್ ಪಾತ್ ಬದಿಗಳಲ್ಲಿ ಬಿಸಿನೆಸ್ ಮಾಡುತ್ತೇನೆ ಎಂಬ ನಿರ್ಧಾರಕ್ಕೆ ಅವರು ಬರಬೇಕು. ಸಾಧ್ಯ ಆದರೆ ಸ್ಥಳೀಯ ದಲಿತ ಸಂಘಟನೆಗಳು, ಪೊಲೀಸ್ ಇಲಾಖೆ, ಜನಪ್ರತಿನಿಧಿಗಳು ಎಲ್ಲರ ಸಹಕಾರ ಪಡೆಯಬೇಕು.

ಮುಂದುವರೆದು ಆತ್ಮವಿಶ್ವಾಸ, ನಾಚಿಕೆ, ಮುಜುಗರದ ಅಂಶಗಳ ಬಗ್ಗೆ ಮಾತನಾಡುವುದಾದರೆ, ದಲಿತ ಸಮುದಾಯದ ಯುವಕರ/ ಯುವತಿಯರ ವ್ಯಾಪಾರ- ವ್ಯವಹಾರದಲ್ಲಿ ಪಾಲ್ಗೊಳ್ಳುವಿಕೆಯ ಪ್ರಮುಖ ಕೊರತೆಯೇ ಆತ್ಮವಿಶ್ವಾಸ. ಮುಖ್ಯವಾಗಿ ಅಪ್ಪ ಅಮ್ಮ ಯಾವುದೊ ಸರ್ಕಾರಿ ನೌಕರಿಯಲ್ಲಿ ಇರುತ್ತಾರೆ. ಅವರ ಮಗನಾಗಿ/ ಮಗಳಾಗಿ ತಾನು ಬೀದಿಯಲ್ಲಿ ವ್ಯಾಪಾರ ಮಾಡಬೇಕಾ ಎಂಬ ಅಹಂ ಮತ್ತು ಮುಜುಗರ ಅವರ ಎದುರು ಬರುತ್ತದೆ. ಭಯವು ಇರುತ್ತದೆ ಎಲ್ಲಿ ಬೇರೆ ಜಾತಿಯವರು ತೊಂದರೆ ಕೊಡ್ತಾರೊ ಹಾಗೆ ಹೀಗೆ ಎಂದು. ವಾಸ್ತವ ಎಂದರೆ ಅಪ್ಪ ಅಮ್ಮ ಸರ್ಕಾರಿ ನೌಕರಿಯಲ್ಲಿ ಇದ್ದರೂ ಮಕ್ಕಳಿಗೆ ಅದು ಸಿಗಲಿಲ್ಲ. ಹಾಗಂತ ಬದುಕಬಾರದೆ? ದೇಶದ ಅಭಿವೃದ್ಧಿಗೆ ವ್ಯಾಪಾರ- ವ್ಯವಹಾರದ ಮೂಲಕ ಕೊಡುಗೆ ನೀಡಬಾರದೆ? ಅಂದಹಾಗೆ ಮುಜುಗರ/ ನಾಚಿಕೆ ಇಟ್ಟುಕೊಂಡರೆ ತಾತನ ಕಾಲದ ಜೀತ ಪದ್ಧತಿಗೆ ಮತ್ತೆ ಹೋಗಬೇಕಾಗುತ್ತದೆ! ಆದ್ದರಿಂದ ಮುಜುಗರ, ನಾಚಿಕೆ, ಹಿಂಜರಿಕೆ ಯಾವುದೂ ಕೆಲಸಕ್ಕೆ ಬರುವುದಿಲ್ಲ ಅಥವಾ ಅನಗತ್ಯ. ಭೂಮಿ ಮೇಲೆ ಹುಟ್ಟಿದ ಮೇಲೆ ಎಲ್ಲಾ ಮನುಷ್ಯರಂತೆ ನಾವೂ ಸಹಜವಾಗಿ ಬದುಕು ಸಾಗಿಸಬೇಕು. ಈ ನಂಬಿಕೆ, ತಿಳುವಳಿಕೆ ಫುಟ್ ಪಾತ್ ಗಳಲ್ಲಿ ವ್ಯಾಪಾರ ವ್ಯವಹಾರಕ್ಕೆ ಇಳಿಯುವ ದಲಿತ ಯುವಕ/ ಯುವತಿಯರಿಗೆ ಇರಬೇಕು. ಮುಖ್ಯವಾಗಿ ನಾಚಿಕೆ, ಅಹಂ, ಮುಜುಗರ ಎಂದರೆ ಮುಂದೆ ಜೀತ ಮಾಡಲು ತಯಾರಾಗಬೇಕಾಗುತ್ತದೆ ಎಂಬ ಸಹಜ ಸತ್ಯ ಅರಿಯಬೇಕು. 

ಫುಟ್ ಪಾತ್ ವ್ಯಾಪಾರ- ವ್ಯವಹಾರ ಅಂದಾಗ ಅನ್ಯ ಜಾತಿ ಕಿರುಕುಳ ಇದ್ದೆ ಇರುತ್ತದೆ. ಅಂದಹಾಗೆ ಅಂತಹ ಕಿರುಕುಳ ಮನೆಯೊಳಗೆ ಸುಮ್ಮನೆ ಇದ್ದರೂ ಇರುತ್ತದೆ! ಆದ್ದರಿಂದಇದನ್ನು ಎದುರಿಸುವ, ಸಮಸ್ಯೆ ಬಂದರೆ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವ ನಿರ್ಧಾರಕ್ಕೆ ಬರಬೇಕು. ಯಾಕೆಂದರೆ ನಮ್ಮ ಉದ್ದೇಶ ವ್ಯಾಪಾರ- ವ್ಯವಹಾರದ ಮೂಲಕ ಆರ್ಥಿಕ ಚಟುವಟಿಕೆ ಪಾಲ್ಗೊಳ್ಳುವುದೇ ಹೊರತು ಜಗಳ ಕದನವಲ್ಲ. ಆ ಕಾರಣ ಶಾಂತಿ ಸಹನೆಗೆ ಹೆಚ್ಚು ಒತ್ತು ಕೊಡಬೇಕು, ಯಾವುದೇ ಕಾರಣಕ್ಕು ಉದ್ರೇಕಗೊಂಡು ಮನಸ್ಸಿನ ನೆಮ್ಮದಿ ಕೆಡಿಸಿಕೊಳ್ಳಬಾರದು. ಅಗತ್ಯಬಿದ್ದರೆ ಕಾನೂನು ನೆರವು ಪಡೆದುಕೊಳ್ಳಬೇಕು. ಅನ್ಯ ಜಾತಿಗಳ ಜೊತೆ ಸಂಘರ್ಷ ಇದು ಒಂದು ತಲೆಮಾರು ಇರುತ್ತದೆ. ಅಭ್ಯಾಸ ಆದ ನಂತರ ಅದು ಕೊನೆಯಾಗುತ್ತದೆ. ಅಂದಹಾಗೆ ಫುಟ್ ಪಾತ್ ವ್ಯಾಪಾರ, ಮುಖ್ಯವಾಗಿ ಗುಣಮಟ್ಟ ಶುಚಿತ್ವ ಮತ್ತು ನಾವೀನ್ಯತೆ ಕಡೆ ಗಮನ ಇರುವುದು ಅಗತ್ಯ. ಮೊದಲೆ ಹೇಳಿದ ಈಗಾಗಲೇ ಆ ಫೀಲ್ಡ್ ನಲ್ಲಿ ಇರುವ ಇತರೆ ಜಾತಿ ಜನರ ಜೊತೆ ದಲಿತ ಯುವಕರು/ ಯುವತಿಯರು ಸಂಘರ್ಷ ಮಾಡಿಕೊಳ್ಳದೆ ಅವರ ಜೊತೆ ಬಿಸಿನೆಸ್ ಒಪ್ಪಂದ ಮಾಡಿಕೊಳ್ಳುವುದು ಅಗತ್ಯ ‌ ಸಾಧ್ಯ ಆದರೆ ಪಾಲುದಾರರಾಗಿ ಸ್ನೇಹ ಬೆಳೆಸಿಕೊಳ್ಳಬೇಕು.

ಖಂಡಿತವಾಗಿ, ಫುಟ್ ಪಾತ್ ವ್ಯಾಪಾರ- ವ್ಯವಹಾರ ಈ ದೇಶದ ಅಸ್ಪೃಶ್ಯತೆ ಆಚರಣೆಗೆ ತಕ್ಕ ಉತ್ತರ ಆಗಲಿದೆ. ಯಾರು ನಮ್ಮ ಮನೆಗೆ ಬರುವುದಿಲ್ಲವೊ ಅವರ ಜೊತೆ ಸ್ನೇಹ ಬೆಳೆಸಲಿಕ್ಕೆ ವೇದಿಕೆಯಾಗಲಿದೆ. ಮುಖ್ಯವಾಗಿ ದಲಿತ ಉದ್ಯಮಶೀಲತೆಗೆ, ವ್ಯಾಪಾರ- ವ್ಯವಹಾರಕ್ಕೆ ರೆಡಿಮೇಡ್ ಮಳಿಗೆಗಳು ಫುಟ್ ಪಾತ್ ಗಳಾಗಲಿವೆ. ದಲಿತ ಸಮುದಾಯದ ನಿರುದ್ಯೋಗ ಫುಟ್ ಪಾತ್ ನಲ್ಲಿ ಅಂತ್ಯಗೊಳ್ಳಲಿದೆ.

***

Comments

Popular posts from this blog

ಪುಲಕೇಶಿ ಹೊಲೆಯರವನೆ? ಚಾಲುಕ್ಯರು ಛಲವಾದಿಗಳೇ? -ರಘೋತ್ತಮ ಹೊ.ಬ

"ಹೊಲಯರು - ಮಾದರು -ರಾಜರು" ಎಂಬ ತಮ್ಮ ಸಂಶೋಧನಾ ಕೃತಿಯಲ್ಲಿ ಸಂಶೋಧಕರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಆದ ಶ್ರೀ ಎಂ.ನಂಜುಂಡಸ್ವಾಮಿ ಐಪಿಎಸ್ ರವರು ಹೊಲೆಯರು ಮತ್ತು ಮಾದಿಗರು ಈ ಎರಡೂ ಜನಾಂಗಗಳು ಕರ್ನಾಟಕ ರಾಜ್ಯದಲ್ಲಿ ರಾಜರಾಗಿದ್ದವರು ರಾಜ್ಯ ಆಳಿದವರು ಎಂದು ಸಂಶೋಧನೆ ಮೂಲಕ ಸಾಧಿಸಿದ್ದಾರೆ. ಅದರಲ್ಲಿ ಬಹು ಮುಖ್ಯವಾದದ್ದು ಬಾದಾಮಿಯ ಚಾಲುಕ್ಯರು ಹೊಲೆಯ ವಂಶಸ್ಥರು ಮತ್ತು ಛಲವಾದಿ ಜನಾಂಗದವರು ಎಂದು ಲೇಖಕರು ತಮ್ಮ ಭಾಷಾಶಾಸ್ತ್ರದ ಸಂಶೋಧನೆಯ ಆಧಾರದಲ್ಲಿ ಹೇಳುತ್ತಾರೆ. "ಹೊಲಯರು - ಮಾದರು -ರಾಜರು" ಆ ಕೃತಿಯಲ್ಲಿ ಪುಟ ಸಂಖ್ಯೆ 96ರಲ್ಲಿ  ನಂಜುಂಡಸ್ವಾಮಿಯವರು ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯ ಮತ್ತು ಬೇಲೂರು ಚನ್ನಕೇಶವ ದೇವಾಲಯಗಳಲ್ಲಿ ಹೊಲೆಯನಿಗೆ ನೀಡುವ ಗೌರವ ಉಲ್ಲೇಖಿಸುತ್ತ "ಆ ಗೌರವ ರಾಜನಿಗೆ ನೀಡುವ ಗೌರವದಂತಿದೆ. ಹೊಲೆಯ ರಾಜನಿಂದಲೇ ಆ ದೇವಾಲಯ ನಿರ್ಮಾಣವಾಗಿರುವುದರ ಸಂಕೇತವಾಗಿ ಆತನಿಗೆ ಈಗಲೂ ಆ ಗೌರವ ಸಿಗುತ್ತಿದೆ" ಎಂದು ಹೇಳುತ್ತಾರೆ. ಇನ್ನೂ ಬಾಗಲಕೋಟೆಯ ದೇಸಾಯಿಗಳು ಈಗಲೂ ಹೊಲೆಯರ ಮನೆಯಿಂದ ಬೆಂಕಿ ತರುವ ಸಂಪ್ರದಾಯವನ್ನು ಸಹ ಲೇಖಕರು ಉಲ್ಲೇಖಿಸುತ್ತಾರೆ. ಆ  ಹಿನ್ನೆಲೆಯಲ್ಲಿ "ಹಿಂದೆ ನಾವು ಈ ನಾಡನ್ನು ಆಳಿದ ರಾಜರು. ಅದಕ್ಕಾಗಿ ನಮ್ಮ ಬಳಿ ಸಾಂಕೇತಿಕವಾಗಿ ಈಗಲೂ ಬಂದು ದೇಸಾಯಿಗಳು ಬೆಂಕಿ ಪಡೆದುಕೊಳ್ಳುತ್ತಿದ್ದಾರೆ. ಈಗ ನಮ್ಮನ್ನು ಛಲವಾದಿಗಳು ಎನ್ನುವರು. ಹಿಂದೆ ನ...

ಕೆ ಆರ್ ಎಸ್.ನಿರ್ಮಾಣ: ವಾಸ್ತವ ಇತಿಹಾಸ

        - ರಘೋತ್ತಮ ಹೊಬ  ಅದು 1902 ನೇ ಇಸವಿ. ಏಷ್ಯಾದಲ್ಲೆ ಪ್ರಪ್ರಥಮ ಜಲವಿದ್ಯುತ್ ಉತ್ಪಾದನಾ  ಕೇಂದ್ರ ಸ್ಥಾಪನೆಯಾದ ವರ್ಷ. ಅಂದಹಾಗೆ ಅದನ್ನು ಸ್ಥಾಪಿಸಿದವರು ಮೈಸೂರಿನ ಅಂದಿನ ಮಹಾರಾಜ #ನಾಲ್ವಡಿ_ಕೃಷ್ಣರಾಜಒಡೆಯರ್‍ರವರು. ಬ್ರಿಟಿಷರೊಂದಿಗೆ  ಕೋಲಾರ ಚಿನ್ನದ ಗಣಿಗೆ ವಿದ್ಯುತ್ ಸರಬರಾಜು ಮಾಡುವ ಒಪ್ಪಂದ ಮಾಡಿಕೊಂಡಿದ್ದ ಅವರು ಆ ನಿಟ್ಟಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಶಿವನಸಮುದ್ರ ಎಂಬಲ್ಲಿ ಪ್ರಪ್ರಥಮ ಜಲವಿದ್ಯುತ್ ಕೇಂದ್ರ ಸ್ಥಾಪಿಸಿದರು ಮತ್ತು ಆ ಕಾಲದಲ್ಲೆ 30,000 ವೋಲ್ಟ್  ವಿದ್ಯುತ್‍ಅನ್ನು ಕೋಲಾರದ ಚಿನ್ನದÀ ಗಣಿಗೆ ವರ್ಗಾಯಿಸಿದರು. ಈ ಸಂದರ್ಭದಲ್ಲಿ ಒಂದು ಮಾತು ಅದೇನೆಂದರೆ ಆಗಿನ್ನು ಸರ್.ಎಂ.ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನಕ್ಕೆ ಪ್ರವೇಶ ಪಡೆದೇ ಇರಲಿಲ್ಲ!    ಇರಲಿ, ಜಲವಿದ್ಯುತ್ ಕೇಂದ್ರವನ್ನೇನೋ ಒಡೆಯರ್‍ರವರು ಸ್ಥಾಪಿಸಿದರು. ಆದರೆ ವಿದ್ಯುತ್ ಉತ್ಪಾದನೆಗೆ ನೀರು ವರ್ಷಾಕಾಲ ದೊರೆಯುತ್ತದೆಯೇ? ಖಂಡಿತ ಇಲ್ಲ. ಮಳೆ ಬಂದಾಗ ವಿದ್ಯುತ್. ಇಲ್ಲದಿದ್ರೆ ನೋ ವಿದ್ಯುತ್! ಬೇಸಿಗೆ ಕಾಲದಲ್ಲಂತೂ ಒಂದು ವೋಲ್ಟ್ ಉತ್ಪತ್ತಿ ಕೂಡ ಕಷ್ಟವಾಗಿತ್ತು. ಇದರಿಂದ ಚಿನ್ನದ ಗಣಿಗೆ ನಿರಂತರ ವಿದ್ಯುತ್ ಸರಬರಾಜು ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದ್ದ ಒಡೆಯರ್‍ರಿಗೆ  ಅದರ ಪೂರೈಕೆ ಸವಾಲಿನ ಕೆಲಸವಾಗಿತ್ತು. ಈ ಕಾರಣಕ್ಕಾಗಿ ಅಂದರೆ ವಿದ್ಯುತ್ ಉತ್ಪಾದನ ಕೇಂದ್ರಕ್ಕೆ ನ...

ಮುಚ್ಚಿಡಲ್ಪಟ್ಟ ಅಂಬೇಡ್ಕರ್ ರ ಭವ್ಯ ಇತಿಹಾಸ -ರಘೋತ್ತಮ ಹೊ.ಬ

  ಬಾಬಾಸಾಹೇಬ್ ಡಾ||ಅಂಬೇಡ್ಕರ್ ರವರ ಬಗ್ಗೆ ಈ ದೇಶದ ಜನತೆಗೆ ಏನು ಗೊತ್ತು? ಗೊತ್ತಿರುವುದಿಷ್ಟೆ, ಅಂಬೇಡ್ಕರರು ಯಾರೂ ಮುಟ್ಟಿಸಿಕೊಳ್ಳಲಾಗದ ಒಂದು ಕೀಳು ಜಾತಿಯಲಿ ಹುಟ್ಟಿದರು ಬಾಲ್ಯದಿಂದಲೆ ಅಸ್ಪೃಶ್ಯತೆಯ ನೋವನ್ನು ಅನುಭವಿಸಿದರು. ತಮ್ಮ ತಂದೆಯನ್ನು ನೋಡಲು ಗಾಡಿಯಲಿ ಹೋಗುತ್ತಿದ್ದಾಗ ಗಾಡಿಯಿಂದ ತಳ್ಳಲ್ಪಟ್ಟರು. ಹೀಗೆ ಅವಮಾನಕ್ಕೊಳಗಾದ ಅಂಬೇಡ್ಕರರು ಮುಂದೆ ಉನ್ನತ ಜ್ಞಾನಪಡೆದು ಈ ದೇಶದ ‘ಸಂವಿಧಾನ ಶಿಲ್ಪಿ' ಎನಿಸಿಕೊಂಡರು. ಅಸ್ಪೃಶ್ಯರ ಉದ್ಧಾರಕ್ಕಾಗಿ ಹೋರಾಡಿದರು ಎಂಬುದಷ್ಟೆ. ಬಹುಶಃ ಇದಕ್ಕಿಂತ ಹೆಚ್ಚಿಗೆ ಅಂಬೇಡ್ಕರರ ಬಗ್ಗೆ ಈ ದೇಶದ ಜನತೆಗೆ ಗೊತ್ತಿರುವುದು ಸಾಧ್ಯವಿಲ್ಲ. ಅಥವಾ ಮೇಲೆ ಹೇಳಿರುವುದೇ ಹೆಚ್ಚಿರಬೇಕು! ದಲಿತರಿಗೆ ಮೀಸಲಾತಿ ತಂದುಕೊಟ್ಟದಷ್ಟೆ ಅವರ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ತನ್ಮೂಲಕ ಅಂಬೇಡ್ಕರ್ ಎಂಬ"ಮಹಾನ್ ಇತಿಹಾಸವನ್ನು" ಮುಚ್ಚಲಾಗುತ್ತಿದೆ!       ಹಾಗಿದ್ದರೆ ಅಂಬೇಡ್ಕರ್ ರವರ ಸಾಧನೆ ಇದಿಷ್ಟು ಮಾತ್ರವಾ? ಅಥವಾ ಇನ್ನೇನು ಇಲ್ಲವಾ? ಯಾಕೆಂದರೆ 2006ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕದ ಅಧ್ಯಕ್ಷ   ಜಾರ್ಜ್ ಬುಷ್ "ಗಾಂಧಿ, ಠಾಗೋರ್ ಮತ್ತು ನೆಹರೂ"ರವರುಗಳನ್ನು ನವಭಾರತದ ನಿರ್ಮಾತೃಗಳೆನ್ನುತ್ತಾರೆ. ಅಂಬೇಡ್ಕರ್ ರವರನ್ನು ಈ ಪರಿಯಲ್ಲಿ ಇತಿಹಾಸದಲ್ಲಿ ಕುಬ್ಜರನ್ನಾಗಿಸುವ ಅಥವಾ ಮರೆಮಾಚುವ ಪ್ರಯತ್ನ ನಿರಂತರವಾಗಿ ನಡೆಯುತ್ತಿರುವಾಗ ಬುಷ್‍ ರಂತಹವರು ಇದಕ್ಕಿಂತ ಹೆಚ್ಚ...